Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಮನದ ಅಳಲು

ಮನ ವಿಷಾದಿಸಿದೆ
ತನ್ನೊಳಗ ನೋಡಿ
ಬರಿ ನೋವು ತುಂಬಿರುವ
ತನ್ನೊಳಗ ನೋಡಿ.
ನನಗಾಗಿ ಎಲ್ಲವು ಇದೆ
ಆದರೆ ನೆಮ್ಮದಿ?
ಸಂಬಂಧಗಳಿವೆ
ಹಣವಿದೆ
ಸೌಲಭ್ಯಗಳಿವೆ
ಆದರೂ ಮನ ಕೂಗುತಿದೆ
ಖಾಲಿತನದ ನೋವಿನಲಿ
ಮನ ವಿಷಾದಿಸಿದೆ.
ತನ್ನೊಳಗೆ ಏನನೋ ತುಂಬಬೇಕು
ಏನನೋ ಪಡೆಯಬೇಕು
ಆದರೆ ಏನೆಂದು?
ಅರಿವಾಗದೆ ಮನ ವಿಷಾದಿಸಿದೆ.




- Nithyavv

22 Feb 2023, 10:11 am

ನೊಂದ ಮನ

ಅಮ್ಮ.,..
ಅರಿವಾಗದವಳು
ನನ್ನ ಪ್ರಪಂಚದಲಿ ತೇಲಿದವಳು
ನಮಗಾಗೇ ಬದುಕಿದವಳು
ಆದರೂ, ಅರಿವಾಗಲಿಲ್ಲ ಎನಗೆ
ಅವಳು ಮನವು.
ನನ್ನ ಆಲೋಚನೆ ಅವಳ ಜೀವನವಾಗಿತ್ತು
ನನ್ನ ಬದುಕು ಅವಳ ಬದುಕಾಗಿತ್ತು
ದಿನದ ಪ್ರತಿ ಕ್ಷಣ ಮಕ್ಕಳ ಜೊತೆ ಹೆಜ್ಜೆ ಹಾಕಿದವಳು
ಆದರೂ ಅರಿವಾಗಲಿಲ್ಲ ಎನಗೆ ಅವಳ ಮನವು.

- Nithyavv

21 Feb 2023, 06:42 am

ಮೊಬೈಲ್

ವಿಶ್ವವನು ಅಂಗೈಯಲಿ ಕೊಟ್ಟೆ ನೀನು..!
ನಿನಗೇನ ಕೊಟ್ಟೆನು ನಾವು..??
ನಿನ್ನಿಂದ ಹಾಳಾಯಿತೆ ಯುವ ಜನತೆಯ ಸ್ಥಿತಿ..??
ಬೆರಳ ತುದಿಯಲ್ಲೆ ಇದೆ ಎಲ್ಲ ಮಾಹಿತಿ..

ಬಳಸುವರು ನಿನ್ನನು ಖುಷಿಗಾಗಿ, ಬೇಸರ ನಿವಾರಣೆಗಾಗಿ..
ಹುಡುಕುವರು ನಿನ್ನಲ್ಲೇ ದೋಷವನು ಹೆಚ್ಚಾಗಿ..
ನಿನ್ನಿಂದ ಹಾಳಾಯಿತೆ ಮನಸ್ಥಿತಿ.??
ಸೋತ ಮನಸುಗಳಿಗೆ ನೀನೆ ಗತಿ..

ಎಷ್ಟೋ ದುಃಖಿಗಳ ಗೆಳೆಯ ನೀ..
ಎಷ್ಟೋ ಸುಖಿಗಳ ಸೆಳೆತ ನೀ..
ನೀನೊಂದು ವಸ್ತು ಮಾತ್ರ..
ನಮ್ಮಲಿನ ಭಾವನೆಗಳ ಸರದಾರ..

ಜೊತೆಯಲ್ಲಿದ್ದವರು ದೂರಾದರು ನಿನ್ನಿಂದ..
ದೂರದಲ್ಲಿರುವವರು ಹತ್ತಿರವಾಗಿರುವರು ನಿನ್ನಿಂದ..
ಸಮಯವಿಲ್ಲದಂತೆ ಆಕರ್ಷಿಸಿದ್ದು ನೀನೆ..
ಕೆಲಸ, ಕಾರ್ಯಗಳ ಕಡಿಮೆ ಮಾಡಿದ್ದು ನೀನೆ..

ಒಮ್ಮೆ ದೂರವಾಣಿಯಾದೆ, ದೂರದರ್ಶಕನಾದೆ, ಛಾಯಾಚಿತ್ರಕನಾದೆ, ಸಂದೇಶಕನಾದೆ ಮತ್ತೆ ಲ್ಲವೂ ನೀನೆ ಆದೆ,
ನಾನಾ ಪಾತ್ರಗಳ ನಿಭಾಯಿಸಿದೆ..
ಅಂತು ದಿನವಿಡೀ ನಿನ್ನನ್ನೆ ಬಳಸುವಂತೆ ಮಾಡಿದೆ..


ತನುಮನಸು✍️

- Tanuja.K

19 Feb 2023, 08:22 am

ಹೂವು

ಎಷ್ಟು ಬಣ್ಣ ನಿನ್ನಲಿ...
ಮತ್ತೆ ನೋಡುವಾಸೆ ಕಣ್ಣಲಿ..
ಎಷ್ಟು ಸುಂದರವಾಗಿರುವೆ ನೀನು..
ಎಷ್ಟು ಆಕರ್ಷಕ ನೀನು..
ಅಂದವಾಗಿ ಅರಳುವೆ ನೀ..
ಚಂದವಾಗಿ ಸೆಳೆಯುವೆ ನೀ..
ನಿನ್ನ ನೋಡಲು ತುಂಬಿ ಬರುವುದು ಹೃದಯ..
ನಿನ್ನ ಸ್ಪರ್ಶ ಸುಮಧುರ, ಸುಂದರ..
ಪ್ರೀತಿಯ ಪ್ರತೀಕವಾದೆ ನೀನು..
ದೇವರ ಶಿರದಲು, ಪಾದದಲು ನೀನು..
ಜಾತಕ, ಸೂತಕಕ್ಕು ನಿನ್ನದೆ ಅಲಂಕಾರ..
ಶುಭ, ಅಶುಭಕ್ಕು ನಿನ್ನದೆ ಸಿಂಗಾರ..


ತನುಮನಸು✍️

- Tanuja.K

19 Feb 2023, 07:18 am

ಕಾಯಕ

ಮಾಡುವ ಕೆಲಸದಲಿ ಕಾಣಬೇಕು ದೇವರ
ಅದುವೇ ಜೀವನದ ಸಾಕ್ಷಾತ್ಕಾರ..
ಯಾರ ಹಂಗಿಲ್ಲದೆ ಜೀವಿಸಲು ಛಲ ಹುಟ್ಟಿಸುವುದು ಕೆಲಸ..
ಕಾಯಕವೇ ಕೈಲಾಸ ಎಂಬುದು ನಿಜವಾದ ದೇವರ ಕೆಲಸ...

ಸ್ವತಂತ್ರವಾದ ಬದುಕು ಕಟ್ಟಿಕೊಳ್ಳಲು ಧೈರ್ಯ ಕೊಡುವುದು ಕಾಯಕ..
ಅವಲಂಬಿತವಾಗಿ ಕೈಚಾಚುವುದು ತುಂಬಾ ನರಕ..
ನೆಮ್ಮದಿಯು ಹೆಚ್ಚು ಕೈತುಂಬ ಕೆಲಸವಿರಲು..
ಯೋಚನೆಯು ಹಿಡಿಸುವದು ಮತ್ತಷ್ಟು ಹುಚ್ಚು ಖಾಲಿ ಇರಲು...
ಚಿಂತೆಗಳನ್ನು ಮರೆಸಿ ಜವಾಬ್ದಾರಿಗಳತ್ತ ಸಾಗಿಸುವುದು ಕಾಯಕ..
ದುಡಿಮೆಯ ನಂಬಿ ಬದುಕುವುದು ಶ್ರೇಷ್ಠ ಕಾಯಕ...


ತನುಮನಸು✍️

- Tanuja.K

16 Feb 2023, 06:16 pm

ನಿನ್ನ ಭಾವನೆಗಳಿಗೆ ಬಣ್ಣ ಹಚ್ಚುವಾಸೆ..

ನಿನ್ನ ಕವನಗಳಿಗೆ ಪದಗಳಾಗುತ್ತ, ನಿನ್ನ ಭಾವನೆಗಳಿಗೆ ಬಣ್ಣ ಹಚ್ಚುವಾಸೆ...
ನಾ ಬರಲೇ ನಿನ್ನ ಜೊತೆಗೆ... ??
ನಿನ್ನ ಕನಸುಗಳನ್ನು ನನಸು ಮಾಡುತ್ತಾ...
ನನ್ನ ಕನಸುಗಳನ್ನು ನಿನ್ನೊಡನೆ ಹಂಚಿಕೊಳ್ಳುತಾ...
ನೀ ಮುನಿದಾಗ ಮುದ್ದಿಸುತ್ತಾ..
ನಿನ್ನ ಸಂತೋಷವನ್ನು ಸಂಭ್ರಮಿಸುತ್ತಾ...
ಜೊತೆಗೆ ಇದ್ದು ಬಿಡಲೆ...??
ಹೇಳು ಗೆಳೆಯ...
ದೂರದಲಿ ಎಲ್ಲೊ ಇರುವ ನಿನ್ನ ಹೇಗೆ ತಲುಪಲಿ ನಾನು..??
ನಿನ್ನ ಹೃದಯ ಬಡಿತದ ದನಿ ಕೇಳುವಾಸೆ ನನಗೆ..
ಒಮ್ಮೆ ನಿನ್ನೆದೆಗೊರಗಲು ಅನುಮತಿ ನೀಡುವೆಯ.. ??
ನನ್ನೆಲ್ಲಾ ಆಸೆ, ಕನಸುಗಳಿಗೆ ಸ್ಫೂರ್ತಿಯಾದ ನಿನ್ನ ಒಮ್ಮೆ ಅಪ್ಪಿಬಿಡಲೆ..
ನನ್ನ ನಂಬಿಕೆ ಮತ್ತು ಸಮಯದ ರಾಯಭಾರಿಯಾದ ನಿನ್ನ ಪ್ರೀತಿಯಲೆ ರಮಿಸಿಬಿಡಲೆ...

. .. ತನುಮನಸು...✍️

- Tanuja.K

14 Feb 2023, 02:59 pm

ಪ್ರಾಸಬದ್ದ ಕನಸುಗಳನ್ನ ಕಟ್ಟಿಕೊಂಡಿರುವೆ...

ನಿನ್ನ ಮೇಲೆ ನನಗೆ ಅಸಂಖ್ಯಾತ
ರೂಪಗಳಲ್ಲಿ, ಅಸಂಖ್ಯಾತ ಬಾರಿ
ಪ್ರೀತಿ ಮೂಡಿದೆ...
ಹುಚ್ಚು ಕನಸುಗಳಲ್ಲಿ ಅವಳ
ಬೆರಳುಗಳು ನನ್ನ ಕೂದಲನ್ನು
ಮೃದುವಾಗಿ ಒರಟುತ್ತಾಳೆ..,
ನನ್ನ ತಲೆ ಅವಳ ಮಡಿಲ ಸ್ವರ್ಶಿಸಿದೆ
ಮಾತನಾಡದ ಪದಗಳ ಸಂಕಟ
ಅವಳ ಸ್ವರ್ಶಕ್ಕೆ ಸಿಡಿಯುತ್ತಿದೇ
ಹೀಗೆ ಏನೇನೋ ಅವಳೊಂದಿಗೆ
ಪ್ರಾಸಬದ್ದ ಕನಸುಗಳನ್ನು
ಹೊಂದಿರುವೆ...
ಎಮ್.ಎಸ್.ಭೋವಿ...✍️

- mani_s_bhovi

13 Feb 2023, 10:09 pm

ಒಳಿತು ಮಾಡು ಮನೂಷ

ಮಣಿಪುರದ ಅರಸ ಮಣಿಕಂಠ ತುಂಬಾ ಬುದ್ಧಿವಂತ
ಮತ್ತು ಸತ್ಯವಂತ ಆಗಿದ್ದನು.ಅವನು ವಾಸುದೇವ ಕೃಷ್ಣನ ಪರಮಭಕ್ತ ನಾಗುವುದರ ಜೊತೆ ರವಿ ಅಸ್ತ ಕಾಲದಲ್ಲಿ ಸಂಧ್ಯಾವಂದನೆ ಮಾಡುವುದ ಮರೆಯುತ್ತಿರಲಿಲ್ಲ.ಅವನ ಪತ್ನಿ ಭಾರ್ಗವಿದೇವಿ ತುಂಬಾ ಜಾಣೆ ಮತ್ತು ರಾಧಾ ಕೃಷ್ಣರ ಪರಮ ಭಕ್ತ ಆಗಿದ್ದಳು. ಅವಳು ಯಾವಾಗಲೂ ಶಂಕರನ ಧ್ಯಾನದಲ್ಲಿ ಶಿವ ಶಿವ ಎನ್ನುತ್ತಿದ್ದಳು. ಒಂದು ದಿವಸ ಒಬ್ಬ ವಯಸ್ಸಾದ ಮುದುಕಿ ಅವರ ಅರಮನೆ ಹತ್ತಿರ ಬಂದಳು .
ಮತ್ತು ತಾಯಿ ಭವತಿ ಭಿಕ್ಷಾಂ ದೇಹಿ ಎಂದಳು
ಆಗಿ ರಾಣಿ ನಿನಗೆ ಏನು ಬೇಕು ಅಂದಳು .ಆಗ ಆಕೆ ನಿನ್ನ ಸಂಪತ್ತು ಎಂದಳು.ಆಗ ರಾಣಿ ಅರೆ ತಾಯಿ ಇದೆಲ್ಲ ನಿನ್ನದೇ ನನಗೇಕೆ ಕೇಳುವೆ ಏನಲಾಗಿ ಆ ಮುದುಕಿ ನಿಜ ರೂಪದಲ್ಲಿ ದೇವತೆ ಆಗಿದ್ದಳು.ನಂತರ ಆ ದೇವತೆ ಕರುಣಭಾವದಿಂದ ಅವಳನ್ನು ಅಪ್ಪುಗೆಯ ಅರಸಿ ನಿಂಗೆ ಏನು ವರ ಬೇಕು ಎಂದು ಕೇಳಿದಳು.ನೀನೇ ಸಾಕು ನಿನ್ನ.ದರುಷನವೆ ಸಾಕು ತಾಯಿ ಎನಲು .ಅವಳ ಕೈಗೆ ಮಾಗುವನ್ನಿತ್ತು ತಗೋ ಇದುವೇ ನಿನಗೆ ನನ್ನ ಪ್ರಸಾದ ವೆಂದು ಮಾಯವಾದಳು.


ನಿಶಾ ಅಂಜುಮ್

- Nisha anjum

13 Feb 2023, 07:42 pm

ಇಡೀ_ಬದುಕೇ_ಕಾಲಿ..

"ಇಡೀ_ಬದುಕೇ ಕಾಲಿ.. ನೀ_ಇಲ್ಲದೇ !
ಕಾಲ_ಸರಿದ ಹಾಗೆ.. ಒಬ್ಬಂಟಿ ನಾನಾದೇ !
ಯಾವುದೋ_ಸಣ್ಣ.. ಕೋಪಕ್ಕೆ ಒಳಗಾಗಿ !
ನೂಕಿದೆ ನನ್ನೇ_ನೀ.. ಮನಸಿಂದ ಜೋರಾಗಿ !
ಅರೆಕ್ಷಣದ ಆಲೋಚನೆಗೂ..
ಒಳಗಾಗದೆ ಅಂದು_ನೀ !
ಇರಿಸಿಹೆ ದೂರದಲೇ.. ಇಂದು ಕೂಡ ನನ್ನ_ನೀ !
ಬೇಡದವನಾದೆ.. ನಿನಗೆ ನಾನು !
ಬೇಡದವನಾದೆ.. ನನಗೆ ನಾನು !!"
ಎಮ್.ಎಸ್.ಭೋವಿ...✍️

- mani_s_bhovi

13 Feb 2023, 11:55 am

ನತದೃಷ್ಟ ಬದುಕು..

ಪ್ರೀತಿ ಬಂಧ ಬರೆಯಲಿಲ್ಲ ಭಗವಂತ ಹಣೆಯಲಿ..
ಸ್ನೇಹದ ನಡುವೆಯೂ ಬಿರುಸು ಮೂಡಿದೆ ಯಾಕಿಲ್ಲಿ..??
ನೀ ಬಂದುದೆ ಅದೃಷ್ಟವೆಂದು ತಿಳಿದಿದ್ದೆ ಇಷ್ಟು ದಿನ..
ನತದೃಷ್ಟ ಬದುಕು ನನ್ನದು, ನೀನು ಕೂಡ ಜೊತೆಯಗಲಿಲ್ಲ ಹೆಚ್ಚು ದಿನ...

ಹೇ ಸಮಯವೇ ಕೆಲಕಾಲ ನಿಂತುಬಿಡು..
ಮರಳಿ ಕಳೆದ ಸಮಯವ ತಂದುಕೊಡು..
ನೆನ್ನೆ ಇದ್ದ ಸಂತೋಷ ಇಂದಿಲ್ಲ..
ಬರಿ ಅಪಾರ್ಥಗಳ ನಡುವೆ ಬಂಧ ಮುಗಿಯಿತಲ್ಲ...

ಕಳೆದುಕೊಳ್ಳುವುದಾದರೆ ಯಾಕೆ ಬೇಕಿತ್ತು ನಿನ್ನ ಬರುವಿಕೆ..
ಹೇಗೋ ಇದ್ದೆ ನಾ ಕವನ ಬರೆದುಕೊಂಡು ಏಕಾಂಗಿಯಾಗೆ...
ಖುಷಿಯನ್ನು ಹಂಚಿ ದೂರ ಹೋದೆ ನೀನು..
ದುಃಖವು ಹೆಚ್ಚಾಗಿ ಶಪಿಸಿಕೊಳ್ಳುತ್ತಿರುವೆ ನನ್ನನ್ನೆ ನಾನು...

ತನುಮನಸು....✍️

- Tanuja.K

13 Feb 2023, 05:38 am