ಕವಿ ಕಂಗಾಲು

ಹೊರಗೆ ಸುರಿವ ಧೋ ಮಳೆ
ಒಳಗೆ ಹರಿಯಲಿಲ್ಲ ಪದಗಳ ಹೊಳೆ
ಎಷ್ಟು ಮುಳುಗಿದರೂ ಕಲ್ಪನಾ ಬಾವಿಯೊಳಗೆ
ತುಂಬುತ್ತಲೇ ಇಲ್ಲ ಕವನದ ಕೊಡ
ಬರಿದೇ ತುಳುಕಾಡಿದೆ, ಅದಕ್ಕೇನೋ ಜಡ!

ಮಿಂಚ ಬೆಳಕಿಗೆ ಹೊಳೆದ ಬೆಟ್ಟ ಸಾಲು
ಆದರೂ ಹೊಳೆದಿಲ್ಲ ಒಂದಾದರೂ ಕವನ ಸಾಲು
ಮಳೆ ತೊಳೆಯಿತು ಇಳೆಯ ಕೊಳೆ
ಕವಿ ಗೀಚಿ ಗೀಚಿ ಸಾಹಿತ್ಯದ ಕೊಲೆ
ಮಳೆಯ ಹೊಡೆತಕ್ಕೆ ತುಡಿವ ಹೃದಯದ ಗೋಳು
ಪದಕ್ಕೆ ತಡಕಾಡಿ ಸತ್ತ ಕವನವಿದು
ಕವಿಯ ನಿರಂತರ ಸೋಲು.

- ಶ್ರೀಗೋ.

01 Aug 2015, 06:10 am
Download App from Playstore: