Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಅಂದ ಮತ್ತು ಪ್ರೀತಿ - 1

ಹೋಗಬ್ಯಾಡ್ರಿ ಯಾರ್ಯಾರೂ ಅಂದದ ಹಿoದ
ಅದರಾಗ ಇರೋದಿಲ್ಲ ಏನೇನೂ ಗಂಧ
ಈ ವಿಷಯದಲ್ಲಿ ನಾನಿನ್ನೂ ಕಂದ
ತಪ್ಪಿದ್ರೆ ಬೈಬ್ಯಾಡ್ರಿ ನೀವು ಬಂದ !!!

- BIRESH KOTI

20 Mar 2016, 04:20 am

ಮರೆಯಲಾಗುತ್ತಿಲ್ಲ...

ಈಗೀಗ ತೀರಾ ನೆನಪಾಗ್ತೀಯ ಕಣೇ..
ಅದೆಷ್ಟೇ
ಮುಚ್ಚಿಟ್ಟರೂ ಬಚ್ಚಿಟ್ಟರೂ
ಅದುಮಿಟ್ಟುಕೊಂಡ ನಿನ್ನೊಲವಿನ
ನನ್ನೆದೆಯ ಅಳುವನ್ನು, ಮುಂಜಾನೆ
ಹೊದ್ದ ಹೊದಿಕೆಯ ಮೈಗೆ ನಿನ್ನ
ನೆನೆವ ಭಾವುಕತೆಯಿಂದ ಉಕ್ಕಿಬರುವ
ಕಣ್ಣೀರ ಸ್ಪರ್ಶವ ಕೊಟ್ಟು, ನನಗೆ
ಗೊತ್ತಿಲ್ಲದಂತೆಯೇ ಅದರೊಂದಿಗೆ
ನನ್ನೆಲ್ಲಾ ನೋವನ್ನ ಹೇಳಿಬಿಡುವಷ್ಟು
ಎಷ್ಟೇ ಹಾದಿ ಬದಲಿಸಿ ನಡೆಯಲು
ಪ್ರಯತ್ನಿಸಿದರೂ, ತಿರುಗಿ ಬಂದು
ನನ್ನೆದೆಯ ಕದವನ್ನೇ ಬಡಿಯುವ
ನಿನ್ನ ನೆನಪುಗಳನ್ನು ಅಪ್ಪಿಕೊಳ್ಳದೆ
ತೊರೆಯಲಾಗುತ್ತಿಲ್ಲ ಕಣೇ
ಕರುಣೆಯಿಲ್ಲದ ಕಾಲವು ಕಸಿದುಕೊಂಡ
ನನ್ನೆಲ್ಲಾ ಖುಷಿಯನ್ನು ಬೇಡಲೂ ಆಗುತ್ತಿಲ್ಲ
ಕಂಗೆಡಿಸಿ ಕೊಲ್ಲುವ ನಿನ್ನ ನೆನಪುಗಳು
ನಿನ್ನಷ್ಟೇ ಮೊಂಡು ಕಣೇ
ನಿನ್ನ ಬೆಚ್ಚನೆಯ ಒಲವಿನ ಸಂಗಡವನ್ನಷ್ಷೇ
ಬಯಸಿದ ಈ ಬಡಪಾಯಿ ಜೀವಕ್ಕೆ
ತಬ್ಬಲಿತನದ ಬಿಸಿಮುಟ್ಟಿಸಿದ ಕಾಲವನ್ನು
ಶಪಿಸಲು ಆಗುತ್ತಿಲ್ಲ, ನನ್ನೊಳಗಿನ ನಿನ್ನ
ನಿನ್ನೊಳಗಿನ ನನ್ನ ಮರೆತು
ಜೀವಿಸಲೂ ಆಗುತ್ತಿಲ್ಲ. 'ನಾನ'.
-ಶ್ರೀನಾಥ್ ಪಿ ವಿಜಿ

- ಶ್ರೀನಾಥ್ ಪಿ ವಿಜಿ

18 Mar 2016, 09:45 pm

ನೀನೊಂದು ಮುಗಿಯದ ಮೌನ

ನಿನ್ನ ನೆನಪಲ್ಲೇ ಕವನ ಬರೆಯೊಕೆ
ನಾನು ಕವಿ ಅಲ್ಲ ಕಣೇ....

ನಿನ್ನ ನೆನಪಲೇ ಸತ್ತು ಬದುಕಿರುವ
ನಾನೊಬ್ಬ ಪ್ರೇಮಿ ಕಣೇ....

- Veeresh Biredar Jalahalli (Raichur)

16 Mar 2016, 03:33 pm

ಜೊತೆಗಿರದ ಜೀವ ಎಂದಿಗೂ ಜೀವಂತ

ಹೊರೆಯಾಗದ ಒಲವು ಮರೆಯಾಗದ ಮನವು
ಸಾವಿಲ್ಲದ ಸವಿ ನೆನಪುಗಳ ಹೊತ್ತು
ನಿನ್ನ ನೆನಪಲ್ಲೆ ಸಾಗುತಿದೆ ಈ ಹೃದಯ ದಿಕ್ಕಿಲ್ಲದಕಡೆಗೆ

- sanju Nayaka jalahalli (Raichur)

16 Mar 2016, 02:57 pm

ಚುಂಬನ

ಬೆಳದಿಂಗಳ ಬಾಲೆ ಎತ್ತ ಸುಳಿದೆ
ಕನಸಿನ ಚಂದಿರ ಆಗಸದ ತುಂಬೆಲ್ಲ
ನಸುನಗುತ್ತ ಹರಡಿದನು
ಮಲ್ಲಿಗೆಯ ಪರಿಮಳದೊಡನೆ ಮೆಲ್ಲಗೆ
ಬೆಳದಿಂಗಳ ನಡುವೆ ಕಾವ್ಯ ಚಂದ್ರಿಕೆಯಾಗಿ ಎದೆಗಿಳಿದೆ
ಸಾಗರದ ಕಡಲಂಚಿನಿಂದ ದೂರಾದ ಚಂದಿರನು
ನಕ್ಷತ್ರಗಳ ಚುಮ್ಮಿಸಿ ಕಡಲಲ್ಲಿ ಲೀನವಾದನು.
ಬೆಳದಿಂಗಳಿಗೆ ಕೊರತೆಯಿತ್ತು
ನಕ್ಷತ್ರಗಳ ಚುಂಬಿಸೋ ಆಸೆಯ ತುಟಿಗಿಳಿಯಿತು...

-ಕನ್ನಡಿಗ ರವಿಕುಮಾರ

- ರವಿಕುಮಾರ

14 Mar 2016, 06:08 pm

ಮುತ್ತು ಕೈ ತುತ್ತು

ಕಡಲೊಳಗಿನ ಈ ಸುಂದರ ಮುತ್ತು
ಕೊರಳಿನ ಅಲಂಕಾರದ ಸೊಬಗಲ್ಲಿತ್ತು
ಬೆಳಗಿಂದ ಸಂಜೆವರೆಗಿನ ಕಾಲಹರಣದ ಹೊತ್ತು
ಜೀವನದ ಹಣೆಬರಹ ಬರಹ ಬರೆದಿತ್ತು
ಪ್ರೀತಿ ಇಂದ ಅಮ್ಮ ಕೊಟ್ಟ ಕೈ ತುತ್ತು
ಪ್ರತಿ ಜನ್ಮದಲ್ಲು ಬೆಲೆ ಕಟ್ಟಲಾಗದ ಮುತ್ತು

ನಾಗರಾಜ ಎಸ್ ಎಲ್

- ನಾಗರಾಜ ಎಸ್ ಎಲ್ ಸಂತೆಕೊಪ್ಪ

14 Mar 2016, 06:01 pm

ಬಯಕೆ

ಸವಿಯೋ ಜೇನಿಗೆ ಹೂವಿನ ಆಸೆ
ನಲಿಯೋ ಹೂವಿಗೆ ಹೆಣ್ಣಿನ ಆಸೆ
ನಗುವ ಹೆಣ್ಣಿಗೆ ಶೃಂಗಾರದ ಆಸೆ
ಈ ಶೃಂಗಾರದ ಹೆಣ್ಣು ಪ್ರಿತ್ಸೋ ಹೃದಯಕೆ ಆಸೆ


ನಾಗರಾಜ ಎಸ್ ಎಲ್

- ನಾಗರಾಜ ಎಸ್ ಎಲ್ ಸಂತೆಕೊಪ್ಪ

14 Mar 2016, 05:10 pm

ತಾಯಿಯ ಋಣ

ಕಾಣದ ದೇವರಿಗೆ ಕರ್ಮದ
ಕಾಣಿಕೆ ಕೊಡುವುದು ಅಧರ್ಮವಯ್ಯ
ನೋಡುವುದ ತೋರಿಸಿದ ಹೆತ್ತ ತಾಯಿಗೆ
ತಾಯಿನಾಡಿನ ಋಣ ತೀರಿಸುವುದೇ ಧರ್ಮವಯ್ಯ

- ನಾಗರಾಜ ಎಸ್ ಎಲ್ ಸಂತೆಕೊಪ್ಪ

14 Mar 2016, 04:03 pm

ಕಿಚ್ಚು

ನಾನು ನಾನಾಗೀಲ್ಲ ನನಗೇನೂ ಆಗಿಲ್ಲ
ಮನದೋಳು ಮಾತಿಲ್ಲ ಮೌನವೇ ಮನದತುಂಬೇಲ್ಲ,
ಜಾರುತ್ತಿರುವ ಕಂಬನಿಗೆ ಕಾರಣವಿಲ್ಲ ಉಡುಕಲೋರಟರೆ ಪ್ರಶ್ನೇಗೆ ಪ್ರಶ್ನೆಯೇ ಹೂರತು ಉತ್ತರದ ಸುಳಿವಿಲ್ಲ........?
ಸಂತಸಕ್ಕೇ ಹರ್ಷವಿಲ್ಲ, ದುಖ್ಖಕ್ಕೆ ಕಂಬನಿಯಿಲ್ಲ ಆದರೊ ಸಮಜದೊಳು ನಾ ಆಪಸಾಮನ್ಯೇನಲ್ಲ
ಕಾರಣ ಇದು ನನ್ನೋವರ್ವನ ವ್ಯತೆಯಲ್ಲ.
ಮೊಂಡಜನರು ಮೇಲೆಳುತ್ತಿಲ್ಲ ಭಂಡಜನರ ಹೂಡೆದುರುಳಿಸುತ್ತಿಲ್ಲ, ಆಡಂಭರತೆಯ ಆಮೀಷಾ ಬಿಸಿಯ ನೇತ್ತರ ಬಿರುಸು ಕೂಂಡೂಯ್ಯುತ್ತಿದೆ ವೀರರ ಬಂಡತನದೆಡೇಗೆ,
ಬದುಕೇಂಬುದೀಲ್ಲಿ ಬಣ್ಣವಿರದ ಬಯಲಾಟ.
ನಾನು ನಾನಾಗಿಲ್ಲ ನನಗೇನು ಆಗಿಲ್ಲ


- ಪುರುಷೋತ್ತಮ್ ತೀರ್ಥಪುರ

13 Mar 2016, 06:05 pm

ತಾಯಿ

ಮೋದಲ ಬಾರಿಯ ತೋದಲ ಮಾತಿಗೆ ಮೌನವಾದವಳು,
ತಪ್ಪುಮಾಡಿ ಬೇಪ್ಪಾದಾಗ ನಮ್ಮ ಮೌನಕ್ಕೆ ಮಾತಾದವಳು
ನೋಂದು ನೇಲಕ್ಕೂರಗಿದಾಗ ತಲೆಯ ನೇವರಿಸಿ
ಮತ್ತೋಮ್ಮೆ ಹೂಸ ಜನ್ಮವನಿತ್ತವಳು,
ಮಕ್ಕಳ ಹೀತಕ್ಕಾಗಿ ಸರ್ವಸ್ವವನು ಹೂತ್ತೆ ಹಿಟ್ಟವಳು
ಕೋಟಿ ಜನ್ಮಸಾಲದೆ ನೀನ್ನ ಋಣವ ತೀರಿಸಲು,,,,,,,

- ಪುರುಷೋತ್ತಮ್ ತೀರ್ಥಪುರ

13 Mar 2016, 05:31 pm