Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ತಟ್ಟಿನೋಡುವೆಯ ನನ್ನೆದೆಯ ಬಾಗಿಲನ್ನ..

ಯಾರು ಇಲ್ಲದ ಈ ಒಂಟಿ ಮನಕೆ,
ತೂಗು ಹಾಕಲೇ ಖಾಲಿ ಫಲಖ...!
ಮನವು ಕಾಡುತಿದೆ ನೀ ಯಾರೆಂದು ತೆರೆದು ನೋಡುವೆಯ ನನ್ನೆದೆಯ ಚಿಲಕ...!
ಎದೆಯ ಪಂಜರದಲ್ಲಿ ಬಚ್ಚಿಟ್ಟ ಈ ಪ್ರೀತಿ,
ಹಾರುತಿದೆ ಬಿಡುಗಡೆ ಸಿಕ್ಕಿದ ಪಕ್ಷಿಯ ರೀತಿ...!
ಆ ಹಾರುವ ಪಕ್ಷಿಯ ಯಾರೋ ಹಿಡಿಯುವ ಮುನ್ನ,
ಒಂದು ಬಾರಿ ಆದರೂ ತಟ್ಟಿನೋಡು
ನನ್ನ ಎದೆಯ ಬಾಗಿಲನ್ನ....!
ಎಮ್.ಎಸ್.ಭೋವಿ...✍️

- mani_s_bhovi

06 Mar 2023, 05:35 pm

ಏನೆಂದು ಬರೆಯಬೇಕು ನನಗೆ ಅರಿಯದು..

ನಡೆಯುವ ಆಸೆ ನಿನ್ನೊಟ್ಟಿಗೆ ಕೈ ಹಿಡಿದು,
ಹೇಳಲಾಗದು ನಿನ್ನೆದುರು ನನ್ನುಸಿರ ಬಿಗಿ ಹಿಡಿದು...!
ತಿಳಿದು ತಿಳಿಯದೆ ಇರುವಂಥ ಈ ನಿನ್ನ ನಡವಳಿಕೆ,
ಮನದಿ ಮೂಡಿತಿದೆ ಒಂಟಿತನದ ಬೇಸರಿಕೆ...!
ಮರೆಯಲಾಗದ ನಿನ್ನ ನೆನಪಿನೊಟ್ಟಿಗೆ,
ಅರ್ಥವಾಗದ ಬದುಕು ನನ್ನದು...!
ಹರಿದು ಹೋಗುವ ಕಾಗದದ ಮೇಲೆ,
ಏನೆಂದು ಬರೆಯಬೇಕೋ ನನಗೆ ಅರಿಯದು...!
ಎಮ್.ಎಸ್.ಭೋವಿ...✍️

- mani_s_bhovi

06 Mar 2023, 05:25 pm

ಅವಳು..

ಆಕೆ ಅಲ್ಲಿಯೇ ನಿಂತಿದ್ದಳು ದೂರದಲೆಗಳ ಅಬ್ಬರಕ್ಕೆ ಚಲಿಸದೆ ನಿಂತ ಚಿಗುರೆಳೆಯಂತೆ, ಕಾರ್ಮೋಡದ ಸದ್ದು ಕೇಳಿ ಹೆದರಿ ಅಡಗಿದ ಪುಟ್ಟ ಕಂದನಂತೆ, ಬೆಚ್ಚಗಿನ ಹಾಲಲ್ಲಿ ಬಿದ್ದ ಹುಳಿ ಮೊಸರಿನ ದೂರದಂತೆ, ಆಕೆ ಅಲ್ಲಿಯೇ ನಿಂತಿದ್ದಳು ಅಮ್ಮನ ಕಿರುಬೆರಳು ಸಿಗದ ಮಗುವಿನಂತೆ ಅವನ ದಾರಿ ಕಾಯುತ್ತಾ. ಆಗೊಮ್ಮೆ ಈಗೊಮ್ಮೆ ಸುಡು ಬಿಸಿಲಲ್ಲಿ ಇಣುಕಿನೊಡುವ ತಂಗಾಳಿಯಂತೆ ಅವನ ನೆನಪು ಬಂದಾಗ ಸಣ್ಣಗೆ ಕಂಪಿಸುವಳು ಮತ್ತೆ ಸಾವರಿಕೊಂಡು ಹಾದಿ ನೋಡುವಳು.

ಹಿಂದೆಂದೋ ಬರಿದಾದ ರೋಡಿನಲ್ಲಿ ಕೈ ಹಿಡಿದು ನಡೆದಾಗ ಕೇಳಿದಳಂತೆ ಎಲ್ಲಿಯ ವರೆಗೂ ಈ ನಡುಗೆ ಎಂದು ಅವನ ಉತ್ತರ ಇನ್ನೂ ಕೇಳಿಸಲಿಲ್ಲ ಅವಳಿಗೆ! ನನ್ನವನಾ ನೀನು ಗೊತ್ತಿಲ್ಲ ತಿಳಿದುಕೊಳ್ಳುವ ಗೋಜಿಗೂ ಹೋಗಲಿಲ್ಲ, ಮೌನ ಮುರಿಯುವ ಆಸೆಯೂ ಅವಳಿಗೆ ಇರಲಿಲ್ಲ ವರುಷಗಳುರುಳಿದವು, ತಾರೀಕುಗಳು ಬದಲಾದವು ಅವನ ಸುಳಿವಿಲ್ಲ ಮನೆಯಲ್ಲಲ್ಲ ಮನಸಲ್ಲಿ!! ಎದುರುಬದುರು ಕುಳಿತರು ಆತ್ಮೀಯತೆ ಕಂಡುಬಂದಿಲ್ಲ, ತನ್ನ ಸ್ವತ್ತೆಂದು ಕಟ್ಟಿಹಾಕಲಿಲ್ಲ ಅವನನ್ನು, ಸರಿ ತಪ್ಪುಗಳ ಲೆಕ್ಕ ಮೇಲಿನವನಿಗಿರಲಿ ಅವನ ಹೃದಯ ಸೇರುವ ರಸ್ತೆಯಲ್ಲಿ ಹಿಂದಿರಬಹುದು ನಾನು ಮುಂದೆ ಹೋದವರಿಗೆ ಪ್ರಾಶಸ್ತ್ಯ ಕೊಟ್ಟಿರಬಹುದು ಅವನು...

ತಾನು ತನ್ನದೆಂಬುದ ತೊರೆದವಳು ತನ್ನನ್ನೆ ತಾ ಕೊಟ್ಟವಳು ಅವಳಲ್ಲವೆ! ಹಿಂಪಡೆಯುವುದು ಎಷ್ಟು ಸರಿ ಇರಲಿ ಬಿಡು ಹಿಂಪಡೆದು ತಾನಾದರು ಏನು ಮಾಡಿಯಾಳು ಅಸ್ತಿತ್ವದ ಕಳುವಾದಮೇಲೆ.. ಇಹದ ಚಿಂತೆ ಬೇಡವಾದಮೇಲೆ, ಹಗಲು ಉರುಳಿತು ಹಕ್ಕಿಗಳೆಲ್ಲ ಅವಸವಸರದಿ ಗೂಡು ಸೇರಿದವು ತಾನು ಎದ್ದು ಹೊರಟಳು ನೆನ್ನೆಯ ಚಿಂತೆಗಳು ನಾಳೆಗೆ ಬಿಟ್ಟು ಮರುಳಿನ ಮೇಲೆ ಬರೆದ ಅವನ ಹೆಸರಿಗೆ ಸಿಹಿ ಮುತ್ತೊಂದನಿಟ್ಟು.

- ಚುಕ್ಕಿ

06 Mar 2023, 02:42 pm

ನಾನೇಕೆ ಹೀಗಾದೆ...

ತಂಗಾಳಿ..
ತಂಪುಕೊಡಲಿಲ್ಲ ತನುವಿಗೆ..
ಇಂಪಾದ ಹಾಡು
ಹಿತ ಕೊಡಲಿಲ್ಲ ಭಾವಕೆ..
ನಾನೇಕೆ ಹೀಗಾದೆ..
ಎಲ್ಲೇ ನೋಡಿದರು ನಿನ್ನನ್ನೆ ಕಂಡಂತಾಗಿದೆ..
ಎಲ್ಲಾ ಕರೆಗಳು ನಿನ್ನದೆ ಅನಿಸುತಿದೆ...
ನಿನ್ನ ಸನಿಹ ಬೇಕಿದೆ ಗೆಳೆಯ..
ಅಪ್ಪಿಬಿಡಲೆ ಒಮ್ಮೆ....
ನಿನ್ನ ಅನುಮತಿ ಕೇಳದೇ.....
ಸಣ್ಣ ಮುತ್ತ ನೀಡಲೆ...
ಹೇಳದೆ ನಿನಗೆ...

ತನುಮನಸು✍️

- Tanuja.K

05 Mar 2023, 10:50 pm

ಪ್ರೀತಿಯಾಗಿದೆ ನಿನ್ನ ಮೇಲೆ

ಹೇಳಿ ಬಿಡಲೇ ಒಮ್ಮೆ..
ನನಗೆ ಪ್ರೀತಿಯಾಗಿದೆ ಎಂದು..
ಕೂಗಿ ಕರೆಯಲೇ..
ನಿನ್ನ ಹೆಸರ ಮನದುಂಬಿ ಇಂದು..
ಜೋಪಾದವಾಗಿದ್ದ ಹೃದಯ ಜಾರುತಿದೆ ನಿನ್ನೆಡೆಗೆ..
ಈ ಅನುಭವ ಹೊಸದು ನನಗೆ..
ಬರಿ ತನುವಾಗಿದ್ದೆ ನಾನು
ನಿನ್ನ ಪರಿಚಯದ ಮೊದಲಿಗೆ..
ಮನಸ್ಸೆಂದೂ ಇರಲಿಲ್ಲ
ಯಾರ ಮೇಲೂ ಹೀಗೆ..
ನಿನ್ನ ದಾರಿಯ ಕಾಯುತಿರುವೆ ನಾನು..
ಬರುವೆಯ ಜೊತೆಗೆ ನೆರಳಂತೆ ನೀನು...



ತನುಮನಸು✍️

- Tanuja.K

05 Mar 2023, 10:36 pm

ಲೇಖನಿ

ಕಳೆದೋದವು ಹಲವು ದಿನಗಳು
ಮೂಲೆಯಲ್ಲಿದ್ದ ಲೇಖನಿಯೊಂದು ನನ್ನ ನೋಡಿ ನಕ್ಕಿತ್ತು
ಅರ್ಥವಾಗುತ್ತಿಲ್ಲ ಯಾಕಿರಬಹುದು ಈ ನಗು
ಕೆದಕಿ ನೋಡಲು ಭಯ, ಕಾರಣ ಗೊತ್ತಿರುವುದಲ್ಲವೇ...
ಹೇಳಲು ಏನು ತೋಚುತ್ತಿಲ್ಲ
ಬರೆಯಲು ಬೇರೆ ಪದಗಳಿಲ್ಲ
ಬರೆಯಲೇಬೇಕು ಏನಾದರೂ
ಆದರೂ ಏನಂತ ಬರೆಯಲಿ ಪುಸ್ತಕದ ಪುಟಗಳಲಿ .....
ಯೋಚನೆಗಳು ನೂರಾರು, ಅವೆಲ್ಲವ ಬಾಡಿಗೆ ಕೊಟ್ಟಿರುವೆ
ಇಂದು ನಿರಾಳವಾಗಿ ಬರೆಯಬೇಕೇಂದಿರುವೆ ಅವೆಷ್ಟು ಸಾಲುಗಳನು
ಖುಷಿಯಿಂದೇನೋ ಪುಸ್ತಕವನ್ನೇನೋ ಎತ್ತಿಕೊಂಡೆ
ಆದರೆ ಮೂಲೆಯಲ್ಲಿಟ್ಟ ಲೇಖನಿಯು ತನ್ನ ಕಾಯಕವನ್ನೇ ನಿಲ್ಲಿಸಿತ್ತು..

- ಪ್ರಿಯಾಂಕ

05 Mar 2023, 08:06 pm

ಹೇ_ರೂಪಸಿ...

"ನೀ_ಯಾರೆಲೇ ನನಗೆ.. ಹೇ_ರೂಪಸಿ !
ಸುಮ್ಮನಿರುವೆ_ನೀ ಏನು ಅರಿಯದೆ..
ನನ್ನೇ ಕಾಡಿಸಿ !
ನೀ_ಯಾರೆಲೇ ನನ್ನ ಬಾಳಿಗೆ.. ಹೇ_ರೂಪಸಿ !
ಸುಮ್ಮನಿರುವೆ_ನೀ..
ನೂತನದಿ ನನ್ನ ಮನವ ನಿಯಂತ್ರಿಸಿ !
ಯಾತನೆ ಏನಿದು ಹೀಗೆ !
ಹೆಚ್ಚೆಚ್ಚು ಬೇಕೆನಿಸೋ ಹಾಗೆ !
ಅಂತರಂಗವೆಲ್ಲ ರಂಗೇರಿಸಿಹೆ_ನೀ..
ನನ್ನೆ_ಮೈ_ಮರೆಸಿ !!"
ಎಮ್.ಎಸ್.ಭೋವಿ...✍️

- mani_s_bhovi

05 Mar 2023, 03:10 pm

ಓ ಪ್ರೇಮವೇ...

"ದೂರವಾಗಿ.. ನೀ_ಇದ್ದರು !
ಒಂದೆ_ಸಮನೇ.. ಕಾಡುತಿದ್ದರು !
ಊಹ_ಪೋಹ ನಿನ್ನ ಕುರಿತು.. ನೂರಾರಿದ್ದರು !
ನಾ_ಅರಿತಿಹ.. ಪರಿಹೆ ನಂಬುವೇ !
ಸದಾ_ನಿನ್ನನ್ನೇ.. ಮನಸಾರೆ ಪ್ರೇಮಿಸುವೇ !!"
"ನಿನ್ನ ಹಾಜರಾತಿ ಎಂದು ತಪ್ಪದು.. ನನ್ನ ಮನದಲ್ಲಿ !
ನನ್ನ ಮನೆ_ಮನದೊಡತಿ ನೀನಾಗುವ.. ಸೂಚನೆ ನೀಡಿಲ್ಲಿ !
ನಿನ್ನ ಹೊರೆತು ಏನು ಬೇಡ !
ನಿನ್ನ ಜೊತೆಯೆ ನನಗೆಲ್ಲಾ ಕೂಡ !
ಯೋಚಿಸೋಮ್ಮೆ ನನ್ನ ಕುರಿತು.. ಓ ಪ್ರೇಮವೇ !!"
ಎಮ್.ಎಸ್.ಭೋವಿ...✍️

- mani_s_bhovi

05 Mar 2023, 02:57 pm

ಬದುಕು..

ಜೀವನವೆಂಬ ಕಾಲ ಚಕ್ರದೊಳಗೆ
ಮಾನವನೆಂಬ ಪಯಣಿಗ
ಉಸಿರೆಂಬ ಸಾರಥಿ ಸಾರೋಟನ್ನು ನಿಲ್ಲಿಸಿದಾಗ ಮಾನವನ ಬದುಕಿನ ಪಯಣವು ಮುಗಿದಿದೆ ಎನ್ನುವುದು ಮನವರಿಕೆ ಆಗುವುದು.
ಸಾರಥಿಯು ಚಕ್ರವನ್ನು ನಿಲ್ಲಿಸುವ ಮೊದಲೇ, ಈ ಕ್ಷಣ ನಿನ್ನದೆಂದು ಅದನ್ನು ಪೂರ್ತಿಯಾಗಿ ಬದುಕಿ ಖುಷಿಯಾಗಿ ಬಾಳುವುದನ್ನು ಕಲಿಯೆಂದು. ಆದರೆ ಈ ಮಂಕು ಮಾನವ ಜನ್ಮದ ಮನುಷ್ಯರು ಜೋಳಿಗೆ ಹಿಡಿದು ಆಗೊಮ್ಮೆ ಈಗೊಮ್ಮೆ ಬಂದು ಹೋಗುವ ಅತಿಥಿಗಳು.ಕೆಲವರು ಜೋಳಿಗೆಯಲ್ಲಿ ಹಣ ಆಸ್ತಿ ,ವಿದ್ಯೆ, ಗೌರವ, ಘನತೆ ,ಅಹಂಕಾರ ಹೀಗೆ ಅವರವರಿಗೆ ತೋಚಿದ್ದು ತುಂಬಿಸಿಕೊಳ್ಳುತ್ತಾರೆ. ಆದರೆ ಹೊತ್ತು ತಿರುಗುವ ಕಾಲಚಕ್ರದ ಸಾರೋಟು ಮತ್ತು ಎಲ್ಲವನ್ನೂ ತುಂಬಿಸಿಕೊಳ್ಳುವ ಈ ಜೋಳಿಗೆ ಬಾಡಿಗೆ ಎನ್ನುವುದನ್ನೂ ಮರೆತು ಬಿಟ್ಟು ಮುಂದೆ ಸಾಗಬೇಕೆನ್ನುವ ಸತ್ಯವನ್ನು ಮರೆತು ಬಿಡುತ್ತಾರೆ.

- ಪ್ರಿಯಾಂಕ

05 Mar 2023, 01:39 pm

ಹಂಬಲ

ನಾನಡಿದ ನದಿಯ ತೀರ
ಕೈ ಬೀಸಿ ಕರೆದಿದೆ
ನಾವಾಡಿದ ಆಟವೆಲ್ಲ
ಕಣ್ಮುಂದೆ ಸರಿದಿದೆ

ಒಂದು ಎರಡು ಕಪ್ಪೆ ಚಿಪ್ಪು
ಹೆಕ್ಕಿ ಹೆಕ್ಕಿ ಮನಕೆ ಒನಪು
ನೀರಿಗೆ ಹಾರಿ ಈಜಲು
ಆಟ ಪಾಠ ಎಲ್ಲ ಸೊನ್ನೆ
ಅಮ್ಮ ಬರುವವಳು ಬೈಯ್ಯಲು

ಬಾ ಒಮ್ಮೆ ಮರಳಿ ನೀನು
ನನ್ನ ನಿ ಒಮ್ಮೆಸೇರು
ಇದೇ ನನ್ನ ಆಶಯ
ಬೇಡ ನಿನಗೆ ಸಂಶಯ
ಎಂದಿಹಳು ಪ್ರಕೃತಿ ಮಾತೆ
ನಮ್ಮ ದಾರಿ ಕಾಯುತ್ತ

- Vittal Jore

04 Mar 2023, 02:44 pm