Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಮನಸ್ಸಿನ ಗೊಂದಲ

ಮನಸಲೇನೊ ತಳಮಳ ಇಂದು
ಕಾರಣ ತಿಳಿಯದಾಗಿದೆ ಏನು ಎಂದು
ಮನದಲ್ಲಿ ಹೇಳಲಾಗದ ಭಾವನೆ ಒಂದು
ಹುಡುಕಬೇಕಿದೆ ಕಾರಣವೇನೆಂದು

ಹೊಸದೇನೋ ಹೊಸತೇನೋ
ಅರಿಯಲಾಗದ ಭಾವನೆ ಏನೋ
ಭಯವೇನೋ ಭರವಸೆಯೇನೋ
ತಿಳಿಯದಿರುವ ಭವಿಷ್ಯವೇನೋ

ಸಡಗರವೇನೋ ಸಂಭ್ರಮವೇನೋ
ನಿನ್ನೊಂದಿಗೆ ಕಳೆದಿರುವ ಸಮಯವೇನೋ
ಕಾಳಜಿಯೇನೋ ಕನಿಕರವೇನೋ
ನಿನ್ನಲ್ಲಿ ಇಟ್ಟಿರುವ ನಂಬಿಕೆಯೋನೋ

ತಿಳಿಯದಾಗಿದೆ ತೋಚದಾಗಿದೆ
ಇದಕ್ಕೆಲ್ಲ ಉತ್ತರ ನಿನ್ನಲ್ಲಿದೆ...

- HTK

31 Mar 2024, 06:49 pm

ರಾಧೆ ಪ್ರೀತಿಯ ದೇವತೆ ಮತ್ತು ಸೀತೆ?

ಸಹನೆಯ ದೇವತೆ ಇರಬೇಕು ಎಷ್ಟಿದ್ದರೂ
ಭೂಮಿಯ ಮಗಳಲ್ಲವೇ!

ಜನಕನ ಪುತ್ರಿ ಜಾನಕಿ ಜಗವ ಕಾಣದವಳಲ್ಲ ಆದರೂ ಸಹನೆಯ ಹೊತ್ತು ನಡೆದಿದ್ದಳು ತಾಳಿದವನು ಬಾಳಿಯಾನು ಅನ್ನುವ ಮಾತು ಅವಳಿಗೆ ಅನ್ವಯಿಸಲೇ ಇಲ್ಲ ಎಷ್ಟು ವಿಪರ್ಯಾಸಲ್ಲವೇ! ಅಂದೆಂದೋ ಭೂಮಿಯ ಗರ್ಭದಿಂದ ಹೊರಬರುವ ಮುನ್ನ ಅಮ್ಮನ ಮಾತಿಗೆ ರೋಧನೆಗೆ ಕಿವಿಗೊಟ್ಟಿರಬೇಕು ವೈದೇಹಿ ಭೂಮಾತೆ ತನಗೆ ತಾನು ಹೇಳಿಕೊಂಡಿರಬೇಕು ಅವಳ ಒಡಲ ತುಳಿದು ಕೃತಜ್ಞತೆ ಇಲ್ಲದೆ ಜನರು ಮಾಡಿರುವ ವಿಕೃತಗಳನ್ನು. ಬಹುಶಃ ಅಂದೆ ನಿಶ್ಚಯಿಸಿರಬೇಕು ಮೈಥಿಲಿ ಮೌನಧಾರಣೆ ಉತ್ತಮವೆಂದು ಸಹನೆಶೀಲೆ ಹೆಣ್ಣೆಂದು!

ಹೇಗಿರಬಹುದು ಆ ಸೀತೆ ಇದ್ದಿರಬಹುದು ಮುಂಜಾನೆ ಇಬ್ಬನಿಯಲ್ಲಿ ಮಿಂದ ಭುವಿಯ ಹೊಳಪಿನಂತೆ, ಉಕ್ಕಿದ ಹಾಲ ನೊರೆಯ ಮೃದುವಿನಂತೆ. ಕಡುಗಪ್ಪು ಕೇಶರಾಶಿ ತಿಳಿಗೆಂಪು ಕೆನ್ನೆಯೋತ್ತು ನಸುನಾಚಿದ ಬೆಳದಿಂಗಳಂತೆ.

ವರಿಸಿ ಬಂದ ಚಿನ್ನದ ಮಹಲಿನ ಸರದಾರ ಹೃದಯದಲ್ಲಿ ಬಚ್ಚಿಡಬೇಕಿತ್ತು ಅವಳನ್ನು ಕಾಡಿನ ಪಾಲಾಗಿಸುವ ಬದಲು!
ಗಂಡನ ನೋವಿನ ಕೂಗಿಗೆ ಮರುಗಿದ್ದೆ ಸೀತೆಯ ತಪ್ಪಾಯಿತೆ ಮತ್ತೆ ಅವನ ಸೇರಿದ ಸಂಭ್ರಮದಲ್ಲಿ ಲೋಕಕ್ಕೆ ಅಂಜಿ ಅಗ್ನಿ ಮಡಿಲ ಮಗುವಾಗಿದ್ದೆ ತಪ್ಪಾಯಿತೆ ಆದರೇನು ಬಂತು ಪ್ರಯೋಜನ ಮತ್ತೆ ಕಾಡಿನ ಪಾಲಗಲಿಲ್ಲವೇ ಅವಳು ರಾಜ್ಯದ ಜನರಿಗಾಗಿ ಮಡದಿಯ ತೊರೆದ ರಾಜನಿಗಾಗಿ!

ಮತ್ತೆ ಯಾವ ನಂಬಿಕೆಯೊತ್ತು ಹೋದಾಳು ಆ ರಾಜನ ಅರಮನೆಗೆ ಪ್ರೀತಿ ವಿಶ್ವಾಸಗಳೇ ಇಲ್ಲವಾದಮೇಲೆ!
ಸಹನೆ ಸತ್ತು ಹೋಗಿರಬೇಕು ಅವಳಲ್ಲೂ ಅಮ್ಮನ ಮಡಿಲು ನೆನಪಾಗಿರಬೇಕು ಜನರ ನಿಂದನೆಗಳು ಕೇಳಲಾರದೆ ಎಲ್ಲಿಂದ ಬಂದಳೋ ಅಲ್ಲಿಗೆ ಹೊರಟುಹೋದಳು ಸುಶೀಲೆ ತನ್ನದಲ್ಲದ ಪಾಪಿ ಪ್ರಪಂಚವನ್ನು ತೊರೆದು..

- ಚುಕ್ಕಿ

31 Mar 2024, 01:30 pm

ಆ ದಿನ

ಅವನ ಮೊದಲ ಕಣ್ ನೋಟಕ್ಕೆ ಮನ ಸೋತ ಆ ದಿನ,
ಆತನ ನಗುವನ್ನು ಕದ್ದು ನೋಡಿದ ಆ ದಿನ
ತಿರುಗಿ ಒಮ್ಮೆ ನನ್ನ ನೋಡಬಾರದೇ ಎಂದೇನಿಸಿದ ಆ ದಿನ,
ಒಂದು ಮಾತನಾದರು ಆಡಬಾರದೇ ಎಂದು ಕೊಂಡ ಆ ದಿನ,
ಅವನು ಅಹಂ ತೋರಿಸುತ್ತಿದ್ದನೆ ಅಂದುಕೊಂಡ ಆ ದಿನ,
ಅವನ ನೋಟವನ್ನು ಗಮನಿಸಿದರು ಗಮನಿಸಿದಂತೆ ನಟಿಸಿದ ಆ ದಿನ,
ಆವನಾಗಿಯೇ ಬಂದು ನನ್ನ ಮಾತಾಡಿಸಿದ ಆ ದಿನ,
ಮೊದಲ ಬಾರಿಗೆ ಪ್ರೀತಿಯನ್ನು ವ್ಯಕ್ತ ಪಡಿಸಿದ ಆ ದಿನ,
ಅವನ ಪ್ರೀತಿಯ ಹೃದಯಕ್ಕೆ ಲಗ್ಗೆ ಇಟ್ಟ ಆ ದಿನ,
ಅವನ ಜೊತೆ ಸಪ್ತಪದಿ ತುಳಿದ ಆ ದಿನ,
ಅವನ ಹೆಸರಿನ ಜೊತೆಗೆ ನನ್ನ ಹೆಸರ ಸೇರಿಸಿದ ಆ ದಿನ,
ಅವನ ಮನೆಗೆ ಸೇರೋದ್ದು ಬಲಗಾಲು ಇಟ್ಟ ಆ ದಿನ,
ಸುಖ ದುಃಖಗಳಲಿ ಒಂದಾಗಿ ಬಾಳಿದ ಆ ದಿನ,
ಬದುಕಿನ ಬುತ್ತಿಯೊಳ್ ಇನ್ನೆಷ್ಟು ಆ ದಿನಗಳು,
ಸೇರುತಿಹುದು ಕನಸೆಂಬ ಆ ದಿನದೊಳ್......!
Love Kasthury

- kasthury k

30 Mar 2024, 08:23 pm

ಚರ್ಮದ (ಮೋಹ)


!! ಇವತ್ತು ಚರ್ಮ ಹೊಳಿತೈತಿ
ನಾಳೆ ಒಂದಿನ ಕ್ವಳಿತೈತಿ....!!
!! ಎಷ್ಟು ಹಾರೈಕೆ ಮಾಡಿದ್ರೆನು
ಈ ಕಾಂತಿ ಕೊನೆತನಕ ಇರುತೈತೇನು...!!

!! ಚರ್ಮದಾಗ ವರ್ಣಬ್ಯಾರೆ ಐತಿ.
ಕರಗ, ಬೇಳಗ ಅಂತ ಬೇದ ತುಂಬೈತಿ..!!
ಎಷ್ಟು ಬೆಳಗಿದ್ದರೇನು...
ಸುಟ್ಟರೆ ಬೂದಿ ಆಗದೆ ಇರತೈದೇನು?..

@LKG.23
vistar_nudi
!! ಇವತ್ತು ಚರ್ಮ ಹೊಳಿತೈತಿ
ನಾಳೆ ಒಂದಿನ ಕ್ವಳಿತೈತಿ....!!
!! ಎಷ್ಟು ಹಾರೈಕೆ ಮಾಡಿದ್ರೆನು
ಈ ಕಾಂತಿ ಕೊನೆತನಕ ಇರುತೈತೇನು...!!

!! ಚರ್ಮದಾಗ ವರ್ಣಬ್ಯಾರೆ ಐತಿ.
ಕರಗ, ಬೇಳಗ ಅಂತ ಬೇದ ತುಂಬೈತಿ..!!
ಎಷ್ಟು ಬೆಳಗಿದ್ದರೇನು...
ಸುಟ್ಟರೆ ಬೂದಿ ಆಗದೆ ಇರತೈದೇನು?..

@LKG.23
vistar_nudi

- LKG

27 Mar 2024, 07:55 pm

ಮೋಹ (ಚರ್ಮ)

!! ಇವತ್ತು ಚರ್ಮ ಹೊಳಿತೈತಿ
ನಾಳೆ ಒಂದಿನ ಕ್ವಳಿತೈತಿ....!!
!! ಎಷ್ಟು ಹಾರೈಕೆ ಮಾಡಿದ್ರೆನು
ಈ ಕಾಂತಿ ಕೊನೆತನಕ ಇರುತೈತೇನು...!!

!! ಚರ್ಮದಾಗ ವರ್ಣಬ್ಯಾರೆ ಐತಿ.
ಕರಗ, ಬೇಳಗ ಅಂತ ಬೇದ ತುಂಬೈತಿ..!!
ಎಷ್ಟು ಬೆಳಗಿದ್ದರೇನು...
ಸುಟ್ಟರೆ ಬೂದಿ ಆಗದೆ ಇರತೈದೇನು?..

@LKG.23
vistar_nudi

- LKG

27 Mar 2024, 07:45 pm

ನೆನಪುಗಳು.... ಹುಡುಕಾಟ....

ವರುಷಗಳ ನಂತರ ಒಂದು ದಿನ
ಜೀವನದಲ್ಲೇನೋ ಮಹತ್ವವಾದುದನ್ನು ಕಳೆದುಕೊಂಡಿರುವೆ ಅನ್ನಿಸಿದಾಗ
ನನ್ನನ್ನು ಹುಡುಕಬಹುದು
ಹಳೆ ನೆನಪಿನ ಪುಟಗಳನ್ನು ತಿರುವಿ ಹಾಕಬಹುದು
ನನಗೆ ಕರೆಮಾಡಬಹುದು, ಕಾಗದ ಬರೆಯಬಹುದು
ನಾನು ಉತ್ತರಿಸುವುದಿಲ್ಲ ಅಲ್ಲಿ ನಾನಲ್ಲಿರಿವುದಿಲ್ಲ
ಕಾಲ ಸರಿದು ಎಲ್ಲವೂ ಬದಲಾಗಿದೆ ನಾನು ಕೂಡ...

ಆಗ ನನ್ನ ಆಸ್ತಿತ್ವವನ್ನು ತಿಳಿಯಲೆತ್ನಿಸಬಹುದು ಭಾವನಾತ್ಮಕವಾಗಿ ನೆನಪುಗಳನ್ನು ಕೆದಕಬಹುದು
ನೀನು ಪ್ರೀತಿಸುವವರಲ್ಲಿ ನನ್ನನ್ನು ಕಾಣಲು
ಪ್ರಯತ್ನಿಸಿರಬಹುದು ಅವರು ನಿನ್ನನ್ನು ನನ್ನಷ್ಟೇ ಪ್ರೀತಿಸಿರಬಹುದು, ನನ್ನಷ್ಟೇ ನಿನನ್ನು ನಗಿಸಿರಬಹುದು
ಆದರೆ ನಿನಗೆ ತಕ್ಷಣ ಅರ್ಥವಾಗುತ್ತೆ
ಅವರು ನಾನಾಗಲು ಸಾಧ್ಯವಿಲ್ಲ
ಏಕೆಂದರೆ ಅದೊಂದು ವಿಶಿಷ್ಟ ಪ್ರೀತಿ ವಿಶೇಷ ...

ನಾನು ನಿನಗಾಗಿಯೇ ಕಾಯುತಿದ್ದೆ ನನ್ನನ್ನು
ಕಳೆದುಕೊಂಡೆ ನನ್ನ ನೆನಪುಗಳನ್ನು...
ನಿನ್ನ ಉಳಿದ ದಿನಗಳನ್ನು ನನ್ನ ಕುರುಹುಗಳನ್ನ
ಬೇರೆಯವರ ಹೃದಯಗಳಲ್ಲಿ ಪ್ರೀತಿಯಲ್ಲಿ ಹುಡುಕಲು
ಪ್ರಯತ್ನಿಸಬಹುದು ಆದರೆ ನಾನು ಸಿಗುವುದಿಲ್ಲ
ಏಕೆಂದರೆ ಅದೊಂದು..............


















- ಶಶಿಧರ ಹೆಚ್ ಎನ್

15 Mar 2024, 05:39 pm

ಎಚ್ಚರ ತಂಗೆಮ್ಮಾ

ಎಚ್ಚರ ತಂಗೆಮ್ಮಾ

ಎಚ್ಚರ ತಂಗೆಮ್ಮ ಎಚ್ಚರ ಎಚ್ಚರ
ಹುಚ್ಚರ ಜಗದೊಳಗಿರು ಎಚ್ಚರ
ಕಚ್ಚೆ ಕಟ್ಟದ ಜನರಿಂದಿರು ಎಚ್ಚರ
ಮೆತ್ತನೆ ಮಾತುಗಳಿಂದಿರು ಎಚ್ಚರ

ಸೆಂಟು ಬೂಟು ಗಳಿಂದಿರು ಎಚ್ಚರ
ಸೂಟು ಸೋಕಿಗಳಿಂದಿರು ಎಚ್ಚರ
ಬೈಕು ಕಾರು ಗಳಿಂದಿರು ನಿ ಎಚ್ಚರ
ಅವರ ಬಣ್ಣದ ಮಾತಿಂದರು ಎಚ್ಚರ

ಸಾಲ ಸೋಲ ಗಳಿಂದಿರು ನಿ ಎಚ್ಚರ
ಸಂತಾನ ಸಾಕುವುದರಲ್ಲಿರಲಿ ಎಚ್ಚರ
ಹುಚ್ಚು ಮನಸಿಂದಿರು ನೀನು ಎಚ್ಚರ
ಪತಿ ಸೇವೆಯಲ್ಲಿರಲಿ ನಿನಗೆ ಎಚ್ಚರ

ಹೊರಗಡೆಯ ಕೆಲಸದಲ್ಲಿರಲಿ ಎಚ್ಚರ
ಬಾಡಿಗೆ ಅನ್ನಂದಿರಿಂದರಲಿ ಎಚ್ಚರ
ಒಳಗಿರುವ ಮುಸುಕಿಂದಿರು ಎಚ್ಚರ
ಸಮಯ ಸಾದಕರಿಂದಿರು ನಿ ಎಚ್ಚರ


ನಿನ್ನತನವನ್ನೆಲ್ಲ ಬಿಟ್ಟು ಕೊಟ್ಟು ತಂಗಿ
ನಿನಗಾಗಿ ಕಾದಿಹವು ಅದೆಷ್ಟು ಮಂದಿ
ಅಗದಿರು ನೀನು ಮುಂದೆ ಚಿಂದಿ ಚಿಂದಿ
ಲೋಕಪಾಲಕನ ಮುಂದೆ ಬಿಂದು ಎಂದೆ




- Kalmesh Badiger

09 Mar 2024, 06:37 am

ಕವನ ಅಂತರರಾಷ್ಟ್ರೀಯ ಮಹಿಳಾ ದಿನ.



ಪೃಥ್ವಿಯೊಳ್ ಬಂಧಿಸಿದ ಬೇರಂತೆ ಮನೆಯಲ್ಲಿದ್ದ ಹೆಣ್ಣು, 

ಪರತಂತ್ರ ದಾಚೆಯ ಬದುಕನು ಬಯಸಿತವಳ ಕಣ್ಣು.

ತನ್ನವರ ಹಸಿವ ಇಂಗಿಸಿ ಉಪವಾಸ ಇರುವಳು ಅವ್ವ, 

ಕುದಿಯುವ ನೋವಿನೊಳಗೂ ನಮಗೆ ನಗುವುದ ಕಲಿಸಿದ ಜೀವ..

ಜ್ಞಾನಾಸಕ್ತರನ್ನಾಗಿಸಿತು ಮಹಿಳೆಯರಿಗೆ ಮಹನೀಯರ ಪ್ರೋತ್ಸಾಹ, 

ಸಂವಿಧಾನವಿತ್ತ ಶಿಕ್ಷಣದ ಅವಕಾಶ, 

ಮೂಡಿಸಿತು ಸ್ಮೃತಿಯೊಳಗೆ ವಿದ್ಯೆ ಪಡೆಯುವ ಉತ್ಸಾಹ...

ಪಂಜರದ ನೀಲಾಂಗನೆಗೆ ದೊರೆಯಿತು ಜ್ಞಾನ, 

ಗಗನ ಯಾತ್ರಿ ಯಾಗಲು ತಿಳಿಸಿತು ನಮ್ಮ ವಿಜ್ಞಾನ.... 

ಬಾಳೆಗೊನೆ ಬಿರಿಯದಂತೆ ನಿಭಾಯಿಸುವಳೂ 

ಜನನಿ ಸಂಸಾರ, 

ಶಿಕ್ಷಕಿಯಾಗಿ ಕಲಿಸುವಳು ಜಗದ್ರಕ್ಷಕನಾಗೋ ಕಂದನಿಗೆ ಸುಸಂಸ್ಕಾರ..... 

ಹೆಣ್ಣಿರದ ಧರೆಯು ಶೂನ್ಯವಿದ್ದಂತೆ, 

ಮನುಕುಲವ ಸೃಷ್ಟಿಸಿ ಮೆರೆದಿಹಳು ಗಾಂಧಾರೆಯಂತೆ......

ತನ್ನ ಕಾರ್ಯಕ್ಷೇತ್ರದ ಯಶಸ್ಸಿಗೆ ತನ್ಮಯವಾಗುವಳೂ ಹೆಲನ್ ಕೆಲ್ಲರಂತೆ, 

ದಕ್ಷ ಸೇವೆಯಲ್ಲಿ ಹೊಳೆಯುತಿಹಳು ಬೆಳದಿಂಗಳಂತೆ.......

ವಿರಾಮವಿರದ ರಮಣೀಯರ ಸಾಧನೆಯ ಸ್ಮರಿಸುವ ಕ್ಷಣ, 

ನಮಗೆ ವಿಶ್ವ ಸಂಸ್ಥೆ ಕೊಟ್ಟ ಮಾರ್ಚ್ 8ರ ಅಂತರರಾಷ್ಟ್ರೀಯ ಮಹಿಳಾ ದಿನ........

ಶ್ರೇಷ್ಠ ಮಹಿಳೆಯರು ಸ್ಫೂರ್ತಿಯಾಗಲಿ,

ಅರಳುವ ಕುಸುಮಗಳಿಗಿಂದು, 

ಹರಸುವೆ ನಾ ತರುಣಿಯರ ಪರಿಶ್ರಮದ ಸಾಹಸಕೆ ಜಯವಾಗಲೆಂದು.........

- nagamani Kanaka

08 Mar 2024, 10:02 pm

- Nuage Laboratoire

08 Mar 2024, 09:03 am

- Nuage Laboratoire

08 Mar 2024, 08:43 am