Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಕನಸು

ತಂಪಾದ ತಂಗಳಿ ಬೀಸುತ್ತಿತ್ತು.
ಹೊನಲು ಬೆಳಕು ಚಿಮ್ಮುತ್ತಿತ್ತು.
ಮೌನಿಯಾಗಿ ಕುಳಿತ್ತಿದ್ದೆ
ಪ್ರೆಯಸಿಯ ದಾರಿ ಕಾಯುತ್ತಿದ್ದೆ.
ಸೂರ್ಯ ಸರಿಯುವ ಹೊತ್ತಲಿ
ನನ್ನವಳು ಬರುತ್ತಿದಳು ಮಬ್ಬಲಿ
ಚಿಕ್ಕ ಕಾಲು ದಾರಿಯಲಿ
ನನ್ನ ನೋಡುವ ಸಂಭ್ರಮದಲಿ.
ಎಲ್ಲೂ ನೋಡದ ಜಾಗವಿದು
ಎಂದು ಕಾಣದ ಕನಸಿದು
ಸುಮ್ಮನೆ ಎನೂ ತಳಮಳ
ಮನಸಲಿ ಎನೋ ಕೋಲಾಹಲ.

ಯೋಗಿತ ಟಿ ಎನ್.


- Yogitha T N

15 Mar 2023, 10:52 pm

ಬೆಳದಿಂಗಳ ಬೆಳ್ಳಿ

ಬೆಳದಿಂಗಳ ಬೆಳ್ಳಿ


ಬೆಳ್ಳಿಯ ಮೋಡದ ತೆರೆಯಲ್ಲಿ 

ಚಲುವ ಚಪಲ ಚೆನ್ನಿಗನೆ ಚಿನ್ನ

ಅವನೇ ನಮ್ಮ ಚಂದಿರಣ್ಣ.


ಮಂದಸ್ಮಿತ ಮುಖದ ಚೆನ್ನ 

ಬರುವ ನೋಡಿ ಹದಿನೈದು ದಿನಗಳೊಮ್ಮೆ.

ಅವನೇ ನಮ್ಮ ಚಂದಿರಣ್ಣ.


ತಾರೆಗಳ ಲಲನೆ ತೋರಣದಿ ಮಧ್ಯ 

ಕಂಗೊಳಿಸುವ ಕಣ್ಮನಿ

ಅವನೇ ನಮ್ಮ ಚಂದಿರಣ್ಣ.


ಅಂಬರವೇರಿ‌‌ ಸುಂದರ ಮೊಗದಿ 

ನಂದಾ ದೀಪದ ನಂದನ ವನದಿ ನಗುತಿಹನು

ಅವನೇ ನಮ್ಮ ಚಂದಿರಣ್ಣ.


ನೀರಿನ‌ ಎಡೆಗೆ ಮುಖ ತೊಳೆಯಲು 

ಬಂದಿಹ ಚಂದಿರ.

ತಿಳಿ ನೀರನಲ್ಲಿ ತನ್ನಯ ಅಂದವ ಕಂಡ 

ಮೂಕಸ್ಮಿತನಾಗಿಹನು 

ಅವನೇ ನಮ್ಮ ಚಂದಿರಣ್ಣ.


ಭೂತಾಯಿ ಮೂಗಿನ ನತ್ತಿನಂತೆ

ಕಂಗೊಳಿಸುವ ಅಮೂಲ್ಯವಾದ ಆಭರಣ

ಅವನೇ ನಮ್ಮ ಚಂದಿರಣ್ಣ.


—ದಸ್ತಗೀರ ನದಾಫ್, ಬೆಳಗಾವಿ

ಮೊ ಸಂ:-9740426796


- DASTAGEER NADAF

14 Mar 2023, 10:04 pm

ವಿಧಿಯಾಟ

ಅನುಭವಿಸು ಪ್ರತಿಕ್ಷಣವ
ಸಂಭ್ರಮಿಸು ಜೀವನವ
ತಿಳಿದಿಹರಾರಿಲ್ಲಿ ನಿನಗೆ
ನಿಗದಿಯಾದ ಸಮಯವ.?

ನಿನ್ನೆ ಇದ್ದ ಶಬ್ದ ಇಂದು ಸ್ಥಬ್ದ
ಮುಪ್ಪಲ್ಲದ ಚರ್ಮಕೂ ಉಪ್ಪಿನ ಉಡುಗೆ
ಕಲ್ಲಿನಂತ ದೇಹಕೂ ಮಣ್ಣಿನ ಹಾಸಿಗೆ
ಸಲಹಿದ ತನುವೆಲ್ಲಾ ಗೆದ್ದಲು ಹುಳುವಿನ ಪಾಲಿಗೆ

ಕೋಟಿ ಕನಸುಗಳ ಕಾಣುವ ಮನವೆ ಕೇಳು
ಕಾಲ ಬಂದಾಗ ಎಲ್ಲವ ತೊರೆದು ಓಟ ಕೀಳು
ಹಗುರವಿರಲಿ ಹೊರುವ ಕನಸುಗಳ ಬುತ್ತಿ
ತೆರಳದಿರಲಿ ಆತ್ಮ ನಿರಾಸೆಯ ಹೊತ್ತು..

ಡಾ. ಅನಿಲ್..

- anil

13 Mar 2023, 11:35 am

ನಿನ್ನೆ ಪ್ರೀತಿಸುವೆ

ಕಾಯಿಸಿ, ಸತಾಯಿಸುವ
ಆಸೆ ಏಕೆ ನಿನ್ನಲಿ..
ಒಲಿದರೂ, ಮುನಿದರೂ
ನೀನೇ ಬೇಕು ನನಗಿಲ್ಲಿ..
ಸಿಹಿ ಕಹಿಗಳು ಏನೇ ಬರಲಿ..
ನೋವು, ನಲಿವಿಗೂ ನೀನೊಬ್ಬ ಸಾಕಿಲ್ಲಿ..
ಮನಸ್ಥಿತಿ, ಪರಿಸ್ಥಿತಿಗಳಲಿ ಅಂತರ ನೂರು...
ಕಾರ್ಯ, ಕಾರಣವಿಲ್ಲ ಪ್ರೀತಿ ಹುಟ್ಟಲು...
ಕಣ್ಣಿನ ರೆಪ್ಪೆಯಂತೆ ಜೊತೆ ಇರುವೆ...
ಹಸ್ತದ ರೇಖೆಯಾಗಿ ನಿನ್ನ ಸೇರುವೆ...
ಹೇ ನನ್ನ ಒಲವೆ.... ನಿನ್ನೇ ಪ್ರೀತಿಸುವೆ...

ತನುಮನಸು✍️

- Tanuja.K

12 Mar 2023, 07:56 pm

ಯಶಸ್ಸು

ಸಾಧನೆಯ ಹಾದಿಯಲಿ
ಸಹನೆ ಸದಾಯಿರಲಿ
ಗುರಿ ಮುಟ್ಟುವರೆಗೂ ನಿಲ್ಲದೆ
ಆತ್ಮ ವಿಶ್ವಾಸದಿ ಸಾಗು ನೀ ಮರೆಯದೆ
ಕಷ್ಟಗಳು ಬಂದರೆ ಸಹಿಸು
ಅನಂತರ ಪಡೆಯುವೆ ನೀ ಯಶಸ್ಸು
ಇದುವೇ ಜೀವನದ ಹುಮ್ಮಸ್ಸು
ಇದನ್ನರಿತು ಸಂತಸದಿ ಜೀವಿಸು.
ಯೋಗಿತ ಟಿ.ಎನ್.

- Yogitha T N

09 Mar 2023, 08:05 am

ಬದಲಾಗಬೇಕಿದೆ

ನೋವನ್ನುಂಡು ಸಂತಸದ ಕಂಪನ್ನು ಹರಡಿಸಿ
ಮಮತೆಯ ಮಳೆಯನ್ನು ಸುರಿಸುವಳು ಹೆಣ್ಣು
ಅಮ್ಮನಾಗಿ, ಅಕ್ಕ,ತಂಗಿ,ಹೆಂಡತಿಯಾಗಿ
ಬದುಕಿನ ಜವಾಬ್ದಾರಿ ನಿರ್ವಹಿಸುವಳು ಹೆಣ್ಣು!

ಹೆಣ್ಣೆಂದರೆ ಸಹನೆ, ಶಾಂತಿ,ಪ್ರೀತಿ ವಿಶ್ವಾಸ
ಹೆಣ್ಣೆಂದರೆ ಮತ್ತೊಂದು ಜೀವಕೆ ಉಸಿರು ನೀಡುವಳು
ಕನಸುಗಳಿಗೆ ರೂಪವಾಗಿ,ಪದಗಳಿಗೆ ನಿಲುಕದವಳು
ಎಲ್ಲವೂ ಅವಳಿಂದಾದರೂ, ಒಂಚೂರು ಗರ್ವಪಡದವಳು!

ಪುರುಷರಿಗೆ ಸರಿಸಮನಾಗಿ ಸ್ವತಂತ್ರವಾಗಿ ಬದುಕಬಲ್ಲಳು
ಆದರೂ ಆಕೆ ನರಳುತ್ತಿದ್ದಾಳೆ ದೌರ್ಜನ್ಯದಡಿಯಲ್ಲಿ ಸಿಲುಕಿ
ಸ್ವಾವಲಂಬಿಯಾಗಿ ಬದುಕಲು ಬಿಡರು ಸಮಾಜದ ನಡುವಿನಲ್ಲಿ
ಹೆಸರಿಗಷ್ಟೇ ಮಹಿಳೆ ಒಬ್ಬಂಟಿಯಾಗಿ ಓಡಾಡಲು ಸ್ವತಂತ್ರಳು!

ತಡೆಯಬೇಕಿದೆ ಹೆಣ್ಣು ಭ್ರೂಣಹತ್ಯೆ,ವರದಕ್ಷಿಣೆ,ತಾರತಮ್ಯ,ಅತ್ಯಾಚಾರಗಳನ್ನು
ಸಮಾಜದ ಕಣ್ಣುಗಳಾಗಬೇಕಿದೆ ಮಮತೆ,ನಂಬಿಕೆ,ನೈತಿಕ ಮೌಲ್ಯಗಳು
ಹೀಗಾಗಿದ್ದಲ್ಲಿ ಮಾತ್ರವೇ ಮಹಿಳಾ ದಿನಾಚರಣೆಗೊಂದು ಅರ್ಥ
ಇಲ್ಲವಾದಲ್ಲಿ ಈ ಆಚರಣೆ ನಡೆಸುವುದು ವ್ಯರ್ಥ!

- ಪ್ರಿಯಾಂಕ

08 Mar 2023, 09:06 am

ಅಂತಾರಾಷ್ಟ್ರೀಯ ಮಹಿಳಾ ದಿನ ವಿಶೇಷ.

ಬಾನಂಗಳದಲ್ಲಿ ನೇಸರನು ಬರುವ ಮುಂಚೆ
ನೀ ತೊಡುಗುವೆ ನಿನ್ನ ಕಾಯಕದಲ್ಲಿ.
ನಿನಗೆ ಯಾರೇ ಸರಿಸಾಟಿ ಈ ಜಗದಲ್ಲಿ.
ಎಷ್ಟೇ ಕಷ್ಟ ಬಂದರು ನೀ ಹೊಳೆಯುವೆ ಕನ್ನಡಿಯಂತೆ.
ತಾಯಿಯಾಗಿ, ಸತಿಯಾಗಿ ಜೊತೆ ಬರುವೆ ನೆರಳಿನಂತೆ.
ಸಾವಿರಾರು ಸವಾಲುಗಳು ಎದುರಾದರೂ ನಡೆಯುವೆ ನೀ ದಿಟ್ಟ ಹೆಜ್ಜೆಯನಿಟ್ಟು.
ನಿನ್ನ ನೋವುಗಳನ್ನು ಪಕ್ಕಕೆ ಬಿಟ್ಟು.
ಮನೆ-ಮನೆಯಲ್ಲಿ ದೀಪ ಮೂಡಿಸಿ
ಹೊತ್ತು ಹೊತ್ತಿಗೆ ಅನ್ನ ಉಣಿಸಿ
ಸಂಸಾರದ ನೌಕೆ ಸಾಗಿಸುವ ಆಕೆ
ನಿನಗೆ ಬೇರೆ ಹೆಸರು ಬೇಕೆ .......?
ಸ್ತ್ರೀ ಅಂದರೆ ಅಷ್ಟೆ ಸಾಕೆ .....?
ಯೋಗಿತ.ಟಿ.ಎನ್.

- Yogitha T N

08 Mar 2023, 07:54 am

ಸ್ತ್ರೀ

ಬ್ರಹ್ಮನ ಅದ್ಭುತ ಕಲ್ಪನೆಯೆ
ಪ್ರಕೃತಿಯ ಅಪ್ರತಿಮ ಸೃಷ್ಟಿಯೆ
ಪ್ರೀತಿ-ಸಹನೆಯ ಪ್ರತಿರೂಪವೆ
ಧೈರ್ಯ-ತ್ಯಾಗದ ಮೂರ್ತಿಯೆ

ತಾಯಾಗಿ ಜೀವವಿತ್ತು
ಪ್ರೀತಿ -ಮಮತೆಯಿಂದ ಸಲಹಿ
ಸರ್ವಸ್ವವನ್ನೂ ಧಾರೆ ಎರೆವ
ನೀನಿಲ್ಲದ ಜಗವು ಶೂನ್ಯ

ಗೆಳತಿಯಾಗಿ ಜೀವನದ ಜೊತೆಯಾಗಿ
ಕಷ್ಟ -ಸುಖದ ನೊಗವ ಹೊರುತ
ಬದುಕಿಗೆ ಹೊಸ ಅರ್ಥವ ಕೊಡುವ
ನೀನಿಲ್ಲದ ಬದುಕು ವ್ಯರ್ಥ

ಹೆಣ್ಣಿಂದಲೇ ರಾಮಾಯಣ ನಾರಿಗಾಗಿಯೇ ಮಹಾಭಾರತ
ನಿನ್ನ ತುಳಿದು ಬದುಕಿದವರಿಲ್ಲ ಜಗದಲಿ
ಹೆಣ್ಣಿಗೆ ಶಿಕ್ಷಣ, ಸಮಾನತೆ, ಗೌರವವು
ಸಮಾಜದ ಉನ್ನತಿಗೆ ಮೂಲವು.

ಡಾ.ಅನಿಲ್

- anil

08 Mar 2023, 06:30 am

ಸಾಧನೆಯ ಹಾದಿ

ಸಾಧಿಸಲು ಏನಿದೆ ಈ ಜಗದೊಳು
ಹೇಳಿ ಸುಮ್ಮನಿರುವ ಮನುಜರು ದಡ್ಡರು
ಸೋತರೂ ಗೆಲುವಿಗಾಗಿ ಹಾತೊರೆದು
ಬದುಕ ಸವಿಯನ್ನು ಕಂಡವರು ಜಾಣರು!

ನೋವು-ನಲಿವು, ಸುಖ-ದುಃಖ ಹಂಚಿಕೊಂಡರೆ
ಸಾರ್ಥಕವೆನಿಸುವುದು ಬಾಳು
ಸೋತವರಿಗೂ ಬೆನ್ನುತಟ್ಟಿ, ಗೆದ್ದವರಿಗೂ ಪ್ರೋತ್ಸಾಹಿಸಿ
ನಗಿಸುತ್ತ ಮರೆಸಬೇಕು ಜನರ ಗೋಳು!

ಕನಸು ಕಾಣುವವನಿಗೆ ಗುರಿ ಮುಟ್ಟುವ ತವಕ
ಖಾಲಿ ಕುಳಿತಿರುವವನಿಗೆ ನಿದ್ದೆಯಲ್ಲಿಯೂ ದುಃಖ
ತಿಳಿದಷ್ಟು ಮತ್ತಷ್ಟು ಸಾಧಿಸುವವರಿಗೆ ತವಕ
ಯಾರಿಗೆ ಬೇಕು ಸಾಧನೆಯಿಲ್ಲದ ಸುಖ!

ನಮ್ಮೆದುರಿರುವ ದಾರಿ ಕಿರಿದಾದರೇನು
ನಮ್ಮೊಳಗೆ ಇರಬೇಕು ಸಾಧಿಸುವ ಛಲ
ಗೆಲುವಿನ ಹೆಜ್ಜೆ ಕಠಿಣವಾದರೇನು
ಸಾಧನೆಗೆ ದೊರಕುವುದು ತಕ್ಕ ಪ್ರತಿಫಲ!

- ಪ್ರಿಯಾಂಕ

06 Mar 2023, 07:05 pm

ಶಿವನೇ ಕೇಳಿಸುತ್ತಿರುವುದೇನಪ್ಪ...

"ಕೊಟ್ಟಾದರು ಕೊಡು ಶಿವನೇ..
ಅವಳ ಸೂಚನೆಯೆನ್ನೆ !
ಎಷ್ಟು ಕಾಯೋದು.. ನಾ_ಅವಳನ್ನ !
ಇನ್ನೆಷ್ಟು ಪರೀಕ್ಷೆ ಮಾಡ್ತಿಯಪ್ಪ..
ನನ್ನ ತಾಳ್ಮೆಯೆನ್ನ !
ಆದಷ್ಟು ಬೇಗನೆ ಕರಣಿಸೋ ಶಿವನೇ..
ನನ್ನವಳನ್ನ !
ಅವಳಿಗೂ ತಿಳಿಸೋ ಶಿವನೇ..
ನಾ_ಅವಳ ಆಗಮನವ
ನಿರೀಕ್ಷಿಸುತ್ತಿರುವುದನ್ನ !!"
ಎಮ್.ಎಸ್.ಭೋವಿ...✍️
.

- mani_s_bhovi

06 Mar 2023, 05:48 pm