Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ದೂರವಾದಾಗ

ಹತ್ತಿರವಿದ್ದೂ ದೂರವಾದಾಗ
ಮನದ ಮಾತೆಲ್ಲ ಕಹಿಯಾದಾಗ

ಹಲವು ಮಾತು ಹೃದಯ ಬೇನೆಯಾದಾಗ
ಇದೆಂಥಹ ಸ್ನೇಹ ಎಂದು ಮನಮರುಗಿದಾಗ

ಕಣ್ಣೀರೆ ನೀನೆಲ್ಲವ ಭರಿಸಿದಾಗ
ಶ್ರೀಪತಿಯ ಧ್ಯಾನವು ಮನಕ್ಕೆ ಮುದ ನೀಡಿದಾಗ. .......

- ಘಾಟ್ vidya

12 Nov 2015, 05:34 pm

ಸೌಂದರ್ಯ ಕನ್ಯೆ

ಮಧುರ ಮಾತಿಗೆ ಮಾರುಳಾದೆ
ಬೆಳದಿಂಗಳ ಬೆಳಕಿನ ಚಿತ್ತಾರ ನೀನಾದೆ
ಪೂರ್ಣ ಚಂದ್ರನ ಕಾಂತೀಯ ಹೂವಾಗಿ
ಬಂಗಾರದೆಲೆಯ ಮೇಲೆ ನಸು ಇಬ್ಬನಿ ನೀನಾದೆ
ಕಾಣದ ಕಂಗಳಿಗೆ ದೇವತೆ ನೀನಾದೆ
ಪ್ರೀತಿ ಮಮತೆಯ ಸಾಕಾರ ರೂಪವಾದೆ
ತಂಗಾಳಿಯ ತಿಳಿ ಕಂಪಿನ ನಾದ ನೀನಾದೆ
ಪ್ರೀತಿಯ ಅರಮನೆಗೆ ಮಹಾರಾಣಿ ನೀನಾದೆ
ಅರಿಯದೆ ಕದ್ದ ನನ್ನ ಹೃದಯಕೆ ಒಡತಿ ನೀನಾದೆ
ಬಂದೆಯಾ ನನ್ನ ಕನಸಿನ ರಾಣಿ ನೀನಾಗಿ ಓ ರತಿಯೆ....

- Irayya Mathad

10 Nov 2015, 05:48 pm

ದೀಪಾವಳಿ

ದೀಪಾವಳಿಯು
ಜೀವನದ ಸುಂದರ ಸಮಯ
ಸುಡೋಣ ದ್ವೇಷ ಅಸೂಯೆಗಳ
ಆಚರಿಸೋಣ ಸ್ನೇಹ ಸಂಭಂದ ಪ್ರೀತಿಯ

- ಘಾಟ್ vidya

10 Nov 2015, 05:35 pm

ಓ ಮಳೆಯೇ...

ಸೋಗೆ ಮನೆಯ ಛಾವಣಿ ಸೀಳಿ
ಸೆಗಣಿ ಬಳಿದು ಅಮ್ಮ ನಡು ಬಗ್ಗಿಸಿ
ಗುಡಿಸಿ, ಸಾರಿಸಿ ನಯ ಮಾಡಿದ
ಒಡಕಲು ನೆಲಕೆ ಬಿದ್ದು ಪಟಪಟನೆ
ಸದ್ದು ಮಾಡಿ, ಬಡತನಕೆ ಬಣ್ಣ ಬಳಿದು ತೋರಿಸಿದ
ಓ ನಿರ್ದಯಿ ಮಳೆ ಹನಿಯೆ...
ನೀ ಎಂದಾದರೂ ಅರಿತೆಯಾ
ಬಡವನ ಬವಣೆಯನ್ನು ?

ಯಾಕೆ ಅರಿಯಲಿಲ್ಲ ಮಗುವೆ
ನಿನ್ನಪ್ಪ ಅಮ್ಮ ಕಂಡೋರ ಹೊಲಗದ್ದೆಗಳಲಿ
ಹಸಿವ ಮರೆತು ಮಣ್ಣು, ಗೊಬ್ಬರ, ಕಲ್ಲು ಹೊತ್ತು
ದುಡಿದು ಬೆವರ ಸುರಿಸುವಾಗ
ಅವರ ಕಷ್ಟವರಿತು ಹನಿ ಸಿಂಚನ ಮಾಡಿ
ಧೋ ಎಂದು ಸುರಿದು ಅವರ ತಣಿಸಿ,
ಬೆವರ ತೊಳೆದು ತಣ್ಣಗಾಗಿಸಿದ್ದು
ನಾನಲ್ಲವೇ ಕಂದಾ ?

ಹೋಗು ಹೋಗೆಲೆ ಮಳೆಯೆ,
ಸಾವಿರ ಕವಿಗಳು ನಿನ್ನ ಹನಿ ಹನಿಯನೂ ಹೆಕ್ಕಿ
ಅದಕೆ ಸುಳ್ಳೇ ಸಂಭ್ರಮದ ಬಣ್ಣ ಬಳಿದು
ಹಾಡಿ ಹೊಗಳಿದ ಪರಿಗೆ ನೀ ಮೇಲೇರಿರುವೆ ಸೊಕ್ಕಿ
ಬಿಸಿಲ ಜಳಕೆ ಬಾಯಾರಿ ದುಡಿವ ದೇಹ
ಹನಿ ನೀರಿಗೆ ಪರಿತಪಿಸುವಾಗ
ನಿನಗೆ ಬರಲಿಲ್ಲ ಕರುಣೆ ಉಕ್ಕಿ.

ಅರಿತೆ ಮಗುವೆ ನಿನ್ನ ಅಂತರಂಗದ ಕೂಗು
ನನಗಿಲ್ಲ ಬರಿದೆ ಬಡಾಯಿಗಳ ಸೋಗು
ನನ್ನ ತಾಯಿ ಪ್ರಕೃತಿ ಮಾತೆ
ಹಾಕಿದ ಗೆರೆಯ ದಾಟಿ ಬರಲಾರೆನೇಳು
ಇದು ನನ್ನ ಸಂವೇದನೆಯ ಸೋಲು !

- ಶ್ರೀಗೋ.

10 Nov 2015, 02:58 am

ಪರಿಶುದ್ಧ ಮನಸ್ಸು

ತಂಗಿರುವ ಗೂಡು ತಂಗಾಳಿಯಂತಿದ್ದರೇನು
ಮನೆಯಂಗಳ ಮಲ್ಲಿಗೆಯಂತಿದ್ದರೇನು
ಆಡುವ ಮಾತುಗಳು ಸಿಹಿಯಾದರೇನು
ಅಚ್ಚ ಕನ್ನಡಿಯ ಮನಸಿರದೊಡೆ ನೆಚ್ಚಿ ಬರುವನಾ ಶ್ರೀ ಹರಿಯು

- Irayya Mathad

09 Nov 2015, 10:53 am

ಶರಣಾದೆ ಪ್ರೀತಿಗೆ

ಸ್ನೇಹದ ಪಣತೆಯಲ್ಲಿ ಪ್ರೇಮದ ಅಮೃತ ಹಾಕಿ ಪ್ರೀತಿಯ ಬೆಳಕು ಚೆಲ್ಲಿದೆ ನೀ
ಸೋಲನ್ನು ಅರಿಯದ ನಾನು ನಿನಗೆ ಸೋತೆನಿಂದು
ಪ್ರೀತಿಗೆ ಶರಣಾಗತನಾಗಿ ಮಾಡಿದೆ ನೀ

- Irayya Mathad

08 Nov 2015, 05:15 am

ಹದಿಹರೆಯದ ಹಗಲುಗನಸು

ಹದಿನೆಂಟು ದಾಟಿಯಾಯಿತು ಹಗಲಿನ್ನು ಮುಳಗದಾಯಿತು
ಅತೀಯಾಯಿತು ಕನವರಿಕೆ ಕನಸಲ್ಲಿ
ಪ್ರತಿಕ್ಷಣವು ಪ್ರತಿದಿನವು ಕಣ್ಮುಂದೆ ನೀ ಬರಲು
ನಾ ಬಯಸಿದೆ ನಿನ್ನನೆ ವರವಾಗಿ

- Irayya Mathad

07 Nov 2015, 05:27 pm

ಚೂರಾದ ಕನಸು..

ಕಂಡಿದ್ದೆ ಕನಸೊಂದ.....
ನನಸಾಗುವ ಮೊದಲೇ
ಒಡೆದು ಚೂರು ನೂರಾಯ್ತು.....

ಆದರೂ ಸೋಲೆನು ನಾನು...
ಒಂದು ಕನಸು ಒಡೆದರೇನಂತೆ...
ಬಿಡದೆ ಕನಸ ಕಾಣಿತಲಿರುವೆ
ನನಸಾಗುವವರೆಗೂ
ಅದುವೇ ಜೀವನದ
ನಿಜವಾದ ಅರ್ಥ.....

- ನಿಶಾ ರೂಪ

07 Nov 2015, 04:40 pm

ಭರತ ಭೂಮಿಯ ಮಣಿ ಮುಕುಟಗಳು

೧) ವಿಷವೆರೆದವರಿಗೆ ಹಾಲೆರೆಯುವ ಗುಣದವರು
೨) ನಿರಾಶ್ರಿತರಿಗೆ ಆಶ್ರಯದಾತರು
೩) ಪರಕೀಯರಿಗು ಪರಮಾನ್ನ ನೀಯುವವರು
೪) ತಾಯ್ನಾಡಿಗಾಗಿ ತಲೆ ನೀಡುವವರು
೫) ದಾನ ಧರ್ಮದಲ್ಲಿ ಕರ್ಣನನ್ನೆ ಮೀರಿಸುವವರು
೬) ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೂ, ಅಡಿಯಿಂದ ಮುಡಿಯವರೆಗೂ ಹಿಂದೂಸ್ತಾನದ ಹಿರಿಮೆಯನ್ನು ಮೆರೆದವರು
೭) ವಿಶ್ವದಾದ್ಯಂತ ವಿಶ್ವಮಾನವತೆಯ ಮೆರೆದವರು
೮) ವಿಶ್ವ ಭಾಷಾ ಸಾಹಿತ್ಯದ ಶಿಖರಕ್ಕೆ ಹೊನ್ನ ಕಳಸವ ನೀಡಿದವರು
೯) ವಿವಿಧತೆಯಲ್ಲಿ ಏಕತೆ ಮೆರೆದ ವಿಶ್ವ ಮಾನ್ಯರಿವರು
೧೦) ಸಂಗೀತ ಲೋಕಕ್ಕೆ ಸಾಮ್ರಾಟರನ್ನು ನೀಡಿದವರು
೧೧) ಕಲೆ, ಸಂಸ್ಕೃತಿ, ವಿಜ್ಞಾನ, ತಂತ್ರಜ್ಞಾನಕ್ಕೆ ಆದಿ ಮೂಲ ಇವರು
೧೨) ಸರ್ವ ಧರ್ಮಗಳಲ್ಲಿ ಸಮಾನತೆಯ ಮೆರೆದವರು
೧೩) "ದಯವೇ ಧರ್ಮದ ಮೂಲವಯ್ಯ " ಎಂಬ ವಚನದಂತೆ ಸಕಲ ಚರಾ ಚರ ಜೀವಿಗಳಿಗೆ ಜೀವಾಮೃತವ ನೀಡಿದವರು
೧೪) ಜ್ಞಾನಿಗಳಿಗೆ ಜ್ಞಾನಿಗಳಾಗಿ ಜ್ಞಾನಾಮೃತವ ಹರಡಿದವರು

ಇವರೇ ನನ್ನ ಭಾರತವೆಂಬ ಸ್ವರ್ಗಲೋಕದ ಶಿರೋಮಣಿಗಳು

- Irayya Mathad

06 Nov 2015, 10:35 am

ಯಾರು ಈ ಪ್ರೀತಿ ಗೆಲ್ಲುವವರು.

ಯಾರೋ ಯಾರೋ ಈ ಪ್ರೀತಿ ಗೆಲ್ಲುವವರು
ಮನದಾಳದಲ್ಲಿ ನಿಂತು ಕೂಗಿ ಬಂತು ಪ್ರೀತಿ

ಕಣ್ಣ ರೆಪ್ಪೆ ಮಿಟುಕಿ ಕಾಡಿತು ನನ್ನ ಪ್ರೀತಿ
ಹೃದಯ ಬಡಿತ ಮೀರಿ ಪ್ರೀತಿ ಮಿಡಿತ ಮೀಟಿ

ಅರಿಯದ ಮನಸ್ಸಿನಲ್ಲಿ ಮನೆಮಾಡಿ ನಿಂತ ಕಳ್ಳಿ
ಬಂಗಾರದೆಲೆಯ ಮೇಲೆ ಚಿತ್ತಾರ ಬಿಡಿಸಿದವಳೆ

ಹೊನ್ನಿನ ಕಿರಣ ಸೂಸಿ ಮನವೆಲ್ಲ ತಣಿಸಿ ನಿಂದೆ
ಕನಸಲ್ಲಿ ಕನ್ನ ಹಾಕಿ ಹೃದಯಕ್ಕೆ ಬಣ್ಣ ಹಚ್ಚಿ

ಮುತ್ತಿನ ಮಣಿಯಂತೆ ಪ್ರೀತಿಯ ಮುತ್ತ ತಂದೆ
ಸವಿಮಾತನಾಡಿ ನಿಂದೆ ನನ್ನುಸಿರಲಿ ಬೆರೆತು ಹೋದೆ

ಕರುನಾಡ ಮಣ್ಣಿನಲಿ ಕನ್ನಡದ ಹಿರಿಮೆ ತಂದೆ
ಗಂಧದ ಗುಡಿಯಲ್ಲಿ ಸೌಂದರ್ಯ ದೇವಿಯಾದೆ

- Irayya Mathad

04 Nov 2015, 01:34 am