ನಾವು ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸೋವ್ರನ್ನ ನೆನ್ಸ್ಕೊಂಡಗ ಹೃದಯ ಬೆಚ್ಚಗಾಗುತ್ತೆ ಒಂದು ಕ್ಷಣ. ತೀರದ ಅಲೆಗಳಿಗೆ ಸಮುದ್ರದ ಪರಿಚಯ ಮಾಡುವ ತಂಗಾಳಿ ಪ್ರೀತಿ, ತಂಪೆರೆದು ಇಂಪಾಗಿ ಹರೆಯಕ್ಕೆ ಹೊಕ್ಕಿ ಸೊಂಪೆನಿಸುವ ಸೊಜುಗಾತಿ ಪ್ರೀತಿ.
ನಲಿವಿದ್ದಷ್ಟೇ ನೋವು ಇರುತ್ತೆ ಇಲ್ಲಿ ದೂರವೆನಿಸಿದಷ್ಟೇ ಸನಿಹ ಈ ಪ್ರೀತಿ. ಅವನ ಹೆಸರಲ್ಲಿ ಅವಳಿಟ್ಟ ಸಿಂಧೂರದಷ್ಟೆ ಚಂದ ಪ್ರೀತಿ, ಅವಳ ನೆನೆದಾಗ ಅವನ ಉಸಿರಲ್ಲಿ ನೆಮ್ಮದಿಯ ಭಾವ ಈ ಪ್ರೀತಿ. ಹೇಳುತ್ತಾ ಹೋದರೆ ಮೌನವೂ ಮಾತಾಗುವ ಸಂಕೋಲೆ ಈ ಪ್ರೀತಿ ಮಾತೇ ಬೇಡವಾಗಿ ಮೌನದಲ್ಲಿ ಧ್ಯಾನಿಸುವ ದೈವ ಈ ಪ್ರೀತಿ. ಇಬ್ಬನಿಗಿಂತ ಮೃದುವಾದ ಹೃದಯದಲ್ಲಿ ಕಂಬನಿಯ ಕಟ್ಟಲೆ ಈ ಪ್ರೀತಿ. ಕರಕುಶಲ ಕಸೂತಿಗಾರನು ಎಣೆದೆನೆದು ಬೆಸೆದಿರಬೇಕು ಹೃಯದಗಳ ಸಂಬಂಧವನ್ನು ಪ್ರೀತಿ ಎಂಬ ಹೆಸರಿಟ್ಟು ತಿಳಿದವರಿಗದು ಅಮೃತ ಊಹಿಸಿಕೊಂಡವರಿಗಿದು ಕಲ್ಪನೆ ಅರ್ಥವಾಗದವರಿಗಿದು ವಿಷ ಮತ್ತು ಪ್ರೀತಿಸಿಕೊಂಡವರಿಗಿದು ಸರ್ವಸ್ವ.
ಪ್ರೀತಿಸಿಕೊಂಡಮೇಲೆ ಆಯ್ಕೆಗಳಿರಬಾರದು ಎಂದು ಸ್ನೇಹಿತರು ಒಬ್ಬರು ಹೇಳಿದ ನೆನಪು ಅದು ಸರಿ ಎನಿಸುತ್ತದೆ ನನಗೆ. ಪ್ರೀತಿ
ಎಷ್ಟೊಲ್ಲೇ feel ಅಲ್ವಾ ಪ್ರೀತಿ.
ನಾವು ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸೋವ್ರನ್ನ ನೆನ್ಸ್ಕೊಂಡಗ ಹೃದಯ ಬೆಚ್ಚಗಾಗುತ್ತೆ ಒಂದು ಕ್ಷಣ. ತೀರದ ಅಲೆಗಳಿಗೆ ಸಮುದ್ರದ ಪರಿಚಯ ಮಾಡುವ ತಂಗಾಳಿ ಪ್ರೀತಿ, ತಂಪೆರೆದು ಇಂಪಾಗಿ ಹರೆಯಕ್ಕೆ ಹೊಕ್ಕಿ ಸೊಂಪೆನಿಸುವ ಸೊಜುಗಾತಿ ಪ್ರೀತಿ.
ನಲಿವಿದ್ದಷ್ಟೇ ನೋವು ಇರುತ್ತೆ ಇಲ್ಲಿ ದೂರವೆನಿಸಿದಷ್ಟೇ ಸನಿಹ ಈ ಪ್ರೀತಿ. ಅವನ ಹೆಸರಲ್ಲಿ ಅವಳಿಟ್ಟ ಸಿಂಧೂರದಷ್ಟೆ ಚಂದ ಪ್ರೀತಿ, ಅವಳ ನೆನೆದಾಗ ಅವನ ಉಸಿರಲ್ಲಿ ನೆಮ್ಮದಿಯ ಭಾವ ಈ ಪ್ರೀತಿ. ಹೇಳುತ್ತಾ ಹೋದರೆ ಮೌನವೂ ಮಾತಾಗುವ ಸಂಕೋಲೆ ಈ ಪ್ರೀತಿ ಮಾತೇ ಬೇಡವಾಗಿ ಮೌನದಲ್ಲಿ ಧ್ಯಾನಿಸುವ ದೈವ ಈ ಪ್ರೀತಿ. ಇಬ್ಬನಿಗಿಂತ ಮೃದುವಾದ ಹೃದಯದಲ್ಲಿ ಕಂಬನಿಯ ಕಟ್ಟಲೆ ಈ ಪ್ರೀತಿ. ಕರಕುಶಲ ಕಸೂತಿಗಾರನು ಎಣೆದೆನೆದು ಬೆಸೆದಿರಬೇಕು ಹೃಯದಗಳ ಸಂಬಂಧವನ್ನು ಪ್ರೀತಿ ಎಂಬ ಹೆಸರಿಟ್ಟು ತಿಳಿದವರಿಗದು ಅಮೃತ ಊಹಿಸಿಕೊಂಡವರಿಗಿದು ಕಲ್ಪನೆ ಅರ್ಥವಾಗದವರಿಗಿದು ವಿಷ ಮತ್ತು ಪ್ರೀತಿಸಿಕೊಂಡವರಿಗಿದು ಸರ್ವಸ್ವ.
ಪ್ರೀತಿಸಿಕೊಂಡಮೇಲೆ ಆಯ್ಕೆಗಳಿರಬಾರದು ಎಂದು ಸ್ನೇಹಿತರು ಒಬ್ಬರು ಹೇಳಿದ ನೆನಪು ಅದು ಸರಿ ಎನಿಸುತ್ತದೆ ನನಗೆ. ಒಮ್ಮೊಮ್ಮೆ ಲೋಕರೂಢಿಗೆ ತಲೆಯೊಡ್ಡಿ ಹೃದಯಗಳು ಗಾಸಿಗೊಂಡಾಗ ಪ್ರೀತಿಯೇ ಅಲ್ಲವೆ ಮತ್ತೆ ಬೆಸೆಯೋದು. ಕೆಲವು ವಿದಾಯಗಳು ಖಾತ್ರಿಯಾಗಿರಬೇಕು ಕೆಲವು ಭೇಟಿಗಳು ಖಾತ್ರಿಯಾಗಿರಬೇಕು ಮತ್ತೆ ಸಿಕ್ಕಾಗ ತಪ್ಪುಗಳೆಲ್ಲವ ತಿದ್ದಿಕೊಂಡು, ನೋವು ನಲಿವುಗಳ ಹಂಚಿಕೊಂಡು, ನಾನು ನನ್ನದೆನ್ನುವುದ ಬಿಟ್ಟು ನಮ್ಮದೆನ್ನುವ ಭಾವದಲ್ಲಿ ಕೂಡಿ ಬಾಳಿದರೆ ಅವರಿಬ್ಬರ ನಡುವೆ ಪ್ರೀತಿ ಉಸಿರಾಡುತ್ತಾದೆ ಮತ್ತೆ ಜೀವ ಪಡೆಯುತ್ತದೆ.
ಅದೇನೋ ಕಾತರ ಕಣೇ ನನಗೆ,
ನಿನ್ನ ಕಣ್ಣಲಿ ನನ್ನ ಕಣ್ಣ ಬೆರೆಸಲು.
ಅದೇನೋ ಅವಸರ ನನಗೆ,
ಆದಷ್ಟು ಬೇಗನೆ ನಿನ್ನ ಕಾಣಲು.
ಬರೀ ಕಣ್ಣನೋಟದಿಂದ ನೀನಿಟ್ಟೆ,
ಬಣ್ಣಬಣ್ಣದ ರಂಗವಲ್ಲಿ ನನ್ನೆದೆಯಲಿ
ಆ ಕ್ಷಣದಲ್ಲೇ ನಾ ಸೋತುಬಿಟ್ಟೆ,
ನಾ ಮೌನದಿ ಕರಗಲೇ ನಿನ್ನ ತೋಳಲಿ ?
ನನ್ನ ಕಣ್ಣಿಗೆ ಕಾಣುವುದೆಲ್ಲವ ಮರೆಸಿ,
ನಿನ್ನ ನಗುವ ನೆನಪಿಸುತಿದೆ ಮನಸು.
ಈ ಮನಸಿಗ್ಯಾಕೋ ಹುಚ್ಚು ಹಿಡಿದಿದೆಯೆನಿಸಿ,
ನಾ ಸುಮ್ಮನಾದರೇ, ಹಗಲಲೂ ನಿನ್ನ ಕನಸು.
ಇದು ಪ್ರೀತಿಯೆನ್ನದೇ ಮತ್ತೇನೆಂದು ಹೇಳಲಿ,
ಜಪಿಸುತಿಹೆ ನಿನ್ನ ಹೆಸರನು ಅನುಕ್ಷಣ ಮನಸಲಿ,
ಒಮ್ಮೆ ಕೃಪೆ ತೋರು ಬಾ ಚೆಲುವೆ ನನ್ನಲಿ,
ಕನಸಲೂ ಕನಸಾಗಿ ಉಳಿಯದೇ, ನನಸಾಗಿ ಬಾರೇ.
