Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಮುಗುಳ್ನಗು

ಕನಸಿಲ್ಲದ ಕಣ್ಣುಗಳಿಗೆ,ನಿದ್ದೆ ಭಾರವಾಗಿದೆ
ನೀನಿಲ್ಲದ ನೆನಪುಗಳು
ಇದ್ದೂ ಇಲ್ಲದಂತಿವೆ....
ನಿನ್ನೊಡನೆ ಆಡದೆ ಉಳಿದ ಮಾತುಗಳು..
ಮೂಕಾಗಿ ಮುಗುಳ್ನಗುತಿವೆ.....

- ನಿಮ್ಮಿ

30 Nov 2014, 04:51 pm

ಅಂತರಗಂಗೆ

ತುಟಿಯಂಚಲಿ ವಿನಾಕಾರಣ ಮೂಡಿದ
ನಗೆಯ ಕಾರಣವಾಗಿರುವೆ ನೀ....
ಕಣ್ಣಂಚಲಿ ಜಾರದೆ ಉಳಿದ
ಹೊಳಪಿನ ಮಿಂಚಾಗಿರುವೆ ನೀ....
ಮನದಾಳದಲಿ ಸದ್ದಿಲದೇ ಹರಿವ..
ಅಂತಂರಗಂಗೆಯಗಿರುವೆ ನೀ....

- ನಿಮ್ಮಿ

30 Nov 2014, 04:46 pm

ವಾಸ್ತವ

ಕೂಡಿ ಬಾಳಿದರೆ ಸ್ವರ್ಗ ಸುಖ
ಎಂದು ನಿನ್ನನ್ನು ಕೂಡಿಕೊಂಡೆ
ನನ್ನದೆಂಬುದೇನೂ ಉಳಿದಿಲ್ಲ ಈಗ
ಎಲ್ಲವನ್ನೂ ಕಳೆದುಕೊಂಡೆ :-)

- ವಿಜಯ್ ಹೆರಗು

30 Nov 2014, 04:37 pm

ಏನು ಇಲ್ಲ

* ಏನು ಇಲ್ಲ *


ನನ್ನದು ಏನು ಇಲ್ಲ
ಬರೆದದು ಬರೀ
ಬರವಣಿಗೆ
ಏಕೆಂದರೆ?
ಅಕ್ಷರಗಳೆಲ್ಲ
ನಿಮ್ಮದೇ.....!

ನನ್ನದು ಏನು ಇಲ್ಲ
ಬರೀ
ಮಾತಾಡುತ್ತಿದ್ದೆನೆ
ಏಕೆಂದರೆ?
ಪದಗಳೆಲ್ಲ
ನಿಮ್ಮದೇ .....!

ನನ್ನದು ಏನು ಇಲ್ಲ
ಬರೀ
ದುಡಿಯುತ್ತಿದ್ದನೆ
ಏಕೆಂದರೆ?
ದುಡ್ಡೆಲ್ಲ
ನಿಮ್ಮದೇ ....!

ನನ್ನದು ಏನು ಇಲ್ಲ
ಬರೀ
ಜೀವಿಸಿದ್ದೆನೆ
ಏಕೆಂದರೆ?
ಜೀವ
ನಿಮ್ಮದು...!

-ಈಶ, ಎಂ.ಸಿ.ಹಳ್ಳಿ

- ಈಶ, ಎಂ.ಸಿ.ಹಳ್ಳಿ

30 Nov 2014, 05:18 am

ಅ-ಳ ಅಂದುಕೊಂಡದ್ದು.

* ಅ-ಳ ಅಂದುಕೊಂಡದ್ದು *

ಅಂದ ಇವುದು
ಆಕಾರದಲ್ಲಿ
ಇಂದು
ಈಗೇಕೆ
ಉದಯ.
ಊರ
ಋಷಿಗಳು ನಸುಕಲ್ಲಿ
ಎದ್ದು
ಏಕಾಂಗಿಯಾಗಿ
ಐತಿಹಾಸದ
ಒಳಕಣ್ಣು
ಓಡುತ್ತ ಇತ್ತು.
ಔಚಿತ ದೇಹ
ಅಂ
ಆಃ ಎನ್ನುತ್ತಾ
ಕಣ್ಣೆದುರು
ಖಂಡಶಶಿಧರನ
ಗಮನಿಸಿದಾಗ.
ಘನರಸದ ಬೆಳಕು
ಙ ಶಬ್ದವು ನಾಲಿಗೆಯಿಂದ
ಚಲಿಸಲಿಲ್ಲ.
ಛಂದಸ್ಸು ಹಾರಾಡುವ
ಜಂಗಮ
ಝರಿ ಝೇಂಕರಿಸಿತ್ತು.
ಞ ಜ್ಞಾನದ ಜೊತೆ
ಟಂಕಾರ ಸೇರಿ
ಠಣ್ ಠಣ್ ಎಂದವು.
ಡಂಕ ಭೋರ್ಗರೆದು
ಢಾಳವಯಿತು
ಣ.
ತಕ್ರನ
ಥಟ್ಟು ನೋಡಲು
ದಂಶನ
ಧರಧುರ ಪಡುವಷ್ಟು
ನಕ್ಷತ್ರಗಳ ಸಾಲು.
ಪರಾಶ್ರಯದ
ಫಕೀರ
ಬಂಗಾರಕ್ಕೆ
ಭ್ರಮರ ಮುತ್ತಿಕ್ಕುವುದು.
ಮತಿಗೆಡಿ ಇವನ
ಯತ್ನ
ರಂಗಾಗಲಿಲ್ಲ.
ಲಲಿತೆ
ವಸಂತೆ
ಶಂಖದ ನಾದ
ಷಟ್ಕರ್ಮಿಯ
ಸಂತೆ.
ಹಕ್ಕಿಯಂತೆ ಹಾರುವ ಮನಸ್ಸು ಗ
ಳಿಗೆ ನೋಡುತ್ತಿತ್ತು ,ಗಂಟೆ ಏಳು....

- ಈಶ, ಎಂ.ಸಿ.ಹಳ್ಳಿ

- ಈಶ, ಎಂ.ಸಿ.ಹಳ್ಳಿ

30 Nov 2014, 05:16 am

ಯಾರು? ಶಾಶ್ವತ

* ಯಾರು? ಶಾಶ್ವತ *

ಅರಮನೆ ಕಟ್ಟಿ ಅರಸ ಆರಾಮಗಿಲ್ಲ
ಜಗದ ಯಾವ ಜಾಗದಲೂ.
ಅದಕ್ಕೆ ನಾವು ನೀವು ಇಡಲಿಲ್ಲ ಸಿಂಬೆ
ಇಂದು ನೋಡುವವರಿಗೆ ಬೊಂಬೆ.

ಸಾಧು ಪ್ರಾಣಿಗೆ ಪ್ರಾಣ ಹೆಚ್ಚು ದಿನ ಇರಲ್ಲ
ಸದ್ಯದ ಪ್ರಕಾರ ಅಲ್ಲ
ಜೀವಿಗಳ ಹುಟ್ಟಿನಿಂದ
ಬಲಿತವರ ಬಡಿಯಲ್ಲ ಸಿಟ್ಟಿನಿಂದ.

ಬ್ರಹ್ಮ ಬರೆದ ಮೊಲೆಹಾಲು ಹಸುಳೆಗೆ
ಅರಿಯದ ಕಂದನ ಬಾಯಿ ಎದೆಗೆ
ರಕ್ತವನ್ನೆಲ್ಲ ಹಾಲಾಗಿಸಿ ತುಟಿಗಿಟ್ಟು
ಆಕಾರವಾಗಿಸುವಳು ತಾಯಿ.

ಹುಟ್ಟಿದವರೆಲ್ಲ ಉಳಿಯಲ್ಲ ಭೂಮಿಗೆ
ಅರಸ, ಸಾಧು, ಮಗು ಎಲ್ಲರೂ
ಕೊಟ್ಟಳೆಲ್ಲ ತಾಯಿ ಕೋರಿಕೆ
ಕೊಟ್ಟವರಷ್ಟೇ ಉಳಿವರು ಉತ್ತರಕ್ಕೆ.......

-ಈಶ, ಎಂ.ಸಿ.ಹಳ್ಳಿ

- ಈಶ, ಎಂ.ಸಿ.ಹಳ್ಳಿ

30 Nov 2014, 05:14 am

ಕವಿತೆ

ಹಸಿ ಹಸಿ ಮನಸುಗಳ
ಬಿಸಿ ಬಿಸಿ ಬಯಕೆಗಳ
ಮೊಗ್ಗು ಹೂವುಗಳ
ಬೆಳಗು ಬೈಗುಗಳ
ತವಕ ತಲ್ಲಣಗಳ
ಪದಪದರ ಕವಿತೆ
ಹೃದಯಾಂತರಾಳದ ಭಾವಗೀತೆ.
ಮೌನೇಶ್ .ಬಿ .ಶಿಕ್ಷಕರು .ಗದ್ದಿಕೇರಿ.

- Arun Kumar B

30 Nov 2014, 03:41 am

ದಿವ್ಯಜ್ಯೋತಿ

ನಂಬಿದ ಪ್ರೀತಿ...ಮೋಹದ ಹಾಸಿಗೆಯಲ್ಲಿ
ಹೊರಳೆದ್ದು ಬಂದಾಗ..
ಎನೂ ಆಗಿಯೇ ಇಲ್ಲವೆಂಬಂತೆ
ಸುಮ್ಮನೆ ಬೆಳಗಿ....
ಅಣಕಿಸಿದಂತಾಯಿತು...
ಮಮತೆಯ ದಿವ್ಯಜ್ಯೋತಿ....

- ನಿಮ್ಮಿ

29 Nov 2014, 04:45 pm

ನೀ.....

ನೀ......ಇಲ್ಲವೆಂದು ನಾ ಅತ್ತಿಲ್ಲ
ನೀ.....ಬರಲ್ಲಿಲವೆಂದು ನಾ ಕೊರಗಲಿಲ್ಲ
ನಿನ್ನ ಮಾತಿಲ್ಲದೆ ನಾ ಮೂಕಿಯಾಗಿಲ್ಲ
ನಿನ್ನೊಲುಮೆಯಿಲ್ಲದೆ ನಾ ಕರಗಲಿಲ
ನಿನ್ನ ಸ್ನೇಹವಿಲ್ಲದೆ....ನಾ ಬದುಕಿಲ್ಲ..ನಾ ಸತ್ತಿಲ್ಲ...


- ನಿಮ್ಮಿ

29 Nov 2014, 04:36 pm

ಕರುನಾಡು

ಕರುಣಾಳುಗಳ ಬೀಡು ನಮ್ಮ ಕನ್ನಡನಾಡು
ಶಾಂತಿ ಸೌಹಾರ್ದತೆಯು ತುಂಬಿತುಳುಕಿದೆ ನೋಡು
ಚೆಲುವು - ಒಲವುಗಳ ದಿವ್ಯ ಸಮ್ಮಿಲನ
ಜನುಮ ಜನುಮವೂ ಸಿಗಲಿ ನನಗಿಲ್ಲಿ ಜನನ

- ವಿಜಯ್ ಹೆರಗು

28 Nov 2014, 05:59 pm