Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಇಲಿ ಹುಲಿ

ಒಂದು ಇಲಿ ಇನ್ನೊಂದು ಹುಲಿ
ನಮ್ಮ .........













ಪಕ್ಕದ ಮನೆ
ಫ್ಯಾಮಿಲಿ ......

- Ranganath D S

20 Dec 2015, 04:09 pm

Nakkalu ಮತ್ತು makkallu

"ಆಕಸ್ಮಿಕ ಕಂಡಳು
ನನ್ನ ನೋಡಿ ನಕ್ಕಳು
ನಮಗೀಗ ಇಬ್ಬರು ಮಕ್ಕಳು "

- Ranganath D S

20 Dec 2015, 04:07 pm

ನಾನು ಬಡವಾ ಕಾಡಿತು ನಿನ್

ನಾನು ಬಡವಾ ಕಾಡಿತು ನಿನ್ನ ನಗುವಾ....ಎ ಚಲುವೆ ನಿನ್ನ. ಚೆಲುವ ಹೇಗೆ ಬನ್ನಿ ಸಲಿ ಶಬ್ದ ಗಳೆ ಸಾಲುತ್ತಿರಲಿಲ್ಲ.

- jafar

20 Dec 2015, 06:27 am

ದೇವಕನ್ಯೆ

ತಾವರೆಗಳೆ ನಿನ್ನ ನಯನಗಳಾಗಿ
ಧೃವತಾರೆಯೆ ನಿನಗೆ ಸಿಂಧೂರವಾಗಿ
ಚಂದಿರನೆ ನಿನ್ನ ಅಂದವಾಗಿ
ಶ್ರೀಗಂಧದ ಗೊಂಬೆ ನೀನಾಗಿ
ನನ್ನ ಪ್ರೀತಿ ಪಯಣದಲ್ಲಿ
ಸಪ್ತಪದಿ ತುಳಿದು ನನ್ನ ಬಾಳ ಸ್ನೇಹಿತೆ ನೀನಾದೆ...

- Irayya Mathad

20 Dec 2015, 12:31 am

ಹೊಂಬೆಳಕು

ಕೊರಗು ನೀನೇಕೆ ಮೂಡಿಸಬಾರದು ನನ್ನ
ಬಾಳಿನಲ್ಲಿ ಹೊಂಬೆಳಕು
ಸದ್ದಿಲ್ಲದೇ ಮನದಲಿ ಬಂದು
ಕಳೆದುಹೋದ ನೆನಪುಗಳನ್ನು ಮತ್ತೆ ಕೆದಕಿ
ಕಾಲಹರಣ ಮಾಡದೇ ತೋರು ಭರವಸೆಯ ಬೆಳಕು
ಬೇಜಾರಿನ ಗಡಿ ದಾಟಿಸಿ ಸಂತೋಷದ ದಾರಿಯಲ್ಲಿ
ಮುನ್ನಡೆಸುತ್ತಾ
ನನ್ನ ಜೀವನದಲ್ಲಿ ತೋರು ಅಚ್ಚರಿಯ ಬೆರಗು!!!

- ಎ ಜಿ ಶರಣ್

19 Dec 2015, 07:44 am

ನೆನಪು ಮರಳಿ..

ನೆನಪು ಮರಳಿ ಸುಳಿಯುತಿದೆ,
ಸೋತ ಮನವ ಕೆಣಕುತಿದೆ,
ಸತ್ತ ಬಳ್ಳಿಯಲ್ಲಿ ಅರಳಿ
ಗತದ ಘಮವ ಸೂಸುತಿದೆ.

ಆಸರೆಗೆ ಅಂಗಲಾಚಿ,
ಹನಿ ಪ್ರೇಮಕೆ ಹೃದಯ ಚಾಚಿ,
ಕಾದು ಸೋತ ಭಾವದುರಿಯ
ಹೊತ್ತು ತರುತಿದೆ
ಮತ್ತೆ ಬರುತಿದೆ.

ಕಳೆದುದರ ಹೊಳಪನರಸಿ,
ಉಳಿದುದರ ಬೆಳಕ ಮರೆಸಿ,
ಸಿಗದ ಮೋಹ ತೀರದೆಡೆಗೆ
ಮನವ ನಡೆಸಿದೆ
ಅಲೆಸಿ ದಣಿಸಿದೆ.

ಯಾರ ಹೃದಯ ಯಾರ ನೆಲೆಯೋ,
ಯಾರ ಸೆಳೆವುದ್ಯಾವ ಸೆಲೆಯೋ,
ಬಯಕೆ ಬೂದಿಯಡಿಯ ಕಾವು
ಹೊತ್ತಿ ಉರಿದಿದೆ,
ಮತ್ತೆ ಸುಡುತಿದೆ

- ವಿನಾಯಕ ಭಟ್

19 Dec 2015, 02:49 am

ಏನಿಲ್ಲ.....

ಏನಿಲ್ಲ...
ಯಾಕೋ ಕಾಣೇ ಮೌನ ಕಾಡಿದೆ ನನ್ನ ಮನದ ತುಂಬೆಲ್ಲಾ..
ಮೃದುಲ ಸ್ಪರ್ಶದ ಮೋಹಕ ನೋಟಕೆ ಕಳೆದು ಹೋದೆನಲ್ಲಾ..
ಮುಗಿಲಲಿ ರಾಚಿದ ನೀಲಿ ಆಗಸದಿ ನಾ ತೇಲಿ ಹೋದೆನಲ್ಲಾ..
ನಾ ನನ್ನಲಿಲ್ಲ ಕಾರಣ ನಿನ್ನ ಹೃದಯದಲಿ ಅವಿತು ಕುಳಿತೆನಲ್ಲಾ..

#ಕವನಯೋಗಿ.....

- Kavana Yogi

18 Dec 2015, 06:05 pm

ಪ್ರಕೃತಿ

ನಿನಗಿಲ್ಲ ನಿಧಿ೯ಷ್ಟ ಆಕೃತಿ,
ನೀನೆ ಈ ಧರೆಗೆ ಸಾರಥಿ,
ನೋಡುವವರಿಗೆ ಎಂಥ ಸುಂದರ ಗೆಳತಿ,
ನನ್ನಗಂತು ನೀನೆ ಜೀವನದ ಸಂಗಾತಿ,
ಏಕೆ ಈ ಮೌನ ಮಾತಾಡೇ ಪ್ರಕೃತಿ.

- ಸಿ.ಜಿ ಪುನೀತ್, ಚಪ್ಪರದಹಳ್ಳಿ

17 Dec 2015, 01:55 pm

ನನ್ನ ನೆನಪು

ಮೊದಲ ಸಲ ನೋಡಿದಾಗ
ಪದೇ ಪದೇ ನೆನಪು ಆದಳು
ಅವಳು
ಕೊನೆಯ ಸಲ ನೋಡಿದಾಗ
ಪದೇ ಪದೇ ನೆನಪು ಆಗುವುದು
ಸಾರಯಿ ಬಾಟಲಿಯಲ್ಲಿ
ಅವಳು
"ಪ್ರವೀಣ್ ಕೃಷ್ಣ"

- ಪ್ರವೀಣ್ ಕೃಷ್ಣ

17 Dec 2015, 10:42 am

ಮಣ್ಣಿನ ಋಣ

ಮೂರಂಕಿ ನಾಲ್ಕಂಕಿ ಎಂಟಂಕಿ ಲೆಕ್ಕವ ನಾನೊಲ್ಲೆ
ಅಗೆದಗೆದು ತೆಗೆದ ಸಂಪತ್ತಿನ ಸೂರು ನಾನೊಲ್ಲೆ
ಮಾನ ಸನ್ಮಾನಗಳ ಹೊರೆಯು ನಾನೊಲ್ಲೆ
ಇರುವ ಈ ಮೂರು ದಿನದಲ್ಲಿ ಪರಧನ ಪರಕಾಯದ
ಮೋಹವ ನಾನೊಲ್ಲೆ
ಮಣ್ಣಲ್ಲಿ ಹುಟ್ಟಿ ಮಣ್ಣಾಗಿ ಹೋಗುವ ಈ ದೇಹಕೆ
ಮಣ್ಣಿನ ಋಣ ತೀರಸುವ ಭಾಗ್ಯವ ನೀಡೆನಗೆ ಶ್ರೀ ಹರಿಯೆ ಸಾಕೆನಗೆ ಆಸೆಗಳ ಗಾಳಿ ಗೋಪುರವ...

- Irayya Mathad

17 Dec 2015, 01:26 am