Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಕವನದ ಶೀರ್ಷಿಕೆ ಅಪ್ಪನ ಮಮತೆ.

ನೆರೆಮನೆಯ ಜೀತದಲ್ಲಿ ಸವೆಯುತ ಅಪ್ಪ,
ಮಕ್ಕಳನ್ನು ಶಾಲೆಗೆ ಸೇರಿಸಿದರು.
ಹಿಂದೆ ಅನ್ನವಿರದ ದಿನಗಳಲ್ಲಿ ಅಪ್ಪ,
ನಮಗೆ ಗಂಜಿ ಕುಡಿಸಿ ಬೆಳೆಸಿದರು.
ಸೌಮ್ಯ ಸ್ವಭಾವದ ನಮ್ಮ ಅಪ್ಪನ ನಿರಂತರ ದುಡಿಮೆ,
ಕಲಿಸಿತು ನಮಗೆ ಜವಾಬ್ದಾರಿಯುತ ಬದುಕಿನ ನಿರ್ವಹಣೆ.
ಚಿಕ್ಕವಳಾಗಿ ನಾನು ಅಪ್ಪನ ಮಮತೆಯಲ್ಲಿ ಅರಳುವ ಮುನ್ನವೇ,
ಅವರು ನರಳತೊಡಗಿದರು ತಮ್ಮ ಕಾಯಿಲೆ ಏನೆಂದು ತಿಳಿಯದೆ.
ನನ್ನಮ್ಮ ಅಪ್ಪನಿಗಾಗಿ ತಿರುಗದ ಆಸ್ಪತ್ರೆಗಳಿಲ್ಲ,
ದೀರ್ಘಕಾಲ ನೋವಿನಿಂದ ನರಳಿದ ಅಪ್ಪ ನಮಗಾಗಿ ಉಳಿಯಲಿಲ್ಲ.
ನನ್ನ ಬದುಕಿಗೆ ಚುಕ್ಕಿಯ ಚಂದ್ರಮನಾಗಬೇಕಿದ್ದ ಅಪ್ಪ ಇಂದು ನೆನಪು ಮಾತ್ರ.
ಅಪ್ಪನಾಗಿ ನನ್ನ ಉಜ್ವಲ ಭವಿಷ್ಯಕ್ಕೆ ಸಾಕ್ಷಿಯಾಗಿರುವ ಅಮ್ಮನ ತ್ಯಾಗ ಶ್ಲಾಘನೀಯ,
ಅಪ್ಪನಿದ್ದರೆ ನನ್ನ ಜೀವನ ಇನ್ನೂ ಹೇಗಿರುತಿತ್ತೋ,
ಎಂಬ ಪ್ರಶ್ನೆಗೆ ಉತ್ತರವಿಲ್ಲ.
ಮಕ್ಕಳ ಸನ್ಮಾರ್ಗದ ಹಾದಿಯ ಸುಗಮಗೊಳಿಸಲು ಬೇಕು ಅಪ್ಪ,
ಕಣ್ಮರೆಯಲ್ಲೆ ನಮ್ಮ ಬಯಕೆಗಳ ಅರಿತು ಸಂತೃಪ್ತಿಗೊಳಿಸುವ ಭೂಪ.
ಕುಟುಂಬದ ಸಾರಥಿಯಾಗಿರೋ ಅಪ್ಪನ ನಾವ್ ಗೌರವಿಸಬೇಕು,
ನಮ್ಮ ಸೇವೆ ಅಪ್ಪನ ಹೆಸರ ಗುರುತಿಸುವಂತೆ ಇರಬೇಕು,
ಮಕ್ಕಳ ಸರ್ವಾಂಗೀನ ಪ್ರಗತಿಗೆ ಅಪ್ಪ ಜೊತೆಗಿದ್ದರೆ ಸಾಕು.

- nagamani Kanaka

18 Jun 2023, 11:43 pm

ಮರೆಯದೆಯಾ ಒಲವೇ..

ಕಾದು ಕಾದು ಸೋತಿಹೆನು
ಸನಿಹ ನೀನು ಬರಬಾರದೆ..
ದೂರ ಏಕೆ ನೀ ನಿಲ್ಲುವೆ..?
ಕರುಣೆ ತೋರಿ ಬರಬಾರದೆ..
ನಿನ್ನ ಅಗಲಿ ನಾ ಇರಲಾರೆನು..
ಪ್ರಾಣವೇ ನೀನು ಜೊತೆಗಾರನು..

ಮರೆಯಾದೆಯಾ ಒಲವೇ...
ಮರೆಯಾದೆಯಾ ...

ಮಾತುಗಳು ನಿಂತರೇನು
ಮನಸು ಕಾದಿದೆ ಇನ್ನು...
ತಿರುಗಿ ನೋಡು ಒಮ್ಮೆ ನೀನು
ನೆರಳಂತೆ ಹಿಂಬಾಲಿಸಿರುವೆ ನಾನು..
ಜನ್ಮ ಜನ್ಮ ನೀನೆ ಬೇಕು..
ನಿನ್ನ ಪ್ರೀತಿಯೊಂದೆ ಸಾಕು...
ಬಾರೋ ಬೇಗ ಗೆಳೆಯ
ನೀನೇ ಒಲವ ಇನಿಯ...

ಮರೆಯಾದೆಯಾ ಒಲವೇ....
ಮರೆಯಾದೆಯಾ.....

ತನುಮನಸು✍️

- Tanuja.K

18 Jun 2023, 10:22 pm

ಬೇಡವಾಗಿರುವೆ ನಿನಗೆ ನಾನು..

ಬಣ್ಣ ಬಣ್ಣದ ಕನಸು ಕಟ್ಟಿದ್ದೆ ನಾನು..
ಬಣ್ಣವ ಅಳಿಸಿ ಬರಿ ಚಿತ್ತಾರ ಉಳಿಸಿದೆ ನೀನು...
ನಿನ್ನನಪ್ಪಿ ಮಳೆಯಲಿ
ನೆನೆಯುವ ಆಸೆ ಅಂದು..
ಮಳೆಯೂ ನಾಚುವಂತೆ
ಕಣ್ಣೀರ ಕಡಲಲೇ ಮುಳುಗಿರುವೆ ಇಂದು..
ಕಿರು ಬೆರಳು ಹಿಡಿದು ನಡೆಯಬೇಕು
ನಿನ್ನೊಂದಿಗೆ ಬಹುದೂರ
ಒಂದು ಹೆಜ್ಜೆಯೂ ಜೊತೆಗಿಡದೆ
ನೀ ನನ್ನ ದೂಡಿದೆ, ಈ ನೋವೆ ಅಪಾರ...
ಬೇಕಾಗಿರುವೆ ನನಗೆ ನೀನು..
ಬೇಡವಾಗಿರುವೆ ನಿನಗೆ ನಾನು..

ತನುಮನಸು✍️

- Tanuja.K

18 Jun 2023, 09:55 pm

ಬಿರುಗಾಳಿಯ ಆಗಮನ

ಪ್ರಶಾಂತವಾಗಿದ್ದ ಕಡಲಿಗೆ
ಸುನಾಮಿಯ ರೌದ್ರ ನರ್ತನ..
ತಂಗಾಳಿಯ ತಂಪಿಗೆ
ಬಿರುಗಾಳಿಯ ಆಗಮನ..
ಕತ್ತಲು ತುಂಬಿದ ಬದುಕಿಗೆ
ನೀನೇ ಬೆಳಕೆಂದು ಭಾವಿಸಿದ್ದೆ..
ನೀ ಹಚ್ಚಿದ ದೀಪವ
ನೀನೇ ಆರಿಸಿ, ದೂರ ಸರಿದೆ..
ನೋವಿಗೆ ಔಷಧವಾಗಿದ್ದ ನೀನೇ
ಮತ್ತೆಂದೂ ವಾಸಿಯಾಗದ ಘಾಸಿ ಮಾಡಿದೆ..
ಕಾಯುವ ದೈವವೇ ಕೈ ಬಿಟ್ಟಾಗ
ನಂಬಿಕೆಯ ಮೇಲೆ ನಂಬಿಕೆ ಕಳೆದಿದೆ ಈಗ..

ತನುಮನಸು✍️

- Tanuja.K

18 Jun 2023, 08:49 am

ಕವನವೇ ಆಧಾರ

ನೂರಾರು ಆಸೆಗಳು ಮನದಲ್ಲಿ...
ಬರಿ ನೋವುಗಳೇ ತುಂಬಿವೆ ನನ್ನಲ್ಲಿ...
ಯಾಕೆ ಬೇಕಿತ್ತು ನನಗೆ ಈ ಜೀವನ..
ನೋವುಂಡ ಜೀವಕೆ, ಮತ್ತದೇ ನೋವಿನ ಔತಣ..
ಎಲ್ಲಿ ಹೋಯಿತು ಆ ನಿನ್ನ ಸ್ನೇಹ ಇಂದು..
ಕಾಣುತ್ತಿಲ್ಲವೆ ಅಂಗಲಾಚಿ ಬೇಡುತ್ತಿರುವುದು..
ಅಂದು ಪ್ರೀತಿಗೂ ಕವನವೇ ಜೊತೆಗಾರ..
ಇಂದು ದೂರಾದ ಸ್ನೇಹಕ್ಕೂ ಕವನವೇ ಆಧಾರ..

ತನುಮನಸು ✍️

- Tanuja.K

18 Jun 2023, 08:25 am

ನಿನದೆ ನೆನಪು ಬರುವೆಯಾ ನನ್ನ ಮುಂದೆ.....ಸುಧಾ ಆರ್ ಬಳಿಗೇರ

ಕನಸೋ ಇಲ್ಲ ನಿಜಾನೋ ಆದರೆ ಸದಾ ನೆನಪಾಗುವೆ ಸಮಯಕ್ಕೆ ಸರಿಯಾಗಿ ಹಸಿವಾಗುವಂತೆ....
ತಿನಿಸುವೆಯ ನಿನ್ನ ಪ್ರೀತಿಯ ಕೈ ತುತ್ತು....

ಬರೆಯಲು ಸಾದ್ಯವೇ ಅನಿಸುವುದು
ನಿನ್ನ ಮೇಲೆ ಕವಿತೆ ಕೈಯಲ್ಲಿ ಲೇಖನ ಇದ್ದರೆ....
ತರುವೆಯಾ ನನಗಾಗಿ ಪುಸ್ತಕದ ಉಡುಗೊರೆ....

ಕನಸಲ್ಲಿ ನಿನ್ನ ಕಂಡು ಕಾಣದೆ ಹುಡುಕುತ್ತಿರುವೆ ಹೀಗೆ ಏಕೆ ಕಾಡುವೆ
ಕರುಣೆ ಬಾರದೆ ನಿನಗೆ....
ನಿಂತುಬಿಡು ಒಮ್ಮೆ ಕಣ್ಣುಮುಂದೆ ಸರಿಯದಂತೆ ಹಿಂದೆ ಹಿಂದೆ....

ಸುಧಾ ಆರ್ ಬಳಿಗೇರ್.....






- ಸುಧಾ ಆರ್ ಬಳಿಗೇರ

17 Jun 2023, 01:45 pm

ಇದೆ ಕಣ್ಣಿಗೆ ಕಾಣುವುದಿಲ್ಲ

ಉಸಿರಾಡಲು ಗಾಳಿ ಇದೆ ಕಣ್ಣಿಗೆ ಕಾಣುವುದಿಲ್ಲ

ಮೈತುಂಬ ಗಾಯ ಕಣ್ಣಿಗೆ ನೋವು ಕಾಣುವುದಿಲ್ಲ

ನಾವು ಊಟವನ್ನು ಮಾಡಬಹುದು ಆದರೆ ಹಸಿವೂ ನಮಗೆ ಕಾಣುವುದಿಲ್ಲ

ಕೈ ಮಾಡಿ ಆಕಾಶ ತೋರಿಸಬಹುದು ಆದರೆ ಕೈಗೆ ನಿಲುಕುವುದಿಲ್ಲ

ನಿರು ಕುಡಿಯಬಹುದು ಮುಟ್ಟಿಗೆಯಲ್ಲಿ ಮುಟ್ಟಿಗೆ ಆಗಲಾರದು

ಒಬ್ಬರನ್ನು ಇನ್ನಬ್ಬರನ್ನೂ ಪ್ರೀತಿಸುತ್ತಾರೆ ಆದರೆ ಮನಸ್ಸು ಕಾಣುವುದೇ





ಆಹಾರ ವಾಸನೆಯನ್ನು ತೆಗೆದುಕೊಳ್ಳಬಹುದು ಆದರೆ ಕಣ್ಣಿಗೆ ಕಾಣುವುದಿಲ್ಲ

ಮಾವಿನ ಹಣ್ಣನ್ನು ರುಚಿ ಸವಿಯಬಹುದು ಆದರೆ ಕಣ್ಣಿಗೆ ಕಾಣುವುದೇ



- Karigouda Eattinamani

14 Jun 2023, 03:58 pm

ಕೈಯ ಹಿಡಿದು ಹೇಳು ಜಗಕೆ ಇವಳೇನೆ ನನ್ನಾಕೆ..

ನೀನೆಂದರೆ ವಿಶೇಷ ನನಗೆ..
ನಿನ್ನ ಸನಿಹ ಹಿತ ತನುಗೆ..
ಕನಸುಗಳ ಸರದಾರ ನೀನು..
ಕಲ್ಪನೆಗಳ ಅನಾಮಿಕನು...
ಯಾಕಿನ್ನು ದೂರ ನೀನು..
ಬಳಿ ಬಾ ಹರೆಯ ಕಾದಿದೆ ಇನ್ನು...
ಸ್ವಾರ್ಥಿಗಳ ಸಂತೆ ಬೇಡ ನನಗೆ..
ನೀನೊಬ್ಬ ಸಾಕು ಬದುಕಿಗೆ..
ಕೈಯ ಹಿಡಿದು ಹೇಳು ಜಗಕೆ...
ಇವಳೇನೆ ನನ್ನಾಕೆ....

ತನುಮನಸು ✍️

- Tanuja.K

12 Jun 2023, 10:12 pm

ಮೌನ..


ಸಂತೋಷವ ಕಳೆದುಕೊಂಡಿದೆ ಬದುಕು..
ದುಃಖದಲ್ಲಿ ಮುಳುಗಿದೆ ಮನಸು..
ಸಿಕ್ಕ ಪ್ರೀತಿಯನು ತಾನಾಗಿಯೇ ಒಲ್ಲೆ ಎಂದ ಹೃದಯ ಪರಿತಪಿಸುತ್ತಿದೆ...
ನೂರಾರು ಮಾತುಗಳನಾಡಿದ ತುಟಿಗಳು ಇಂದು
ಮೌನ ತಾಳಿದೆ...
ಯಾರ ಮಾತಿಗೂ ಸ್ಪಂದಿಸದ ಈ ಜೀವ
ನಿನ್ನನ್ನೇ ಹಂಬಲಿಸುತಿದೆ...
ಕೇಳದೆ ನನ್ನ ಮನದ ಮಾತು, ನೀ ಎಲ್ಲಿ ಹೋದೆ...

ತನುಮನಸು✍️

- Tanuja.K

12 Jun 2023, 09:59 pm

ಅಪ್ಪ

ಅಪ್ಪ ಅಪ್ಪ ಅಪ್ಪ..
ಎಷ್ಟು ಬಾರಿ ಕರೆದರೂ ಖುಷಿಯೇ..
ಎಷ್ಟು ಪ್ರೀತಿಸಿದರೂ ಕಡಿಮೆಯೇ..

ಅಪ್ಪ ಎಂದಾಕ್ಷಣ ನೆನಪಾಗುವುದು ನಿಮ್ಮ ಗಾಂಭೀರ್ಯ..
ನಿಮ್ಮ ಕೋಪ ಹೇಳಲಸಾಧ್ಯ...
ನಿಮ್ಮ ಪ್ರೀತಿ ಅತಿ ಹೆಚ್ಚು ಮಾಧುರ್ಯ..
ನಿಮ್ಮ ಆದರ್ಶವೇ ಮಾನಸಿಕ ಸ್ಥೈರ್ಯ...

ಅಪ್ಪ ಇಂದು ನೀವು ನೆನಪು ಮಾತ್ರ..
ನಿಮ್ಮಂತಹ ತಂದೆಯ ಪಡೆದ ನಾವು ಧನ್ಯರು..
ಆದರೆ ಇಷ್ಟೇ ವರುಷ ಸಾಕೆ ನಿಮ್ಮೊಂದಿಗೆ ಬದುಕಿದ ಕ್ಷಣಗಳು..??

ನಿಮ್ಮಂತಹ ತಂದೆಯೇ ಎಲ್ಲರಿಗೂ ಸಿಗಲಿ..
ಆದರೆ ಆ ಪ್ರೀತಿ ಕೊನೆವರೆಗೂ ಉಳಿಯಲಿ..
ನೋವಾದಾಗ, ದುಃಖವಾದಾಗ ನೆನಪಾಗುವಿರಿ ತಕ್ಷಣ..
ಕನಸಿನಲ್ಲಾದರು ಬನ್ನಿ ದಿನ ದಿನ..

ಇಂದೇಕೋ ನಿಮ್ಮ ನೆನಪು ಅತಿಯಾಗಿ ಕಾಡುತಿದೆ ಅಪ್ಪ
ಇನ್ನೊಂದು ಜನ್ಮವಿದ್ದರೆ ನಿಮ್ಮ ಮಗಳಾಗಿ ಹುಟ್ಟಬೇಕೆಂಬುದೆ ನನ್ನ ಕೊನೆಯಾಸೆಯಪ್ಪ..
ಪ್ರೀತಿಗೆ ಮತ್ತೊಂದು ಹೆಸರು ನನ್ನ ಅಪ್ಪ ಕೃಷ್ಣಪ್ಪ..

ತನುಮನಸು✍️

- Tanuja.K

11 Jun 2023, 10:43 pm