Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಸಹೋದರ

ಬಿಸಿಲಿನ ಕೆಳಗೆ
ನಿಂತು
ನಗು ಮುಖ
ಬೀರುವ
ಸಹೋದರನನ್ನು
ಕಾಣುವಾಗ

ಬೆಳಗಿನಾಕಾಶದಲಿ
ಸೂರ್ಯ
ಮೂಡುವಾಗ
ಮರೆಯಾದ
ಚಂದ್ರನಂತೆ
ಅಡಕವಾದ

ತಾಳ್ಮೆ
ತ್ಯಾಗ
ಭರವಸೆ
ನೆನಪಾಯಿತು.

- ಮುಸ್ತಫಾ ಇರುವೈಲು

21 Sep 2014, 04:40 pm

ಸುಳ್ಳಿನ ಕಂತೆ

ನಿದಿರೆ ಮಾಡದವನು ಕನಸು ಕಂಡಂತೆ
ಕೆಲಸ ಮಾಡದವನು ದುಡ್ಡಿಗಾಸೆ ಪಟ್ಟಂತೆ
ನೋವರಿಯದ ಜನಪ್ರತಿನಿಧಿಗಳು ಬಿದ್ದ ಮರದಂತೆ
ಬದಲಾವಣೆಯ ನಿರೀಕ್ಷೆ ಬಲುದೊಡ್ಡ ಸುಳ್ಳಿನ ಕಂತೆ

- ಮುಸ್ತಫಾ ಇರುವೈಲು

19 Sep 2014, 10:45 am

ಯುದ್ಧ

ಅಂದು
ರಾಜಕಾರಣಿ
ಎಡವಿ ಬಿದ್ದ
ಕಾರಣಕ್ಕೆ
ಇಂದು
ಕಾಶ್ಮೀರ ಗಡಿಯಲ್ಲಿ
ನಿತ್ಯವೂ ಯುದ್ಧ !

- ಶ್ರೀಗೋ.

19 Sep 2014, 01:58 am