ಸ್ತ್ರೀ

ಬ್ರಹ್ಮನ ಅದ್ಭುತ ಕಲ್ಪನೆಯೆ
ಪ್ರಕೃತಿಯ ಅಪ್ರತಿಮ ಸೃಷ್ಟಿಯೆ
ಪ್ರೀತಿ-ಸಹನೆಯ ಪ್ರತಿರೂಪವೆ
ಧೈರ್ಯ-ತ್ಯಾಗದ ಮೂರ್ತಿಯೆ

ತಾಯಾಗಿ ಜೀವವಿತ್ತು
ಪ್ರೀತಿ -ಮಮತೆಯಿಂದ ಸಲಹಿ
ಸರ್ವಸ್ವವನ್ನೂ ಧಾರೆ ಎರೆವ
ನೀನಿಲ್ಲದ ಜಗವು ಶೂನ್ಯ

ಗೆಳತಿಯಾಗಿ ಜೀವನದ ಜೊತೆಯಾಗಿ
ಕಷ್ಟ -ಸುಖದ ನೊಗವ ಹೊರುತ
ಬದುಕಿಗೆ ಹೊಸ ಅರ್ಥವ ಕೊಡುವ
ನೀನಿಲ್ಲದ ಬದುಕು ವ್ಯರ್ಥ

ಹೆಣ್ಣಿಂದಲೇ ರಾಮಾಯಣ ನಾರಿಗಾಗಿಯೇ ಮಹಾಭಾರತ
ನಿನ್ನ ತುಳಿದು ಬದುಕಿದವರಿಲ್ಲ ಜಗದಲಿ
ಹೆಣ್ಣಿಗೆ ಶಿಕ್ಷಣ, ಸಮಾನತೆ, ಗೌರವವು
ಸಮಾಜದ ಉನ್ನತಿಗೆ ಮೂಲವು.

ಡಾ.ಅನಿಲ್

- anil

08 Mar 2023, 06:30 am
Download App from Playstore: