ನವೋದಯದ ದೃವತಾರೆ.

ಹಿರೇ ಕೊಡುಗೆಯಲ್ಲಿ ನವೋದಯದ ಧ್ರುವತಾರೆಯ ಜನನ,
ತುಂಗೆಯ ಮಡಿಲಲ್ಲಿ ಕಿಂದರ ಜೋಗಿಗಳ ಜೊತೆ ಪ್ರಕೃತಿಯ ಆಲಿಂಗನ.
ಕುಪ್ಪಳ್ಳಿಯ ಪುಟ್ಟಪ್ಪ ತೀರ್ಥಹಳ್ಳಿಯಲ್ಲಿ ಮುಗಿಸಿದರು ಮಾಧ್ಯಮಿಕ ಶಿಕ್ಷಣ,
ಅವರ ಉನ್ನತ ವ್ಯಾಸಂಗಕ್ಕೆ ನೆಲೆಯಾಯಿತು ಮೈಸೂರು ಪಟ್ಟಣ.
ಆರಂಭಿಸಿದರು ಕುವೆಂಪು ಕನ್ನಡ ಭಾಷೆಯಲ್ಲಿ ಸಾಹಿತ್ಯ ರಚನೆ,
ಕೊಳಲ ನಾದದಿ ನವಿಲಂತೆ ನರ್ತಿಸುತ್ತಿವೆ ಪುಟ್ಟಪ್ಪನವರ ಪ್ರೇಮ ಕಾವ್ಯಗಳ ಸೃಜನೆ.
ಮನುಜ ಮತ, ವಿಶ್ವ ಪಥ, ಸರ್ವೋದಯ, ಸಮನ್ವಯದ ಬದುಕಿಗೆ ಬುನಾದಿಯಾಗಿರುವ ಕವಿಯ ಪಂಚಮಂತ್ರ,
ನೆನಪಿಸಲಿ ನಮಗೆ ನಾಡ ನುಡಿಗೆ ಶ್ರಮಿಸುವ ಕರ್ತವ್ಯದ ಪಾತ್ರ.
ಕರುನಾಡ ಕುವರನ ಮಹಾಕಾವ್ಯ ಶ್ರೀ ರಾಮಾಯಣ ದರ್ಶನಂ ಲಭಿಸಿತು ಜ್ಞಾನಪೀಠ ಪ್ರಶಸ್ತಿ,
ರಾಷ್ಟ್ರಕವಿಯ ಮುಡಿಯೇರಿವೆ ಪಂಪ, ಡಾಕ್ಟರೆಟ್, ಕರ್ನಾಟಕ ರತ್ನ, ಪದ್ಮ ವಿಭೂಷಣ ದಂತಹ ಪುರಸ್ಕಾರಗಳು ತಿಳಿಸುತ್ತಿವೆ ಅವರ ಸಾಹಿತ್ಯ ಲೋಕದ ಸಾಧನೆಯ ಉನ್ನತಿ.
ನೆನಪಿನ ದೋಣಿಯಲ್ಲಿ ಜಗವೇ ಪಯಣಿಸುತ್ತಿದೆ ವಿಶ್ವಮಾನವನ ಸಾಲುಗಳ ನೆನೆಯುತ,
ಉದಯ ರವಿಗೆ ಜನುಮದಿನಕ್ಕೆ ಶುಭ ಕೋರುವೆ ನನ್ನ ಪುಟ್ಟ ಕವನವ ಅರ್ಪಿಸುತಾ.

- nagamani Kanaka

29 Dec 2022, 11:52 pm
Download App from Playstore: