ಮೂರ್ಖ ಸಾದು..... ಸುಧಾ ಆರ್ ಬಳಿಗೇರ್

ಒಂದು ದಿನ ಬುದ್ಧರ ಹತ್ತಿರಕ್ಕೆ ಇಬ್ಬರು ಸಾದುಗಳು
ಬಂದರು ...ಒಬ್ಬನು ಭ್ರಮರಸಾದು ...ಮತ್ತೊಬ್ಬ ಅಮರಸಾದು

ಅವರಿಗೆ ಬುದ್ದರು ಕೆಲವು ಮಾತುಗಳನ್ನು ಹೇಳಿದರು
ಅದನ್ನ ಕೇಳಿದ ಆ ಇಬ್ಬರು ಸಾದುಗಳು ತುಂಬ ಖುಷಿ ಪಟ್ಟರು...
ಹಾಗೆಯೇ ಬುದ್ದುರು ಅವರಿಗೆ ಕೆಲವು ವಸ್ತುಗಳನ್ನು ಕೊಟ್ಟು ಹೀಗೆ ಹೇಳಿದರು...

ಒಂದು ವಸ್ತುವಿನ ಬೆಲೆ ಬಹಳ ಇದೇ ಹಾಗೆಯೇ ಇನ್ನೋದಕ್ಕೆ ಬೆಲೆಯೇ ಇಲ್ಲ ಎಂದು ಹೇಳಿ,
ನೀವು ಇಬ್ಬರು ಆ ವಸ್ತುಗಳಿಗೆ ಹೇಗೆ ಬೆಲೆಯನ್ನು ತರುತಿರಾ ಅಂತ ನೋಡುವೆ ಎಂದು ಹೇಳಿ ಆ ವಸ್ತುಗಳನ್ನು ಕೊಟ್ಟು ಕಳುಹಿಸಿದರು....

ನಂತರ ತುಂಬ ಬೆಲೆ ಇದ್ದ ೧ದು ವಸ್ತುವನ್ನ ಭ್ರಮರ ಸಾದು ನಾನು ಈ ವಸ್ತುವನ್ನ ತೆಗೆದುಕೊಳ್ಳುತ್ತೆನೆ ಎಂದು ಹೇಳಿದ...

ಅಮರಸಾದು ಹಾಗೆಯೇ ಆಗಲಿ ನಾನು ಬೆಲೆ ಇಲ್ಲದ ವಸ್ತುವನ್ನೇ ತೆಗೆದುಕೂಳ್ಳುತೇನೆ ಎಂದ...

ಈವರು ಇಬ್ಬರು ಬೇರೆ ಬೇರೆ ಊರುಗಳಿಗೆ ಹೋದರು ...

ಭ್ರಮರಸಾದು ಒಬ್ಬ ಅಹಂಕಾರಿ ತನಗೆ ಸಿಕ್ಕ ವಸ್ತು ತುಂಬ ಬೆಳೆವುಲ್ಲದ್ದು ಇದಕ್ಕೆ ಬೇರೆ ಬೆಲೆ ನಾನೇಕೆ ಹುಡುಕಬೇಕು ಎಂದು ನಿತ್ಯ ಕೆಲಸದಲ್ಲಿ ತೊಡಗಿದ ಹಾಗೆ ಆ ವಸ್ತು ನನ್ನ ಬಳಿ ಇದೇ ಎಂದು ಪ್ರೀತಿಸುವ ಮನಸ್ಸುಗಳಿಗೇ ನೋವು ಕೊಟ್ಟ...ಸಮಯ ಮುಗಿಯಿತು ಅವನ ಬಳಿಯಲ್ಲಿರುವ ವಸ್ತು ಯಾವುದಕ್ಕೂ ಪ್ರಯೋಜನಕ್ಕಾಗಿ ಬರಲಿಲ್ಲ ಮತ್ತು ಪ್ರೀತಿಯು ಸಿಗಲಿಲ್ಲ ಚಿಂತೆಯಿಂದ ಸಾದು ಕೆಟ್ಟು ಹೋದ ......

