ಬದುಕು..

ಜೀವನವೆಂಬ ಕಾಲ ಚಕ್ರದೊಳಗೆ
ಮಾನವನೆಂಬ ಪಯಣಿಗ
ಉಸಿರೆಂಬ ಸಾರಥಿ ಸಾರೋಟನ್ನು ನಿಲ್ಲಿಸಿದಾಗ ಮಾನವನ ಬದುಕಿನ ಪಯಣವು ಮುಗಿದಿದೆ ಎನ್ನುವುದು ಮನವರಿಕೆ ಆಗುವುದು.
ಸಾರಥಿಯು ಚಕ್ರವನ್ನು ನಿಲ್ಲಿಸುವ ಮೊದಲೇ, ಈ ಕ್ಷಣ ನಿನ್ನದೆಂದು ಅದನ್ನು ಪೂರ್ತಿಯಾಗಿ ಬದುಕಿ ಖುಷಿಯಾಗಿ ಬಾಳುವುದನ್ನು ಕಲಿಯೆಂದು. ಆದರೆ ಈ ಮಂಕು ಮಾನವ ಜನ್ಮದ ಮನುಷ್ಯರು ಜೋಳಿಗೆ ಹಿಡಿದು ಆಗೊಮ್ಮೆ ಈಗೊಮ್ಮೆ ಬಂದು ಹೋಗುವ ಅತಿಥಿಗಳು.ಕೆಲವರು ಜೋಳಿಗೆಯಲ್ಲಿ ಹಣ ಆಸ್ತಿ ,ವಿದ್ಯೆ, ಗೌರವ, ಘನತೆ ,ಅಹಂಕಾರ ಹೀಗೆ ಅವರವರಿಗೆ ತೋಚಿದ್ದು ತುಂಬಿಸಿಕೊಳ್ಳುತ್ತಾರೆ. ಆದರೆ ಹೊತ್ತು ತಿರುಗುವ ಕಾಲಚಕ್ರದ ಸಾರೋಟು ಮತ್ತು ಎಲ್ಲವನ್ನೂ ತುಂಬಿಸಿಕೊಳ್ಳುವ ಈ ಜೋಳಿಗೆ ಬಾಡಿಗೆ ಎನ್ನುವುದನ್ನೂ ಮರೆತು ಬಿಟ್ಟು ಮುಂದೆ ಸಾಗಬೇಕೆನ್ನುವ ಸತ್ಯವನ್ನು ಮರೆತು ಬಿಡುತ್ತಾರೆ.

- ಪ್ರಿಯಾಂಕ

05 Mar 2023, 01:39 pm
Download App from Playstore: