Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಪೇಸ್ಬುಕ್

ದಿನವಿಡೀ ಪೇಸ್ಬುಕ್
ಇದರಲ್ಲಿ ವಿಶೇಷ ಲುಕ್
ಇದರಿಂದ ದೂರ ಹಲವು ಬುಕ್
ಸ್ಥಾಪನೆಯಾಗುವುದೊಂದು ಗ್ರೂಪ್
ಅದರ ಮೇಲೆ ನಮ್ಮಯ ಹಕ್ಕು
ಗ್ರೂಪಿಗೊಂದು ಲೈಕು
ಲೈಕ್ ನಿಂದ ಸಮಯಕ್ಕೊಂದು ಕಿಕ್.

- ಪರಶುರಾಮ ಅ ಹೊಸಮನಿ

09 Jan 2016, 01:12 pm

ಪ್ರೀತಿ

ಕೆಣಕದಿರು ಕೆದಕದಿರು ಮದುವೆಯ ಸಮಯದಲ್ಲಿ
ಹಾರಿ ಹೋದ ಪ್ರೀತಿಯ ನೆನಪುಗಳ ಮೆಲುಕು
ಹಾಕದೇ ಮರೆತುಬಿಡು
ನಿನ್ನ ಅರಿಯದೇ ನಾನು ಆದೇ
ಪ್ರೀತಿಯಲ್ಲಿ ಅಲೆಮಾರಿ
ಜೀವನದಲಿ ಸೋಮಾರಿ
ಕನಸ್ಸುಗಳ ಬದಿಗಿಟ್ಟು ತೂಗಿದೆ ಜೋಕಾಲಿ
ನೀ ಅಮಾವಾಸ್ಯೆಯಲ್ಲಿ ತೋರಿಸಿದೆ ಚಂದ್ರ
ಬಿಂಬ
ತಮಾಷೆಯಂದು ಕೈ ಕೊಟ್ಟೆ ಚಂಬು
ಕಂಗಳ ನೋಟದಿಂದ ಕಂಗೆಡಿಸಿ
ದಿಕ್ಕು ಅರಿಯದಾಗ ಎಳೆದ ಬರೆ
ಧರೆಯಲ್ಲಿ ಮತ್ತೊಮ್ಮೆ ನಾ ಆಗಬೇmಕು
ಪ್ರೀತಿಯಲ್ಲಿ ದೊರೆ
ಮತ್ತೊಮ್ಮೆ ಹಣಿಯದಿರು ನಿನ್ನ ನಗುವಿನ ಬಲೆ
ಅದು ಎಂದಿಗೂ ನನ್ನ ಮನದಲಿ ಮತ್ತೆ ಅರಳದು
ಪ್ರೀತಿಯ ಅಲೆ
ನಗುವಿನ ಕಿಚ್ಚು ಹಚ್ಚದೇ ಇರು ಸುಮ್ಮನೆ
ನಾ ಕುಳಿತರುವೇ ಹಸಮಣೆಯ ಮೇಲೆ
ಕೊಚ್ಚಿ ಹೋದ ಪ್ರೀತಿ
ಬಿಚ್ಚಿ ಹುಡಕದ ಮನಸ್ಸು
ಹುಚ್ಚು ಹಿಡಿಸದ ಕನಸು
ನಿನ್ನ ಪ್ರೀತಿಯ ನೆನಪಿನ ಸಂಚಿಕೆಯಲ್ಲಿ
ಪುಟ ತಿರುವಲು ಈಗ ನನಗೆ ಅಂಜಿಕೆ
ಇಟ್ಟಿರುವೇ ಸ್ನೇಹದ ಮೇಲೆ ಒಂದಿಷ್ಟು
ನಂಬಿಕೆ..
ಎ ಜಿ ಶರಣ್

- ಎ ಜಿ ಶರಣ್

08 Jan 2016, 10:42 am

ಕೆಲವರು

ಎಲ್ಲಿಂದಲೋ ಬಂದಿಹಿವು
ಎಲ್ಲಿಗೋ ಹೋಗುತಿಹೆವು
ಬಂದು ಹೋಗುವುದುರ ನಡುವೆ
ಮನವ ಮುಟ್ಟಿದವರು ಹಲವರು
ಮನದಲಿ ಉಳಿದವರು ಕೆಲವರು..

ಜೊತೆಯಲಿ ಇರುವವರು
ಹೃದಯಕ್ಕೆ ಹತ್ತಿರಾದವರು
ಭಾವನೆಗಳಿಗೆ ಸ್ಪಂದಿಸಿದವರು
ಮನದಲಿ ಬೇರುರಿದವರು
ಕಣ್ಣ ವರೆಸಿ ನಕ್ಕವರು ಕೆಲವರು ..

ಎಂದೂ ಮರೆಯಲಾಗದವರು
ದೂರಿದ್ದು ನೆನಪಿಗೆ ಬರುವವರು
ಎದುರಿದ್ದು ಕಾಣದಂತವರು
ಸಾಲದ ಪ್ರೀತಿಯ ತೋರಿದವರು
ಸ್ನೇಹಕ್ಕೆ ಪಾತ್ರರಾದವರು ಕೆಲವರು..

ಬೇಡುವೆನು ದೇವರಲಿ ಹಗಲಿರುಳು
ಸದಾ ನಗುತಿರಲಿ ಎಲ್ಲರೂ
ದೂರಾಗದಿರಲೆಂದ ಕೆಲವರು
ಅವರೆಲ್ಲರೂ ನನ್ನವರು.

...ಭೀಮಾ ಬೆಳಹಾರ

- Bhima Belahar

05 Jan 2016, 05:04 pm

ಅವಿತ ಕವಿತೆ

ಪದಗಳಲಿ ಅವಿತ ಕವಿತೆ ನೀನು
ಸ್ವರಗಲ್ಲಿ ಬೆರೆತ ಮಾಧುರ್ಯ ನೀನು
ಶೃಂಗಾರ ಕಾವ್ಯ ನೀನು
ಹಾಲಲ್ಲಿ ಒಂದಾದ ಜೇನು ನೀನು

- lakshmikantha kn

04 Jan 2016, 07:30 pm

ಲತೆ

ಹಸಿರ ಬೇಡಿದೆ ಒಣ ಬದುಕು
ತರುರಾಯನ ಬಯಕೆಯಲಿ...!
ಬೇಕಿಲ್ಲ ಸಖಿ ವರ್ಷಳು
ಪ್ರಿಯಕರನ ಗುಂಗಿನಲಿ...... !!

ಮಾಸಿದೆ ಎನ್ನಸ್ತಿತ್ವದ ವಿಶ್ವಾಸ
ಆಧಾರಕ್ಕೊಬ್ಬನಿಲ್ಲದೆಯೆ !
ಎಂದಿಗಿಟ್ಟಿಹನೊ ಮುಹೂರ್ತ
ಎನ್ನ ಸ್ವಪ್ನದ ಲಗ್ನಕೆ ....... !!

ಬಾಡುತಿಹವು ಪರ್ಣ ಕುಸುಮಗಳು
ದೊರೆತರೂ ಪೊಶಕಾಂಶ !
ತೊಡುತಿಹುದು ಎನ್ನೆಲ ಬರಡ ಉಡುಗೆಯ
ಇದ್ದರೂ ಫಲವತ್ತತೆಯ ಅಂಶ ......!!

ಎಲ್ಲಿಹೆಯೊ ಮುದ್ದು ತರುರಾಯ
ನಿನ್ನ ಅಪ್ಪುಗೆಯ ಆಸೆ ಭುಗಿಲೆದ್ದಿದೆ !
ನಿನ್ನ ಬಯಕೆಯ ಸಂತೆಯಲಿ
ನಾನು ಲತೆಯೆಂಬುದೇ ಮರೆತಿದೆ .....!!

- ವಿನಾಯಕ್

04 Jan 2016, 11:51 am

ಪ್ರೀತಿಯ ಚಿಪ್ಪಿನಲಿ

ಕಟುವಾಗಿ ಟೀಕಿಸಿ ಕರೆದಳೆನ್ನ ಕನ್ಯೆ
ಕಡಲೊಳಗಿನ ಕಪ್ಪೆ ಚಿಪ್ಪಿನಲಿ ಅವಿತಂತ ರತ್ನ ಕಮಲೆ
ಕಣ್ಣುಗಳಲ್ಲಿ ಕರಗಿಸುವ ಈ ಕಿಲಾಡಿ ಹೆಣ್ಣೆ
ಕಾರ್ಮೋಡ ಕವಿದರು ಕತ್ತಲೆ ಇಳಿದರು ಕಾಣುವಳು ಎಂದು ಮಾಸದ ಚಂದಿರನ ನಗುವಿನಂತೆ
ಕಾಣೆಯಾದೆ ನಾ ಅವಳ ಪ್ರೀತಿಯ ಕಾನನದಲ್ಲಿ
ಕೊನೆಗರಿತುಕೊಂಡೆ ನಾ ಇದು ಕನಸಿನ ಕಾವ್ಯವೆಂದು...

- Irayya Mathad

03 Jan 2016, 11:37 am

ಬೇಡುವ ಆಸೆ

ಅಬ್ಬರದ ಭಾಷಣದಿಂದ
ದೇಶದ ದಿಶೆ ಬದಲಿಸಬಹುದು
ಹಸಿವಿಗೆ ಅನ್ನವೇ ಬೇಕು ..

