Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಬಡವ

ನಾನೇಕೆ ಬಡವ : ಮನೆಯ ಮಹಾಲಕ್ಷ್ಮಿ ಸಂಗಾತಿ ನೀ ಜೊತೆಯಿರುವಾಗ..!

ನಾನೇಕೆ ಬಡವ : ಮಾತಿನಲೇ ಧೈರ್ಯ ತುಂಬುವ ಅಪ್ಪನೇ ಜೊತೆಯಿರುವಾಗ...!

ನಾನೇಕೆ ಬಡವ : ಹಸಿವೇ ಇಲ್ಲದಂತೆ ನೋಡಿಕೊಳ್ಳುವ ಅಮ್ಮ ನೀ ಜೊತೆಯಿರುವಾಗ..!

ನಾನೇಕೆ ಬಡವ : ನನ್ನ ಕವನವಾ ಓದುವ ತುಂಬು ಬಳಗವೇ ಜೊತೆಯಿರುವಾಗ...!

@GIRISH SHARMA TUMKUR@

- Girish Sharma Tumkur

29 Dec 2022, 04:46 pm

ಹಣೆಬರಹ..

ಬ್ರಹ್ಮ ಬರೆದ ಹಣೆಬರಹ ಸರಿಯಿಲ್ಲವೆಂದು ತಿಳಿದು..!
ಹೊರಟೆ ಹೊಸದಾಗಿ ಬರೆಯುವೆನೆಂದು ಲೇಖನಿಯಾ ಹಿಡಿದು..

ತಿದ್ದಲೋ ಅಥವಾ ಅಳಿಸಿ ಹೊಸದಾಗಿ ಬರೆಯಲೋ ಎಂಬ ಅರಿವೇ ಇಲ್ಲದೇ...
ದೇವರನ್ನೇ ಕೇಳಿದೆ , ಹೇಗೆ ಬರೆಯಲಿ ಏನು ಮಾಡಲಿ ಎಂದು..!
ದೇವರು ಹೇಳಿದ...
ಹುಚ್ಚಪ್ಪಾ !
ಬ್ರಹ್ಮ ಬರೆದ ಹಾಳೆಯಲಿ ಅಂತ್ಯವೇ ಇಲ್ಲ..! ಬರೆದದ್ದು ಅಳಿಸೋಕೆ ಅವನಿಗೇ ಆಗಲ್ಲ..!
ಕಾರಣ
ಅವನ ಹಣೆಬರಹ ಅವನಿಗೇ ತಿಳಿದಿರಲಿಲ್ಲ..!

@GIRISH SHARMA TUMKUR@

- Girish Sharma Tumkur

29 Dec 2022, 04:42 pm

ಬಯಕೆ..

ಕಾಣದ ಕಣ್ಣಿಗೆ ನೋಡುವ ಬಯಕೆ...
ಕೇಳದ ಕಿವಿಗಳಿಗೆ ನಿನ್ನ ಮುದ್ದು ಮಾತಿನ ಬಯಕೆ..

ಮೂಕ ನಾಲಿಗೆಗೆ ನಿನ್ನ ಹೊಗಳುವ ಬಯಕೆ...
ಮಾತು ಕೇಳದ ಕನಸಿಗೆ ನಿನ್ನ ಮನಸು ಸೇರೋ ಬಯಕೆ..!

@GIRISH SHARMA TUMKUR@

- Girish Sharma Tumkur

29 Dec 2022, 04:39 pm

ಬದುಕು..

ಬದುಕು ನೀನೆಂದುಕೊಂಡ ಹಾಗೇ ಇರುವುದಿಲ್ಲ..
ಇಚ್ಚಿಸಿದ್ದು ಇಲ್ಲ, ಹಚ್ಚಿಕೊಂಡಿದ್ದು ಇಲ್ಲ, ಬಯಸಿದ್ದು ಮೊದಲೇ ಇಲ್ಲ..!
ಬದುಕು ಬವಣೆ, ಬದುಕು ಜೀವನದಾ ಹೊಣೆ, ಬದುಕು ಬರಹವಿಲ್ಲದಾ ಖಾಲಿಯಾ ಹಣೆ..!
ಆದರೂ
ನೀನು ಬದುಕು, ಬದುಕಲು ಬದುಕು, ಬಯಸಿದ ಬದುಕು ಬಳಲುವವರೆಗೂ ಬದುಕು, ಜವರಾಯ ಕರೆವವರೆಗೂ ಬಂದಿದ್ದ ಎದುರಿಸಿ ಬದುಕು..!
ಹಾಕಬೇಡ ಹಳೆಯ ಘಟನೆಗಳ ಮೆಲುಕು..!
ಮುಂದೆ ಇದೆ ನವನವೀನ ಬದುಕಿನ ಬೆಳಕು..!
ಅದಕ್ಕಾದರೂ ನೀನು ಆನಂದದೀ ಬದುಕು, ಬದುಕು ಬದುಕು..!!!!

@GIRISH SHARMA TUMKUR@

- Girish Sharma Tumkur

29 Dec 2022, 04:38 pm

ನಿನ್ನೊಳು ನೀನಿರು...

ಮನದಿ ದುಗುಡ ಬಡೆ,
ಯಾರಿಲ್ಲ ನಿನ್ನ ಕಡೆ,
ಕಾಣುವರು ನಿನ್ನ ಕಡೆಗಿಂತ ಕಡೆ,
ಇನ್ನೂ ಕಾದು ನೋಡಬೇಕೆ
ನಿನ್ನವರೆನ್ನುವವರ ನಡೆ.
ಸಾಕು ಮಾಡು ಮನವೇ
ಎಲ್ಲ ನಮ್ಮವರೆನ್ನುವ
ನಿನ್ನ ಈ ಹುಚ್ಚು ನಡೆ...

ತರವಲ್ಲ ಓ ಮನವೇ ಬಹು ನಿರೀಕ್ಷೆ,
ಇರಬಹುದು ನಿನಗೆ ಇದು ಪರೀಕ್ಷೆ,
ನಿನ್ನಂತೆ ನೀನಿರಿವಾಗ ಏಕೆ ಆಪೇಕ್ಷೆ...

ಇರುತ್ತಿದ್ದೆ ನಿನ್ನಂತೆ ನೀ,
ಇರುತೀಯ ನಿನ್ನಂತೆ ನೀ,
ಇದ್ದ ಇರುವ ಅಂತರದಿ ನಡೆವ
ಅಂತರಂಗದ ಕದನವ ಜಯಿಸಿ ಮುನ್ನಡೆ ಮನವೆ,
ನಿನಗಿದೆ ಅಂತರಂಗದ ನಂತರದ ಪರಮಾತ್ಮನ ಒಲವೆ...

ಸಾಗಬೇಕಿದೆ ಬಾಳು
ಇನ್ನು ಸಾಕು ಮಾಡು ಈ ಗೋಳು...

ನಿನ್ನವರೆಂಬರು ನಿನ್ನವರೇ ಆಗಿರ್ದಡೇನು, ಇರದಿರ್ದಡೇನು...

ಸಾಗು ನೀ ಮುಂದೆ, ಬಹುದು ಅದು ಬರಲಿ,
ಆತ್ಮನ ಆತ್ಮ ಪರಮಾತ್ಮನ ದಯೆಯೊಂದಿರಲಿ...

ಯಾರು ಏನೆಂದರೇನು,
ಇರಲು ನಿನ್ನೊಳು ನೀನು,
ಬದುಕು ಸವಿ ಜೇನು...

ನಿನ್ನೊಳು ನೀನಿರು ಮನವೇ,
ನಿನ್ನೊಳು ನೀನಿರು...
---- tippu ----


- tippu

29 Dec 2022, 11:52 am

ಅದೇನೊ ಹೊಸತನ

ಅದೇನೊ ಹೊಸತನ,
ಬಾಲ್ಯದ ಜೀವನ.
ಅದ್ಭುತ ಗೆಳೆತನ
ಮೂಡಿಸುವುದು
ಬಾಳಲ್ಲಿ ಹೊಸ
ಆಶಾಕಿರಣ.
ಇನ್ನೆಕೆ ಬೇಕು
ಹಗೆತನ.
ಸುಮನ್ನೇ ಅನುಭವಿಸಿ
ನಡೆಸಿ, ಬಾಳೊಂದು
ಸುಂದರ ಯಾನ........


ಸ್ವಾತಿ S..........

- Swati S

28 Dec 2022, 12:01 am

ನಂಬಿದವರು ನಂಬದವರು...

ನಂಬಿದವರು ಇವರು ನಮ್ಮವರೆಂದುಕೊಂಬರು,
ನಂಬದವರು ಯಾರನ್ನೂ ನಮ್ಮವರೆಂದುಕೊಂಬರು,
ಇವರು ಅವರೇ ಬಂದು ಹೋಗುವ ಬಂಧು ಬಾಂಧವರು,
ಇವರಿಗೆ ಬಂಧವೆಲ್ಲ ತಮ್ಮ ಪತಿ /ಪತ್ನಿ ಮಕ್ಕಳು,
ಇವರು ಕೇಳಲು ಒಲ್ಲ ಪರರ ಗೋಳು,
ಆದರವರ ಸೊಲ್ಲ ಕೇಳಲು ಬೇಕು ಪರರ ಬಾಳು,
ಹಿಂದೂ,ಇಂದೂ, ಎಂದೆಂದೂ ಇಲ್ಲ,
ಇವರು ಬದಲಾಗೋ ಮಾತೇ ಇಲ್ಲ,
ಬೆಕ್ಕು ಹಾಲು ಕುಡಿವಂತೆ ಇವರು ಇರುವರಲ್ಲ,
ಇವರ ಆಟವನು ಜಗದೀಶನೊಬ್ಬನೇ ಬಲ್ಲ,
ಮುಂದೊಂದು ದಿನ ಅವರಾಟ ಬಯಲು ಬಿಡಲೊಲ್ಲ,
ಕಾಲ ಬಂದಾಗ ಮಹಾಕಾಲ ಆಟ ಆಡದಿರಾನೊಲ್ಲ,
ಧಿಕ್ಕಾರವಿರಲಿ ಅವರ ಬಾಳ ನಡೆಗೆ,
ಅವರವರ ಬುತ್ತಿ ಅವರ ಹೆಗಲಿಗೆ....
----- tippu -----

- tippu

26 Dec 2022, 10:32 pm

ನೇರ_ಕಾರಣ_ನೀನೆ..

"ಪಲ್ಲವಿ ಇಲ್ಲದ ಚರಣ.. ನೀ_ಇಲ್ಲದ ನಾನು !
ಭಾವನೆಗಳೆ ಇಲ್ಲದ ಮನವು.. ನೀ_ಇಲ್ಲದ ನಾನು !
ಮೌನದಿ ಮೋಡಿಯ ಮಾಡಿ.. ಆಗಿಹೆ ಹತ್ತಿರ !
ಮಾತೆಲ್ಲ ಕೂಡಿಟ್ಟಿರುವೆಯ.. ಮಾತಾಡೆ ಮಂದಾರ !!"
"ಈ ನಡುವೆ ಪ್ರತಿ ಸ್ವಪ್ನವು.. ನಿನದೆ_ಕಣೇ !
ಈ ಮನದಿ ನಗು_ತಂದಿರುವಳು.. ನೀನೆ_ಕಣೇ !
ಏರುಪೇರಿನ.. ಈ_ಬದುಕಿನಲ್ಲಿ !
ಎಂದು ಕೂಡ ಇರು_ನೀ.. ಜೊತೆಯಲ್ಲಿ !
ಸುಂದರ ಕ್ಷಣಗಳ ಉಗಮ.. ತನ್ನದೆ ರೀತಿಯಲ್ಲಿ !
ನೇರ_ಕಾರಣ ನೀನೆ.. ನಿನ್ನದೆ ರೀತಿಯಲ್ಲಿ !!"
ಎಮ್.ಎಸ್.ಭೋವಿ...✍️

- mani_s_bhovi

25 Dec 2022, 07:01 pm

ಸ್ಮಶಾನ

ಸದಾ ಮೌನಿಯಾಗಿರುವೆ ನೀನು
ಅಳು ಆಕ್ರಂದನಗಳ ಕೊನೆಯ ತಾಣ ನೀನು
ಸಂಬಂಧಿಕರು ಸ್ನೇಹಿತರು ಬರುವರು ಸ್ಮಶಾನದ ಮುಂಭಾಗದವರೆಗೂ
ಉಸಿರು ನಿಂತವನಿಗೆ ಮಾತ್ರ ಅಂತಿಮ ದಿನವದು

ಸಾಕಷ್ಟು ಹಣಕೊಟ್ಟು ಖರೀದಿಸುವರು ಭೂಮಿಯನು
ಆದರೆ ಪ್ರಾಣವನು ಕೊಟ್ಟರೆ ಮಾತ್ರ ನೀ ಕೊಡುವುದು ಜಾಗವನು
ಗರ್ವ, 'ನಾನು' ಎಂಬ ಅಹಂಕಾರ ಸುಡುವುದಲ್ಲಿ
ನಿಶ್ಚಿಂತೆಯರಾದ ಕೊನೆಯ ನಿದ್ರೆ ಪ್ರಾರಂಭವಾಗುವುದಲ್ಲಿ


ಯಾವ ಶ್ರೀಮಂತನಿಗು, ಬಡವನಿಗೂ ಬೇಧವಿಲ್ಲ ನಿನ್ನಲ್ಲಿ
ಸರ್ವರಿಗು ಸಮಪಾಲು ಸಿಗುವುದಲ್ಲಿ
ಏನೇ ಪ್ರೀತಿ ಮಾಡಿದರು ಬರುವುದಿಲ್ಲ ಜೊತೆಗೆ
ನೀನೊಬ್ಬನೆ ಸಾಗಬೇಕು ಚಿತೆಗೆ..

- Tanuja.K

24 Dec 2022, 11:10 pm

ಹೃದಯದ ಚೋರ

ಏನನು ಹೇಳಲಿ ನನ್ನ ಮನಕದ್ದ ಗೆಳೆಯನಿಗೆ
ಹೇಗೆ ಹೇಳಲಿ ನನ್ನ ಹೃದಯದ ಚೋರನಿಗೆ
ಕಾಳಜಿಗೂ ನೀನೆ ಒಡೆಯ
ಕಾರಣವಿಲ್ಲ ಪ್ರೀತಿಗೆ ಇನಿಯ

ಒಮ್ಮೆ ನಿನ್ನ ಕೊರಳ ಬಳಸಿ ಅಪ್ಪುವಾಸೆ
ನನ್ನಲೇ ನಿನ್ನ ಸೆಳೆವಾಸೆ
ಮತ್ತೊಮ್ಮೆ ನಿನ್ನ ಎದೆಯೊರಗಿ ತಬ್ಬುವಾಸೆ
ನಿನ್ನ ಕರದಲಿ ಮುಗವಿರಿಸುವಾಸೆ

ಕಣ್ಣಲ್ಲಿ ಕಣ್ಣಿಡಲು ಒಮ್ಮೊಮ್ಮೆ ಆತಂಕ
ಏಕೆ ಹೀಗೆ ನನ್ನ ಸೇರಿರುವ ನಾಯಕ
ಮನಸಾರೆ ಮೆಚ್ಚಿರುವೆ ನೀ ನನ್ನವನು ಅನಾಮಿಕ
ಈ ತನುವಿಗೆ ಎಂದಿದ್ದರೂ ನೀನೆ ಸಖ

- Tanuja.K

24 Dec 2022, 10:35 pm