ಬಿಡುವಿಲ್ಲದ ಕೆಲಸ ನಿನ್ನದು..
ಸ್ವಲ್ಪ ಬಿಡುವು ಮಾಡಿಕೊ ಈ ಜೀವ ಕಾದಿವುದು..
ನಿನ್ನಲ್ಲಿ ಏನನ್ನೂ ಬಯಸುವುದಿಲ್ಲ ನಾನು..
ಪ್ರೀತಿ ಮತ್ತು ಕಾಳಜಿಯ ಮುಂದೆ ಯಾವುದು ದೊಡ್ಡದಲ್ಲ ಹೌದಲ್ಲವೇನು..??
ನನ್ನ ಸಾವಿಗಾದರೂ ಸ್ವಲ್ಪ ಬೇಗ ಬರಲು ತಯಾರಾಗಿರು...
ಮಣ್ಣು ಮಾಡುವ ಜನರು ನನ್ನಂತೆ ಕಾಯರು..
ಭಾರತೀಯ ಮಕ್ಕಳೆಲ್ಲ ನಾವು ಒಂದೇ ಇಂದು ಎಂದಿಗೂ ಎಂದೆಂದಿಗೂ
ಭರತ ಭೂಮಿಯ ಬಿಡೆವು ಇಂದು ಎಂದಿಗೂ ಎಂದೆಂದಿಗೂ
ನಮ್ಮ ನೆಲ ನಮ್ಮ ಜಲ ನಮ್ಮ ಪವಿತ್ರ ತಾಣವು
ನಮ್ಮ ಇರುವು ನಮ್ಮ ಒಲವು ನಮ್ಮ ನೆಲದ ಪ್ರಾಣವು
ನಮ್ಮ ದೇಶ ನಮ್ಮ ಭಾಷೆ ನಮ್ಮ ಶಕ್ತಿ, ತ್ರಾಣವು
ನಮ್ಮ ಕುಲ ನಮ್ಮ ಬಲ ನಮ್ಮವರ ಸ್ವಾಭಿಮಾನವು
ಬರಲಿ ಎಲ್ಲಾ ದೇಶಭಕ್ತರು ಭರತ ಮಾತೆ ಮಕ್ಕಳು
ತರಲಿ ಎಲ್ಲ ದೇಶಕ್ಕಿಂದು ಸವಿ ಗೆಲುವಿನ ಕಲಿಗಳು
ಹೊರಲಿ ಎಲ್ಲ ದೇಶ ನಿಷ್ಠೆ ಶ್ರೇಷ್ಠತನವ ಮೆರೆಯಲು
ಹೊರಳಿ ಎಲ್ಲಾ ನಮ್ಮ ದೇಶಕ್ಕಿಂದು ಸೇವೆ ಮುಡಿಪಾಗಿಸಲು.
ಕಣ್ಣು ಕನಸಿಗೊಂದು ಮಾತು ಕೇಳುತ್ತಿದೆ ....
ನಾನು ನನ್ನ ಕಣ್ಣು ಮುಚ್ಚಿದರೆ ಮಾತ್ರ ನೀನು ಕಾಣುವೆ ....
ಕನಸು ಕಣ್ಣಿಗೆ ಹೇಳಿತು ....ನೀನಾಗಿಯೇ ಕಣ್ಣು ಮುಚ್ಚುವ ಅವಶ್ಯಕತೇ ಇಲ್ಲ
ಯಲ್ಲ ನನ್ನ ನೋಡುವುದಕ್ಕಾಗಿಯೇ ಸ್ವತಃ ತಾವೇ ಕಣ್ಣು ಮುಚ್ಚುವರು ....
ಯಾರು ಮೇಲು ಯಾರು ಕೀಳು....
ಚಿಂತೆಯು ಹೇಳುತ್ತಿದೆ ಚಿತೆಗೆ ನೀನು ಎಷ್ಟು ಕ್ರೂರಿ ದೇಹವನ್ನ ಹೇಗೆ ಸುಡುತ್ತಿರುವೆ....
ಚಿತೆಯು ಹೀಗೆ ಹೇಳಿತು ....ಬದುಕಿರುವಾಗ ನೀನು ಈ ದೇಹಕ್ಕೆ ನೇಮದಿಯೇ ಸಿಗದ ಹಾಗೆ ಮಾಡಿ ಪ್ರತಿ ದಿನವೂ ಒಂದೊಂದು ಚಿಂತೆಗಳನ್ನು ಕೊಟ್ಟುಸುಟ್ಟಿರುವೆ ...ನಾನಾದರೂ ಒಂದೇ ಬಾರಿ ಸುಟ್ಟು ಈ ದೇಹಕ್ಕೆ ಶಾಂತಿ ತಂದಿರುವೆ ಎಂದು....
ಜೀವಕುಲಕೆ ಪರಿಸರವೇ ಆಶ್ರಯದ ತಾಣ,
ಬುದ್ಧಿವಂತ ಮನುಜರೇ ಕಡಿಯದಿರಿ ಕಾಡನ್ನ.
ಶುಭೋದಯದಿ ಕೇಳಬೇಕು ಹಕ್ಕಿಗಳ ಚಿಲಿಪಿಲಿಯ ಪಠಣ,
ನಿರ್ಮಿಸದೆ ನೆಟ್ವರ್ಕ್ ಟವರನ್ನ ಉಳಿಸಿರಿ ಪಕ್ಷಿಗಳ ಪ್ರಾಣ.
ನೆಲವ ತಂಪಿಸೋ ಮಳೆಗೆ ಹಸಿರೆಂದಿಗೂ ಉಸಿರು,
ಪ್ರಕೃತಿಯೇ ನಶಿಸಿದರೆ ಅಳಿಸಲಾಗದು ಹೆಚ್ಚುವ ತಾಪಮಾನದ ಹೆಸರು.
ಬೆಳೆ ಕುಡಿಯದಿರಲಿ ಕಲುಷಿತ ನೀರನ್ನ,
ನಮ್ಮ ಸ್ವಾಸ ಸೇವಿಸದಿರಲಿ ವಿಷಭರಿತ ಹೊಗೆಯನ್ನ.
ಭುವಿಯು ಬಿರಿಯದಿರಲಿ ಹೃದಯ ಸೀಳುವ ಅಣುಶಕ್ತಿ ಬಾಂಬಿಗೆ,
ತುತ್ತಾಗದಿರಲಿ ಸೃಷ್ಟಿಯ ವಿಕೋಪಕ್ಕೆ ಜೀವಿಗಳ ಕುತ್ತಿಗೆ.
ಊರತ್ತ ಮುಖ ಮಾಡದಂತೆ ಉಳಿಸಿರಿ ಮೃಗಗಳ ನೆಲೆಯನ್ನ,
ನಮ್ಮ ಸಮೃದ್ಧ ಜೀವನಕ್ಕೆ ರಕ್ಷಿಸುವ ಬನ್ನಿ ತಾಯಮಡಿಲನ್ನ.
ತ್ಯಜಿಸಿರಿ ರೋಗ ತರುವ ಪ್ಲಾಸ್ಟಿಕ್ ಬಳಕೆಯನ್ನ,
ಪಣ ತೊಟ್ಟು ಸಾಕಿರಿ ನಮಗೆ ಆಮ್ಲ ಕೊಡುವ ಪುಟ್ಟ ಸಸಿಯನ್ನ.