ಅವನು ಮಸೀದಿಯೊಳಗೆ,
ಇವನು ಮಂದಿರದೊಳಗೆ,
ಮತ್ತಿಬ್ಬರು ಅವುಗಳ ಗೇಟಿನ ಹೊರಗಡೆ
ಬೇಡುತ್ತಲೇ ಇದ್ದರು..

ಮಗ ಬೈಕಿನ ಮೊದಲನೇ
ರೈಡಿಗೆ ಕೂಗಿ ಕರೆಯುತ್ತಿದ್ದ;
ಅಪ್ಪ ಅದರ ಸಾಲದ ಮೊದಲಿನ
ಕಂತಿನ ಲೆಕ್ಕಾಚಾರದಲ್ಲಿ ಮೈಮರೆತಿದ್ದ;


ಮೊದಲ ರಾತ್ರಿಯ ಮರುದಿನ
ಈರುಳ್ಳಿಯ ಒಂದೊಂದೇ
ಸಿಪ್ಪೆ ತೆಗೆಯುತ್ತಿದ್ದ ಹುಡುಗಿ
ಒಳಗೊಳಗೇ ಲಜ್ಜೆಯಿಂದ ಕಂಪಿಸುತ್ತಿದ್ದಳು;


ಬಟ್ಟೆ ತೊಟ್ಟು ಸಭ್ಯ
ಎನಿಸಿಕೊಂಡ ಮನುಷ್ಯನ
ಪರಮಾನಂದಗಳು
ಬೆತ್ತಲೆ ದೇಹವನ್ನು ಬೇಡುತ್ತದೆ;

- ವಿಠ್ಠಲ ಪಾಟೀಲ

01 Jan 2016, 11:33 pm

ಪ್ರತೀ ಬಾರಿ ಸೋಲುತ್ತಿದ್ದೇನೆ

ನಿನ್ನ ನೆನಪಿನಿಂದ
ಹುಟ್ಟಿದ ಈ
ಕವನ
ನಿನ್ನದೋ
ನನ್ನದೋ ..
ಗೊಂದಲವಿದೆ!
———
ನಿನ್ನ ಎದೆಯಾಳದ
ಹಂದರಕ್ಕೆ
ಈಜು ಬಾರದೆ
ಇಳಿದು
ದಿಕ್ಕಾಪಾಲಾದ
ನನ್ನ ಸ್ಥಿತಿಗೆ
ಪರಿಭ್ರಮಿಸುತ್ತೇನೆ…
ಕೆಲವೊಮ್ಮೆ
ಸಂಭ್ರಮಿಸುತ್ತೇನೆ..!
———
ನೀ ನನಗೆ
ನಷ್ಟವಾಗಬಹುದು ..
ಎಂದಲ್ಲ..
ನಾನಿನಗೆ
ನಷ್ಟವಾದರೆ
ನನ್ನಷ್ಟು ನಿನ್ನ
ಯಾರು ತಾನೇ
ಪ್ರೀತಿ ಮಾಡಿಯಾರು
ಎಂಬ ಭಯವಿದೆ….!
———
ನಿನ್ನೊಲುಮೆಯ
ರಾಗವನ್ನು
ಪದಗಳಲ್ಲಿ
ಕಟ್ಟಿ ಹಾಕುವ
ವ್ಯರ್ಥ ಪ್ರಯತ್ನ
ಈ ಕವನ
———
ನಿನ್ನ ಕಾಡುವ
ನೆನಪುಗಳಿಗೆ
ಲಗಾಮು ಹಾಕುವ
ಪ್ರಯತ್ನದಲ್ಲಿ
ಪ್ರತೀ ಬಾರಿ
ಸೋಲುತ್ತಿದ್ದೇನೆ..
———

- ವಿಠ್ಠಲ ಪಾಟೀಲ

01 Jan 2016, 11:12 pm

ಪುನರಜನ್ಮ

ಇನ್ನೂ ಒಂದು ಜನ್ಮ
-ವಿರುವುದಾದರೆ
ಹಗಲಿರುಳೆನ್ನದೆ
ನಿನ್ನ ಕೆನ್ನೆಯ ಚುಂಬಿಸೋ
ಮುಂಗುರಳಾಗಿ
ಹುಟ್ಟಬೇಕೆಂಬ ಆಸೆ ಕಣೇ..!

- ವಿಠ್ಠಲ ಪಾಟೀಲ

01 Jan 2016, 11:03 pm

ಕಂಡೆ ಕನಸೊಂದ....

ಕಂಡೆ ಕನಸೊಂದ....
ಮನಸಲ್ಲಿ ಮೂಲೆಯ
ಒಳಗಿಂದ .....
ಮನಸು ಮಾಗಿತು

- Aghosh

01 Jan 2016, 05:31 pm