ನನ್ನಜ್ಜನಿಗೆ ಪ್ರತಿ
ರಾತ್ರಿಯಿಡೀ ಕೆಮ್ಮು
ಎಷ್ಟು ಹೇಳಿದರೂ ಕೇಳಲಾರನು
ಹೊಡೆಯಬೇಡವೆಂದರೂ ಧಮ್ಮು
...........................................................................................................
ಸಾಹಿತ್ಯ ಸಮ್ಮೇಳನದಲ್ಲಿ
ಕೊಡ್ತಾರಂತೆ ಭಾರಿ ಭೋಜನ
ಮೊದಲ ದಿನವೇ ಸೇರಿದ್ದಾರೆ
ಭಾರೀ ಜನ!!!
ನನಗೂ
ಕವಿಯಾಗುವ
ಆಸೆಯಿಂದ
ಕುಂತು ನಿಂತು ಮಲಗಿ
ಆತರ ಈತರ ಎಲ್ಲಾತರ
ಯೋಚಿಸಿ ಚಿಂತಿಸಿ ವಿಶ್ಲೇಷಿಸಿ
ಬರೆದೆ ಒಂದು ಕವನ
" ಕ ತೆಗೆದರೆ ವನ
ವ ತೆಗೆದರೆ ಕನ
ನ ತೆಗೆದರೆ ಕವ "
ಇದುವೆ ನಾನು ಬರೆದ ಕವನ
ನನ್ನ ಮೊದಲ ಕವನ
ಇಷ್ಟವಾದರೆ ಇಷ್ಟಪಡಿ
ಕಷ್ಟವಾದರೆ ಬಿಟ್ಟುಬಿಡಿ