Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಮರೆವು

ಕಾಲಿಗೆ ಅಂಟಿಕೊಂಡಿದ್ದ
ಚಪ್ಪಲಿಗಾಗಿ
ಕೈ, ಕಿಸೆಯಲ್ಲಿದ್ದ ವಸ್ತುವಿಗಾಗಿ
ಎಲ್ಲೆಲ್ಲಿ ಅಲೆದಾಡಿಸಿತು

ಎಂ.ಐ.ಕೆ

- ishak

28 Feb 2015, 04:40 pm

ಬಂಧ

ಈ ಗೆಳೆತನ,ಪ್ರೀತಿ ಎಲ್ಲ
ನಮಗೆ ತಾನಾಗೆ ಒಲಿದದ್ದು.
ನಂತರದ ಎಲ್ಲಾ ಬಿರುಕುಗಳ
ನಾವಿಬ್ಬರೂ ಅರಿತು ಹೊಲೆದದ್ದು.

ಕೋಪ ಯಾರಿಗೇ ಬರಲಿ
ತೇಪೆ ಇಬ್ಬರದೂ ಇರಲಿ.
ವಿ.

- Vinod Kumar Y V

27 Feb 2015, 12:17 pm

ವಯಸ್ಸು

ಏರುತ್ತಲೇ ಇರುವುದು
ಕೆಳಕ್ಕೆ ಇಳಿಯದೆ
ಮಗು,ತರುಣ,ವೃದ್ಧನೆಂದು
ಹೆಸರ ಬದಲಿಸುತ್ತಲಿರುವುದು
ತಿರುಗಿ ನೀಡದೆ
ಅಂದಚಂದದಲಿ ವ್ಯತ್ಯಾಸವ
ತರುವುದು ಬಯಸದೆ
ತನ್ನ ಕರ್ತವ್ಯವ ಮಾಡುವುದು
ಯಾರ ನೋಡದೆ
ಕೊನೆಗೆ ನಮ್ಮೊಂದಿಗೆ
ಮಡಿಯುವುದು ಕಾಯದೆ
ನಮ್ಮನ್ನು ಕೇಳದೆ

ಮುಹಮ್ಮದ್ ಇಸ್ಹಾಕ್ ಕೌಸರಿ






- ishak

26 Feb 2015, 01:58 am

ಕವಿತೆ


ಕಾವ್ಯ ಗೀಚಲು, ಗಧ್ಯ ಗೀಚಲು
ನವ್ಯ ಪಧಗಳ ಎಲ್ಲಿ ಹುಡುಕಲು
ಯಾರ ಪಕ್ಕೆಗಳೂ, ಹಲ್ಲುಗಳು
ಕುಡಿದ ದವಖಾನೆಗಳ ಬಾಟಿಲು
ನಗುವ ಮುಗ್ಧ ಮುಖದಾಳಲು
ಶವದ ಸಾಂಗೀಕ ಆಕ್ರಂದನ
ಮುಗಿಲು ಮುಟ್ಟಿದ ಭದ್ರತೆ
ಮಲ್ಲಿಗೆ ಸಂಪಿಗೆ ಮತ್ತದೇ ಕವಿತೆ

- ಗುರು

25 Feb 2015, 11:57 am

ಶರಪಂಜರ

ಯಾರು ಯಾರದು ಬದುಕಿರುವುದು
ಬಲ್ಲಿದವರು ಬಾಳಿದವರು ಬಲ್ಲದು
ದೂತ್ರ ಮೂತ್ರ ಮತ್ಯಾರು ಮೀಸೆ
ಶರಗಳ ಸವಾಲು ಆದ್ಯಾರು
ಸುತ್ತ ನೆರೆದವರು ,,
ಶವಗಳ.ಮೆರೆವಣಿಗೆ ಕುಮಾರ
ರಕ್ಷಣಿಗೆ ಶರಪಂಜರ ಅದೇ ಕಾಣಿಕೆ
ಕುಲದಲ್ಲಿ ಮೇಲು
ಅದೇ ಅಮಲು..

- ಗುರು

25 Feb 2015, 10:42 am

ಹೆಳೇ

ಹೇಳಿರಲು....!!!

ಲಂಚವನ್ ಇಕ್ಕುವವ
ಲಂಚಕ್ಕಾಗಿ ದುಡಿವ
ಲೊಚಗುಡುವ ಹಲ್ಲಿಯಂತೆ
ನಲಿಗೆಯ ಚಾಚುವ
ಕೆಲ ಕುಳಗಳ ನರವ
ನೋಡೆಂದ ಜಗದೊಡೆಯ..

ಜ್ಯೋತಿಯನ್ನು ನಂಬವನು
ಜ್ಯೋತಿಷ್ಯ ನಂಬುವುದಿಲ್ಲ
ಜಾತಿಯನ್ನು ನಂಬದವ
ಗುಂಪಿನಲಿ ಪರರ ಬೈಯುವುದಿಲ್ಲ
ಕಿಳ ನಾಲಿಗೆಯ
ನೋಡೆಂದ ಜಗದೊಡೆಯ...

ಅಂಧಶ್ರದ್ಧೆಗೆ ಒಳಗಾದವ
ಸಂಸ್ಕಾರದೆಸರಿನಲ್ಲಿ ಸಂಸ್ಕ್ರಾತಿಕ ಮಾಡಿ
ಸಂಸಾರವ ಸೂರಿನಿಂದ ವರದೊಡಿ
ತನ್ನ ಸೂರ ಸೋಪನ ಜತನಗೈದು
ಶಿರಭಾಗಿ ಕೈಮುಗಿದವ
ನೋಡೆಂದ ಜಗದೊಡೆಯ....

ತಾನು ತನ್ನಿಂದ ತರವೆಲ್ಲ
ತನ್ನೊಳಗೇ ನೀಚ ತುರುಬೆಲ್ಲ
ನಿಂದಿಪಹನು ನಿಲ್ಲುವರ
ಕಣ್ಣಿನ ರೆಪ್ಪೆಯಲ್ಲಿ ವರದೊಡುವ
ಕೀಳು ನಾಯಕನ
ನೋಡೆಂದ ಜಗದೊಡೆಯ...

-ಈಶ, ಎಂ.ಸಿ.ಹಳ್ಳಿ

- ಈಶ, ಎಂ.ಸಿ.ಹಳ್ಳಿ

24 Feb 2015, 01:03 pm

ಋತು

ಮರೆಯದ ಕವನಗಳಿಗೆ
ನಳನಳಿಸಿನಿಂತ ಋತು.
ಯಾರೂ ಬರೇದರು
ಗುರುತು ಸಿಗದ ಶವದೋಳಗೇ,
ಮರೆತು ನಿಂತ ಜನ,
ದಣಿವರಿಸಿಕೊಂಡ ಜನ ..
ಚಪಲ ತಿರೀಸಿ ಕೂಂಡ ಜನ.,
ಕೂಗಿ ಕರೇದರು .,ಬರದ ಕಿರಣ
ಅಧೇ ತವಕ ,ಅಧೇ ಪುಳಕ.
ವಲಸೇ ಹೋದ ಅದೇ ಋತು..
ಅಧೇ ಹಳೇಯ ಹಾಡು.., ಗುರು
ಉದ್ದವಾಗಿ ನಿಂತ ಅದೇ ಅದೇ

ಕವರ್ರು ...೦೦೦೨

- ಗುರು

20 Feb 2015, 06:54 am

ನಿನಗೇತಕೆ




ಹರಿವ ನೀರಿಗೆ
ಬೀಸುವ ಗಾಳಿಗೆ
ಜಗವ ಬೆಳಗುವ
ಸೂರ್ಯ ಚಂದಿರನಿಗೆ
ಮೆಟ್ಟಿ ನಿಂತ ಮಣ್ಣಿಗೆ
ಫಲವ ಕೊಡುವ ಪೈರಿಗೆ
ಇಲ್ಲದ
ಅಹಂಭಾವ
ಇದರಿಂದಲೇ ಬೆಳೆದ
ನಿನಗೇತಕೆ

ಮುಹಮ್ಮದ್ ಇಸ್ಹಾಕ್
ಕೌಸರಿ



- ishak

19 Feb 2015, 08:27 am

ವ್ಯತ್ಯಾಸ

ಕಾಗೆಯು ತನ್ನದಲ್ಲದ ಮೊಟ್ಟೆಗೆ
ಕಾವ ಕೊಟ್ಟು ಮರಿಯ
ಮಾಡುವುದು
ಅನ್ನವ ನೀಡಿ
ತನ್ನ ಮಕ್ಕಳಂತೆ
ಸಾಕುವುದು

ಆದರೆ
ಕೆಲ ಮನುಜ
ತಮ್ಮವರಿಗೇ ಹಿಂಸೆ ಕೊಟ್ಟು
ಏನೂ ನೀಡದೆ
ಪರಕಿಯನಂತೆ
ಕೊಲ್ಲುವುದು

ಮುಹಮ್ಮದ್ ಇಸ್ಹಾಕ್ ಕೌಸರಿ

- ishak

18 Feb 2015, 03:05 pm

ದೇವರು ಬಂದರೆ ಎದುರಿಗೆ..



ದೇವರು ನನ್ನೆದುರಿಗೆ ಬಂದೊಡೆ
ಕಾಲಿಗೆ ಬಿದ್ದು ನಾ ಬೆಡುವೆ
ಯಾಕೆ ಕರುಣಿಸಿದೆ ಈ ಜೀವವ
ಈ ಜಾತಿಯಲಿ ಎಂದು
ನಾನೇನಾದರು ಎರಡು ಬಗೆದಿದ್ದನೆ
ನನ್ನ ಪೂವ ಜನ್ಮದಲಿ ಎಂದು...

ಉತ್ತರಿಸದಿದ್ದೋಡೆ 'ಹೂ ಹಾರವ ಹಾಕುವೆ'
ಅಂಕು ಡೂಂಕಿನ ಜಾತಿ ಬೆಗೆಯ ತೂರುವೇ
ಹಂಬಲಸಿ,ಪೂಜಿಸಿ ವರವೊಂದನು ಬೆಡುವೆ
ನಿಡುವೆಯಾ ಎಂದು ಕೆಳುವೆ...

ಮತ್ತೆನಾದರು ಮಾನವನಾಗಿ ಹುಟ್ಟಿಸಿದರೆ ನಿ
ನೂಕದಿರು 'ಜಾತಿ' ಬೆಗೆಯಲಿ
ಅದುಮದಿರು ಈ ಅಂಧಃಕಾರದಲಿ
ಕರುಣಿಸು ಸುಖ ಜೀವನವ
ನಿನ್ನ ಪಾದಕೆ ಪೊಡಮೊಟ್ಟು
ಪುಷ್ಪವಿಟ್ಟು ನಮಿಸುವೆ, ಹರಸು ಎಂದು ಕೆಳುವೆ...

ಧರ್ಮಣ್ಣ...

- Dharmu.s.m

08 Feb 2015, 10:36 am