ಬಿರುಗಾಳಿಯ ಆಗಮನ
ಪ್ರಶಾಂತವಾಗಿದ್ದ ಕಡಲಿಗೆ
ಸುನಾಮಿಯ ರೌದ್ರ ನರ್ತನ..
ತಂಗಾಳಿಯ ತಂಪಿಗೆ
ಬಿರುಗಾಳಿಯ ಆಗಮನ..
ಕತ್ತಲು ತುಂಬಿದ ಬದುಕಿಗೆ
ನೀನೇ ಬೆಳಕೆಂದು ಭಾವಿಸಿದ್ದೆ..
ನೀ ಹಚ್ಚಿದ ದೀಪವ
ನೀನೇ ಆರಿಸಿ, ದೂರ ಸರಿದೆ..
ನೋವಿಗೆ ಔಷಧವಾಗಿದ್ದ ನೀನೇ
ಮತ್ತೆಂದೂ ವಾಸಿಯಾಗದ ಘಾಸಿ ಮಾಡಿದೆ..
ಕಾಯುವ ದೈವವೇ ಕೈ ಬಿಟ್ಟಾಗ
ನಂಬಿಕೆಯ ಮೇಲೆ ನಂಬಿಕೆ ಕಳೆದಿದೆ ಈಗ..
ತನುಮನಸು✍️
- Tanuja.K
18 Jun 2023, 08:49 am
Download App from Playstore: