Kannada Poems
Deprecated : Creation of dynamic property my_pagination::$conn is deprecated in
/home4/airpoiy2/kannadakavana/pagination.php on line
41
ತಾಯಿ
ಕರಳು !
ಮಡದಿ
ನೆರಳು !!!!
- ಜ್ಯೋತಿ ನಾಯ್ಕ (ಶಿಕ್ಷಕರು).ಬಳ್ಳಾರಿ
08 Feb 2016, 02:24 pm
ಏಕ್ಯತೆಯ ವೃಕ್ಷದಿ
ಮಾನವೀಯ ಮೌಲ್ಯಗಳ
ಎಲೆಗಳುದುರಿ
ಬಿದ್ದಿವೆ !
ವಸಂತದ ಸೋಗಿನಲ್ಲಿ
ಹೊಸ ಚಿಗುರು ಎನ್ನುತಲಿ
ವಿಕಾರಗಳು ವಿಶ್ವದೆಲ್ಲೆಡೆ
ಪಸರಿವೆ !!
- ಜ್ಯೋತಿ ನಾಯ್ಕ (ಶಿಕ್ಷಕರು).ಬಳ್ಳಾರಿ
08 Feb 2016, 02:16 pm
ಪ್ರೇಯಸಿ
ಭಾವನೆಗಳ ನಡುವೆ
ಸೇತುವೆ ನಿರ್ಮಿಸಿದಾಗ
ಆದದ್ದು ನಮ್ಮ
ಅನುಬಂಧ !
ಆದರೆ
ಅರಿಯದಾಯಿತು
ನಮ್ಮ ನಡುವೆ
ಆವನೇಕೆ ಬಂದ!!!?
- ಜ್ಯೋತಿ ನಾಯ್ಕ (ಶಿಕ್ಷಕರು).ಬಳ್ಳಾರಿ
08 Feb 2016, 01:50 pm
ಇರುಳಿನಲಿ
ಬೆಳಗುವನು
ಅರ್ಧ
ಚಂದಿರ !
ಬೆಳಕು ಮಾತ್ರ
ತುಂಬಿಹುದು
ಬಾನ
ಹಂದರ !!!
- ಜ್ಯೋತಿ ನಾಯ್ಕ (ಶಿಕ್ಷಕರು).ಬಳ್ಳಾರಿ
08 Feb 2016, 01:43 pm
ಪುಣ್ಯ
ಮಣ್ಣು ಮುಕ್ಕಿಹುದು
ಪಾತಾಳದಲಿ !
ಪಾಪ
ರಣಹದ್ದು ದಿಟ
ಹಾರಾಡಲು
ಗಗನದಲಿ !!!
- ಜ್ಯೋತಿ ನಾಯ್ಕ (ಶಿಕ್ಷಕರು).ಬಳ್ಳಾರಿ
08 Feb 2016, 12:29 pm
ವಸುಂಧರೆ
ಮಹಾನ್
ರಂಗ ಮಂದಿರ !
ಜಿವಾತ್ಮರೆ
ಪಾತ್ರ ಹಸನಾಗಿಸಿಕೊಳ್ಳಿ
ಸುಂದರ !!
- ಜ್ಯೋತಿ ನಾಯ್ಕ (ಶಿಕ್ಷಕರು).ಬಳ್ಳಾರಿ
08 Feb 2016, 12:18 pm
ರಾಜಕಾರಣಿಗಳು
ಕಲಾವಿದರು !
ಮತದಾರರು
ಪ್ರೇಕ್ಷಕರು !!
- ಜ್ಯೋತಿ ನಾಯ್ಕ (ಶಿಕ್ಷಕರು).ಬಳ್ಳಾರಿ
08 Feb 2016, 12:13 pm
ನಾಡ
ವನಸುಮವು
ಬಿರಿಹುದು
ಪರಿಮಳ !
ಆದರೋಳು
ನಾವಾಗಬೇಕು
ಒಂದೊಂದು
(ಎಸಳು) ದಳ !!
- ಜ್ಯೋತಿ ನಾಯ್ಕ (ಶಿಕ್ಷಕರು).ಬಳ್ಳಾರಿ
08 Feb 2016, 12:09 pm
ಬಾಳ
ಪಯಣಕೆ
ಬೇಕಾದ
ಹರಿಗೋಲು !!
- ಜ್ಯೋತಿ ನಾಯ್ಕ (ಶಿಕ್ಷಕರು).ಬಳ್ಳಾರಿ
08 Feb 2016, 12:04 pm
ನಾ ಸತ್ತ ಮೇಲೂ ಹೇಳುವೇ
ಗೆಳತಿ ಆ ಯಮರಾಜನಿಗೂ,
ನನ್ನಳಗೇ ಇರುವ ನಿನ್ನಯ
ಕಹಿ ನೆನಪುಗಳ ಹೃದಯವ
ಜೋಪನವಾಗಿಡು ಎಂದು .....
ನನಗೇನಾದರು ಮರು ಜನುಮ
ಇದ್ದರೆ ಮತ್ತೆ ಅದೇ ಹೃದಯವ
ಪಡೆಯುವ ಸಲುವಾಗಿ ...
- ಪ್ರಸನ್ನ ಕುಮಾರ್
07 Feb 2016, 06:23 pm