ಕೇಳೋ ಮಾನವ

ಬಿಟ್ಟ ಹೊಂಟಾನ
ಗಳಿಸಿದ್ದೆಲ್ಲವನ್ನ
ಗಟ್ಟಿ ಮನಸ ಮಾಡಿ
ಶಿವನ ದಾರಿ ಹಿಡದಾನ

ರುಪಾಯಕ ರೂಪಾಯ
ಲೆಕ್ಕ ಹಾಕಿ ಎಲ್ಲಾ ಕೂಡಿಸ್ಯಾನ
ಸಾವಿರ ಸಂಬಂದಿಗಳನ್ನ ಕೂಡಿ
ಸಡಗರದಿಂದ ಕೇಕಿ ಹಾಕ್ಯಾನ

ಮದುವಿ ಮುಂಜಿ ಮಾಡಿಕೆಂತ
ಅವ ಎಲ್ಲಾ ಮರತಾನ
ನಾಳಿನ ದಿನವೇ ಇವನಿಗಿಲ್ಲ
ಅಂತ ಆ ದೇವ ಗೀಚ್ಯಾನ

ಎಲ್ಲಿಂದೆಲ್ಲಿಗೆ ಯಾಕ ಒಡತಿ
ಯಾರಿಲ್ಲ ನಿನಗಿನ್ನ
ಉಳಿದಿದ್ದ ಒಂದ ದಾನ ಧರ್ಮ
ಮರಿಬ್ಯಾಡ ನೀ ಇದನ್ನ.

ನಾಗರಾಜ ಬಾರ್ಕೆರ್

- ನಾಗರಾಜ ಬಾಕೆ೯ರ್

21 Mar 2023, 09:03 am
Download App from Playstore: