Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಓ... ಒಲವೇ

ಕನಸಲು ನಿನ್ನನೇ
ಪ್ರತಿದಿನ ಜಪಿಸುವೆ
ಬಂದು ಬಿಡು ನೀ ನಿಜವಾಗಿ

ಯಾರನೆ ಕಂಡರು
ನಿನ್ನದೇ ನೆನಪು
ಬರುವುದು ಮನಕೆ ಸಿಹಿಯಾಗಿ

ಈ ಸುಂದರ ಪ್ರೀತಿಯಲಿ
ನನ್ನ ಪ್ರೇಮಿಯೂ ನೀನಾದೆ
ನನ್ನ ಒಲವ ನಿನಗೆ ಬಡಿಸಲೆ
ಈ ಕ್ಷಣದಲೆ.....

ಒಂದು ಕ್ಷಣಕೂ ಮರೆಯಾಗದಿರು ನೀನು
ನೀನೇ ನನ್ನ ಸ್ವಾತಿಮುತ್ತು
ಹೃದಯದೊಳಗೆ ನನ್ನ ಬಚ್ಚಿಟ್ಟುಕೊ ಒಮ್ಮೆ ಸಾಕು

ಒಂದು ಸುಂದರ
ಮೀನು ನೀನು
ನಾ ಅದಕೆ ಕಡಲಾಗಿ ನೀರುಣಿಸಿ
ಜೀವ ತುಂಬಲೇನು?

ಓ ನನ್ನ ಜೀವವೇ
ನೀ ಹೇಳಿಬಿಡು ನಿನಗೂ
ನಾನು ಇಷ್ಟವೇ?
ಇಷ್ಟವಾದರೆ ಹೃದಯದಲ್ಲಿ
ಇಟ್ಟು ಕೊಂಡು ನಾ ಕಾಯುವೆ

ನನ್ನ ಉಸಿರಲ್ಲಿ ಉಸಿರಾಗಿ
ಹೋಗಿರುವೆ ನೀನು
ನಿನಗಾಗಿಯೆ ಮೀಸಲು
ನನ್ನುಸಿರಿನ ಪ್ರತಿ ಬಡಿತವು


ಸಿಂಧು ಜಯಂತ್ k✍️

- Sindhu jayanth k

11 Jun 2023, 10:37 pm

ಸ್ವಲ್ಪ ಸಮಯ ಬೇಕಾಗಿದೆ..

ಬಿಡುವಿಲ್ಲದ ಕೆಲಸ ನಿನ್ನದು..
ಸ್ವಲ್ಪ ಬಿಡುವು ಮಾಡಿಕೊ ಈ ಜೀವ ಕಾದಿವುದು..
ನಿನ್ನಲ್ಲಿ ಏನನ್ನೂ ಬಯಸುವುದಿಲ್ಲ ನಾನು..
ಪ್ರೀತಿ ಮತ್ತು ಕಾಳಜಿಯ ಮುಂದೆ ಯಾವುದು ದೊಡ್ಡದಲ್ಲ ಹೌದಲ್ಲವೇನು..??
ನನ್ನ ಸಾವಿಗಾದರೂ ಸ್ವಲ್ಪ ಬೇಗ ಬರಲು ತಯಾರಾಗಿರು...
ಮಣ್ಣು ಮಾಡುವ ಜನರು ನನ್ನಂತೆ ಕಾಯರು..



ತನುಮನಸು✍️

- Tanuja.K

11 Jun 2023, 05:05 pm

ನಮ್ಮ ಪವಿತ್ರ ಭಾರತದೇಶ

ಭಾರತೀಯ ಮಕ್ಕಳೆಲ್ಲ ನಾವು ಒಂದೇ ಇಂದು ಎಂದಿಗೂ ಎಂದೆಂದಿಗೂ
ಭರತ ಭೂಮಿಯ ಬಿಡೆವು ಇಂದು ಎಂದಿಗೂ ಎಂದೆಂದಿಗೂ

ನಮ್ಮ ನೆಲ ನಮ್ಮ ಜಲ ನಮ್ಮ ಪವಿತ್ರ ತಾಣವು
ನಮ್ಮ ಇರುವು ನಮ್ಮ ಒಲವು ನಮ್ಮ ನೆಲದ ಪ್ರಾಣವು
ನಮ್ಮ ದೇಶ ನಮ್ಮ ಭಾಷೆ ನಮ್ಮ ಶಕ್ತಿ, ತ್ರಾಣವು
ನಮ್ಮ ಕುಲ ನಮ್ಮ ಬಲ ನಮ್ಮವರ ಸ್ವಾಭಿಮಾನವು

ಬರಲಿ ಎಲ್ಲಾ ದೇಶಭಕ್ತರು ಭರತ ಮಾತೆ ಮಕ್ಕಳು
ತರಲಿ ಎಲ್ಲ ದೇಶಕ್ಕಿಂದು ಸವಿ ಗೆಲುವಿನ ಕಲಿಗಳು
ಹೊರಲಿ ಎಲ್ಲ ದೇಶ ನಿಷ್ಠೆ ಶ್ರೇಷ್ಠತನವ ಮೆರೆಯಲು
ಹೊರಳಿ ಎಲ್ಲಾ ನಮ್ಮ ದೇಶಕ್ಕಿಂದು ಸೇವೆ ಮುಡಿಪಾಗಿಸಲು.

ಜೈ ಭರತ ಮಾತೇ . ಜೈ ಕನ್ನಡಾಂಬೆ..
_ಶಶಿಜಿತ್

- m Jithendra_ಶಶಿಜಿತ್

11 Jun 2023, 01:49 pm

ಯಾರು ಮೇಲು ಯಾರು ಕೀಳು......ಸುಧಾ ಆರ್ ಬಳಿಗೇರ್

ಕಣ್ಣು ಕನಸಿಗೊಂದು ಮಾತು ಕೇಳುತ್ತಿದೆ ....
ನಾನು ನನ್ನ ಕಣ್ಣು ಮುಚ್ಚಿದರೆ ಮಾತ್ರ ನೀನು ಕಾಣುವೆ ....

ಕನಸು ಕಣ್ಣಿಗೆ ಹೇಳಿತು ....ನೀನಾಗಿಯೇ ಕಣ್ಣು ಮುಚ್ಚುವ ಅವಶ್ಯಕತೇ ಇಲ್ಲ
ಯಲ್ಲ ನನ್ನ ನೋಡುವುದಕ್ಕಾಗಿಯೇ ಸ್ವತಃ ತಾವೇ ಕಣ್ಣು ಮುಚ್ಚುವರು ....

ಯಾರು ಮೇಲು ಯಾರು ಕೀಳು....

ಚಿಂತೆಯು ಹೇಳುತ್ತಿದೆ ಚಿತೆಗೆ ನೀನು ಎಷ್ಟು ಕ್ರೂರಿ ದೇಹವನ್ನ ಹೇಗೆ ಸುಡುತ್ತಿರುವೆ....

ಚಿತೆಯು ಹೀಗೆ ಹೇಳಿತು ....ಬದುಕಿರುವಾಗ ನೀನು ಈ ದೇಹಕ್ಕೆ ನೇಮದಿಯೇ ಸಿಗದ ಹಾಗೆ ಮಾಡಿ ಪ್ರತಿ ದಿನವೂ ಒಂದೊಂದು ಚಿಂತೆಗಳನ್ನು ಕೊಟ್ಟುಸುಟ್ಟಿರುವೆ ...ನಾನಾದರೂ ಒಂದೇ ಬಾರಿ ಸುಟ್ಟು ಈ ದೇಹಕ್ಕೆ ಶಾಂತಿ ತಂದಿರುವೆ ಎಂದು....

ಯಾರು ಮೇಲು ಯಾರು ಕೀಳು....

ಸುಧಾ ಆರ್ ಬಳಿಗೇರ್.....





- ಸುಧಾ ಆರ್ ಬಳಿಗೇರ

09 Jun 2023, 01:42 pm

ದೂರ ತೀರ ಪಯಣ

ದೂರ ತೀರ ಪಯಣದಿ ಸಾಗಿ ಬಂದಿರಿ ಅನುಕ್ಷಣದಿ

ಹೊಸದಾರಿ ಹೊಸರೀತಿ ಹೊಸಸೊಬಗುಗಳ
ಮಿಲನದ ಕಂಪು, ಹೊಸಕ್ಷಣಗಳ ಸೊಂಪು ಇರಲಿಯೆಂದೆಂದೂ

ಸಿರಿನಾಥ ಪ್ರಭುನಾಥ ವರನಾಥ ಗುಣನಾಥ
ಗುರುನಾಥ ನೀನೆ ಕಾಯೋ ಎನ್ನವರ ದೇವನೆಂದೆಂದೂ

ಪೂರ್ಣ ರೂಪದೊಳು ಪೂರ್ಣ ವರವಾಗಿ ಬರುವೆ ನೀ ಎಂದೆಂದೂ
ಪೂರ್ಣಗುಣದೊಳು ಪೂರ್ಣಿಮಚಂದಿರನಂತೆ ತೋರುತ ನಿಲ್ಲುವೆ ನೀ ಎಂದೆಂದೂ

ರಜತ ವರುಷದ ಹರುಷದ ವಿವಾಹ ಮಹೋತ್ಸವದ ಈ ದಿನಕೆ
ಅಜ ಹರಿ ಹರರ ಆಶೀರ್ವಾದಗಳು ಸದಾ ಇರಲಿ ನಿಮ್ಮ ವರ ಬಾಳಿಗೆ

_ಶಶಿಜಿತ್

- m Jithendra_ಶಶಿಜಿತ್

09 Jun 2023, 06:41 am

ನೀನು..

ಏಕಾಂಗಿ ಯಾನಕೆ
ಜೊತೆಯಾದ ಜೀವ ನೀನು..
ದುಃಖದ ದಾರಿಗೆ
ಬೆಳಕಿನ ದೀಪ ನೀನು..
ಬೇಸರದ ಬದುಕಿಗೆ
ಸಾಂತ್ವನದ ಸ್ನೇಹಿತನು..
ಬಿರು ಬಿಸಿಲಿನ ತಾಪಕೆ
ಮುತ್ತಿನ ಮಳೆ ಹನಿ ನೀನು..
ಸೋತ ಸಂಘರ್ಷಕೆ
ಗೆಲುವಿನ ಧೈರ್ಯ ನೀನು..
ನೀರಸ ಬದುಕಿಗೆ
ಆನಂದದ ಆಹ್ಲಾದ ನೀನು..

ತನುಮನಸು✍️

- Tanuja.K

08 Jun 2023, 11:13 am

ಅರುಣೋದಯಕೆ ಕಾವ್ಯ ನಮನ


ಮೂಡುತಲಿವೆ ಹೊಂಗಿರಣಗಳು ಭಾಗ್ಯದ ಭರವಸೆಯ ಹೊತ್ತು

ಮೂಡುತಲಿದೆ ಕಾವ್ಯವು ಅರುಣೋದಯದ ಹೊತ್ತು

ಭರವಸೆಯ ಬೆಳಕ ಭಾಗ್ಯದ ಬಾಗಿಲ ತೆರೆದಿದೆ ಕಾಣಿ

ವರಸೆಯಿದು ಹೊಸ ಉತ್ಸಾಹದ ರಹದಾರಿಯು ಕಾಣಿ

ಚಿಲುಮೆಯ ಯಶಗರಿ ನವನವೀನ ಸದಾ ನಿಮ್ಮದಾಗಲಿ

ಒಲವಿನ ಸಿರಿ ಲಕ್ಷ್ಮಿಯ ಗರಿಮೆಯ ಶ್ರೀ ಹರಿಯ ಆಶೀರ್ವಾದವಿರಲಿ

_ಶಶಿಜಿತ್

- m Jithendra_ಶಶಿಜಿತ್

07 Jun 2023, 11:54 am

ಅವಳೆಂದರೆ....

ಅವಳೆಂದರೆ ಪಾಯ್ಸದಲಿ ಸಿಕ್ಕ
ದ್ರಾಕ್ಷಿ, ಗೋಡಂಬಿಯಂತೆ,
ಅವಳಿಲ್ಲದ ಉಪ್ಪಿಟ್ಟು
ಅಂಬುಜಾ ಸಿಮೆಂಟಿನಂತೆ,
ಅವಳೆಂದರೆ ಪೋರ್ಟ ಸಿಮ್ಮಿಗೆ
ಪ್ರೀ ಬ್ಲೂಟೂತಿನಂತೆ,
ಅವಳಿಲ್ಲದ ಈ ಬಾಯಿಯು
ಕೇಸರಿಯ ವಿಮಾಲಿನಂತೆ...!
ಎಮ್.ಎಸ್.ಭೋವಿ....✍️
.................
.............
.............
.............
..............
...............
.
.
.
.......
..‌‌‌

- mani_s_bhovi

06 Jun 2023, 09:57 pm

ಕನಸನು ಕಾಣುತಲಿರುವೆ

ಕಾಯುತಲಿರುವೆ ಕಾತರದಲಿ ಕರುಣೆಯಿರಲಿ ಕನ್ನಿಕೆ
ಕಾಣುತಲಿರುವೆ ಬರಿದೆ ಪರದೆ ಬಾಳಲಿ ಬರದೇ ನಿನ್ನ ಚೆಲ್ವಿಕೆ

ಹೆಣೆಯುತಿರುವೆ ದಿನಗಳನು ನವಿರಾಗಲು ಕನಸನು
ಹಣತೆಯಲಿರುವ ಎಣ್ಣೆಯಂತೆ ಮುಡಿಪಾಗಿಸಲು ಮನಸನು

ಕುಡಿನೋಟದ ಬೆಳದಿಂಗಳ ಮಂದ ಬೆಳಕ ನೀ ನೀಡೆಯಾ
ಎನಗಿಂತ ಸಲುಗೆಯ ಗೆಳೆಯ ಸಿಗಲಾರ ನೀ ನೋಡೆಯಾ

_ಶಶಿಜಿತ್

- m Jithendra_ಶಶಿಜಿತ್

06 Jun 2023, 01:06 am

ಕವನದ ಶೀರ್ಷಿಕೆ ಪರಿಸರ ರಕ್ಷಣೆ.

ಜೀವಕುಲಕೆ ಪರಿಸರವೇ ಆಶ್ರಯದ ತಾಣ,
ಬುದ್ಧಿವಂತ ಮನುಜರೇ ಕಡಿಯದಿರಿ ಕಾಡನ್ನ.
ಶುಭೋದಯದಿ ಕೇಳಬೇಕು ಹಕ್ಕಿಗಳ ಚಿಲಿಪಿಲಿಯ ಪಠಣ,
ನಿರ್ಮಿಸದೆ ನೆಟ್ವರ್ಕ್ ಟವರನ್ನ ಉಳಿಸಿರಿ ಪಕ್ಷಿಗಳ ಪ್ರಾಣ.
ನೆಲವ ತಂಪಿಸೋ ಮಳೆಗೆ ಹಸಿರೆಂದಿಗೂ ಉಸಿರು,
ಪ್ರಕೃತಿಯೇ ನಶಿಸಿದರೆ ಅಳಿಸಲಾಗದು ಹೆಚ್ಚುವ ತಾಪಮಾನದ ಹೆಸರು.
ಬೆಳೆ ಕುಡಿಯದಿರಲಿ ಕಲುಷಿತ ನೀರನ್ನ,
ನಮ್ಮ ಸ್ವಾಸ ಸೇವಿಸದಿರಲಿ ವಿಷಭರಿತ ಹೊಗೆಯನ್ನ.
ಭುವಿಯು ಬಿರಿಯದಿರಲಿ ಹೃದಯ ಸೀಳುವ ಅಣುಶಕ್ತಿ ಬಾಂಬಿಗೆ,
ತುತ್ತಾಗದಿರಲಿ ಸೃಷ್ಟಿಯ ವಿಕೋಪಕ್ಕೆ ಜೀವಿಗಳ ಕುತ್ತಿಗೆ.
ಊರತ್ತ ಮುಖ ಮಾಡದಂತೆ ಉಳಿಸಿರಿ ಮೃಗಗಳ ನೆಲೆಯನ್ನ,
ನಮ್ಮ ಸಮೃದ್ಧ ಜೀವನಕ್ಕೆ ರಕ್ಷಿಸುವ ಬನ್ನಿ ತಾಯಮಡಿಲನ್ನ.
ತ್ಯಜಿಸಿರಿ ರೋಗ ತರುವ ಪ್ಲಾಸ್ಟಿಕ್ ಬಳಕೆಯನ್ನ,
ಪಣ ತೊಟ್ಟು ಸಾಕಿರಿ ನಮಗೆ ಆಮ್ಲ ಕೊಡುವ ಪುಟ್ಟ ಸಸಿಯನ್ನ.

- nagamani Kanaka

05 Jun 2023, 09:57 pm