Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಸೆರೆಮನೆ..

ಅಂದು
ಅವಳು ನನ್ನೊಡನಿದ್ದಾಗ
ಕನಸುಗಳ ಅರಮನೆ
ಕಣ್ಣೀರಿಗೆ ಗಡಿಪಾರು.....||

ಇಂದು
ಅವಳು ನನ್ನೊಡನಿಲ್ಲ
ಇದು ಕಣ್ಣೀನ ಸೆರೆಮನೆ
ಕನುಸುಗಳೇ ಗಡಿಪಾರು....||

ಅನುಭವಿ

- vikas ಅನುಭವಿ

31 Jul 2015, 01:11 am

ಅನ್ನದಾತ


ಭವದಿಂ ಬಸವಳಿದ
ಅನ್ನದಾತ
ಏಕಿಷ್ಠು ದುಖ್ಖೀಭವ?

ಹುಬ್ಬೇರಿಸುವಷ್ಟು
ಕಬ್ಬು ಬೆಳೆದರು
ಹಬ್ಬ ಮಾಡುವಷ್ಟು
ಹಣ ಬರಲಿಲ್ಲ
ಬಂದಷ್ಟು ಹಣ
ಕೊರಳಿನ ಕುಣಿಕೆಗೆ
ಸಾಕಾಯ್ತಲ್ಲ

ಬೇಡಿಕೊಂಡರು ಬಿಡಿಗಾಸು
ಕೊಡದ ಜನ
ಸತ್ತಾಗ ಸಾಲವಿತ್ತು ಎಂದಾಡಿಕೊಂಡರು
ಪರಿಹಾರದ ಬಿಡಿಗಾಸಿಗೆ
ಬಡಿದಾಡಿಕೊಂಡರು.

ಆಪತ್ಭಾಂದವ ಮತೀಭವ
ಆತ್ಮಹತ್ಯೇ ರೋಕೊಭವ
ಆತ್ಮಸ್ಥೈರ್ಯ ಭರೋಭವ
ಅನ್ನದಾತೋ ಸುಖೀಭವ

..........ಮಧುಗಿರಿ ಬದರಿ

- K.Badarinatha

30 Jul 2015, 03:04 pm

ಕನ್ನಡ ಪ್ರತಿಜ್ನೆ


ನಿಸರ್ಗದ ಮಡಿಲಲ್ಲಿ
ಅಮ್ಮನ ಮಮತೆಯಲ್ಲಿ
ಬಂದು-ಭಾಂದವರಒಡನಾಟದಲ್ಲಿ
ಕರುನಾಡ ತಾಯ್ನಾಡಲ್ಲಿ
ಕಾವೇರಿಯ ತಾಣದಲ್ಲಿ
ಕನ್ನಾಡಂಭೆಯ ಕಣ್ಣರೆಪ್ಪೆಯ
ಕರುನಾಡ ಕುಡಿನೋಟವನ್ನು
ಪಸರಿಸೋಣ,ಹಾಡಿ ಹೋಗೋಳನ.

- Lohith kumar uppara

27 Jul 2015, 04:01 pm

ಅಮ್ಮ

ಎಡವಿ ಬಿದ್ದರೆ ಅಮ್ಮಾ
ಹೆಂಡತಿ ಬಂದ್ಮೆಲೆ ಹೋಗಮ್ಮ
ಲೇ ಕಂದಾ, ಇವಳು ನಿನ್ನ ಹಡೆದಮ್ಮ
ತಿರಿಸಲಾಗದು ಅವಳ ಋಣವ ಇನ್ನೂ 7 ಜನ್ಮ...

ಮಲ್ಲಾರಾವ ಕುಲಕಣಿ೯
7204820986

- Mallarao

26 Jul 2015, 05:47 pm

ಶಾಕೀರ್ ಅಕ್ಕರಂಗಡಿ

ಶಾಲೆಯಲ್ಲಿ ನಡೆದ ಸಂಭಾಷಣೆ ಟೀಚರ್: ಗುಂಡ, ಗೋಲ್ ಗುಂಬಜ್ ಎಲ್ಲಿದೆ? 
ಗುಂಡ: ಬಿಜಾಪುರದಲ್ಲಿ ಇದೆ. 
ಟೀಚರ್: ಗೋಲ್ ಗುಂಬಜ್ ನ ವಿಶೇಷತೆ ಏನು?
ಗುಂಡ: ಅದರಲ್ಲಿ ಒಂದು ಸಾರಿ ಹೇಳಿದರೆ, 7 ಬಾರಿ ಕೇಳುತ್ತೆ.. 
ಟೀಚರ್: ಗೋಲ್ ಗುಂಬಜ್ ನ ಬಿಜಾಪುರದಲ್ಲೇ ಏಕೆ ಕಟ್ಟಿಸಿದ್ದಾರೆ? 
ಗುಂಡ: ಸಾರ್, ಬಿಜಾಪುರದ ಜನಕ್ಕೆ ಒಂದು ಸಾರಿ ಹೇಳಿದರೆ ತಿಳಿಯೋಲ್ಲ ಸಾರ್.. ಅದಕ್ಕೆ.

- ಶಾಕೀರ್ ಅಕ್ಕರಂಗಡಿ

24 Jul 2015, 06:53 pm

ಮೊಗ್ಗು

ಹೂವಿನ ಮೊಗ್ಗು
ಹಾಲುಗೂಸು
ಅರಿಯದ ಹರೆಯದ ಕನ್ನೆ
ಎಷ್ಟು ಚೆನ್ನ!

ಹೂವರಳಿ
ಕಂದ ಬೆಳೆದು
ಕನ್ನೆ ಹಸೆಯೇರಿ
ಬಾಳು ಮತ್ತಷ್ಟು ಚನ್ನ!

ಕಾಲದ ಚಕ್ರ
ಇದ್ದಲ್ಲೇ ತಿರುಗದೆ
ಹೊಸ ಹೊಸ ಪ್ರಪಂಚಕ್ಕೆ
ಕೊಂಡೊಯ್ಯುವುದು
ಚನ್ನಕಿಂತ ಚನ್ನ!

- ನಂದೀಶ

21 Jul 2015, 10:49 am

ಕವಲು ಹಾದಿ

ಕವಲು ಹಾದಿ
——————
ಧುತ್ತೆಂದು ಎದುರಾದದ್ದು ಕವಲು ಹಾದಿ
ಮುಂದೇನು?
ಎಡಕ್ಕೋ ಬಲಕ್ಕೋ
ಯಾವುದು ಸುಗಮ
ಯಾವುದು ದುರ್ಗಮ
ರಾಶಿ ಫಲ ಏನನ್ನುತ್ತೆ?
ಅವರಿವರು ಏನಂತಾರೆ?
ಟಾಸ್ ಮಾಡೋಣವೇ?
ಆದದ್ದಾಗಲಿ ಬಲಕ್ಕೆ ಹೋದರಾಯಿತು.
ಸರಿ ಹೋಗದಿರೆ...
ಹಿಂದೆ ಬಂದರಾಯಿತು.
ನಡೆ.. ನಡೆ..ನಡೆ..
ಅರೆರೆ ಈಕಡೆ ಬರಬಾರದಿತ್ತೇನೋ!
ಹಿಂದಿರುಗಲೇ?
ತುಂಬಾ ಮುಂದೆ ಬಂದಾಯ್ತಲ್ಲ!
ಮತ್ತೆ
ಧುತ್ತೆಂದು ಎದುರಾದದ್ದು ಮತ್ತೊಂದು ಕವಲು ಹಾದಿ.
ಇಡೀ ಜೀವನ ಕವಲುಕವಲುಗಳ ಸರಪಳಿ.
ನಿನ್ನೆಗಳನ್ನು ಮರೆತರೆ
ಇಂದೂ ಮುಂದೂ ಸಂತಸ.
ಇಲ್ಲವೇ ಕೊರಳ ಸುತ್ತ ಸರಪಳಿ.
ಬಂದದ್ದೆಲ್ಲಾ ಬರಲಿ
ಗೋವಿಂದನ ದಯೆ ಇರಲಿ.

- ನಂದೀಶ

21 Jul 2015, 10:48 am

ನಿಸರ್ಗ

ನಿಸರ್ಗ
———
ಏನೆಂದು ಬಣ್ಣಿಸಲೀ ನಿನ್ನ
ಬರೀ ಸುಂದರ ನೋಟವೇ
ನೆಲ ಜಲ
ಗಿಡ ಮರ
ಸೂರ್ಯ ಚಂದ್ರ
ಪ್ರಾಣಿ ಪಕ್ಷಿ
ಹೆಣ್ಣು ಗಂಡು?
ಅಲ್ಲ. ನೀನೇ ಸ್ವರ್ಗ.

ಏನೆಂದು ಬಣ್ಣಿಸಲೀ ನಿನ್ನ
ಬರೀ ಇಂಪಾದ ಶಬ್ದವೇ
ಗಾಳಿಯ ಸುಂಯ್ ಸುಂಯ್
ನೀರಿನ ಜುಳು ಜುಳು
ಹಾಡಿನ ಗುನುಗುನು
ಪ್ರೇಮಿಗಳ ಪಿಸುಪಿಸು?
ಅಲ್ಲ. ನೀನೇ ಸಮರಸ.

ಏನೆಂದು ಬಣ್ಣಿಸಲೀ ನಿನ್ನ
ಬರೀ ಜ್ಞಾನ ವಿಜ್ಞಾನವೇ
ಖಗೋಳ ಭೂಗೋಳ
ಭೌತ ರಸಾಯನ
ತಾಂತ್ರಿಕ ವೈದ್ಯಕೀಯ
ಜಾಮಿಟ್ರಿ ಸಿಮಿಟ್ರಿ?
ಅಲ್ಲ. ನಿನ್ನ ಬಣ್ಣಿಸಲು
ನನ್ನಲ್ಲಿ ಪದಗಳೇ ಇಲ್ಲ.

- ನಂದೀಶ

21 Jul 2015, 10:47 am

ಎಂತಹ ಭಾಗ್ಯ

ಅಗಾಧವಾದ ನೇಸರ
ಅಪಾರವಾದ ಕಡಲು
ವಿಶಾಲವಾದ ನೆಲ
ಹೊಸಾ ಬೆಳಕು
ಅಲೆಯೇಳಿಸುವ ಗಾಳಿ
ಬಗೆಬಗೆಯ ಗಿಡಮರ
ನೀರಲ್ಲಿ ನೆಲದಲ್ಲಿ ಆಗಸದಲ್ಲಿ
ಎಲ್ಲೆಲ್ಲೂ ತರತರದ ಜೀವ
ನೋಡಲು ಕಣ್ಣು ...
ಅಬ್ಬಾ ಎಂತಹ ಭಾಗ್ಯ!

ಇವಕ್ಕೂ ಮಿಗಿಲಾಗಿ
ಕಾಣಿಸದ ಶಕ್ತಿ ತರಂಗಗಳು
ಇಡೀ ಬ್ರಹ್ಮಾಂಡವನ್ನೇ ಸುತ್ತಿಬರುವ ಮನಸ್ಸು
ಗೊತ್ತಿರದ ನಾಳೆಯನ್ನು
ರೂಪಿಸುವ ಈ ಹೊತ್ತು
ಅಬ್ಬಾ ಎಂತಹ ಭಾಗ್ಯ!

- ನಂದೀಶ

21 Jul 2015, 10:45 am

ನಾವಿಲ್ಲಿ ಅವರಲ್ಲಿ

ನಾವಿಲ್ಲಿ ಅವರಲ್ಲಿ
————————
ನಾವಿಲ್ಲಿ ಅವರಲ್ಲಿ.
ಅವರು ನಗುತ್ತಲೇ ಇದ್ದಾರೆ
ನಮ್ಮ ಮನಸ್ಸಿನಲ್ಲಿ ಕೋಪ ಶಾಪ
ಅವರು ನಗುತ್ತಲೇ ಇದ್ದಾರೆ.
ಶಾಪ ತಟ್ಟುವುದು ಬರೀ ಪುರಾಣ.
ನಾವೇಕೆ ಬೇರೆಯವರ ಶಾಪಕ್ಕೆ ಹೆದರಿ ಬದುಕುತ್ತೇವೆ!

ನಾವಿಲ್ಲಿ ಅವರಲ್ಲಿ.
ಅವರಿಗೆ ನಮ್ಮ ಕಾಳಜಿಯೇ ಇಲ್ಲ.
ನಮಗೆ ಅವರದೇ ಚಿಂತೆ.
ಅವರಿಗೆ ನಮ್ಮ ಕಾಳಜಿಯೇ
ಇಲ್ಲ.
ಪ್ರೀತಿಗೆ ಪ್ರೀತಿ ಸಿಗಲೇ ಬೇಕಿಲ್ಲ.
ನಾವೇಕೆ ಸಿಗದ ಪ್ರೀತಿಗೆ
ಕಾದು ಬೇಯುತ್ತೇವೆ!

ನಾವಿಲ್ಲಿ ಅವರಲ್ಲಿ.
ಹಿಂದೊಮ್ಮೆ ಆಡಿದ ಮಾತು
ಅವರಿಗೆ ನೆನಪೇ ಇಲ್ಲ
ನಾವು ನೆನೆನೆನೆದು ಕುಗ್ಗುತ್ತೇವೆ.
ಅವರಿಗೆ ನೆನಪೇ ಇಲ್ಲ
ನಾವೇಕೆ ನಿನ್ನೆಗಳ ಭಾರ
ಹೊತ್ತು ಕುಗ್ಗುತ್ತೇವೆ!

ನಾವಿಲ್ಲಿ ಅವರಲ್ಲಿ.
ನಮ್ಮ ಸಂತಸಕ್ಕೇಕೆ
ಅವರಿವರ ಹಂಗು.

ನಾವಿಲ್ಲಿ ಅವರಲ್ಲಿ.

- ನಂದೀಶ

21 Jul 2015, 10:44 am