ನನ್ನ ಕವನ

ನಾ ಬರೆದ ನೂರೊಂದು ಕವನ
ಅದು ಸೆಳೆಯಿತು ಹಲವರ ಗಮನ
ಕೆಲವರು ತೋರಿದರು ಸಹಕಾರ
ಅದರಲ್ಲಿತ್ತು ಪ್ರೀತಿಯ ಮಮಕಾರ
ಇನ್ನು ಕೆಲವರು ಬೀರಿದರು ಮಂದಹಾಸ
ಅದರಲ್ಲಿತ್ತು ದ್ವೇಷದ ಅಪಹಾಸ್ಯ
ನಾ ಅರಿತರು ಅರಿಯದಂತೆ ಸಾಗಿದೆ
ಏಕೆಂದರೆ ನನಗಿಲ್ಲ ಇದರಿಂದ ಯಾವುದೇ ಚಿಂತೆ
ನಾ ನೀಡಲಿಲ್ಲ ನನ್ನ ಕವನಕ್ಕೆ ವಿರಾಮ
ಕೊನೆಗೆ ಅವರೇ ನೀಡಿದರು
ಅಪಹಾಸ್ಯಕ್ಕೆ ಪೂರ್ಣ ವಿರಾಮ.....

ಜಯಾ ಪಿ ✍️

- Jaya

07 May 2023, 08:26 am
Download App from Playstore: