Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಶೃಂಗಾರ

ಅಂಚಿನ ತಾವರೆ ಕೊಡವ ಚೆಲ್ಲಿದಳು ಮುತ್ತು ಮಲ್ಲಿಗೆಯ
ಚಂದದಿ ತೋಟದಲ್ಲಿ ಶೃಂಗಾರ ರಸ ಹೂಗಳ ನಡುವಲ್ಲಿ
ರಸಮಲ್ಲಿಗೆಯ ನಡುಬಳಸಿ ಬಿಸಿಉಸಿರಿನ ಸ್ನಾನಕ್ಕೆ ಸ್ನಾಯುಗಳ ಬಂಧಿಸಿ ತೋಳುಗಳ ಬಿಗಿ ತೆಕ್ಕೆಗೆ ಮುತ್ತುಗಳ ರಾಶಿ ಹೂ ಮಳೆಯಾಯಿತು
ಕಂಗಳು ನಾಟಿದವು ಎದೆಯಾಳದ ವಿರಹ ಕೆದಕುತ್ತಾ
ನಾಚಿಕೆಯ ಕೆನ್ನೆಗುಳಿಯು ಕೆಂಪಾಗಿ ಮಂಕಾಯಿತು ಮುತ್ತಿನ ಮತ್ತಿನಲ್ಲಿ...

ಕನ್ನಡಿಗ ರವಿಕುಮಾರ.

- ರವಿಕುಮಾರ

13 Mar 2016, 06:25 am

ಕೊನೆಗಾಣದ ಸ್ನೇಹ

ತಿಳಿಯದೆ ಪರಿಚಯವೂ ಮೊಳಕೆಯಂತೆ ಮೂಡಿದೆ,
ಅರಿಯದೆ ಸ್ನೇಹವು ತಾನಾಗಿಯೇ ಚಿಗುರಿದೆ.
ಹೊಸ ಹೊಸ ಮಾತುಗಳು ದಿನ ದಿನವೂ ಸಾಗಿದೆ,
ಆದಿ ಇಲ್ಲಿ ಅಂತ್ಯವೆಲ್ಲಿ ತಿಳಿಯದೆಯೇ ನಡೆದಿದೆ,
ಮೌನವಿಲ್ಲದೆ ಮಾತು ಹೂವಿನಂತೆ ಅರಳಿದೆ,
ಮರದಂತೆ ಬೆಳೆಯುತಿದೆ ಜಾತಿ ಭೇದವಿಲ್ಲದೆ,
ಬಾಳ ಪಯಣದಲ್ಲಿ ಹೀಗೆ ಸಾಗಲಿ ಸ್ನೇಹ ಕೊನೆಗಾಣದೆ,

- ಬಿಂದು

13 Mar 2016, 06:01 am

ಮನಸಿನ ಆಳ

ಮನಸಿನ ಆಳದಲಿ ನೋವಿದೆ
ಕನಸಿನ ಆಳದಲಿ ನೆನಪಿದೆ
ಹೃದಯದ ಆಳದಲಿ ಒಲವಿದೆ
ಬದುಕಿನ ಹಾದಿಯಲಿ ಕಷ್ಟವಿದೆ
ಆದರು ಬದುಕುವ ಛಲವಿದೆ
ನಾಳೆಯಾದರು ಸುಖ ಸಿಗುವ ಬಯಕೆ ಇದೆ



ನಾಗರಾಜ ಎಸ್ ಎಲ್

- ನಾಗರಾಜ ಎಸ್ ಎಲ್ ಸಂತೆಕೊಪ್ಪ

12 Mar 2016, 05:13 pm

ತಾಯಿ

ಮನಸ್ಸಿದ್ದರೆ ಮಾತ್ರ ಪ್ರೀತಿಸೋದು,
ಬಯಕೆಯ ಪ್ರೀತಿ;
ಮನಸ್ಸಿಲ್ಲದಿದ್ದರೂ ಪ್ರೀತಿಸೋದು,
ತೋರಿಕೆಯ ಪ್ರೀತಿ;
ಎಲ್ಲರನ್ನೂ ಎಲ್ಲವನ್ನೂ ಪ್ರೀತಿಸೋದು,
ನೈಸರ್ಗಿಕ ಪ್ರೀತಿ;
ಸಾವಿನ ಕೊನೆಗಳಿಗೆಯಲ್ಲೂ ಪ್ರೀತಿಸೋದೆ
ನಿಜವಾದ ಪ್ರೀತಿ
ಮನದೊಳಗಿನ ಅಂತರಾಳದ ಪ್ರೀತಿ
ಏಳೇಳು ಜನುಮದ ಪ್ರೀತಿ
ಅದು ತಾಯಿಯ ಪ್ರೀತಿ
ತಾಯಿ ತ್ಯಾಗದ ಮೂರ್ತಿ
ಆಕೆ ಕಾಮಧೇನುವಿನ ಪ್ರತಿ

- ಬಿಂದು

12 Mar 2016, 11:47 am

ಬೀಡಲ್ಲವಿದು ಗೂಡು

ಮನೆಯೊಂದು ಗೂಡು
ಮನಸೊಂದು ಗೂಡು
ಮನೆಯು ವಾಸಿಸುವ ಬೀಡು
ಮನಸ್ಸು ಎಲ್ಲರನ್ನು ಪ್ರೀತಿಸುವ ಜೇನುಗೂಡು

- ಬಿಂದು

12 Mar 2016, 11:26 am

ಅಂಜಿಕೆ ಎಂಬ ಸುಳ್ಳಿಯಲ್ಲಿ ಸಿ

ಜಗತ್ತಿನ ಕಣ್ಣಿಗೆ ಮನಸಿದು ಮನಸಿಲ್ದೆ ಇರೋ ತರಾ ಇದ್ದವಳ್ಳು ನನ್ವಳ್ಳು.

ಅಂಜಿಕೆ ಎಂಬ ಸುಳಿಯಲಿ ಸಿಲುಕಿ ಕೋಂಡವಳ್ಳು ನನ್ನವಳು

ಆದ್ರೆ ಆ ಮನಸ್ಸು ಅರಿತಿರುವ ಮನಸು ನನ್ನದು

ನಂಬಿಕೆಯೆ ಹಿಂಬಾಲಿಸಿ ಹೊಂಟಿರುವ
ಒಂಟಿ ಜೀವಿ

ಈ ಒಂಟಿ ಜೀವಿಗೆ
ಸಹಜಿವಿ ಆಗೊ ಬಯಕೆ

ಈ ಬಯಕೆಯ ತಿರಿಸೊ
ಕಾಮನ ಬಿಲ್ಲು ಅವಳಾಗತಳಾ

- ಪ್ರದೀಪ.ಮ.ಪಾಡಮುಖೆ

12 Mar 2016, 04:32 am

ಕರುನಾಡ ಸೇವಕ

ನಮಸ್ತೆ ಅಬಿಮಾನಿಗಳೇ ವಂದನೆ ಒಡನಾಡಿಗಳೇ
ನಾ ನಿಮ್ಮ ಸ್ನೇಹಿತನು ಸಿರಿ ಕನ್ನಡ ಸೇವಕನು

ಕರುನಾಡ ಸ್ನೇಹಿತರೆ ನನ್ನ ಬೆಳೆಸಿದ ದೇವರು
ಸಿರಿ ಕನ್ನಡ ತಾಯಿಯು ಬೆಳೆಸಿ ಹರಸಿದಳು
ನಾ ನಿಮ್ಮ ಮನಸಲ್ಲಿ ಮನೆಮಾಡಿ ಹಾರುವೆ
ನಾ ನಿಮ್ಮ ಹೆಸರಲ್ಲಿ ದ್ವನಿಮಾಡಿ ಹಾಡುವೆ
ಕರ ಎತ್ತಿಕೈಮುಗಿವೆ ನಾ ಕರುನಾಡ ಸೇವಕ

ಕಷ್ಟವನ್ನು ದೂರ ಮಾಡಿ ಒಗ್ಗಟ್ಟಿನಿಂದ ದುಡಿಯುವ
ಸುಖವನ್ನು ಹಂಚಿಕೊಂಡು ನಕ್ಕು ನಲಿದು ಬಾಳುವ
ಜಾತಿ ದರ್ಮವೆಲ್ಲ ಮರೆತು ಕರುನಾಡ ಕಟ್ಟುವ
ನ್ಯಾಯ ನೀತಿ ಸತ್ಯ ಎಂಬ ನಾಡಕಟ್ಟಿ ಮೆರೆಯುವ



ನಾಗರಾಜ ಎಸ್ ಎಲ್
ಸಂತೆಕೊಪ್ಪ
ತೀರ್ಥಹಳ್ಳಿ

- ನಾಗರಾಜ ಎಸ್ ಎಲ್ ಸಂತೆಕೊಪ್ಪ

12 Mar 2016, 02:51 am

ರೂಪ

ರೂಪದಿ ನೋಡಿದರೆ ಅವಳೊಂದು ಶಿಲೆ
ಹೃದಯದ ಸೆಳೆತಕೆ ಅವಳೇ ಒಂದು ಕಲೆ
ಮೌನದ ಮಾತಲ್ಲಿ ಅವಳೇ ಕೋಗಿಲೆ
ನಡೆಯಲ್ಲು ನುಡಿಯಲ್ಲು ಕಟ್ಟಲಾಗದು ಬೆಲೆ
ಒಟ್ಟಾರೆ ಹೇಳುವೆ ನೀನೆ ನನ್ನ ಶಿಲೆ




ನಾಗರಾಜ ಎಸ್ ಎಲ್

- ನಾಗರಾಜ ಎಸ್ ಎಲ್ ಸಂತೆಕೊಪ್ಪ

11 Mar 2016, 04:02 pm

ಅಮ್ಮ

ಉಸಿರಾಗಿ ಹೆಸರು ಇಡೊ ತನಕ
ಹೆಸರಾಗಿ ನುಡಿ ಹರಡೋ ತನಕ
ನುಡಿ ಒಡೆದು ಬದುಕಿರೊ ತನಕ
ಜೊತೆಯಾಗಿ ಜೀವನ ಕೊಟ್ಟಳು ತಾಯಿ



ನಾಗರಾಜ ಎಸ್ ಎಲ್

- ನಾಗರಾಜ ಎಸ್ ಎಲ್ ಸಂತೆಕೊಪ್ಪ

11 Mar 2016, 03:41 pm

ಪ್ರತಿಬಿಂಬನ ಕನಸ್ಸೊ

ನನ್ನ ಕಣ್ಣಿನ ಪ್ರತಿಬಿಂಬ ಆ ನೀರಲ್ಲಿ ಕಂಡಾಗ
ನನ್ನ ಮತ್ತೊಂದು ಪ್ರತಿಬಿಂಬ ಹೇಳಿತು
ನನ್ನ ಕಣ್ಣು ನ್ನು ನೋಡುತ್ತಾ ನೀನ್ಯಾರು........ ನೀನ್ಯಾರು.......

- ಪ್ರಸಾದ್

10 Mar 2016, 10:07 am