Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

❤️ನಾ ನಿನ್ನ ಪ್ರೀತಿಸುವೆ❤️.. ?

ನೆನಪಿಲ್ಲ ನನಗೆ ನಿನ್ನ ಪ್ರೀತಿಸಲು ಶುರು ಮಾಡಿದ ಕ್ಷಣ
ಹುಚ್ಚನಾದೇನು ನನ್ನೊಳಗೆ ನಿನ್ನ ನೋಡುತಲೂ ದಿನ
ಪ್ರತಿದಿನವೂ ಹಂಬಲಿಸುತಲಿತ್ತು ನಿನ್ನ ನೋಡಲು ಈ ನನ್ನ ಮನ
ಉತ್ತರ ದೊರಕಿತು ಒಂದು ದಿನ ನಿನ್ನ ಮುಗ್ಧ ನಗುಮುಖವೆ ಇದಕೆಲ್ಲ ಕಾರಣ
ಆಹಾ ಅದೆಂತಹ ವರ್ಣಿಸಲಾಗದ ಅಂದಂದ ನಗು ನಿಂದು
ಅನಿಸುತಿದೆ ಆ ನಗುವೇ ಈ ನನ್ನ ಬಂಗಾರಿಯ ಆಭರಣವೆಂದು
ತಿಳಿದಿರುವೆ ಯಾವತ್ತಿದ್ದರೂ ಭವಿಯ ನಗು ನನಗೆ ಸ್ವಂತವೆಂದು
ಚಿರಕಾಲ ನಗುತಿರು ನೀ ಹೀಗೆ ಎಂದೆಂದೂ
ಅಂತೂ ಇಂತು ಕೂಡಿ ಬಂತು ನನ್ನ ಪ್ರೇಮ ನಿವೇದನೆಯನ್ನುನಿನಗೆ ತಿಳಿಸುವ ಸಮಯ ದಯವಿಟ್ಟು ಬಿಟ್ಟುಹೋಗಬೇಡ ನಿನ್ನ ದಮ್ಮಯ್ಯ

- ಚಂದ್ರಶೇಖರ

08 Feb 2025, 02:46 pm

ನೆನಪು?

ಅವಳು ವoತರಾ ಸಿಹಿಯಾಗಿರ್ರೋ ಕರದಂಟು ?️
ಅವಳನ್ನ ಮುಟ್ಟಿದ್ರೆ ಆಗುತ್ತೆ ನನ್ ಕಯ್ ಅoಟ ಅoಟು
ಅವಳೇ ನನ್ ಲೈಫನ ಪರ್ಮನೆಂಟು
ಅವಳನ್ನ ನೆನ್ಸ್ಕೊಂಡು ನಾನ್ ಹೊಡೀತಿನಿ ಇಂಡಿಮೈಂಟು ?

ಜೀವಾ (instagram jeevan0118)

ಕಣ್ಣು ಮುಚ್ಚಿ ಕುಳಿತಾಗ ಕನಸಲ್ಲಿ ಕಂಡವಳು ನೀನು ಕಣ್ಣು ಬಿಟ್ಟು ನೋಡಿದಾಗ ಮಾಯವಾದವಳು ನೀನು


- Jeeva0118

08 Feb 2025, 01:36 pm

ಕರುಣೆ ಇಲ್ಲದ ರಾಣಿ...???

ಕರುಣೆ ಇಲ್ಲದವಳು....
ಕಣ್ಣ ಮುಚ್ಚಿದರೇ ಇಂಪಾಗಿ ಕಾಣುವಳು...
ಕಂಪಿನ ಜೋತೆ ಕೈಜಾರಿದವಳು...
ವಜ್ರದಾ ಮಿನುಗು ಕಣ್ಣವಳು. . . .
ನನ್ನ ಕಣ್ಣು ಅಂಚಲ್ಲಿ ನೀರು ಇಟ್ಟು ಹೋದವಳು. . . .
ಆದರು ಕಾಯುತ್ತಿದೆ ಮನಸ್ಸು ಎನ್ನುತಾ ಬರುವಳು ಬರುವಳು

own line of Dachu(A) ...

I am waiting U....??

- Dachu ಕವಿ

30 Jan 2025, 12:39 am

ಅಪ್ಪನ ಹೆಗಲು - ಅಮ್ಮನ ಮಡಿಲು

ಪಲ್ಲಕ್ಕಿಯಂತ ಅಪ್ಪನ ಹೆಗಲು
ರಕ್ಷಾ ಕವಚದಂತ ಅಮ್ಮನ ಮಡಿಲು
ಜೋಡಿ ಕಣ್ಣಂತಿವೆ ಆಗುತ್ತಿಲ್ಲ ಪ್ರತ್ಯೇಕಿಸಲು
ಬಲು ಕಷ್ಟ ಯಾವುದಾದರೊಂದನ್ನು ಆಯ್ಕೆ ಮಾಡಲು

ಜೀವನೀಡಲು ನೋವುಂಡಿದೆ ಒಡಲು
ಜೀವನ ರೂಪಿಸಲು ಶ್ರಮಿಸಿದೆ ಹಗಲಿರುಳು
ಜೋಡಿ ಕಣ್ಣಂತಿವೆ ಆಗುತ್ತಿಲ್ಲ ಬೇರ್ಪಡಿಸಲು
ಬಲು ಕಷ್ಟ ಯಾವುದಾದರೊಂದನ್ನು ಆಯ್ಕೆ ಮಾಡಲು

ಬಟ್ಟೆ ಬೇಡಂತೆ ನನಗೊಬ್ಬನಿಗೆ ಕೊಡಿಸಲು
ಹೊಟ್ಟೆತುಂಬಿದೆಯಂತೆ ನನಗಷ್ಟೇ ತಿನಿಸಲು
ಜೋಡಿ ಕಣ್ಣಂತಿವೆ ಆಗುತ್ತಿಲ್ಲ ಅದಲು ಬದಲು
ಬಲು ಕಷ್ಟ ಯಾವುದಾದರೊಂದನ್ನು ಆಯ್ಕೆ ಮಾಡಲು

ಒಂದು ಅಕ್ಷಯ ಪಾತ್ರೆ ಕೇಳಿದ್ದ ಕೊಡಿಸಲು
ಇನ್ನೊಂದು ಗುರುವಿನ ಸ್ಥಾನಕ್ಕೆ ಮೊದಲು
ಜೋಡಿ ಕಣ್ಣಂತಿವೆ ಆಗುತ್ತಿಲ್ಲ ವ್ಯತ್ಯಾಸ ಹೇಳಲು
ಬಲು ಕಷ್ಟ ಯಾವುದಾದರೊಂದನ್ನು ಆಯ್ಕೆ ಮಾಡಲು

✍? ಯಕ್ಷ

- pavan

27 Jan 2025, 11:27 am

ಕವನದ ಶೀರ್ಷಿಕೆ ಗಣರಾಜ್ಯೋತ್ಸವ.


ಹೂದಳ.ಗಳಂತೆ ರಾಜ್ಯಗಳ ಬಂಧಿಸಿದೆ ಭಾರತ,
ಜಗಕೆ ಗುರುವಾಗಿದೆ ಒಂದೇ ಮಾತರಂ ಗೀತೆ ಹಾಡುತ.

ವಿವಿಧ ಧರ್ಮಗಳ ನೆಲೆಗೆ ದೇಶವೇ ತೊಟ್ಟಿಲು,
ತಾಯ ಸ್ಥನ್ಯಪಾನದ ಮಂತ್ರವೇ ಏಕತೆಯ ಸಾಲು.

ಪರಕೀಯರ ಸೆರೆಯಿಂದ ಮುಕ್ತರಾದ ಭಾರತೀಯರಿಗೆ,
ಬೇಕಿತ್ತು ಮಾರ್ಗ ಸೂಚಿ ಭವಿಷ್ಯದ ಭದ್ರತೆಗೆ.

ನೇತಾರರೆಲ್ಲ ಸೇರಿ, ದೇಶ ವಿದೇಶಗಳಿಗೆ ಹಾರಿ,
ಜ್ಞಾನಾಮೃತವ ಹೀರಿ, ಸುಗಮಗೊಳಿಸಿದರು ಸಾರ್ವಭೌಮತ್ವದ ದಾರಿ.

ಮತದಾನ ನಿರ್ಧರಿಸುವುದು ಪ್ರಜೆಗಳ ಪ್ರತಿನಿಧಿಗಳನ್ನ,
ಸಂವಿಧಾನ ನಿರ್ದೇಶಿಸುವುದು ಸರ್ವರ ಕಲ್ಯಾಣಕ್ಕಾಗಿ ದುಡಿಯುವುದನ್ನ.

ಕೋಟಿ ಕೋಟಿ ತಾರೆಗಳ ಸೂರಿಗೊಬ್ಬರೇ ರಾಷ್ಟ್ರಪತಿ,
ಸ್ವರಾಜ್ಯದ ನೆನಪಿನ ದಿನದಂದು ಜಾರಿಯಾದ ಸುವ್ಯವಸ್ಥಿತ ಕಾನೂನುಗಳ ಹೊತ್ತಿಗೆಯೇ ಸರ್ಕಾರದ ಅಧಿಪತಿ.

ತಲೆಬಾಗಿ ನಮಿಸುವ ನಾಡಗುಡಿಗೆ,
ಉಕ್ಕುರಳ ಜಯ ಘೋಷ ಗಣರಾಜ್ಯೋತ್ಸವಕ್ಕೆ,
ಪ್ರಸ್ತಾವನೆ ಪುಟದಂತೆ ಸಾಗುವ ದೇಶದ ಏಳಿಗೆಗೆ.

- nagamani Kanaka

26 Jan 2025, 10:49 pm

ಹುಟ್ಟು ಹಬ್ಬದ ಶುಭಾಶಯಗಳು ನನ್ನ ಪ್ರೀತಿಯ ಗೆಳತಿ...

ನನ್ನ ಜೀವದ ಗೆಳತಿ ನೀನು
ನಿನ್ನ ಸ್ನೇಹದಲಿ ಅರಿತೆ ನನ್ನನ್ನು..
ನಾ ಹಾಗೆ ಸುಮ್ಮನೆ ಕುಳಿತಿರಲು
ನಿನಗಾಗಿ ಬರೆದ ಕವತಿಯೊಂದನು.
ಯಾರಲ್ಲೂ ಸಿಗದಷ್ಟು ಆತ್ಮೀಯ
ಬಾಂದವ್ಯ ಕೊಟ್ಟಿದ್ದು ನೀನು
ಎಷ್ಟು ಹೇಳಿದರೂ ತೀರದಷ್ಟು
ಪದಗಳುಂಟು ನಿನ್ನಲ್ಲಿ
ಇಷ್ಟೆ ಪದಗಳು ಸಾಲದು ನಿನ್ನ
ವರ್ಣಿಸಲು ನನಗಿಲ್ಲಿ
ಇಂದು ದೇವರಲ್ಲಿ ಪರ್ಥಿಸುವೆ ನಾನು
ಸದಾ ನಗು ನಗುತಾ ಖುಷಿಯಾಗಿ
ಇರಬೇಕು ನೀನು...
ಹುಟ್ಟು ಹಬ್ಬದ ಶುಭಾಶಯಗಳು
ನನ್ನ ಪ್ರೀತಿಯ ಗೆಳತಿ....
ಎಮ್.ಎಸ್.ಭೋವಿ...✍️

- mani_s_bhovi

26 Jan 2025, 10:02 pm

ದುಡ್ಡೆ ದೊಡ್ಡಪ್ಪ

ನಿಯತ್ತು ನಾಯಿಗು ಇರುತ್ತೆ ಆ ನಾಯಿ ಪಟ್ಟ ನಿನಗೆ ಬೇಕಾ
ಬೇಡ ಅಂದ್ರೇ ನಿನ್ನ ನಿಯತ್ತನ್ನ ನೀರಲ್ಲಿ ತೊಳೆದುಬಿಟ್ಟು
ಹಣ ಮಾಡು ಜನ ನಿನ್ನ ಗುಣ ನೋಡಿ ಸಲಾಂ ಹೊಡಿಯಲ್ಲ
ಹಣ ನೋಡಿ ಸಲಾಂ ಹೊಡೀತಾರೆ,,,,ಸೂರಿ.....✍️?

- sureshraj

26 Jan 2025, 03:02 pm

ಕನಸು ಕಂಡೆ ನಾ

ನಿನ್ನನು ನೋಡುವ ಆಸೆ ಈ ಮನಕ್ಕೆ
ಕನಸಿನಲು ನಿನ್ನ ಕಣ್ಣು ಕಂಡೆ ನಾ
ಮನಸಿನಲು ನಿನ್ನ ಹೆಸರು ಹೇಳಿದರೆ ಖುಷಿ ಪಟ್ಟ ಕನಸು ಕಂಡೆ ನಾ
ಪ್ರೀತಿ ಸೇರಿಸಿ ಕೊಬ್ಬರಿವಡಿ ಮಾಡಿಕೊಡುವ ಕನಸು ಕಂಡೆ ನಾ
ಪ್ರೀತಿಯಿಂದ ಅಪ್ಪಿಕೊಂಡಿದ್ದು ಕನಸು ಕಂಡೆ ನಾ
ಅಮ್ಮ ಅಪ್ಪ ಜೊತೆಗು ದೇಶ ಸುತ್ತಿದು ಕನಸು ಕಂಡೆ ನಾ
ದಂಪತಿಯಾಗಿ ಮಡಿಲೇ ಅಡಗಿ ಮಾಡುವ ಕನಸು ಕಂಡೆ ನಾ
ನಿನ್ನ ಮರೆಯುವ ಕನಸನ್ನು ಏಕೆ ಕಾಣಲಿಲ್ಲ,
ಏಕೆಂದರೆ ನನಸಾಗದ ಕನಸಿಗೆ ಹಗಲಲ್ಲೂ ಕನಸು ಕಾಣುತಿರುವ ಪೆದ್ದು ನಾನು ?

- Ambika Kulkarni

26 Jan 2025, 12:03 am

*ಕರುನಾಡ ಕನ್ನಡ ರಾಜೇಶ್ವರಿ ಕನ್ನಡ ಕಂದನ ಭುವನೇಶ್ವರಿ
ಕದಂಬ ಕಲಿನಾಡ ಕಲಾ ಈಶ್ವರಿ

ನಿನ್ನ ಭಾಷೆಗೆ ಶಾಸ್ತ್ರೀಯ ಸಮ್ಮಾನ
ನಿರುಪಮ ಅನುಪಮ ಅಭಿಮಾನ

ಅಷ್ಟ ಜ್ಞಾನಪೀಠ ನಿನ್ನ ಮಡಿಲಿಗೆ
ಅಗ್ಗಳಿಕೆ ಚಂದನನಾಡಿನ ನುಡಿಗೆ

ಭಾರತೀಯ ಚಲಾವಣೆ ನೋಟಿನಲಿ
ನಾಲ್ಕರ ನೋಟವು ಕಸ್ತೂರಿಯಲಿ

ಕನ್ನಡತಿ ಸುಂದರ ಲಿಪಿಗಳ ರಾಣಿ
ಸನ್ನಡತೆಯ ಸಂಸ್ಕಾರಗಳಗ್ರಣಿ

ವಿಧಾನಸೌಧದಂಗಳದಿ ನಿನ್ನ ವೈಭವ
ವಿಶ್ವಕೆ ಬೆರಗು ನಿನ್ನ ದರ್ಶನ ಸ್ವರೂಪ

ಕನ್ನಡಿಗನಿದು ಗರ್ವ ಪ್ರತಿಷ್ಠಾನ ಪರ್ವ
ಜಯ ರಾಜರಾಜೇಶ್ವರಿ ಭುವನೇಶ್ವರಿ



ಜಿ.ಹೆಚ್.ಸಂಕಪ್ಪ

- ಕವಿಕೂಸು

25 Jan 2025, 06:25 pm

ಶಿಸುನಾಳ ಶರೀಫರು ಪದ್ಯ

ಶುದ್ಧ ಜ್ಞಾನ ಮೇಲೇರಿ
ದಾರಿದ್ರ್ಯ ದೇಹ ಸುಟ್ಟು
ಹೊಗೆಯು ಹಾರುವುದು
ಬುದ್ದಿವಂತರ ಹೇಳೆದು
ವರಸಿದ್ಧ ಶಿಸುನಾಳ ದೀಶರ ತೋರ್ವುದು,,,, ✍️??

- sureshraj

25 Jan 2025, 06:40 am