ಲೋಕದ ಡೊಂಕು
ಹಾಳೆಯೆಂದು ಎಸೆದರೂ,
ಹಣವನಾರೂ ಎಸೆಯರು
ಬಡವನಿಗನ್ನ ಕೊಡದೇ,
ನಾಯಿಗನ್ನವ ಕೊಡುವರು.
ಸುಳ್ಳು ಎಷ್ತೇ ಹೇಳಿದರೂ,
ಸತ್ಯವನಾರೂ ನಂಬರು.
ಸುಳ್ಳಿನಾ ಹಂದರವನೇರಿ
ಸತ್ಯವನ್ನೇ ಕೊಲ್ಲುವರು.
ಮರವು ಎಂದು ಕಡಿದರೂ,
ಕಟ್ಟಿಗೆಯನಾರು ಎಸೆಯರು
ಮುಳ್ಳಿನ ಹಂದರವೆನಿಸಿ ಬಿಟ್ಟರೂ
ಹೂವಿನಾಸರೆ ನಿಲ್ಲದು.
ತಮಗೆ ಕಷ್ಟ ಬಂದರೂ,
ಪರರ ಸುಖವ ಬಯಸರು.
ಹೊಟ್ಟೆಕಿಚ್ಚಿನ ಮಂದಿ,
ಪರರ ಕೆಡಕನ್ನೇ ನೋಡುವರು.
ನ್ಯಾಯ-ನ್ಯಾಯವೆಂದರೂ,
ಅನ್ಯಾಯವೆಂದೂ ನಿಲ್ಲದು.
ಪ್ರಾಣಿಹಿಂಸೆಯೆಂದರೂ,
ಕಾಡೆಯುವದನಾರೂ ತಡೆಯರು
ಲೋಕದ ಡೊಂಕು ಎಂದರೂ,
ಲೋಕವನಾರೂ ನೋಡರು.
ಅತ್ರುಪ್ತಿಯ ಮನಸಲಿ ನೊಂದು
ವಿಕ್ರುತ ಮನಸಲ್ಲೇ ಮಡೆವರು
-ಸ . ವಿ .ಚಿ-
- ಸಮೀರ
09 Dec 2014, 12:47 pm
Download App from Playstore: