Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಭಾವಯಾನ

ಕಾವಲು ಹಾದಿಯಲ್ಲಿ ಕನವರಿಸ
ನಿಂತ ನೆನಪುಗಳ ನರ್ತನ. ..
ಇರುಳ ಅಂಗಳದ ನಿದಿರೆಗೆ
ಅಪ್ಪಲಾಗದೆ ನೆನಪಿಗೊಂದರಂತೆ
ಕಣ್ಣ ನೀರ ಹನಿಗಳ ಅರ್ಪಣ!!
ಭಾವನೆಗಳು ಬಣ್ಣದ ಮಾತುಗಳಡಿ
ತಗಡಿನ ತುತ್ತೂರಿಯಂತೆ"
ಉಸಿರ ಬಿಗಿ ಉದಿದಾಗಲಷ್ಟೆ
ಹೊರ ಬಂದ ಧ್ವನಿ ಕಿವಿಗಳನಪ್ಪಿ
ಸೇಳೆಯ ಹೊರಟದ್ದು
ಅದೊಂದು ಸದ್ದಿನ ಸಿಹಿ ಸಿಂಚನ::
ಭಾವಿಸಿ ಕೊಂಡತೆ ಇಲ್ಲಿ ಈ
ಭಾವನೆಗಳ ಕಥನ....
ಭಾವನೆಗಳಾಗದಿರಲಿ ಕಾಲಹರಣಕೊಂದು
ಬಳಸುವ ಸಾಧನ. ...@ ವಿಶ್ವ ರಾಜ್..

- Vishwa Raj ನಾ ನಿನ್ನಾ ಮನಸು

02 Apr 2023, 07:31 am

ಉಲ್ಲಾಸ

ಉಲ್ಲಾಸ

ಮುಂದೆ ಬರುವ ಚುನಾವಣೆ
ಎಲ್ಲಿಗೆ ಹರುಷ ಯಾರಿಗೆ
ಉಲ್ಲಾಸ ತರುವುದೋ
ಯಾರಿಗೆ ಗೊತ್ತು

ನನಗೆ ಮುಜಾನೆಯ ಸಮಯದಲ್ಲಿ
ನಾನೆ ರಾಜ್ಯದ ರಾಜಕುಮಾರನಾಗಿ
ಪಟ್ಟ ಕಟ್ಟಿ ಜನ ಸಮೂಹವೆಲ್ಲಾ
ಉಲ್ಲಾಸದಿಂದ ಕುಣಿದು ಕುಪ್ಪಳಿಸಿತು

ಎಲ್ಲಿಲ್ಲದ ಆನೆ ಕುದುರೆ ಒಂಟೆ
ಹುಲಿ ಸಿಂಹ ನವಿಲುಗಳ
ಜೊತೆಯಲ್ಲಿ ಚಾರೋಟಿಯಲ್ಲಿ
ಮೆರವಣಿಗೆ ಸಾಗಿತ್ತು ನನ್ನ ಸಾಮ್ರಾಜ್ಯದಲ್ಲಿ

ಮುತ್ತು ರತ್ನ ವಜ್ರ ವೈಢೂರ್ಯಗಳು
ಪುಷ್ಪ ಮಾಲಿಕೆಗಳ ಸಾಲು ಸಾಲು
ಪ್ರೇಕ್ಷಕರ ಸವಾರಿ ಸಾಗರೋಪಾದಿಯಲ್ಲಿ
ಹರಿದು ಬರುತ್ತಿತ್ತು ನನ್ನದೊಂದು ಚಿಕ್ಕ ಕನಸಲ್ಲಿ

ಜಿ ಟಿ ಆರ್ ದುರ್ಗ
ಜಿ ಹೆಚ್ ಎಲ್
ಬಂಗಾರಪೇಟೆ

- Gtramachandrappa Ramachandrappa

30 Mar 2023, 05:28 pm

ಚೈತ್ರ ಮಾಸದ ಮೊದಲ ದಿನ.

ವಸಂತ ಕಾಲ ಬಂದಿತ್ತು.
ಎಲ್ಲೆಲ್ಲೂ ಹರುಷ ತಂದಿತ್ತು.
ಮರಗಳಲ್ಲಿ ಚಿಗುರೊಡೆಯಿತ್ತು.
ಕೋಗಿಲೆಯ ಹಾಡು ಇಂಪಾಯಿತ್ತು.
ಹೊಸ ಯುಗಾದಿ ನಿನಗೆ ಸ್ವಾಗತ.
ಹೊಸ ವರ್ಷ ನಿನಗೆ ಸುಸ್ವಾಗತ.
ಬಾ ಹೊಸ ರವಿಕಿರಣವ ಸೂಸುತ.
ಕವಿದಿರುವ ಅಂಧಕಾರವ ಓಡಿಸುತ.
ಬೇವು ಬೆಲ್ಲದ ಮಿಲನದ ಒಲವು.
ಮನಕೆ ಸಂತಸ ತಂದಿದೆ ಕೋಗಿಲೆಯ ಸ್ವರವು.
ತೋರಣಕೆ ಬೇಕು ಮಾವು,ಆರೋಗ್ಯಕೆ ಬೇಕು ಬೇವು.
ತಿಂದು ದೂರವಾಗಿಸೋಣ ನಮ್ಮೆಲ್ಲರ ನೋವು.
ಯುಗಾದಿ ಹಬ್ಬದ ಶುಭಾಶಯಗಳು

- Yogitha T N

22 Mar 2023, 08:09 am

ಕೇಳೋ ಮಾನವ

ಬಿಟ್ಟ ಹೊಂಟಾನ
ಗಳಿಸಿದ್ದೆಲ್ಲವನ್ನ
ಗಟ್ಟಿ ಮನಸ ಮಾಡಿ
ಶಿವನ ದಾರಿ ಹಿಡದಾನ

ರುಪಾಯಕ ರೂಪಾಯ
ಲೆಕ್ಕ ಹಾಕಿ ಎಲ್ಲಾ ಕೂಡಿಸ್ಯಾನ
ಸಾವಿರ ಸಂಬಂದಿಗಳನ್ನ ಕೂಡಿ
ಸಡಗರದಿಂದ ಕೇಕಿ ಹಾಕ್ಯಾನ

ಮದುವಿ ಮುಂಜಿ ಮಾಡಿಕೆಂತ
ಅವ ಎಲ್ಲಾ ಮರತಾನ
ನಾಳಿನ ದಿನವೇ ಇವನಿಗಿಲ್ಲ
ಅಂತ ಆ ದೇವ ಗೀಚ್ಯಾನ

ಎಲ್ಲಿಂದೆಲ್ಲಿಗೆ ಯಾಕ ಒಡತಿ
ಯಾರಿಲ್ಲ ನಿನಗಿನ್ನ
ಉಳಿದಿದ್ದ ಒಂದ ದಾನ ಧರ್ಮ
ಮರಿಬ್ಯಾಡ ನೀ ಇದನ್ನ.

ನಾಗರಾಜ ಬಾರ್ಕೆರ್

- ನಾಗರಾಜ ಬಾಕೆ೯ರ್

21 Mar 2023, 09:03 am

ಕನಸು

ಹುಚ್ಚು ಆಸೆಯಿಂದ
ಮೆಚ್ಚಿ ಕೂತವನು ನಾನು
ಏಳು ಬೀಳುಗಳ ಎಣಿಯಲ್ಲಿ
ಬಿದ್ದರು ಮತ್ತೇಳುವವನು ನಾನು.

ನೂರು ಗುಡಿಯ ಮೇಲೆ
ನಂಬಿಕೆಯ ಕಳಸವಿತ್ತಿರುವೆ
ಜಾರಿಯಾಗಲು ನನ್ನ ಕನಸು
ಮತ್ತದೇ ಪ್ರಯತ್ನವನ್ನು ಸಾಗಿಸಿರುವೆ.

ಯುಗ ಯುಗಗಳ ಗೊಡವೆ
ಚೂರು ನನಗಿಲ್ಲ
ಇರುವ ಜನ್ಮದೊಳಗೆ ಹೆಸರ
ಉಳಿಸಿ ಹೋಗಬಹುದಲ್ಲವೆ.

- ನಾಗರಾಜ ಬಾಕೆ೯ರ್

20 Mar 2023, 03:59 pm

ಜಾತಿನಾ..? ಪ್ರೀತಿನಾ..?

ಮನದಾಳ ಮಾತ ಮನಸೇರಿ ಕುಂತ
ಮಾಡಿದ ಪ್ರೀತಿ ನೀರಾಗ ಹರದ ಹೋತ
ಮಾಡಕೊಂಡ ಮಾತ ಗಟ್ಟ್ಯಾಗಲಿಲ್ಲ
ಕಟಗೊಂಡ ಕನಸ ನನಸಾಗಿ ಉಳಿಲಿಲ್ಲ

ನಿಂಬಿಯ ಗಿಡಕ ತುಂಬ್ಯಾವ ಬಾಳ ಮುಳ್ಳ
ಮಾಡಿದ ಪ್ರೀತಿ ನೋಡಿ ಹಚ್ಚ್ಯಾರ ಕುಳ್ಳ
ಮನಸ್ಸಿಗಿ ಇಲ್ಲ ಮನಿಯೋರು ಮದವಿಗಿ ಒಪ್ಪಲ್ಲ
ಜಾತಿ ಬ್ಯಾರಂತ ಬೇರಾಗಿದ್ದ ಪ್ರೀತಿ ಮುರದಾರಲ್ಲ

ಮನಸ್ಸೆಂಬ ಮನಿಯ ಬಾಗಿಲ ನೀ ತೆರದಿ
ಪ್ರೀತಿಯ ಸುದ್ದಿಕೇಳಿ ಬಿಡಿಸ್ಯಾರ ನಿಮ್ಮನಿ ಹಾದಿ
ತಗದೊಗ ಚೈನ ಬಡದಾರ ನನ್ನ ಬಾಳ
ಹಾದ್ಯಾಗ ಹೋಗಾಗ ಇನಕಿ ನೋಡ ನನ್ನ ಗೋಳ

ಹಾಳಾದ ಮನಸ್ಸ ಕಟಗೊಂಡ ಕುಂತ ನೂರಾರ ಕನಸ
ಮುಳ್ಳಿನ ಮನಸ್ಸು ಮನಿಯಾಗ ಮನಿಯವರಿಗಿ ಚುಚ್ಚಿ
ಮಾಡ್ಯಾದ ನಮ್ಮ ಪ್ರೀತಿಗಿ ಬಾಳ ದೂರ
ಒಂದೊಮ್ಮೆ ಬಂದ ನೋಡಿ ಹೋಗ ದೂರ

- Shankru Badiger

20 Mar 2023, 12:11 pm

ಹಗಲಿರುಳ ತಿರುಳ ತಿಳಿಯೋ ನೀ ದುರುಳ...

ಕತ್ತಲು ಬೆಳಕೊಳಗಿದೆ,
ಬೆಳಕು ಕತ್ತಲೊಳಗಿದೆ,
ಕತ್ತಲು ಬಂದಾಗ ಬೆಳಕು ಮರೆಯಾಗಿದೆ,
ಬೆಳಕು ಬಂದಾಗ ಕತ್ತಲು ಮರೆಯಾಗಿದೆ,
ಇರುವ ರವಿ ಅಲ್ಲೇ ಇರುವಲ್ಲೇ,
ಅಲೆವ ಶಶಿ ರವಿ ಇರುವಲ್ಲಿ,
ಹಗಲಲ್ಲೂ ಶಶಿ ಇರುವ ಮರೆಯಾಗಿರುವ,
ಇರುಳಲ್ಲೂ ರವಿ ಇರುವ ಮರೆಯಾಗಿರುವ,
ಹಗಲಿರುಳ ತಿರುಳ ತಿಳಿಯೋ ನೀ ದುರುಳ,
ತಿಳಿದವರಿಲ್ಲಿ ಇಹರು ವಿರಳಾತಿ ವಿರಳ,
ಅವರಿವರ ಸೊಲ್ಲ ಬಲ್ಲವರಿಲ್ಲಿ ಬಹಳ,
ಆದರವರದೇ ಅಂತರಾಳ ತಿಳಿಯದವರೇ ಹೇರಳ,
ನಿನ್ನಂತರಂಗದಲಿ ಕಾರ್ಮೋಡ ಕವಿದಿದೆ,
ಅದೇ ಅಂತರಂಗದಲಿ ದಿವ್ಯ ಜ್ಯೋತಿ ಬೆಳಗುತಿದೆ,
ಅಂತರಂಗ ಬಹಿರಂಗ ಅದು ಬೇರಿಲ್ಲ ನೀ ಕೇಳ,
ನಿನ್ನ ಮನದ ಮಾತು, ಅದ ಒಮ್ಮೆ ನೀ ಕೇಳ.....

----- tippu -----

- tippu

19 Mar 2023, 10:45 pm

ನಗುಮುಖದ ಅರಸನಿಗೆ ಹುಟ್ಟುಹಬ್ಬದ ಸಂಭ್ರಮ

ಸರಳತೆಯ ಸಾಹುಕಾರ,
ನಗು ಮುಖದ ರಾಜಕುಮಾರ
ಕಲಿಯುಗದ ಕರ್ಣಕುವರ,
ರಾಜ್ಯ ಕಂಡ ಅತ್ಯುನ್ನತ ವ್ಯಕ್ತಿತ್ವದ ಸರದಾರ
ಕರುನಾಡ ಪ್ರತಿ ಹೃದಯದಲ್ಲೂ ಮಾಡುತ್ತಿರುವಿರಿ ರಾಯಭಾರ,
ನಿಮ್ಮ ಪ್ರತಿ ಹೆಜ್ಜೆಗಳಲ್ಲು ಮಾಡಿದ್ದಿರಿ ಮಾನವೀಯತೆಯ ಪ್ರಚಾರ,
ಮನದೆಲ್ಲೇಡೆ ತುಂಬಿಕೊಂಡಿದ್ದೀರಿ" ಕೆಟ್ಟವರಿಗು ಒಳ್ಳೆಯದನ್ನೇ ಬಯಸೋಣ"ಎಂಬ ಒಳ್ಳೆ ವಿಚಾರ
ಎಂದಿಗೂ ಬಯಸಲಿಲ್ಲ ಆಡಂಬರ,
ನಗು ನಗುತ್ತಲೇ ಕರುನಾಡ ಹೃದಯದಲ್ಲಿ ದೇವರಾದ ಧೀರ,
ನಮ್ಮಿ *' ಡಾ. ಪುನೀತ್ ರಾಜಕುಮಾರ".*

- Shankru Badiger

17 Mar 2023, 09:50 pm

ಭಾರತ ರತ್ನ ಜನ್ಮ ದಿನ.

ಸದಾ ಕಾಡುವ ನಗುವಿನ ಒಡೆಯ
ಮನಸ್ಸು ಒಪ್ಪುತ್ತಿಲ್ಲ ನಿಮ್ಮ ಅಗಲಿಕೆಯ ವಿಷಯ.
ಮರೆಯಲಾಗದ ನಿಮ್ಮ ಅಭಿನಯ
ಜಗತ್ತು ಕಂಡ ಅಧ್ಬುತ ವಿಸ್ಮಯ.
ಬಾಡಿ ಹೋಹಿತು ಬೆಟ್ಟದ ಹೂವು
ಮುಗಿಲು ಮುಟ್ಟಿದೆ ಅಭಿಮನಿಗಳ
ನೋವು.
ನಿಮ್ಮ ಮೇಲಿದೆ ಜನರ ಒಲವು
ಯಾಕೆ ಕೊಡಲ್ಲಿಲ್ಲ ಸಾವಿನ ಸುಳಿವು??
ನೊಂದ ಮನಕೆ ನೀವೇ ಹಣತೆ
ಎಲ್ಲರ ಹೃದಯದಲ್ಲೂ ಕುಳಿತೆ
ಮರೆಯಲಾಗದ ನಿಮ್ಮ ಮಾತುಕತೆ
ನೀವಿಲ್ಲದೇ ಆಗಿದೆ ಅಪರ ಚಿಂತೆ....
ಜನುಮ ದಿನದ ಶುಭಾಶಯಗಳು ಪ್ರೀತಿಯ ಅಪ್ಪು ಸರ್. ❤️

- Yogitha T N

17 Mar 2023, 06:08 am

ಮಳೆ

ಮಳೆಯ ಆಗಮನ
ಭುವಿಗೆ ಎಲ್ಲಿಲ್ಲದ ಸಂಭ್ರಮ
ತಂಪಿನ ನೀರ ತಂಪಿಗೆ
ನನ್ನೊಳಗೆ ಖುಷಿಯ ಡಿಂಡಿಮ
ಸೋನೆ ಮಳೆ ಬೀಳುವಾಗ
ಹೃದಯ ಹಾಡಲು
ಮನದ ಸಂತಸ ಕೇಳುವುದೇ ಬೇಡ
ಹೃದಯದ ಹಾಡು ಕೇಳಲು

- Nithyavv

16 Mar 2023, 04:51 pm