Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಗೋಕುಲ ಕೃಷ್ಣ

ನನ್ನ ಮುದ್ದು ಕಂದನೆ ನಗುತಿರು ನೀನು
ನಿನ್ನ ನಗುವಿನಲಿ ಕಾಣುವೆ ನನ್ನನೆ || ಪ ||

ಚಂದಿರನ ತಂದು ಕೊರಳಲಿ ಹಾಕುವೆ
ತಾರೆಗಳ ತಂದು ಗೆಳೆಯರ ಮಾಡುವೆ
ನಲಿಯುತ ನೀನು ಮಡಿಲಲಿ ಬಂದೆ ನನ್ನ
ಬಾಳಿಗೆ ನೀನು ಬೆಳಕಾಗಿ ನಿಂದೆ

ನಿನ್ನ ಪುಟ್ಟ ಹೆಜ್ಜೆಯಲಿ ನಗುವನು ಕಂಡೆನಾ
ಮರೆತೊದೆನು ನಾ ಕಹಿ ನೆನಪನ್ನ
ಸೂರ್ಯನ ಕಂಗಳು ತುಂಬಿಹೆ ನಿನ್ನಲಿ
ಸಂತೋಷದ ನಗೆ ಕಡಲು ನಿನ್ನಲಿ ಬೆರೆತಿಹೆ

ಆಡುವ ಮಾತಿನಲಿ ಕೇಳುವ ನುಡಿಯು
ಅಮ್ಮ ಎಂದರೆ ಸಾಕು ನನ್ನ ಜನ್ಮ ಧನ್ಯವು
ಗೋಕುಲ ಕೃಷ್ಣನಂತೆ ಬಂದೆ ನೀ ನನ್ನ ಬಳಿಗೆ
ಬೆಣ್ಣೆಯ ಕದ್ದ ಕೃಷ್ಣ ಕಳ್ಳನೊ ಕಳ್ಳನೊ

ಯಾರು ಇಲ್ಲದ ಜೀವನ ತುಂಬಿದೆ ನನ್ನ ಮಡಿಲ
ಜೀವಕ್ಕೆ ಜೀವ ನೀಡೊ ಜೀವನ ತಂದೆ ನೀ....

- Irayya Mathad

13 Feb 2016, 08:15 pm

ಗೆಲ್ಲಬೇಕಿತ್ತು ಸಾವ

ನೀ ಹೋರಾಡಿದೆಯಣ್ಣ
ಜೀವವ ಪಣಕ್ಕಿಟ್ಟು
ಕಾಡು ಕೊತ್ತಲಲ್ಲಿ
ಮಂಜು ಬೆಟ್ಟದಲ್ಲಿ
ಅರೆ ಹೊಟ್ಟೆಯಲ್ಲಿ
ಕಿರು ನಿದ್ದೆಯಲ್ಲಿ.

ನೀ ಹೋರಾಡಿದೆಯಣ್ಣ
ಜೀವವ ಪಣಕ್ಕಿಟ್ಟು
ದೇಶ ಗಡಿಯಲ್ಲಿ
ಭಾಷೆ ಬಾರದೆಡೆಯಲ್ಲಿ
ರೋಷದ ಮಡುವಲ್ಲಿ
ಧೈರ್ಯದ ಸಿಡಿಯಲ್ಲಿ

ಕೊನೆವರೆಗೂ
ನೀ ಹೋರಾಡಿದೆಯಣ್ಣ
ಜೀವವ ಪಣಕ್ಕಿಟ್ಟು
ಮಂಜಿನಡಿಯಲ್ಲಿ
ರಕ್ಕಸ ಚಳಿಯಲ್ಲಿ
ಹಿಂಜಿದ ನರಗಳಲಿ
ಕುಂದಿದ ಅಂಗಗಳಲಿ

ಆದರೂ ನೀ ಗೆಲ್ಲಬೇಕಿತ್ತು ಸಾವ
ಮರೆಸಬೇಕಿತ್ತು ನಿನ್ನವರ ನೋವ!

(ಮರೆಯಾದ ವೀರ ಯೋಧನ ಹನುಮಂತಪ್ಪ ಕೊಪ್ಪದ ಅವರನ್ನು ನೆನೆದು)

- ಶ್ರೀಗೋ.

11 Feb 2016, 11:45 am

ಕಿಸ್

ನಾನು ಎಸ
ನೀನು ಎಸ
ಮತ್ಯಾಕೆ ಮಿಸ
ಕೂಡು ಒಂದು ಕಿಸ

- Shivakumar

10 Feb 2016, 06:04 pm

ಮೌಲ್ಯ

ಸ್ನೇಹ
ನಗದು !
ಜಮ
ಮಾಡಿದಸ್ಟು
ಹೆಚ್ಚಾಗುತ್ತೆ !
ಪ್ರೀತಿ
ಸಾಲ !
ಹೆಚ್ಚಾದಸ್ತ್ತು
ವಿಷವಾಗುತ್ತೆ !!

- ಜ್ಯೋತಿ ನಾಯ್ಕ (ಶಿಕ್ಷಕರು).ಬಳ್ಳಾರಿ

10 Feb 2016, 11:41 am

ಶಿಕ್ಷಣ

ಪಾಶ್ಚಿಮಾತ್ಯ
ದೇಶದೊಳ್
ಅಭಿವ್ಯಕ್ತಿಗೆ
ಒತ್ತು !
ನಮ್ಮ ದೇಶದೊಳ್
ತಿರುಳಿಗಲ್ಲಾ
ಸಿಪ್ಪೆಗಾಗಿ
ಕಸರತ್ತು !!

- ಜ್ಯೋತಿ ನಾಯ್ಕ (ಶಿಕ್ಷಕರು).ಬಳ್ಳಾರಿ

10 Feb 2016, 11:32 am

ಅಭಿಪ್ರಾಯ

ಮಾತು
ಶ್ರೇಷ್ಟ
ಸಂಗೀತ !
ಇದು
ನನ್ನ
ಇಂಗಿತ !!

- ಜ್ಯೋತಿ ನಾಯ್ಕ (ಶಿಕ್ಷಕರು).ಬಳ್ಳಾರಿ

10 Feb 2016, 11:21 am

ವಿನಂತಿ

ಪುಸ್ತಕವೆಂಬ
ಸಿಪ್ಪೆ
ತಿನ್ನಬೇಡಿ !
ಪುಸ್ತಕದೊಳಗಿನ
ತಿರುಳ
ಎಸೆಯಬೇಡಿ !!!

- ಜ್ಯೋತಿ ನಾಯ್ಕ (ಶಿಕ್ಷಕರು).ಬಳ್ಳಾರಿ

10 Feb 2016, 11:18 am

ಹೋರಾಟ

ಪ್ರೀತಿ
ಒಂದು
ಬಳುವಳಿ !
ಪಡೆಯಲು
ನಡೆದಿಹದು
ಚಳುವಳಿ !!

- ಜ್ಯೋತಿ ನಾಯ್ಕ (ಶಿಕ್ಷಕರು).ಬಳ್ಳಾರಿ

10 Feb 2016, 11:12 am

ದುರಂತ ೩

ಸದಾ
ಸತ್ಯ
ನ್ಯಾಯಕ್ಕಾಗಿ
ಕದನ !
ಅಮಾಯಕರ
ವಧನ !
ಇದು ನಿತ್ಯ
ಸತ್ತು ಬದುಕುತಿರುವ
ಶ್ರಮೀಕರ
ಆಕ್ರಂಧನ !!

- ಜ್ಯೋತಿ ನಾಯ್ಕ (ಶಿಕ್ಷಕರು).ಬಳ್ಳಾರಿ

10 Feb 2016, 11:07 am

ಜ್ಯೋತಿ

ದೀಪದ
ಕೆಳಗೆ ಕತ್ತಲು !
ಬೆಳಕು ಮಾತ್ರ
ಸುತ್ತಲು !
ಬಾಳ ದಡ
ಸೇರುವ ಮೊದಲು
ಕನ್ನಡದ ಕಂಪು ಪಸರಿಸು
ಎತ್ತಲು !!!

- ಜ್ಯೋತಿ ನಾಯ್ಕ (ಶಿಕ್ಷಕರು).ಬಳ್ಳಾರಿ

10 Feb 2016, 10:57 am