Kannada Poems
Deprecated: Creation of dynamic property my_pagination::$conn is deprecated in
/home4/airpoiy2/kannadakavana/pagination.php on line
41
ಬಿಸಿಲಿನ ಕೆಳಗೆ
ನಿಂತು
ನಗು ಮುಖ
ಬೀರುವ
ಸಹೋದರನನ್ನು
ಕಾಣುವಾಗ
ಬೆಳಗಿನಾಕಾಶದಲಿ
ಸೂರ್ಯ
ಮೂಡುವಾಗ
ಮರೆಯಾದ
ಚಂದ್ರನಂತೆ
ಅಡಕವಾದ
ತಾಳ್ಮೆ
ತ್ಯಾಗ
ಭರವಸೆ
ನೆನಪಾಯಿತು.
- ಮುಸ್ತಫಾ ಇರುವೈಲು
21 Sep 2014, 04:40 pm
ನಿದಿರೆ ಮಾಡದವನು ಕನಸು ಕಂಡಂತೆ
ಕೆಲಸ ಮಾಡದವನು ದುಡ್ಡಿಗಾಸೆ ಪಟ್ಟಂತೆ
ನೋವರಿಯದ ಜನಪ್ರತಿನಿಧಿಗಳು ಬಿದ್ದ ಮರದಂತೆ
ಬದಲಾವಣೆಯ ನಿರೀಕ್ಷೆ ಬಲುದೊಡ್ಡ ಸುಳ್ಳಿನ ಕಂತೆ
- ಮುಸ್ತಫಾ ಇರುವೈಲು
19 Sep 2014, 10:45 am
ಅಂದು
ರಾಜಕಾರಣಿ
ಎಡವಿ ಬಿದ್ದ
ಕಾರಣಕ್ಕೆ
ಇಂದು
ಕಾಶ್ಮೀರ ಗಡಿಯಲ್ಲಿ
ನಿತ್ಯವೂ ಯುದ್ಧ !
- ಶ್ರೀಗೋ.
19 Sep 2014, 01:58 am