ಅರಿವಿನ ಹೊರೆಯ ಕಟ್ಟಬೇಕು
ಅರಿವಿನ ಹೊರೆಯ ಕಟ್ಟಬೇಕು ಸಾಕಾಗುತ್ತಿಲ್ಲ ಕಟ್ಟಿಗೆ
ಸಾಲ ಕೊಡುವಿರ! ದಾನ ಕೊಡುವಿರ !!
ಕೊಟ್ಟದ್ದು ಕೊಡುವೆ ನಿಮಗಲ್ಲದಿದ್ದರೂ ನಿಮ್ಮವರಿಗೆ, ಇಂದಲ್ಲದಿದ್ದರು ನಾಡಿದ್ದು.
ಬಡ್ಡಿಯಲ್ಲದಿದ್ದರು ಮರಿಬಡ್ಡಿ ಸಮೇತ.
ದಾರಿಹೋಕರು ಕೊಡುವೆನೆಂದರು ಷರತ್ತಿಗೆ.
ಅವರು ಷರತ್ತಿಗೆ ಕೇಳಿದ್ದು ಪಾಂಚಜನ್ಯ,
ಅಭಿಮನ್ಯುವಿನ ಹಾಗೆ ಹೆಬ್ಬೆರಳ
ಹರಿಶ್ಚಂದ್ರನ ಹಾಗೆ ಶಿರವನ್ನ
ಕೇಳಿದರೆ ಕೊಡಬಹುದಿತ್ತು .
ಸಕಲ ಜೀವಿಗೆ ಪ್ರಾಣವಾಗಿರುವಾಗ
ಪ್ರಾಣಪ್ರೀಯನ ಕೊಡುವುದಾದರೂ ಹೇಗೆ?
ಕೊರಳನ್ನು ಕೊಡುವೆ ಎಂದು ಕೋರಲೆ ಎಂದನಿಸಿತ್ತು . ಅದರೆ ನನ್ನದೆಂಬುದು ಎನಿದೆ ? ನೆರಳು ಬಿಟ್ಟು ...
ಇದಾ.. ಕೊಡುವೆ ಎಂದೆ. ಮಣಿಯಲಿಲ್ಲ ಮರುಳ.
ನನ್ನ ಹೊರೆಗೆ ನಾನು ಪವಣಿಸಬೇಕು
ಇತಿಹಾಸ ತಿರುವಿದಾಗ ದಾನಕ್ಕಿಂತ ಸಾಲ,
ಸಾಲಕ್ಕಿಂತ ಕೋಲಾಹಲ.
ಇಂದು ಮೂರರ ಮುಡಿಗೆ ಮುತ್ತಿಕುತ್ತರೆ ಎಂದುಕೊಂಡಿದೆ
ಆದರೆ ಪಂಚಭೂತಗಳೆಡೆಗೆ ಕೈ ಚಾಚಿದಂತೆ ಕಾಣುತ್ತದೆ ಕರ್ಮ....
-ಈಶ, ಎಮ್.ಸಿ.ಹಳ್ಳಿ
- ಈಶ, ಎಂ.ಸಿ.ಹಳ್ಳಿ
06 Jan 2015, 11:42 am
Download App from Playstore: