ನನ್ನರಮನೆಯ ನಗುವನ್ನು ತಂದ ನನ್ನ ಕಂದ.....
ಅಕ್ಕರೆಯ ಸಿಹಿ ಸಕ್ಕರೆ ತಂದ ನನ್ನ ಕಂದ
ನೀ ನೋಡಲು ಬಲು ಚಂದ.....
ನನ್ನೆದೆಯ ಬಾಂದಳದಲ್ಲಿ ಪ್ರೀತಿಯ ಅಪ್ಪುಗೆಯ ತಂದ ಕಂದ......
ನೀ ನನ್ನ ಪ್ರೀತಿಯ ಭರವಸೆಯ ಕಂದ
ನೀ ಯಾವಾಗಲು ತಂದೆ ಬರೀ ಆನಂದ....
ಹೂವಿನಂತ ನಿನ್ನ ಕೆನ್ನೆಯ ಮೇಲೆ ಜೇನು ತಂದಿಟ್ಟ ಮಧುರ ಹನಿಯಂತೆ ತುಂಬಿ ತುಳುಕುತ್ತಿದೆ ನಾಚಿಕೆಯ ರಂಗು…❤️☺️
ಈ ಹೃದಯದ ಕನ್ನಡಿಯೊಳಿಗಿನ ಪ್ರತಿಬಿಂಬ ನಿನ್ನದಾದ ಮೇಲೆ ಪ್ರತಿ ಎದೆ ಬಡಿತವು ನಿನ್ನ ಹೆಸರೇ ಕೂಗಿದಂತೆ..
ನೀ ಅಪ್ಸರೆಯೋ, ಊರ್ವಶಿಯೋ ನಾ ಕಂಡಿಲ್ಲ....
ನೀ ರಾಧೆಯೋ.. ಸೀತೆಯೋ ಗೊತ್ತಿಲ್ಲ....
ಸ್ನೇಹಿತೆಯೋ..ದೇವತೆಯೂ ತಿಳಿದಿಲ್ಲ...
ಬರುವೆಯೋ..ಇರುವೆಯೋ ಬಿಟ್ಟು ಹೋಗುವೆಯೋ ನೀ ಹೇಳಿಲ್ಲ...
ಹೃದಯದಲ್ಲಿ ಬರೆದ ನಿನ್ನ ಹೆಸರನ್ನು ಹಣೆಯಲ್ಲಿ ಬರೆದಿಲ್ಲ...
ಕವಿತೆಯಲ್ಲಿ ನಿನ್ನ ಚಿತ್ರಿಸಿದ್ದರೂ ನಿನಗೆ ನಾನು ಕಾಣಲಿಲ್ಲ...
ಹೃದಯ ಬಡಿಯುವಾಗೆಲ್ಲ ನೆನಪಾಗುವ ನಿನ್ನ ನೆನಪನ್ನು ಮರೆಯಲು ಸಾಧ್ಯವಿಲ್ಲ.....
ಜನಕನ ಪುತ್ರಿ ಜಾನಕಿ ಜಗವ ಕಾಣದವಳಲ್ಲ ಆದರೂ ಸಹನೆಯ ಹೊತ್ತು ನಡೆದಿದ್ದಳು ತಾಳಿದವನು ಬಾಳಿಯಾನು ಅನ್ನುವ ಮಾತು ಅವಳಿಗೆ ಅನ್ವಯಿಸಲೇ ಇಲ್ಲ ಎಷ್ಟು ವಿಪರ್ಯಾಸಲ್ಲವೇ! ಅಂದೆಂದೋ ಭೂಮಿಯ ಗರ್ಭದಿಂದ ಹೊರಬರುವ ಮುನ್ನ ಅಮ್ಮನ ಮಾತಿಗೆ ರೋಧನೆಗೆ ಕಿವಿಗೊಟ್ಟಿರಬೇಕು ವೈದೇಹಿ ಭೂಮಾತೆ ತನಗೆ ತಾನು ಹೇಳಿಕೊಂಡಿರಬೇಕು ಅವಳ ಒಡಲ ತುಳಿದು ಕೃತಜ್ಞತೆ ಇಲ್ಲದೆ ಜನರು ಮಾಡಿರುವ ವಿಕೃತಗಳನ್ನು. ಬಹುಶಃ ಅಂದೆ ನಿಶ್ಚಯಿಸಿರಬೇಕು ಮೈಥಿಲಿ ಮೌನಧಾರಣೆ ಉತ್ತಮವೆಂದು ಸಹನೆಶೀಲೆ ಹೆಣ್ಣೆಂದು!
ವರಿಸಿ ಬಂದ ಚಿನ್ನದ ಮಹಲಿನ ಸರದಾರ ಹೃದಯದಲ್ಲಿ ಬಚ್ಚಿಡಬೇಕಿತ್ತು ಅವಳನ್ನು ಕಾಡಿನ ಪಾಲಾಗಿಸುವ ಬದಲು!
ಗಂಡನ ನೋವಿನ ಕೂಗಿಗೆ ಮರುಗಿದ್ದೆ ಸೀತೆಯ ತಪ್ಪಾಯಿತೆ ಮತ್ತೆ ಅವನ ಸೇರಿದ ಸಂಭ್ರಮದಲ್ಲಿ ಲೋಕಕ್ಕೆ ಅಂಜಿ ಅಗ್ನಿ ಮಡಿಲ ಮಗುವಾಗಿದ್ದೆ ತಪ್ಪಾಯಿತೆ ಆದರೇನು ಬಂತು ಪ್ರಯೋಜನ ಮತ್ತೆ ಕಾಡಿನ ಪಾಲಗಲಿಲ್ಲವೇ ಅವಳು ರಾಜ್ಯದ ಜನರಿಗಾಗಿ ಮಡದಿಯ ತೊರೆದ ರಾಜನಿಗಾಗಿ!
ಮತ್ತೆ ಯಾವ ನಂಬಿಕೆಯೊತ್ತು ಹೋದಾಳು ಆ ರಾಜನ ಅರಮನೆಗೆ ಪ್ರೀತಿ ವಿಶ್ವಾಸಗಳೇ ಇಲ್ಲವಾದಮೇಲೆ!
ಸಹನೆ ಸತ್ತು ಹೋಗಿರಬೇಕು ಅವಳಲ್ಲೂ ಅಮ್ಮನ ಮಡಿಲು ನೆನಪಾಗಿರಬೇಕು ಜನರ ನಿಂದನೆಗಳು ಕೇಳಲಾರದೆ ಎಲ್ಲಿಂದ ಬಂದಳೋ ಅಲ್ಲಿಗೆ ಹೊರಟುಹೋದಳು ಸುಶೀಲೆ ತನ್ನದಲ್ಲದ ಪಾಪಿ ಪ್ರಪಂಚವನ್ನು ತೊರೆದು..
ಅವನ ಮೊದಲ ಕಣ್ ನೋಟಕ್ಕೆ ಮನ ಸೋತ ಆ ದಿನ,
ಆತನ ನಗುವನ್ನು ಕದ್ದು ನೋಡಿದ ಆ ದಿನ
ತಿರುಗಿ ಒಮ್ಮೆ ನನ್ನ ನೋಡಬಾರದೇ ಎಂದೇನಿಸಿದ ಆ ದಿನ,
ಒಂದು ಮಾತನಾದರು ಆಡಬಾರದೇ ಎಂದು ಕೊಂಡ ಆ ದಿನ,
ಅವನು ಅಹಂ ತೋರಿಸುತ್ತಿದ್ದನೆ ಅಂದುಕೊಂಡ ಆ ದಿನ,
ಅವನ ನೋಟವನ್ನು ಗಮನಿಸಿದರು ಗಮನಿಸಿದಂತೆ ನಟಿಸಿದ ಆ ದಿನ,
ಆವನಾಗಿಯೇ ಬಂದು ನನ್ನ ಮಾತಾಡಿಸಿದ ಆ ದಿನ,
ಮೊದಲ ಬಾರಿಗೆ ಪ್ರೀತಿಯನ್ನು ವ್ಯಕ್ತ ಪಡಿಸಿದ ಆ ದಿನ,
ಅವನ ಪ್ರೀತಿಯ ಹೃದಯಕ್ಕೆ ಲಗ್ಗೆ ಇಟ್ಟ ಆ ದಿನ,
ಅವನ ಜೊತೆ ಸಪ್ತಪದಿ ತುಳಿದ ಆ ದಿನ,
ಅವನ ಹೆಸರಿನ ಜೊತೆಗೆ ನನ್ನ ಹೆಸರ ಸೇರಿಸಿದ ಆ ದಿನ,
ಅವನ ಮನೆಗೆ ಸೇರೋದ್ದು ಬಲಗಾಲು ಇಟ್ಟ ಆ ದಿನ,
ಸುಖ ದುಃಖಗಳಲಿ ಒಂದಾಗಿ ಬಾಳಿದ ಆ ದಿನ,
ಬದುಕಿನ ಬುತ್ತಿಯೊಳ್ ಇನ್ನೆಷ್ಟು ಆ ದಿನಗಳು,
ಸೇರುತಿಹುದು ಕನಸೆಂಬ ಆ ದಿನದೊಳ್......!
Love Kasthury