ನಿನಗೆಂದೆ ಕಾದಿದೆ ಬೆಚ್ಚನೆಯ ಅಪ್ಪುಗೆ, ಕೃಪೆತೋರೆ.
ಅರೆ ನಿದಿರೆ ಹೃದಯಕೆ
ನಿನ್ನ ಹೆಸರಿನ ಕನವರಿಕೆ
ನಿನ್ನ ಪ್ರೀತಿ ತೀರದ ಹರಕೆ
ನಿನ್ನ ಪ್ರೀತಿ ಕೊಳದಲ್ಲಿ ಮುಳುಗಿದ ನನಗೆ
ಆಗಲಿಲ್ಲ ಮನವರಿಕೆ
ಈ ಹುಚ್ಚು ಹೃದಯಕೆ ನಿನ್ನ ಹೆಸರಿನದ್ದೇ
ಕನವರಿಕೆ...... ❤️
ನಮ್ಮ ನರಗಳ ಹುಣ್ಣಾದದಿ ನುಡಿಯುವ ಯೋಗ ಮಂತ್ರದ ಪ್ರಥಮ ಶಬ್ದ ಓಂಕಾರಾ.
ಹರಡಿದ ಭಾಗಗಳ ಒಗ್ಗೂಡಿಸಿ ರಚಿಸಿದರು ಪತಂಜಲಿ ಅಷ್ಟ ಯೋಗ.
ಸಾಧು ಸಂತರ ಅರಿವಿನ ತೀಕ್ಷ್ಣತೆಯ ಹೆಚ್ಚಿಸಿದೆ ಧ್ಯಾನ ಮಾರ್ಗ.
ನಮ್ಮ ದೇಹ ಮನಸ್ಸುಗಳ ಸಂಯೋಜಿಸೋ ಕರ್ಮ ಯೋಗ,
ಆಸನಗಳ ಮೂಲಕ ಪೋಷಿಸುವುದು ಉತ್ತಮ ಆರೋಗ್ಯ.
ಪೌಷ್ಟಿಕ ಆಹಾರ ದೇಹದ ಸದೃಢತೆಗೆ ಸಂಜೀವಿನಿ ಆದರೆ,
ಯೋಗ ನಮಗೆ ಕ್ರಮಬದ್ಧ ಜೀವನಶೈಲಿಯನ್ನು ಕಲಿಸುತ್ತದೆ.
ರೋಗದ ಕಿಡಿಗಳ ದೂಡಿ,, ನಮ್ಮ ಚೆಲುವಿಗೆ ಹೊಂಬೆಳಕ್ಕಾಗಿರೋ ಯೋಗಭ್ಯಾಸ,
ಆಸೆಗಳ ನಿಯಂತ್ರಿಸಿ, ನಮಗೆ ಸಕಲ ತ್ಯಾಗದ ಶ್ರೇಷ್ಠತೆಯ ಬೋಧಿಸುವ ಹವ್ಯಾಸ.
ಹಂಸ ನಡೆಯೊಳ್ ಬೆರಗುಗೊಳಿಸಿದೆ ಜಗದ ಜನರ ನಮ್ಮ ಭಾರತೀಯ ಯೋಗ,
ಏಕಾಗ್ರತೆ ಸಾಧಿಸಲು ನೆರವಾಗಿದೆ ನಮಗೆ ಬ್ರಾಹ್ಮಿ ಯೋಗ.
ಚಲಿಸೋ ರಕ್ತದ ಸಮಸ್ಥಿತಿ ನಮ್ಮ ಪ್ರಾಣಯಾಮದಿಂದ,
ಜನಜೀವನ ಮೌಲ್ಯದ ದರ್ಶನ ದೊರೆಯುವುದು ಪಥಂಜಲಿ ಯೋಗ ಶಾಸ್ತ್ರದಿಂದ.
ಗಿಡದಲ್ಲಿ ಇರುತ್ತದೇ ಹೂವು
ಮರದಲ್ಲಿ ಇರುತ್ತದೇ ಮಾವು
ಇವೆಲ್ಲವನ್ನೂ ನೋಡುತ್ತೆವೆ ನಾವು
ಸಮುದ್ರದಲ್ಲಿ ಸಿಗುತ್ತೆ ಮುತ್ತು
ನಮ್ಮ ಶರೀರಕ್ಕೆ ಸಾಕು ತಾಯಿಯ ಕೈ ತುತ್ತು
ಅದುವೇ ನಮ್ಮಯ ತಾಕತ್ತು
ನಮಗೇ ಗೊತ್ತಿತ್ತು ತಾಯಿಯ ಪ್ರೀತಿ
ಆದರೆ ಅವರಲ್ಲಿತ್ತು ಕೋಪಕ್ಕೆ ಮಿತಿ