Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಚನ್ನ ಬಸವ ವಚನ

ನಂಬದೆ ಕೆಟ್ಟರು ಪರವಾಗಿಲ್ಲ ನಂಬಿ ಕೆಡಬೇಡ
ಕೊಡದೆ ಕೆಟ್ಟರು ಪರವಾಗಿಲ್ಲ ಕೊಟ್ಟು ಕೆಡಬೇಡ
ಮುಟ್ಟದೆ ಕೆಟ್ಟರು ಪರವಾಗಿಲ್ಲ ಮುಟ್ಟಿ ಕೆಡಬೇಡ
ಚನ್ನ ಬಸವ ಕೇಳಯ್ಯ
ಬಂದು ನೀ ನೆಲೆಸಿದರು ಪರವಾಗಿಲ್ಲ ಆದ್ರೆ
ಬರೆದೆ ಈ ಬಡವನ ಮರಿಬೇಡ

ಅನಾಮಿಕ ಸರ್ವಜ್ಞ

- Nisha anjum

08 Jan 2023, 08:35 pm

ಪಾಠ_ಹೇಳಿದಳು_ನನಗಿಲ್ಲಿ..

"ಭಾವದ ಆಟದಿ.. ಬಾಡಿದ ಮನವಿದು !
ನೋವಿನ ಒಡಲಲ್ಲೆ.. ನರಳಿದೆ ದಿನವಿದು !
ಬೇಕಿತ್ತಾ ?. ಒಲವಿನ ಸಹವಾಸವು..
ಹಾಯಾಗಿ ಇದ್ದಲ್ಲೊ ಓ_ಮನವೇ !
ವಿರಹದ ಅಪ್ಪುಗೆ ಬೇಕೆಂದಲೇ..
ಒಲವಿಗೆ ಒಳಗಾದಂತಿದೆ ಮನವೇ !
ಶುರುವಿನಲ್ಲಿ ಇದ್ದ ಭಾವಗಳು..
ಈಗ ಇಲ್ಲವಂತೆ ಅವಳಲ್ಲಿ !
ಕಾಲಸರಿದ ಹಾಗೆ ಮಾಯವಾಗೋ_ಕುರಿತು..
ಪಾಠ_ಹೇಳಿದಳು ನನಗಿಲ್ಲಿ !!"
ಎಮ್.ಎಸ್.ಭೋವಿ...✍️

- mani_s_bhovi

08 Jan 2023, 07:10 pm

ನೀನೇ ನನಗೆಲ್ಲ

ಈ ಪ್ರಶ್ನೆ ಉತ್ತರದ ಬದುಕಿನಲ್ಲಿ
ನೀ ನನಗೇನಾಗಬೇಕೊ ನಾ ನಿನಗೇನಾಗಬೇಕೊ
ತಿಳಿದಿಲ್ಲ
ನನ್ನ ಕಲ್ಪನೆಯ ಬದುಕಿನಲಿ ನೀನೆ ನನಗೆಲ್ಲ

ಇಲ್ಲಿ ಪ್ರಶ್ನೆಯು ನನ್ನದೆ, ಉತ್ತರವು ನನ್ನದೆ
ಪ್ರೀತಿ, ಪ್ರೇಮ, ಕಾಳಜಿ, ಅಕ್ಕರೆ, ಸಂತೋಷ
ಎಲ್ಲವೂ ನನ್ನದೆ

ಕಾದಿದೆ ಜೀವ ನಿನ್ನ ಬರುವಿಕೆಗಾಗಿ
ಈ ಕಣ್ಣು ಮಣ್ಣು ಸೇರೊ ಮುನ್ನ
ಬಂದುಬಿಡು ನನಗಾಗಿ...