ಇತ್ತ ...ಅಮರಸಾದು ಯಾವುದೇ ಬೆಲೆಯೇ ಇಲ್ಲದ ವಸ್ತುವಿನಿಂದ ಪ್ರೀತಿ ಪಡೆದು ಆ ಪ್ರೀತಿ ಇಂದ ಜಗವನ್ನೇ ಗೆದ್ದು ತನ್ನನು ಗುರುತಿಸುವತ್ತೇ ಹಾಗೇ ಯಲ್ಲರು ಪ್ರೀತಿಸುವಂತ ವಕ್ತಿಯಾದ ....

ಈ ಇಬ್ಬರ ಸಮಯವೂ ಮುಗಿದು
ಬುದ್ಧರ ಬಳಿಗೆ ಬಂದರು ....

ಬುದ್ಧರು ಕೇಳಿದರು ಭ್ರಮರ ನಿನ್ನ ವಸ್ತು ಯಲ್ಲಿ ಹಾಗೆ ನಿನ್ನ ವಸ್ತುವಿನಿಂದ ನೀನು ಏನನ್ನು ಗಳಿಸಿದೆ ಎಂದು ಕೇಳಿದರು ....
ಭ್ರಮರಸಾದು ತಲೆಬಾಗಿ ನನ್ನನು ಕ್ಷಮಿಸಿ ಗುರುವೇ ಅಹಂಕಾರದಿಂದ ನನ್ನ ವಸ್ತುವೆ ನನಗೆ ವೈರಿಯಾಯಿತು ಅದರಿಂದ ನನ್ನ ನೆಮ್ಮದಿ ಹಾಳಾಯಿತು ಯಾರಬಳಿಯಲ್ಲು ಪ್ರೀತಿಯು ಸಿಗಲಿಲ್ಲ ಯಲ್ಲವನ್ನು ಕಳೆದುಕೊಂಡೆ ಎಂದ .....

ಮತ್ತೆ ಬುದ್ದರು ಅಮರ ನಿನ್ನ ವಸ್ತು ಯಲ್ಲಿ ನೀನು ಏನನ್ನು ಗಳಿಸಿಗೆ ಎಂದು ಕೇಳಿದರು ....
ಅಮರಸಾದು ಗುರುವೇ ಅ ವಸ್ತುವಿನಿಂದ ನನಗೆ ತುಂಬ ಪ್ರೀತಿ ಸಿಕ್ಕಿತು ಆ ಪ್ರೀತಿಯ ಮಹಿಮೆಯಿಂದ ಯಲ್ಲರ ಮನಸ್ಸುಗಳನ್ನು ಗೆದ್ದು ಯಲ್ಲರ ಪ್ರೀತಿಯನ್ನು ಪಡೆದಿದ್ದೇನೆ ಎಂದ ....

ಆಗ ಬುದ್ದರು ಹೀಗೆ ಹೇಳಿದರು ಪ್ರೀತಿಯಿಂದ ಏನು ಬೇಕಾದರೂ ಪಡೆಯಬಹುದು ...ಆದರೆ ನೋವು ಕೊಡುವವರಿಗೆ ದೇವರು ಯಲ್ಲವನ್ನು ಕಸಿದಿಕೊಳ್ಳುತ್ತಾನೆ ....ಪ್ರೀತಿಸುವವರಿಗೆ ಯಲ್ಲವನ್ನು ಸಮಯ ನೋಡಿ ಹೆಚ್ಚು ಹೆಚ್ಚು ಕೊಡುತ್ತಾನೆ ಇಷ್ಟೇ ಜೀವನ ಎಂದ .....

ಆಗ ಅಮರಸಾದು ಪ್ರೀತಿ ಇಲ್ಲದ ಆ ಭ್ರಮರ ಸಾದುವಿಗೆ ಪ್ರೀತಿಯ ಮಾತುಗಳನ್ನು ಆಡುತ್ತಾ ನೊಂದ ಅವನ್ನನ ಪ್ರೀತಿಸಿದ .....

ಸುಧಾ ಆರ್ ಬಳಿಗೇರ್




- ಸುಧಾ ಆರ್ ಬಳಿಗೇರ

01 Jun 2023, 09:42 am
Download App from Playstore: