Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಸ್ನೇಹಿತೆಗೊಂದು ಕವನ

ಇರಬೇಕು ಒಬ್ಬಳು ಸ್ನೇಹಿತೆ ಅಳುವಾಗ ನಗಿಸಲು
ಇರಬೇಕು ಸ್ನೇಹಿತೆ ಮನದ ಮಾತಿಗೆ ಕಿವಿಗೊಡಲು
ಇರಬೇಕು ಸ್ನೇಹಿತೆ ಎಷ್ಟೇ ದೂರ ಇದ್ದರೂ ಸನಿಹವೇ ಇದ್ದಾಳೇನೋ ಅನ್ನುವ ನಂಬಿಕೆ ಹುಟ್ಟಿಸುವಂತೆ
ಇರಬೇಕು ನಮ್ಮಿಬ್ಬರ ದೂರವಾಣಿ ಸಂಭಾಷಣೆ
ಇರಬೇಕು ಒಬ್ಬಳು ಸ್ನೇಹಿತೆ ನಾ ಬಯ್ಯುತ್ತಿದ್ದರು ಅದೇನೋ ಅವಳಿಗೆ ಕೇಳಲು ಇಂಪಾದ ಸಂಗೀತವೆನಿಸುವಂತೆಅವಳು ಬೀರುವ ಕಿರುನಗು
ಇರಬೇಕು ಒಬ್ಬಳು ಸ್ನೇಹಿತೆ ನಾ ಹೇಳಿದ ಮಾತನ್ನು ಅವಳು ಮಾತ್ರ ಕೇಳಿ ಆ ವಿಷಯಗಳ ಇನ್ನೊಬ್ಬರಿಗೆ ಹಂಚದೆ ಮನಸ್ಸಿನಲ್ಲೇ ಸಮಾಧಿ ಮಾಡುವ ಅವಳ ಗುಣ ಅದು ಅವಳ ಹಿರಿಮೆಗೆ ಹಿಡಿದ ಕನ್ನಡಿ
ಇದು ನನ್ನ ಸ್ನೇಹಿತೆಯೋರ್ವಳ ಗುಣ ಸ್ವಭಾವ
ಅವಳು ನನ್ನ ಅಚ್ಚುಮೆಚ್ಚಿನವರ ಪಟ್ಟಿಯಲ್ಲಿ ಮೊದಲು ನಿಲ್ಲುವ ಗೌರವ ಅತಿಥಿ...
❤️❤️

- Bindu_R@

06 May 2023, 09:35 pm

ಅನುರಾಗದ ಅಲೆ

ಕತ್ತಲೆ ಕವಿದ ಈ ಮನವು
ದಿಕ್ಕನ್ನು ತೋಚದೆ ಹೊರಟಾಗ
ನಿಸರ್ಗದ ಮಡಿಲು ಕರೆದಿತ್ತು
ಅಲೆಗಳ ಅಬ್ಬರ ಜೋರಿತ್ತು
ಮೆಲ್ಲನೆ ಗಾಳಿಯು ಬೀಸಿತ್ತು
ನಿನ್ನ ಭೇಟಿಯ ಜಾಗವು ಅಲ್ಲಿತ್ತು
ನಿನ್ನ ಬಿಂಬದ ಚಿತ್ರವು ಬಿಡಿಸಿತ್ತು
ಆ ಚಿತ್ರಕ್ಕೆ ಉಸಿರನ್ನು ತುಂಬಿತ್ತು
ಪಕ್ಕಕ್ಕೆ ನನ್ನನ್ನು ಸರಿಸಿತ್ತು
ಕತ್ತಲೆ ಕವಿದ ಈ ಮನದಿ
ಅನುರಾಗದ ಅಲೆಯು ಉಕ್ಕಿತ್ತು

ಜಯಾ ಪಿ

- Jaya

06 May 2023, 01:48 pm

ಶಾಲೆ

ನಾ ಕಲಿತ ಕನ್ನಡ ಶಾಲೆ
ಮತ್ತೊಮ್ಮೆ ನೋಡೋಣ ಬಾಲೆ...
ಸುತ್ತಲೂ ಚಿತ್ರಗಳ ಕಲೆ
ಎಂಥ ಅದ್ಭುತ ಛಾಯೆ.....
ನಾನರಿತ ಅಕ್ಷರಗಳ ಸಾಲೆ
ಜೀವನಕ್ಕೆ ಸ್ಫೂರ್ತಿಯ ಮಾಲೆ....
ಪರೀಕ್ಷೆ ಎಂಬ ಕಠಿಣ ಅಲೆ
ಪಾಸಾದರೆ ಜನ ಮೆಚ್ಚುವರು ಭಲೇ....

- Jaya

06 May 2023, 01:10 pm

ಭಾವಗೀತೆ

ಭಾವಗೀತೆ


ಏನು ನಿ ನನ್ನೊಳಗು
ಎಲ್ಲವೂ ನೀನು
ನನ್ನದೆಲ್ಲವೂ ನೀನು ನೀನೇ ನಾನು !!ಪ!!

ಭಾವವಾದೆಯಾ ನೀನು
ಜೀವವಾದೆಯಾ ನೀನು
ಕಣ್ಣಾದೆಯಾ ನೀನು
ಒಳಗಣ್ಣಾದೆಯಾ ನೀನು !!೧!!

ಬೆಳಕಾದೆಯಾ ನೀನು
ಬದುಕಾದೆಯಾ ನೀನು
ಸೊರಗಿರುವ ನನ್ನೊಳಗೆ
ಚೈತನ್ಯವು ನೀನು!!೨!!

ನೀನಿರದೆ ನಾನಿಲ್ಲ
ಶೂನ್ಯವೇ ಎಲ್ಲ
ನೀನು ನಾನೆಂಬ
ಭಾವವೇ ಎಲ್ಲಾ !!೩!!
-ಉಮೇಶ ಮುಂಡಳ್ಳಿ

- Umesh Mundalli ನಿನಾದ ವಾಹಿನಿ

02 May 2023, 08:34 pm

ಬಂದು ಬಿಡು

ಬಂದು ಬಿಡು
------

ಮಲೆನಾಡ ಮಡಿಲಲಿ
ಏಕಾಂಗಿಯಾಗಿರಲು
ನೀ ಇರದ ಕೊರಗೊಂದು
ಕಾಡುತ್ತಿತ್ತು

ಸೌಂದರ್ಯ ಜಗದಲ್ಲಿ
ನಾ ಇದ್ದೆ ಅಂದರೂ
ನೀ ಇಲ್ಲದ ಮಂಕು
ಕಾಣುತ್ತಿತ್ತು

ಎಷ್ಟೊ ಕಾದವು ಮನವು
ದಾರಿ ಕಳೆದಂತೆಲ್ಲ
ಕಾಣದೇ ಹೋದಾಗ ನೋವು
ಎದೆಯ ತುಂಬಾ

ಆಸೆ ಹೊತ್ತ‌ಮನವು
ಭಾರವಾಯಿತು ಮನವು
ನೀನಿಲ್ಲ ಎಂಬ
ಅರಿವು ಬಂದು

ಈ ಮಡಿಲು ನಿನಗಾಗಿ
ಇಲ್ಲೊಮ್ಮೆ ಕಾಯುತಿದೆ
ಎಂತ ಒತ್ತಡವಿರಲಿ
ಬಂದು ಬಿಡು ನಲ್ಲೆ

...ಉಮೇಶ ಮುಂಡಳ್ಳಿ ಭಟ್ಕಳ
mr.umesh_mundalli@rediffmail.com

- Umesh Mundalli ನಿನಾದ ವಾಹಿನಿ

02 May 2023, 06:02 pm

ನೆನಪು ಗಳು


ಕೊನೆಯಲ್ಲಿ ನಮ್ಮ ನೆನಪಿಗುಳಿಯುವುದು ನಮ್ಮ ಶತ್ರುಗಳ ಮಾತಲ್ಲ, ನಮ್ಮ ಮಿತ್ರರ ಮೌನ.

ಹೊರಗೆ ಬರಲು ಯತ್ನಿಸಿದಷ್ಟೂ ಒಳಗೇ ಜಗ್ಗುತ್ತವೆ ಹಾಳು ನೆನಪುಗಳು.

- ನೆನಪಿನ ಕವಿತೆ

02 May 2023, 11:54 am

ಮರೆವು

ಮರೆಯುವುದ ಕಲಿಯಬೇಕು ಕೆಲ ಸಮಯ..
ಮರೆವು ಕಲಿಸುವುದು ಪಾಠವ, ಅದು ಅದರ ಸಮಯ

ಮರೆವೆ ಇಲ್ಲವೆಂದಿದ್ದರೆ
ಹೇಗೆ ಮರೆಯುವುದು ನಮ್ಮ ನೋವಿನ ಸಮಯ..??
ಸಂತೋಷದ ಸಮಯವನು
ಮರೆಸುವುದು ಸಮಯ..!

ಮರೆತಿದ್ದೆ ಒಳ್ಳೆಯದಾಯಿತು
ಕೆಲವರನ್ನು, ಕೆಲವುದನ್ನೂ
ನೆನಪಿಸಿಕೊಂಡಷ್ಟು ನೋವೇ ಹೆಚ್ಚು
ಅವರೊಂದಿಗೆ ಕಳೆದ ಸಮಯವನು..

ಹಾಗಾಗಿ ನನಗನಿಸುವುದು
ನೆನಪೇ ನೋವೆಂದು..
ಮರೆವೇ ಹಿತವೆಂದು...

ತನುಮನಸು✍️

- Tanuja.K

01 May 2023, 03:18 am

ಕವನಗಳ ಗೀಳು

ಕವನಗಳ ಬರೆಯಲು ಮನಸ್ಸಿಲ್ಲ ಇಂದು..
ಬರೆಯದಿದ್ದರೂ ಸಮಾಧಾನವಾಗದು ನನಗದು..
ಹುಚ್ಚು ಕನಸುಗಳ ಬೆನ್ನೇರಿದ್ದೆ ಅಂದು..
ವಾಸ್ತವದ ಬದುಕೇ ಶಾಶ್ವತವಾಗಿ ಉಳಿಯೋದು..

ತೊರೆದು ಸಾಗಲು ನೋವುಗಳಿವೆ..
ಬರಡಾದ ಬದುಕಲಿ ಬರಿ ನೆನಪಿನ ಸಾಲುಗಳೆ...
ಸುಮ್ಮನಿದ್ದರರೂ ಬಿಡದು ಕವನಗಳ ಗೀಳು ನನ್ನ..
ತೋಚಿದ್ದು ಗೀಚಿದರೆ ಅದೇ ಎಷ್ಟೋ ಸಮಾಧಾನ..


ತನುಮನಸು✍️

- Tanuja.K

30 Apr 2023, 11:12 pm

ನನ್ನವಳೇ.....

ಹೇ ನನ್ನವಳೇ ನನ್ನಲ್ಲೇ ಉಳಿದವಳೆ
ನನ್ನ ಎದೆಯಾಳಕೆ ಇಳಿದು ಕವಿತೆಯಾದವಳೆ
ಪದಗಳ ಬಿಡಸಿ ಭಾವವ ಹರಿಸಿ
ಪ್ರೇಮದ ಪದಮಾಲೆಯಾದವಳೆ
ನನ್ನಲ್ಲಿ ಹೊಸತನದ ಹುರುಪನ್ನು ತಂದವಳೆ
ದಹಿಕ ಸ್ವರ್ಶಕಿಂತ ಮಣ ಸ್ವರ್ಶ ಬೇರತವಳೆ
ನೀನು ನನ್ನ ಜೊತೆ ಇರದಿದ್ದರೂ ಈ ಕವಿತೆಯಲ್ಲಿ
ಜೀವಂತವಾಗಿ ಇರುಸುವೇನು
ನೀನು ಮೂಡಿಸಿದ ಈ ಪ್ರೇಮಭಾವ
ನನ್ನಲ್ಲಿ ಶಾಶ್ವತವಾಗಿದೇ
ಸಂಭ್ರಮಿಸಲು ಇನ್ನೇನು ಬೇಕು...
ಎಮ್.ಎಸ್.ಭೋವಿ...✍️

- mani_s_bhovi

29 Apr 2023, 10:49 pm

ಕವಿತೇ....

"ಕವಿತೆಯ ಸಾಲು ನಿಂತಿದೆ ಏಕೋ...?
ಕಾದಿದೆ ನಿನ್ನಯ ಅನುಮತಿ ಕೋರಿ..!
ಗೀಚುವ ನನ್ನನೇ ಗಾಳಿಗೆ ತೂರಿ..!!"
"ಭಾವದ_ಗೀತೆ ಕುರಿತಿದೆ ನಿನ್ನ !
ತವಕದಿ ಕಾದಿದೆ ಸೇರಲು ನಿನ್ನ !
ಬಯಕೆಯ ಚಿಗುರಿಗೆ ಬೆಳಕದು ನೀನೆ !
ಬಯಸುವ ಬಯಕೆಯು ಆಗಿಹೆ ನೀನೆ !
ಒಲವ ರಾಗವೇ ನೀ ಇಲ್ಲದೇ...
ಕವಿತೆಯ ಸಾಲು ನಿಂತಿದೆ ಏಕೋ ?!"
ಎಮ್.ಎಸ್.ಭೋವಿ...✍️

- mani_s_bhovi

20 Apr 2023, 09:35 pm