- Tanuja.K

07 Jan 2023, 11:23 pm

ಕವನಗಳ ಪ್ರೀತಿ ನಿನಗಾಗಿ

ನನ್ನ ಕವನದ ಪ್ರತಿ ಪದವು ನಿನ್ನ ಪ್ರೀತಿಸುವುದು
ಪ್ರತಿ ಸಾಲುಗಳು ನಿನ್ನ ನೆನಪಿಸುವುದು
ನಿನ್ನ ಮರೆಯಲು ಆಗದು ನನಗೆ
ಋಣವಿಲ್ಲ ಬದುಕಲು ಜೊತೆಗೆ

ಎಂದಾದರೊಂದು ದಿನ ಈ ಕವನ ಸೇರುವುದು ನಿನ್ನ ಕೈಗೆ
ಆ ನಂಬಿಕೆಯಲೆ ಕವನಗಳ ಬರೆಯುವೆ ಮತ್ತೆ ನಿನಗಾಗೆ
ಎಷ್ಟು ಕವನಗಳ ಬರೆಯಲಿ ನಿನಗಾಗಿ
ಮತ್ತಷ್ಟು ಸಂತೋಷ ಕೊಡುವುದು ತಾನಾಗಿ

ನಿನ್ನ ನೆನಪಲ್ಲೆ ಪ್ರತಿಕ್ಷಣವ ಕಳೆಯುವೆನು
ನಿನ್ನ ಗುಣಕಾಗಿ ಸೋತಿರುವೆನು
ಕಾಲವು ದೂರ ಮಾಡಿದರೇನು ನಮ್ಮನ್ನು
ಕವನದಲಿ ಮತ್ತಷ್ಟು ಸನಿಹ ನಾವಿನ್ನು...

- Tanuja.K

07 Jan 2023, 11:05 pm

ಸ್ನಹದ ಆರ್ಥ ಕಲಿಸೇಕೋಟ ಗೆಳೆತಿಯ ನೆನಪಿನಲಿ

ಮನದ ಮೂಲೆಯಲಿ ಬೆಚ್ಚಗೆ ಮಲಗಿದ್ದ ನೆನಪೊಂದು ಹೇಳಿತು..
ಸ್ನಹದ ಕಾರಂಜಿಯಲಿ ಮೈ ಮರೆತು ಕುಣಿದಿದ್ದ ಕ್ಷಣಗಳಿಗೆ ಸಾಕ್ಷಿಯಾಗಿ..
ಮೌನದ ಪದಗಳಲಿ ಅರ್ಥವನು ಹುಡುಕಿದ್ದ ಭಾವನೆಗಳ
ಪ್ರತಿರೂಪವಾಗಿ....
ಸ್ನೆಹಿತರ ನೊಂದ ಮನದ ದುಃಖದಲ್ಲಿ ಬಾಗೀಯಾಗಿ...
ಜೀವನದ ಹಾದಿಯಲಿ ನಿನೋಂದಿಗೆ ನಡೆದಿದ ದಾರಿ ಇಂದಿಗೂ ಹಸಿರಾಗಿದೆ.

- Lakith gowda K

06 Jan 2023, 11:02 pm

ನೀ_ಒಡೆದ ಹೃದಯ...

"ಒಡೆದಿರೋ ಹೃದಯವ
ಹೊಂದಿಸೊ ಕಾರ್ಯವು...
ಹೇಗೆಂದು ತಿಳಿಸು ಬಾ...!
ಮನದಿಂದ_ಮನಕ್ಕೆ
ನುಸುಳುವ ಭಾವವೆ !
ಹೇಗೆಂದು ಹೇಳು ಬಾ...!!"
"ಹೇಗೋ_ಏನೋ ತಿಳಿಸು ನೀನೆ !
ಶುರುವು_ಕೊನೆಯ ಅರಿತ ನೀನೆ !
ಮನವ_ಬೆಳಗೋ ಹಣತೆ ನೀನೆ !
ಮನವ_ಸುಡುವ ಜ್ವಾಲೆಯು ನೀನೆ !
ಭಾವವೇ ಹೊಂದಿಸು...
ನೀ_ಒಡೆದ ಹೃದಯ !!"
ಎಮ್.ಎಸ್.ಭೋವಿ...✍️

- mani_s_bhovi

05 Jan 2023, 10:10 pm

ಒಲವಿನ ನಿಲ್ದಾಣ

ನನ್ನೀ ಮನಸ್ಸಲ್ಲಿ ಅಡಗಿರುವ
ಮೋಹ ತರಂಗಿಣಿಯೇ
ನಿನ್ನನ್ನು ಹುಡುಕುವ
ಹಠದಲ್ಲಿ ನಾ ಕಳೆದೆ
ನನ್ನ ಸುಂದರ ಕೇಶ ರಾಶಿಯನ್ನು
ಆದರೂ ಸಿಗಲಿಲ್ಲ ನೀ
ಧೃತಿಗೆಡದೆ ಮುಂದುವರೆದೆ
ಕೊನೆಗೆ ನೀ ಸಿಕ್ಕೆ
ಆದ್ರೆ ನಾ ಹೊರಟಿದ್ದೆ ಮಸಣಕ್ಕೆ
ಹೋಗುವ ದಾರಿಯಲ್ಲಿ
ನಾ ಕಂಡ ಅರಿವೇನೆಂದರೆ
ಇಲ್ಲಿ ಯಾರು ಯಾರನ್ನು
ಹುಡುಕುವ ಅಗತ್ಯವಿಲ್ಲ
ಹುಡುಕಿಕೊಂಡು ಬಂದವರನ್ನು
ಒಲ್ಲೆ ಎನ್ನಬೇಡ ಎಂದು

- abhi yadava

05 Jan 2023, 10:10 pm

ಅವಳ ನೋಟಕ್ಕೆ ನಾಚಿತ್ತು ಕೆಂದಾವರೇ

ಹೊಂಗ್ಯೆಯ ನೆರಳಲ್ಲಿ ನಿಂತು ಬೀರಿದ
ಇ ನಿನ್ನ ಕಣ್ಣೋಟ ನೋಡಿ ಅರಳಿತು
ನನ್ನ ಹೃದಯದ ಅಂಗಳದಲ್ಲಿ ಕೆಂದಾವರೆ

ರೇಷ್ಮೆಯ ಸೀರೆಯನ್ನುಟ್ಟು
ನನ್ನ ಮನದ ಅಂಗಳದಲ್ಲಿ ಬಂದವಳು
ನೀನು ಕಾಲುಂಗುರ ಹಾಕೆಂದು ಕಾಲೀಟ್ಟು

ನಿನ್ನ ಕಮಲದ ಕಣ್ಣಲ್ಲಿ ಮೂಡಿತು ನನ್ನ ಬಿಂಬ
ನೀನು ಕಾಡಿಗೆ ಹಚ್ಚುವಾಗ ಕಂಡಿತು ನನ್ನ ಹುಬ್ಬ
ನೀನು ನನ್ನ ಬಾಳಿಗೆ ಬಂದರೆ ಅದುವೆ ನನಗೆ ಹಬ್ಬ


***""" ಸಾವರ್ಕರ್ ಶಂಕ್ರು"""***

- Shankru Badiger

05 Jan 2023, 12:17 am

ನೋವಿನ ಕಾಯಂ ವಿಳಾಸ ನಾನು..

"ಜೀವನ ಪೂರ ಬಯಕೆಗಳ
ಹೆಣ ಹೊತ್ತು ಅಲೆಯುತ್ತೇನೆ ನಾನು...
ಬಯಕೆಗಳ ದಾರಿಗಿಳಿದಾಗ ದಾರಿ ಮಧ್ಯೆ
ಸಿಕ್ಕಿದ ನೋವೊಂದು ಎದೆಗಪ್ಪಿ ಹೇಳಿತು...
ಇಡಿ ನಗರದಲ್ಲಿ ನಿನ್ನನ್ನಷ್ಟೇ ಬಲ್ಲೆ ನಾನು...
ನಿನ್ನ ಬಯಕೆಗಳ ಜೊತೆ
ನನ್ನನ್ನು ಸೇರಿಸಿಕೋ ಎಂದು...
ನೋವಿನ ಕಾಯಂ ವಿಳಾಸ ನಾನು...
ಎಮ್.ಎಸ್.ಭೋವಿ...✍️

- mani_s_bhovi

04 Jan 2023, 08:10 pm

ಕವನ ವಿಶ್ವ ಬ್ರೈಲ್ ದಿನ.

ಹಿಂದೆ ನಿರ್ಲಕ್ಷಕ್ಕೆ ಒಳಗಾದ ಅಂಧರು,
ವಿದ್ಯೆ ಪಡೆಯಲು ಅವಕಾಶವಿಲ್ಲದೆ ಹಿಂದುಳಿದಿದ್ದರೂ.
ಶಿಕ್ಷಣ ಪಡೆಯದ ಅಂಧರ ಬದುಕು,
ನಾವು ಮರೆಯಲಾಗದ ಕಣ್ಣೀರ ಕಥೆಗಳ ತುಣುಕು.
ಅಂಧರ ಕಷ್ಟವ ಕರಗಿಸೋ ಸೂರ್ಯ
ಫ್ರಾನ್ಸ್ ದೇಶದಿ ಅರಳಿತು,
ತಂದೆಯ ಕೆಲಸದಿ ಕಬ್ಬಿಣ ಹಾರಿ ಲೂಯಿಸ್
ಕಣ್ಣಿನ ದೃಷ್ಟಿಯು ಹೋಯಿತು.
ಮಗನ ಸ್ಥಿತಿಗೆ ಮರುಗಿದ ತಂದೆ,
ಸ್ಪರ್ಶದಿ ಕಲಿಯಲು ಅಕ್ಷರಗಳ ರಚಿಸಿದರಂದೆ.
ವಿಶೇಷ ಶಾಲೆಗೆ ಸೇರಿದ ಲೂಯಿ,
ಸೋನುಗ್ರಫಿ ಲಿಪಿಯ ಮೂಲಕ ಪಡೆದರು ಶಿಕ್ಷಣ,
ಅಂಧ ಮಕ್ಕಳ ಬೋಧಕರಾಗಿ ಅರಿತರು ಕಲಿಕೆಯ ಹಿನ್ನಡೆಗೆ ಕಾರಣ.
ಬಾರ್ಬಿಯರ್ ಲಿಪಿಯ ಶೋಧಿಸಿ ಬಾಲಕ,
ಬ್ರೈಲ್ ಲಿಪಿ ಸೃಷ್ಟಿಸಿದ ಮಹಾ ನಾಯಕ.
ಆರು ಚುಕ್ಕಿಗಳ ಪರಿಪೂರ್ಣ ಲಿಪಿಯು,
ಪಂಚಾಮೃತವಾಗಿದೆ ಅಂಧರ ಕಲಿಕೆಗೆ ನೀಡುತ ನೆರವು.
ಪ್ರಪಂಚದ ಅಂಧರಿಗೆ ಕಣ್ಣಾಗಿರುವ ಬ್ರೈಲ್ ಲಿಪಿ ರಚನೆ
ನೀಗಿಸಿದೆ ನಮ್ಮ ಕಲಿಕೆಗಿದ್ದ ಅಡಚಣೆ,
ಲೂಯಿಸ್ ಬ್ರೈಲ್ ಜನ್ಮ ದಿನವನ್ನು ಆಚರಿಸುವ ಎಲ್ಲರೂ ವಿಶ್ವಸಂಸ್ಥೆ ಘೋಷಿಸಿರುವ ವಿಶ್ವ ಬ್ರೈಲ್ ದಿನಾಚರಣೆ.

- nagamani Kanaka

04 Jan 2023, 05:43 pm