ಕಾವಲು ಹಾದಿಯಲ್ಲಿ ಕನವರಿಸ
ನಿಂತ ನೆನಪುಗಳ ನರ್ತನ. ..
ಇರುಳ ಅಂಗಳದ ನಿದಿರೆಗೆ
ಅಪ್ಪಲಾಗದೆ ನೆನಪಿಗೊಂದರಂತೆ
ಕಣ್ಣ ನೀರ ಹನಿಗಳ ಅರ್ಪಣ!!
ಭಾವನೆಗಳು ಬಣ್ಣದ ಮಾತುಗಳಡಿ
ತಗಡಿನ ತುತ್ತೂರಿಯಂತೆ"
ಉಸಿರ ಬಿಗಿ ಉದಿದಾಗಲಷ್ಟೆ
ಹೊರ ಬಂದ ಧ್ವನಿ ಕಿವಿಗಳನಪ್ಪಿ
ಸೇಳೆಯ ಹೊರಟದ್ದು
ಅದೊಂದು ಸದ್ದಿನ ಸಿಹಿ ಸಿಂಚನ::
ಭಾವಿಸಿ ಕೊಂಡತೆ ಇಲ್ಲಿ ಈ
ಭಾವನೆಗಳ ಕಥನ....
ಭಾವನೆಗಳಾಗದಿರಲಿ ಕಾಲಹರಣಕೊಂದು
ಬಳಸುವ ಸಾಧನ. ...@ ವಿಶ್ವ ರಾಜ್..
ಕತ್ತಲು ಬೆಳಕೊಳಗಿದೆ,
ಬೆಳಕು ಕತ್ತಲೊಳಗಿದೆ,
ಕತ್ತಲು ಬಂದಾಗ ಬೆಳಕು ಮರೆಯಾಗಿದೆ,
ಬೆಳಕು ಬಂದಾಗ ಕತ್ತಲು ಮರೆಯಾಗಿದೆ,
ಇರುವ ರವಿ ಅಲ್ಲೇ ಇರುವಲ್ಲೇ,
ಅಲೆವ ಶಶಿ ರವಿ ಇರುವಲ್ಲಿ,
ಹಗಲಲ್ಲೂ ಶಶಿ ಇರುವ ಮರೆಯಾಗಿರುವ,
ಇರುಳಲ್ಲೂ ರವಿ ಇರುವ ಮರೆಯಾಗಿರುವ,
ಹಗಲಿರುಳ ತಿರುಳ ತಿಳಿಯೋ ನೀ ದುರುಳ,
ತಿಳಿದವರಿಲ್ಲಿ ಇಹರು ವಿರಳಾತಿ ವಿರಳ,
ಅವರಿವರ ಸೊಲ್ಲ ಬಲ್ಲವರಿಲ್ಲಿ ಬಹಳ,
ಆದರವರದೇ ಅಂತರಾಳ ತಿಳಿಯದವರೇ ಹೇರಳ,
ನಿನ್ನಂತರಂಗದಲಿ ಕಾರ್ಮೋಡ ಕವಿದಿದೆ,
ಅದೇ ಅಂತರಂಗದಲಿ ದಿವ್ಯ ಜ್ಯೋತಿ ಬೆಳಗುತಿದೆ,
ಅಂತರಂಗ ಬಹಿರಂಗ ಅದು ಬೇರಿಲ್ಲ ನೀ ಕೇಳ,
ನಿನ್ನ ಮನದ ಮಾತು, ಅದ ಒಮ್ಮೆ ನೀ ಕೇಳ.....
ಸರಳತೆಯ ಸಾಹುಕಾರ,
ನಗು ಮುಖದ ರಾಜಕುಮಾರ
ಕಲಿಯುಗದ ಕರ್ಣಕುವರ,
ರಾಜ್ಯ ಕಂಡ ಅತ್ಯುನ್ನತ ವ್ಯಕ್ತಿತ್ವದ ಸರದಾರ
ಕರುನಾಡ ಪ್ರತಿ ಹೃದಯದಲ್ಲೂ ಮಾಡುತ್ತಿರುವಿರಿ ರಾಯಭಾರ,
ನಿಮ್ಮ ಪ್ರತಿ ಹೆಜ್ಜೆಗಳಲ್ಲು ಮಾಡಿದ್ದಿರಿ ಮಾನವೀಯತೆಯ ಪ್ರಚಾರ,
ಮನದೆಲ್ಲೇಡೆ ತುಂಬಿಕೊಂಡಿದ್ದೀರಿ" ಕೆಟ್ಟವರಿಗು ಒಳ್ಳೆಯದನ್ನೇ ಬಯಸೋಣ"ಎಂಬ ಒಳ್ಳೆ ವಿಚಾರ
ಎಂದಿಗೂ ಬಯಸಲಿಲ್ಲ ಆಡಂಬರ,
ನಗು ನಗುತ್ತಲೇ ಕರುನಾಡ ಹೃದಯದಲ್ಲಿ ದೇವರಾದ ಧೀರ,
ನಮ್ಮಿ *' ಡಾ. ಪುನೀತ್ ರಾಜಕುಮಾರ".*
ಸದಾ ಕಾಡುವ ನಗುವಿನ ಒಡೆಯ
ಮನಸ್ಸು ಒಪ್ಪುತ್ತಿಲ್ಲ ನಿಮ್ಮ ಅಗಲಿಕೆಯ ವಿಷಯ.
ಮರೆಯಲಾಗದ ನಿಮ್ಮ ಅಭಿನಯ
ಜಗತ್ತು ಕಂಡ ಅಧ್ಬುತ ವಿಸ್ಮಯ.
ಬಾಡಿ ಹೋಹಿತು ಬೆಟ್ಟದ ಹೂವು
ಮುಗಿಲು ಮುಟ್ಟಿದೆ ಅಭಿಮನಿಗಳ
ನೋವು.
ನಿಮ್ಮ ಮೇಲಿದೆ ಜನರ ಒಲವು
ಯಾಕೆ ಕೊಡಲ್ಲಿಲ್ಲ ಸಾವಿನ ಸುಳಿವು??
ನೊಂದ ಮನಕೆ ನೀವೇ ಹಣತೆ
ಎಲ್ಲರ ಹೃದಯದಲ್ಲೂ ಕುಳಿತೆ
ಮರೆಯಲಾಗದ ನಿಮ್ಮ ಮಾತುಕತೆ
ನೀವಿಲ್ಲದೇ ಆಗಿದೆ ಅಪರ ಚಿಂತೆ....
ಜನುಮ ದಿನದ ಶುಭಾಶಯಗಳು ಪ್ರೀತಿಯ ಅಪ್ಪು ಸರ್. ❤️