Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಗುರಿ

ಗುರಿ ಇಲ್ಲದ ಜೀವನ.
ರೆಕ್ಕೆ ಇಲ್ಲದ ಹಕ್ಕಿಯಂತೆ..

- ಮಂಜುನಾಥಚಾರಿ..ಹರಿಹರ

13 Jan 2015, 12:58 pm

ಮೆಲುಕು

ಮೊದಲು ಸಿನಿಮ ನೋದಿದಾಗ
ಮೆಲುಕಾಕ್ಕುತ್ತಿದ್ದೆವು
ಒಂದು ವಾರ
ಆದರೆ
ಈಗ ಮೆಲಕುತ್ತೇವೆ
ಹೇಗೆ ಮರೆಯೊದು ಅಂತ

ಶಿವು

- ಶಿವಲಿಂಗಯ್ಯ

12 Jan 2015, 06:08 pm

ಕನ್ನಡಿಗರು

ಪಕ್ಷಿ ಇರುವುದು ಮರದಲ್ಲಿ
ನಕ್ಷತ್ರ ಇರುವುದು ಆಕಾಶದಲ್ಲಿ
ಹುಲಿ ಇರುವುದು ಕಾಡಿನಲ್ಲಿ
ಆದರೆ ನಾವು ಇರುವುದು ಕನ್ನಡ. ನಾಡಿನಲ್ಲಿ .......

- ಮಂಜುನಾಥಚಾರಿ..ಹರಿಹರ

08 Jan 2015, 06:59 pm

ಗುರುತು

ಗುರುತು

ಗುರುವಿನ ಗುರುತು ಜ್ಞಾನ
ಜ್ಞಾನದ ಗುರುತು ನಾನು
ನನ್ನ ಗುರುತ್ತೇಲ್ಲಿ.?

ಭಕ್ತಿಯ ಗುರುತು ದೇವರು
ದೇವರ ಗುರುತು ಶಕ್ತಿ
ಶಕ್ತಿಯ ಗುರುತ್ತೇಲ್ಲಿ. ?

ಸಂಬಂಧದ ಗುರುತು ಪ್ರೀತಿ
ಪ್ರೀತಿಯ ಗುರುತು ಸಮಾನ
ಸಮಾನದ ಗುರುತ್ತೇಲ್ಲಿ.?

ತ್ಯಾಗದ ಗುರುತು ಸಂನ್ಯಾಸ
ಸಂನ್ಯಾಸದ ಗುರುತು ಜ್ಞಾನೋದಯ
ಜ್ಞಾನೋದಯದ ಗುರುತ್ತೇಲ್ಲಿ..?

ಮನುಷ್ಯನ ಗುರುತು ನುಡಿ
ನುಡಿಯ ಗುರುತು ನಡೆ
ನಡೆಯ ಗುರುತ್ತೇಲ್ಲಿ.?

ತಾಳಿಯ ಗುರುತು ಮದುವೆ
ಮದುವೆಯ ಗುರುತು ನಂಬಿಕೆ
ನಂಬಿಕೆಯ ಗುರುತ್ತೇಲ್ಲಿ.?

ಶಾಂತಿಯ ಗುರುತು ಬಿಳಿ
ಬಿಳಿಯ ಗುರುತು ಕಾಮನಬಿಲ್ಲು
ಕಾಮನಬಿಲ್ಲಿನ ಗುರುತ್ತೇಲ್ಲಿ.?

-ಈಶ, ಎಂ.ಸಿ.ಹಳ್ಳಿ

- ಈಶ, ಎಂ.ಸಿ.ಹಳ್ಳಿ

08 Jan 2015, 01:48 am

ಅರಿವಿನ ಹೊರೆಯ ಕಟ್ಟಬೇಕು


ಅರಿವಿನ ಹೊರೆಯ ಕಟ್ಟಬೇಕು ಸಾಕಾಗುತ್ತಿಲ್ಲ ಕಟ್ಟಿಗೆ
ಸಾಲ ಕೊಡುವಿರ! ದಾನ ಕೊಡುವಿರ !!
ಕೊಟ್ಟದ್ದು ಕೊಡುವೆ ನಿಮಗಲ್ಲದಿದ್ದರೂ ನಿಮ್ಮವರಿಗೆ, ಇಂದಲ್ಲದಿದ್ದರು ನಾಡಿದ್ದು.
ಬಡ್ಡಿಯಲ್ಲದಿದ್ದರು ಮರಿಬಡ್ಡಿ ಸಮೇತ.

ದಾರಿಹೋಕರು ಕೊಡುವೆನೆಂದರು ಷರತ್ತಿಗೆ.
ಅವರು ಷರತ್ತಿಗೆ ಕೇಳಿದ್ದು ಪಾಂಚಜನ್ಯ,
ಅಭಿಮನ್ಯುವಿನ ಹಾಗೆ ಹೆಬ್ಬೆರಳ
ಹರಿಶ್ಚಂದ್ರನ ಹಾಗೆ ಶಿರವನ್ನ
ಕೇಳಿದರೆ ಕೊಡಬಹುದಿತ್ತು .

ಸಕಲ ಜೀವಿಗೆ ಪ್ರಾಣವಾಗಿರುವಾಗ
ಪ್ರಾಣಪ್ರೀಯನ ಕೊಡುವುದಾದರೂ ಹೇಗೆ?
ಕೊರಳನ್ನು ಕೊಡುವೆ ಎಂದು ಕೋರಲೆ ಎಂದನಿಸಿತ್ತು . ಅದರೆ ನನ್ನದೆಂಬುದು ಎನಿದೆ ? ನೆರಳು ಬಿಟ್ಟು ...
ಇದಾ.. ಕೊಡುವೆ ಎಂದೆ. ಮಣಿಯಲಿಲ್ಲ ಮರುಳ.

ನನ್ನ ಹೊರೆಗೆ ನಾನು ಪವಣಿಸಬೇಕು
ಇತಿಹಾಸ ತಿರುವಿದಾಗ ದಾನಕ್ಕಿಂತ ಸಾಲ,
ಸಾಲಕ್ಕಿಂತ ಕೋಲಾಹಲ.
ಇಂದು ಮೂರರ ಮುಡಿಗೆ ಮುತ್ತಿಕುತ್ತರೆ ಎಂದುಕೊಂಡಿದೆ
ಆದರೆ ಪಂಚಭೂತಗಳೆಡೆಗೆ ಕೈ ಚಾಚಿದಂತೆ ಕಾಣುತ್ತದೆ ಕರ್ಮ....

-ಈಶ, ಎಮ್.ಸಿ.ಹಳ್ಳಿ

- ಈಶ, ಎಂ.ಸಿ.ಹಳ್ಳಿ

06 Jan 2015, 11:42 am

ಮುಸ್ಸಂಜೆ

ಮುಸ್ಸಂಜೆಯ ತಿಳಿ ತಂಪಿನಲ್ಲಿ ಮೂಡಿದ ಸ್ನೇಹ ಸಾಗುತ್ತಲೇ ಇತ್ತು ಹಗಲಿರುಳುಗಳ ನಡುವೇ
ಭಾವದ ಬೆಳಕ ಚೆಲ್ಲಿ ನಗೆಯಾಡಲು
ಮಾತುಗಳಿಲ್ಲ ಮನದ ಮಡಿಲಲ್ಲಿ
ಒಮ್ಮೆ ಬಂದಪ್ಪಳಿಸಿತು ಸಿಡಿಲು
ಹಗಲಿರುಳು

- ರವಿಕುಮಾರ

06 Jan 2015, 11:00 am

ಪ್ರೀತಿಗೆ

ಮರೆಯಲಾರೆ ನಿನ್ನ ನಾನು
ಬರೆಯಲಾರೆ ಕವಿತೆಯಾ
ಮರೆಯಲ್ಹೇಗೆ ಅಂದು ನೀನು
ಸನಿಹ ಬಂದ ಸಮಯವಾ "ಮ"
ನಾವು ಕಾದ ಸಮಯವೆಲ್ಲ
ಆಯಿತಿಂದು ಸಾರ್ಥಕ
ವಿರಹದಿಂದ ಬೆಂದೆವಲ್ಲ
ಪ್ರೀತಿಗದುವೆ ಪ್ರೇರಕ. "ಮ"
ನಮ್ಮ ಬಾಳ ಬಹಳ ಪಾಲು
ಇರಲಿ ನಮ್ಮ ಪ್ರೀತಿಗೆ
ಕೂಡಿದಂತೆ ಹಾಲು ಜೇನು
ಎನಲಿ ನಮ್ಮ ರೀತಿಗೆ "ಮ"
ಕಷ್ಟ ನಷ್ಟ ಯಾವುದಿರಲಿ
ಜೊತೆಯಲೆಂದು ಬಾಳುವಾ
ಪ್ರೀತಿ,ಸ್ನೇಹ, ಸಹನೆ ಕೊಡಲಿ
ದೇವರನ್ನು ಬೇಡುವಾ "ಮ"

ಪಿ.ಕೆ.ಸುರೇಶ
#೧೬೫/೧, ಕೃಷ್ಣ
ವಿಜಯನಗರ
ಕೋ.ಚಿ.ಗ.ಪ್ರದೇಶ. ಕೋಲಾರ'ಜಿಲ್ಲೆ


- suresh p k

05 Jan 2015, 04:27 pm

* ನಗ ಬೇಕಾ? *

ನಕ್ಕು ಬಿಡು
ನಯವಂಚಕರ ನಡುವೆ.
ನಡೆಯದು ನಿನ್ನ ನಿಯತ್ತು

ನಕ್ಕು ಬಿಡು
ನೆಮ್ಮದಿ ಇರದ ಜಾಗದಲ್ಲಿ.
ದೇಹ ರಚಿ ಕಾಣದು

ನಕ್ಕು ಬಿಡು
ನಾನು ನನ್ನದು ಎನ್ನುವರ ಮುಂದೆ.
ನಾವು ಅವರ ಅಂದಕಲ್ಲ

ನಕ್ಕು ಬಿಡು
ನೆರಳನ್ನ ಅಳಿಸುವವರ ಹಿಂದೆ.
ನುಕುವರು ಮುಳ್ಳಿನ ಮೇಲೆ

ನಕ್ಕು ಬಿಡು
ನಾಲಿಗೆಗೆ ಮೋಸ ಮಾಡುವರ ಮಾತಲ್ಲಿ.
ನಿನ್ನ ಚರ್ಮ ಚಪ್ಪಲಿ ಯಾದಿತು

ನಕ್ಕು ಬಿಡು
ನಿದ್ರೆಸುವಂತೆ ಗೊರಕೆ ಹೊಡೆಯುವರ ಉಸಿರಿಗೆ.
ನಿದ್ರೆ ಇಲ್ಲದಂತೆ ಮಾಡಿಯಾರು

ನಕ್ಕು ಬಿಡು
ನನ್ನಿಂದ ಬೆಳದಿದ್ದು ನೀನು ಎಂದಾಗ.
ಬೆಳೆಗೆ ಬೆಂಕಿ ಇಟ್ಟಾರು

ನಕ್ಕು ಬಿಡು
ಬೇಕೆಂದಾಗ ಹೊಗಳಿ ಬೇಡವಾದಾಗ.
ಕಥೆ ಕಟ್ಟಿ ಹರಿಕಥೆ ಮಾಡವರು.

ನಕ್ಕು ಬಿಡು
ದಾರಿ ತಪ್ಪಸಿ ದೊರೆಯಾದವರೆದರು.
ಕೊನೆಯ ದಾರಿಯೊ ಮುಚ್ಚಿಯಾರು.

-ಈಶ, ಎಂ.ಸಿ.ಹಳ್ಳಿ

- ಈಶ, ಎಂ.ಸಿ.ಹಳ್ಳಿ

04 Jan 2015, 08:42 am

ಮಗ ಮತ್ತು ದೆವ್ವ

ಯಾವಾಗ ಬರೆಯುತ್ತಾನೆ
ಈ ಅಪ್ಪ ವಿಲ್ಲು
ಎಂದು ಕಾಯುತ್ತಿರುವ ಮಗನೇ
ಅಪ್ಪನ ಪಾಲಿಗೆ ಡೆವಿಲ್ಲು

- ಶ್ರೀನಿವಾಸ ಮೂರ್ತಿ ಎಸ್ ವಿ

29 Dec 2014, 04:35 pm

ವ್ಯತ್ಯಾಸ

ಹಿಂದೆ ತುಂಡುಡುಗೆಯಲ್ಲಿ ದೇಶ ಸುತ್ತಿದರು
ದೇಶಭಕ್ತ ಮೋಹನದಾಸರು
ಇಂದು ತುಂಡುಡುಗೆ ಬೆಡಗಿಯರ ಹಿಂದೆ
ಸುತ್ತುತ್ತಿದ್ದಾರೆ ಮೋಹದ ದಾಸರು

- ಶ್ರೀನಿವಾಸ ಮೂರ್ತಿ ಎಸ್ ವಿ

29 Dec 2014, 04:31 pm