ಕವನದ ಶೀರ್ಷಿಕೆ ಅಪ್ಪನ ಮಮತೆ.

ನೆರೆಮನೆಯ ಜೀತದಲ್ಲಿ ಸವೆಯುತ ಅಪ್ಪ,
ಮಕ್ಕಳನ್ನು ಶಾಲೆಗೆ ಸೇರಿಸಿದರು.
ಹಿಂದೆ ಅನ್ನವಿರದ ದಿನಗಳಲ್ಲಿ ಅಪ್ಪ,
ನಮಗೆ ಗಂಜಿ ಕುಡಿಸಿ ಬೆಳೆಸಿದರು.
ಸೌಮ್ಯ ಸ್ವಭಾವದ ನಮ್ಮ ಅಪ್ಪನ ನಿರಂತರ ದುಡಿಮೆ,
ಕಲಿಸಿತು ನಮಗೆ ಜವಾಬ್ದಾರಿಯುತ ಬದುಕಿನ ನಿರ್ವಹಣೆ.
ಚಿಕ್ಕವಳಾಗಿ ನಾನು ಅಪ್ಪನ ಮಮತೆಯಲ್ಲಿ ಅರಳುವ ಮುನ್ನವೇ,
ಅವರು ನರಳತೊಡಗಿದರು ತಮ್ಮ ಕಾಯಿಲೆ ಏನೆಂದು ತಿಳಿಯದೆ.
ನನ್ನಮ್ಮ ಅಪ್ಪನಿಗಾಗಿ ತಿರುಗದ ಆಸ್ಪತ್ರೆಗಳಿಲ್ಲ,
ದೀರ್ಘಕಾಲ ನೋವಿನಿಂದ ನರಳಿದ ಅಪ್ಪ ನಮಗಾಗಿ ಉಳಿಯಲಿಲ್ಲ.
ನನ್ನ ಬದುಕಿಗೆ ಚುಕ್ಕಿಯ ಚಂದ್ರಮನಾಗಬೇಕಿದ್ದ ಅಪ್ಪ ಇಂದು ನೆನಪು ಮಾತ್ರ.
ಅಪ್ಪನಾಗಿ ನನ್ನ ಉಜ್ವಲ ಭವಿಷ್ಯಕ್ಕೆ ಸಾಕ್ಷಿಯಾಗಿರುವ ಅಮ್ಮನ ತ್ಯಾಗ ಶ್ಲಾಘನೀಯ,
ಅಪ್ಪನಿದ್ದರೆ ನನ್ನ ಜೀವನ ಇನ್ನೂ ಹೇಗಿರುತಿತ್ತೋ,
ಎಂಬ ಪ್ರಶ್ನೆಗೆ ಉತ್ತರವಿಲ್ಲ.
ಮಕ್ಕಳ ಸನ್ಮಾರ್ಗದ ಹಾದಿಯ ಸುಗಮಗೊಳಿಸಲು ಬೇಕು ಅಪ್ಪ,
ಕಣ್ಮರೆಯಲ್ಲೆ ನಮ್ಮ ಬಯಕೆಗಳ ಅರಿತು ಸಂತೃಪ್ತಿಗೊಳಿಸುವ ಭೂಪ.
ಕುಟುಂಬದ ಸಾರಥಿಯಾಗಿರೋ ಅಪ್ಪನ ನಾವ್ ಗೌರವಿಸಬೇಕು,
ನಮ್ಮ ಸೇವೆ ಅಪ್ಪನ ಹೆಸರ ಗುರುತಿಸುವಂತೆ ಇರಬೇಕು,
ಮಕ್ಕಳ ಸರ್ವಾಂಗೀನ ಪ್ರಗತಿಗೆ ಅಪ್ಪ ಜೊತೆಗಿದ್ದರೆ ಸಾಕು.

- nagamani Kanaka

18 Jun 2023, 11:43 pm
Download App from Playstore: