Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಅವನು

ಅವನು ಬೇಕೆಂದೂ ಹೇಳಲಾರೆ..
ಅವನು ದೂರ ಇರುವುದನ್ನೂ ಸಹಿಸಲಾರೆ..
ಅವನು ನನ್ನವನೆ, ಬರಿ ಕನಸಿನಲ್ಲಿ..
ಮನದಲ್ಲಿ ಅವನನ್ನೇ ಪೂಜಿಸಿರುವೆ..
ನಾ ಅವನಿಗೆ ಎಂದಿಗೂ ದಾಸಿಯೇ ಆಗಿರುವೆ..
ನನ್ನೆಲ್ಲಾ ಆಸೆ ಕನಸುಗಳು ಅವನೆ..
ನನ್ನೆಲ್ಲಾ ಪ್ರೀತಿಯು ಅವನಿಗಾಗಿಯೆ..
ಹೀಗಿದ್ದರೂ ಅವನು ನನ್ನವನಲ್ಲ..
ಕಾರಣ ನನ್ನ ಕೊರಳ ಮಾಂಗಲ್ಯಕೆ ಅವನ ಹೆಸರಿಲ್ಲ..

ತನುಮನಸು✍️

- Tanuja.K

12 Jul 2023, 07:49 pm

ಒಂದು ಓಲೆ...

ಮಂದ ಬೆಳಕಿನ ಲಾಂಧರಿನಲ್ಲಿ ಅವನು ಓದುಲು ಶುರು ಮಾಡಿದ ನಿಶಬ್ದ ರಾತ್ರಿ ಸಮಯ ಹನ್ನೆರಡರ ಆಸುಪಾಸು. ನೀಲಿ ಬಣ್ಣದ ಹಾಳೆಯೊಂದರಲ್ಲಿ ಕಪ್ಪು ಬಣ್ಣದ ಅಕ್ಷರಗಳು ಓದಲು ಶುರು ಮಾಡಿದ ನಿದ್ದೆಗೆಟ್ಟು ಓದುವಂತಹ ಮುಖ್ಯವಾದ ಪತ್ರ ಅದಾಗಿತ್ತು. ಪ್ರೀತಿಯ ಶರೀಫನಿಗೆ ನೆನ್ನೆಯ ದಿನ ಈ ಪತ್ರ ಬರೆಯಲು ಕುಳಿತಾಗ ಹಿಂದೆಂದೋ ನಾವು ನಡೆದುಬಂದ ಹಾದಿಯೊಂದು ನೆನಪಾಯಿತು ನಮ್ಮ ಹೆಜ್ಜೆ ಗುರುತುಗಳು ಇನ್ನು ಮೀನುಗುತ್ತಿದ್ದವು! ದಿಢೀರನೆ ನೀ ನನ್ನೆಡೆಗೆ ನೋಡಿ ಕೊನೆಯವರೆಗೂ ಜೊತೆಗಿರುವೆಯಲ್ಲ ಎಂದು ಕೇಳಿದ್ದೆ ಅಂದು ತಿಳಿದಿರಲಿಲ್ಲ ಈ ಪತ್ರವೇ ನನ್ನ ವಿದಾಯವೆಂದು. ಕಣ್ಣು ತುಂಬಿ ನೂರಾರು ಹನಿಗಳು ಪತ್ರಕ್ಕಂಟಿವೆ ಕ್ಷಮಿಸು ನಿನ್ನಂತೆ ರೀತಿ ರಿವಾಜುಗಳನ್ನು ಅನುಸರಿಸಿ ಬರೆಯಲಾಗಲಿಲ್ಲ ನನಗೆ. ಸಣ್ಣ ವಯಸ್ಸಿನಲ್ಲೇ ನನ್ನ ಅಮ್ಮ ದೇವರ ಪಾದ ಸೇರಿದಳು ಅಪ್ಪ ಅವಳ ನೆನಪಿನಲ್ಲೇ ಜಗವ ಮರೆತು ಮೌನಿಯಾದ ನನ್ನವರಿದ್ದು ಯಾರಿಲ್ಲದೆ ಅನಾಥೆಯಾದವಳು ನಾನು. ದೇವರು ಕೇಳದೆ ಕೊಟ್ಟ ಪ್ರೀತಿಯ ಹುಡುಗೊರೆ ನೀನು ಕಸಿಕೊಳ್ಳದಿದ್ದರೆ ಉಸಿರಾಡುತ್ತಿದೆ ನಿನ್ನ ಜೊತೆ ಆದರೆ ವಿಧಿಬರಹ ಈ ಜನ್ಮಕ್ಕಿಷ್ಟೇ ನೋಡು. ಸತ್ತ ಮನಸ್ಸಿನ ಜೊತೆಗೆ ಬದುಕುವುದಕ್ಕಿಂತ ಮನಸಿದ್ದು ಸತ್ತವರ ನೆನೆದು ಬದುಕುವುದು ಸುಲಭ ಎನಿಸುತ್ತದೆ ನನಗೆ.

ಕೊನೆಯ ವಾರ ನಮ್ಮ ನಡುವೆ ಬರಿ ಮೌನ ತುಂಬಿತ್ತು ನೋಡು ಸ್ಮಶಾನ ಮೌನವದು. ಆ ಸ್ಮಶಾನವಾಸಿಯೇ ಜಗತ್ತಿನ ನೆಮ್ಮದಿಯೆಲ್ಲಾ ಕದ್ದು ಭೂದಿಯಲ್ಲಿ ಬಚ್ಚಿಟ್ಟಿರುವನಂತೆ ಇಹದ ಎಲ್ಲಾ ಬಂಧನಗಳಿಗೂ ಸಾವು ಮುಕ್ತಿಯಲ್ಲವೇ! ಎಲ್ಲೋ ಕೇಳಿದ ಮಾತು ಜನರು ಸಾವಿಗೆ ಹೆದರುತ್ತಾರೆ ನೋವಿಗಲ್ಲ ಆದರೆ ಸತ್ತ ಬಳಿಕ ಆ ನೋವೇ ಇರುವುದಿಲ್ಲ ಎಷ್ಟು ನಿಜ ಅಲ್ಲವೇ ಬಹುಶಃ ನನ್ನ ಮನದ ನೋವಿಗೆ ಹೆದರಬೇಕಿತ್ತು ನೀನು ಲೆಕ್ಕಿಸದೆ ಹೋದೆ ಈಗ ನೋಡು ಸಾವಿಗೂ ಹೆದರಲಿಲ್ಲ ನಾನು. ನಿನ್ನುಸಿರ ಲಾಲಿಗೆ ರೆಪ್ಪೆ ಮುಚ್ಚಿದವಳು ನಾನು ಪತ್ರ ಮುಗಿಸುವ ಸಮಯವಾಯಿತು ಮತ್ತೊಮ್ಮೆ ಸಿಗುವೆ ಸಿಹಿ ನಿದುರೆಯ ಕನಸಿನಂತೆ ಮುಂದೊಂದು ಜನ್ಮವಿದ್ದರೆ ಅಲ್ಲಿಯವರೆಗೂ ಜೋಪಾನ.

ಲಾಂಧರಿನ ಬೆಳಕು ಕ್ಷಯಿಸುತ್ತಿತ್ತು ಕತ್ತಲಾವರಿಸಿ ಮೌನ ಕವಿಯಿತು....
ಅವಳ ಕೊನೆಯ ಮುತ್ತಿನ ಗುರುತು ಅವನ ಬೆರಳಿಗಂಟಿತ್ತು ಉಸಿರಿನದ್ದೂ ಕೂಡ!

- ಚುಕ್ಕಿ

08 Jul 2023, 10:33 am

ನೂರಾರು ರಂಗಿನ ಭಾರತ

ದೇಶದಾಗ ಆಯ್ತವ್ವ ನೂರಾರು ರಂಗು

ಜಮ್ಮು, ಕಾಶ್ಮೀರ ಚಳಿಯ ತವರೂರು
ರಾಜಸ್ಥಾನ ಬಿಸಿಲಿನ ಬೆವರೂರು
ಮೀನಿನ ರಾಜಧಾನಿ ಮಂಗಳೂರು
ಸಿಲಿಕಾನ್ ಸಿಟಿ ಬೆಂಗಳೂರು

ಕನ್ಯಾಕುಮಾರಿ ನಮ್ಮ ದೇಶದ ಕೊನೆಯ ಬಾಗಿಲು
ಕಾಶ್ಮೀರ ತಾನೇ ಮೇಲೆ ಯಾವಾಗಲೂ
ಮೆಣಸು ಅಂತ ಬಂದಾಗ ಬ್ಯಾಡಗಿನೆ ಮೊದಲು
ಆಹಾ ಆಹಾ ಜೋಗದಲ್ಲಿ ಮಳೆಗಾಲ ಬರಲು .

ತಾಜ್ ಮಹಲ್ ಆಯ್ತವ್ವ ಸುಂದರ ನೋಡ
ಕನಕಪ್ಪ ಹುಟ್ಟಿದ ಗ್ರಾಮ ಬಾಡ
ಅದು ನೋಡಕೇರಳ ಇದರ ಜಾರ್ಖಂಡ
ಸಿಂಹದ ಮರಿಗಳ ಪಂಜಾಬ್ ಹಿಂಡ

ಇಟ್ಟಾಗ ಗುಜರಾತ ಅತ್ತಾಗ ಸಿಕ್ಕಿಮ್
ಇದ ಭರತನಾಟ್ಯ ತಕಧಿಮ್ ತಕದಿಂ
ಏನಣ್ಣ ಅನ್ನೋ ಆಂಧ್ರ ನೋಡ
ರಜನಿಕಾಂತರ ತಮಿಳನಾಡ

ಅರಿಶಿಣ ಕುಂಕುಮ ಕನ್ನಡ ನಾಡು
ಹಿಂದಿ ರಾಷ್ಟ್ರ ಮಹಾರಾಷ್ಟ್ರ ನೋಡು
ಅಲ್ ನೋಡು ಗುರುದ್ವಾರ ಕೈಮುಗಿದು ಬೇಡು
ಅದು ನೋಡು ಮಂದಿರ ಭಜನೆ ಹಾಡು

ಮುಸ್ಲಿಮ ಹಿಂದು ಈಸಾಯಿ ಎಂದು
ಅಣ್ಣ ತಮ್ಮಂದಿರು ಸಾರೋಣ ಎಂದೂ
ಕಾಮನಬಿಲ್ಲಾಗ ಐತಿ ಏಳೇ ರಂಗು
ದೇಶದಾಗ ಆಯ್ತಾ ನೂರಾರು ರಂಗು


- Nisha anjum

07 Jul 2023, 11:08 am

ಮಳೆಯ ಗೆಲುವು

ಹಾ ನಿಜ ನಾನು ಸೋತೆ

ಮಹಡಿಯಲ್ಲಿ ನಿಂತು ನಾ ನೋಡಿದೆ
ಸ್ವರ್ಗವೇ ಹನಿ ಹನಿಯಾಗಿ ಇಳಿಯುತಿದೆ
ಮೈ ಚೂರೇ ಚಳಿಗೆ ಜುಮ್ಮೆಂದಿದೆ
ಈ ದೃಶ್ಯ ಕೆ ನಿಜ ನಾನೇ ಸೋತೆ ಬಿಟ್ಟೆ

ಹೆಜ್ಜೆ ಹೆಜ್ಜೆಗೂ ಪುಟ್ಟ ಪುಟ್ಟ ಹನಿಯ ಹನಿಯುತ್ತಿದೆ
ಜೋರೇನಲ್ಲ ಚಿಟಿಜಿಟಿಯಾಗಿ ಬಿಳುತ್ತಿದೆ
ಅರೆರೆ ಇದೇನು ಮುಖಕ್ಕೆ ಕೈ ಹಿಡಿದು ನಾನು ಕೂತು ಬಿಟ್ಟೆ
ಈ ದೃಶ್ಯಕ್ಕೆ ನಿಜ ನಾನೇ ಸೋತೆ ಬಿಟ್ಟೆ

ಲೇಖನಿಯು ಸೋತಿದೆ ವರ್ಣಿಸಲಾಗದೆ
ಇನ್ನು ನನಗಿಲ್ಲಿ ಗತಿ ನಾನು ನೆನೆಯುತ್ತಾ ಕುಳಿತುಬಿಟ್ಟೆ
ಮೇಘ ಸಂಘರ್ಷದಿ ಉಂಟಾದ ಮಳೆ ಚಿಪ್ಪಿನಲ್ಲಿ ಸಿಗದಒಂದು ರೀತಿಯಮುತ್ತೆ

ನಿನ್ನಬರೆಯಲು ಆಗದೆಸುಮ್ಮನಿರಲು ಆಗದೇ
ಕವಿತೆಸೋತು ಬಿಟ್ಟೆ

ನೂರಾರು ಕವಿಗಳಮರಳು ಮಾಡಿದನಿಸರ್ಗ
ನೀ ನಕ್ಕರೆ ಈಭೂಮಿಗೆ ಸ್ವರ್ಗ
ನಿನ್ನಲ್ಲಿ ಪಡೆಯಿತು ಸಂತೃಪ್ತಿ ಆತ್ಮ ನಿನ್ನಾ ಯೋಚಿಸುತ್ತಾ ಆದೆ ಆಧ್ಯಾತ್ಮ

ಸರಳ ಸೌಂದರ್ಯ ಅಡಗಿದ ಅಂದ
ದೃಷ್ಟಿ ತೆಗೆಯುವೆ ಕಳ್ಳ ಬಂದ
ತರ್ಕದಿ ಗೆಲುವು ಅರಸುತ್ತಿದ್ದ ನಾನು
ನಿನ್ನ ತಂಗಾಳಿ ಆಗಮನದಿ ಯಾಕೋ ಸೋತು ಬಿಟ್ಟೆ



Nisha Anium

- Nisha anjum

07 Jul 2023, 10:59 am

ಕವನಗಳ ಒಡೆಯ

ನನ್ನ ಕವನಗಳ ಒಡೆಯ..
ನಿನ್ನ ಪ್ರೀತಿಯೇ ಈ ಕವನಗಳಿಗೆ ಸ್ಫೂರ್ತಿ
ಕವನಗಳ ಬರೆಯುವೆ ನಿನ್ನ ನೆನಪಾಗಿ..
ನಿನ್ನಲೆ ಕಳೆದು ಹೋಗುವೆ ಮತ್ತೆ ಮನಸಿಗಾಗಿ..
ನನ್ನ ಕವನಗಳ ಪದೆ ಪದೆ ಓದುವೆ ನಿನಗಾಗಿ..
ಮತ್ತಷ್ಟು ಕವನಗಳ ಕಟ್ಟಿ ಕೊಡುವೆ ಪ್ರೀತಿಗಾಗಿ..
.. ..

ತನುಮನಸು✍️

- Tanuja.K

06 Jul 2023, 10:25 pm

ಇದುವೇ ಜೀವನ .....ಸುಧಾ ಆರ್ ಬಳಿಗೇರ

ಭೂಮಿ ಅದುವೇ ಕರ್ಮ
ನೆಲ ಉಳುವುದು ನಿಯಮ
ಬೀಜ ಹಾಕುವುದು ನಂಬಿಕೆ
ಬೇರು ಅದರ ಸಹನೆ
ಕಾಂಡ ಇದರ ಶಕ್ತಿ
ಎಲೆಗಳು ಆಯಸ್ಸು
ರೆಂಬೆ ಕೊಂಬೆಗಲು ಜೀವನದ ಸಾವಲುಗಳು
ಹೂವು ಶುದ್ಧ ಮನಸ್ಸುಗಳು
ಕಾಯಿ ಬಯಕೆಗಳು
ಹಣ್ಣು ಯಲ್ಲದರ ಪ್ರೀತಿ .....
ಈ ವೃಕ್ಷವು ನಾವು.....
ಸುಧಾ ಆರ್ ಬಳಿಗೇರ

- ಸುಧಾ ಆರ್ ಬಳಿಗೇರ

03 Jul 2023, 02:32 pm

ಗುರು ಪೂರ್ಣಿಮೆ ದಿನದ ಶುಭಾಶಯಗಳು

ನನಗೆ ವಿದ್ಯೆ ಕಲಿಸಿಕೊಟ್ಟ ಎಲ್ಲಾ ಗುರುಗಳಿಗೆ ಹೃದಯ ಪೂರ್ವಕವಾಗಿ
ನಮಸ್ಕಾರಗಳು

ಗುರುವಿನ ಗುಲಾಮನಾಗು

ಗುರುವೆ ನಿನ್ನ ಕರುಣೆಯಿಂದ
ಪುನೀತನಾದೆ ನಾನು
ನಿಮ್ಮ ಜ್ಞಾನದಿಂದ ನನಗೆ
ಜ್ಞಾನ ಜ್ಯೋತಿ ಫಲಿಸಿತು

ಅಜ್ಞಾನವೆಂಬ ಕತ್ತಲಿಂದ
ಸುಜ್ಞಾನಿಯನ್ನಾಗಿ ಮಾಡಿದೆ
ಲೋಕದಲ್ಲಿ ಕಣ್ಣು ತೆರೆಸಿ
ನೀತಿವಂತನಾಗಿಸಿದೆ

ಅನ್ಯಾಯವೆಂಬ ಕಲ್ಲು ಮುಳ್ಳು ತೆಗೆಸಿ
ಸತ್ಯವೆಂಬ ಹುಲ್ಲು ಹಸಿರ ಶಾಂತಿ ಬೆಳಸಿ
ನಿತ್ಯ ಜ್ಞಾನಿಯಾಗಿ ಗುರುವ ಸೇವೆ ನಾ ಮಾಡುವೆ
ಉತ್ತಮನಾಗಬೇಕೆಂಬ ಸತ್ಯ ನುಡಿಯ ತಿಳಿಸುವೆ

ಜಿ ಟಿ ಆರ್ ದುರ್ಗ
ಜಿ ಹೆಚ್ ಎಲ್
ಬಂಗಾರಪೇಟೆ

- Gtramachandrappa Ramachandrappa

03 Jul 2023, 02:29 pm

ಕನಸಿನ ಕಲ್ಪನೆ

ಓ ಒಲವಿನ ಗೆಲತಿಯೆ
ಹೇಗೆ ಇರುವೆ ನೀ
ನಿನ್ನ ರೂಪವನು ಒಮ್ಮೆಯು
ಕಾಣೆನು ನಾ
ಅಂದದಿಂದಿರುವೆಯೋ
ಅಂಧವಾಗಿರುವೆಯೋ
ತಿಳಿಯೇ ನಾ
ಕಾಣದ ಅರಮನೆಯಲ್ಲಿ
ಕನಸಿನ ರಾಜ್ಯವನ್ನು ಕಟ್ಟಿ
ಕನಸಿನ ಲೋಕದ ರಾಣಿಯನ್ನು
ಹುಡುಕುತ್ತಿರುವ ಕಲಾ ರಾಜನಾಗಿರುವೆ
ಮರುಕ್ಶಣವಾದರು ಕಂಡರೆ
ಸಂತೋಶದಿಂದ ಮಣಿಯುವೆ .

- Somashekar

03 Jul 2023, 12:02 am

ಪ್ರತಿ ದಿನ, ಪ್ರತಿ ಕ್ಷಣವೂ ಹೊಸತು...

ಅಂಟು-ನಂಟಲಿ ಬೆಸೆದು-ಬಿಡಿಸಿಕೊಂಡ ಹದಿನೇಳರ ಗಂಟಿದು...
ನೆರೆ-ಹೊರೆಯಲಿ ಅಳೆದು-ತಳೆದಿಹ ಹದಿನೆಂಟರ ಆಹ್ವಾನವಿದು...|
ಹನ್ನೆರಡರ ಗುಂಪಿನ ಹಾವಕ್ಕೆ, ಮೂವತ್ತರ ಬಿಡಿಕೆಯ ಭಾವವು...
ಹೇಳಲು-ಕೇಳಲು ಶೂನ್ಯವೆನಿಸಿದರೂ, ಶೇಷವಾಗಿಹ ವಿಷಯದ ಸಾಲುಗಳು...||

ಊಹೆ-ಪೊಹೆಗಳಿಗೂ ಮರೀಚಿಕೆಯಾಗಿಹ ಕೌತುಕತೆಗಳು...
ಕನಸು-ಕಲ್ಪನೆಗೂ ಸತ್ಯ-ಸುಳ್ಳಿನ ಪ್ರಶ್ನಾರ್ಥಕ ಚಿಹ್ನೆಗಳು...|
ಸುರಿವ ವರ್ಷಧಾರೆಯೊಂದೆ ಪರ್ವವಾಗಿಹುದು, ಕಾಯೋ ಚಾತಕ ಪಕ್ಷಿಗೆ...
ಅಜ್ಞಾತವಾಸದಲ್ಲೂ ತಿರುವಿನ ನೋಟವಿಹುದು, ಗೀಚಿದ ಪುಟಗಳ ಮೇಲೆ...||

ಆಗು-ಹೋಗುಗಳ ನಿಖರತೆಯನ್ನು ಹೇಳದ ಗಡಿಯಾರದ ಮುಳ್ಳುಗಳು...
ನಿಶೆ-ಉಶೆಗಳ ಮಧ್ಯದಲ್ಲೂ ಸಂದರ್ಭವ ಬಿಚ್ಚಿ ಕೊಡದ ಸಮಯಗಳು...|
ಮಾತು-ಮೌನ ಅದಲು-ಬದಲಾದರೂ, ಸಿಹಿ-ಕಹಿಯ ಅಲೆಗಳು ಅಬ್ಬರಿಸಲೇಬೇಕು...
ಕುರುಡು ಗಣ್ಣಿನ ವೀಕ್ಷಕನಲ್ಲವಾದರೂ, ಮೂಕ ಪ್ರೇಕ್ಷಕನಂತಿಹ ಲೋಕವಿದು ಇಂದು...||

ಸಂಸ್ಕ್ರತಿ-ಸಂವತ್ಸರದಲ್ಲಿ ಇರುವ ಅನುಭವದ ಸಾಲುಗಳೋ...
ಅಜ್ಞಾನ-ವಿಜ್ಞಾನದ ನಡುವೆ ನಡೆಯೋ ವೈಜ್ಞಾನಿಕ ಸಂಶೋಧನೆಗಳೋ...|
ಮೇಲು-ಕೀಳು, ಸರಿ-ತಪ್ಪು, ಬೇಕು-ಬೇಡಗಳ ಹಿಡಿದು ನಡೆಸೋ ಕೂಪಮಂಡೂಕದ ಚರ್ಚೆಗಳೋ...
ಸಿಂಹಗರ್ಜನೆಯ ಅಹಂಭಾವ, ಮದವೇರಿದ ಗಜದ ಮಧ್ಯೆ , ವಾಸ್ತವಿಕದ ದಿನಗಳೋ...||

ಯುಗಗಳೇ ಕಳೆದೂ ಮರಳಲಿ, ವರ್ಷಗಳೇ ಬದಲಾಗಿ ಬರಲಿ...
ಅಂಕಿ-ಅಂಶದ ಸಂಖ್ಯೆಯ ಲೆಕ್ಕ, ಬರೆಯೋ ಕಾಯಕ ನಿಲ್ಲದು...|
ಶ್ವಾಸ-ನಿಶ್ವಾಸದಲ್ಲೂ, ದಿನವೂ ಸತ್ತು-ಹುಟ್ಟಿ ಬಂದ ಮೇಲೂ...
ಪ್ರತಿಕ್ಷಣವೂ ಹೊಸತೆಂದು ಸ್ವಾಗತಿಸಲು ಹಿಂಜರಿಕೆ ಸಲ್ಲದು..||

ಸುಮ


- SUMANA M

29 Jun 2023, 02:01 pm

ಕವನದ ಶೀರ್ಷಿಕೆ ಬಹುಮುಖ ಪ್ರತಿಭೆ ಹೆಲನ್.

ಪತ್ರಕರ್ತ ಆರ್ಥರ್ ಹೆಚ್. ಕೆಲ್ಲರ್ ರವರ ಮಗಳಾದ ಹೆಲನ್,
ಅಸುಳೆಯಲ್ಲೆ ಮಿಂಚಿನ ವೇಗವನ್ನು ಗ್ರಹಿಸುವಷ್ಟು ಚುರುಕಾಗಿದ್ದಳು.
18 ತಿಂಗಳ ಮಗುವಿಗೆ ಅಂಟಿದ ಸ್ಕಾರ್ಲೆಟ್ ಫೀವರ್,
ಬಹುವಿಕಲತೆ ವರ ನೀಡಿ ನಿಶಬ್ದಗೊಳಿಸಿತು ಹೆಲನ್ ಬಾಲ್ಯವ.
ದೃಷ್ಟಿ ಇರದ ಕಣ್ಣು, ಆಲಿಸುವ ಶ್ರವಣ ಸ್ತಬ್ಧವಾದಾಗ, ಅವರಲ್ಲಿ ಆವರಿಸಿತು ಮಾತಿಲ್ಲದ ಮೌನ.
ಮುದುಡಿದ ಮೊಗ್ಗನು ಅರಳಿಸುವ ಕನಸೋತ್ತ ಹೆಲನ್ ತಾಯಿ,
ಪರ್ಕಿಂಸ್ ಶಾಲೆಗೆ ಧಾವಿಸಿದರು,
ಅಲ್ಲಿ ಗ್ರಹಂಬೆಲ್ ಶಿಷ್ಯೆ ಅನಿಸಲವನ್, ಹೆಲಂಗೆ ಗುರುವಾಗಿ ಸಿಕ್ಕರು.
ಹೆಲನ್ಗೆ ಸನ್ನಿವೇಶದ ಪರಿಕಲ್ಪನೆಯ ಪಾಠವ,
ಸಿಲೆವನ್ ಸ್ಪರ್ಶಆಕ್ಷರಗಳ ಮೂಲಕ ಆರಂಭಿಸಿದರು.
ಒಮ್ಮೆ ವಾಟರ್ ಮಗ್ ಶಬ್ದಗಳ ತಪ್ಪಾಗಿ ಗ್ರಹಿಸಿದ ಹೆಲನ್ ಕೋಪಕ್ಕೆ ಗೊಂಬೆ ಚೂರಾಯಿತು,
ಸೆಲವನ್ ಕೈ ಮೇಲೇ ಹರಿಸಿದ ಕೊಳವೆ ಬಾವಿಯ ನೀರಿನ ಅನುಭವ,
ಮಗುವಿನ ಕುತೂಹಲ ಕಲಿಕೆಗೆ ಮಾರ್ಗವಾಯಿತು.
ಸೆಲವನ್ ಜೊತೆ ವಿಶ್ವವ ದರ್ಶಿಸಿದ ಹಿಲ್ಲನ್,
ಲೈಟ್ ಇನ್ ಮೈ ಡಾರ್ಕ್ನೆಸ್ ನಂತಹ 12 ಕೃತಿಗಳಿಗೆ ಒಡತಿಯಾದರೂ.
ಉತ್ತುಂಗಕ್ಕೆರಿದ ಬಹುಮುಖ ಪ್ರತಿಭೆ ಹೆಲನ್,
ಸಾಧನೆಗೈದ ಶ್ರೇಷ್ಠ ಮಹಿಳೆಯರ ಸಾಲಿನಲ್ಲಿ ಅಜರಾಮರ.
ಕಲಾ ಸರಸ್ವತಿಯಾಗಿ ಮೆರೆದ ಹೆಲನ್,
ನ್ಯೂನ್ಯತೆ ಉಳ್ಳ ಮಹಿಳೆಯರ ಹಕ್ಕುಗಳಿಗಾಗಿಯೂ ಹೋರಾಡಿದರು.
ಅಮೇರಿಕಾದ ಮಗಳಾಗಿ ಹುಟ್ಟಿದ ಹೆಲನ್,
ಸಮಾಜ ಸುಧಾರಕಿಯಾಗಿ ಜಗ ಬೆಳಗುವ ಸೂರ್ಯನಂತೆ ನಮ್ಮೊಳಗೆ ಇಂದಿಗೂ ನೆಲೆಸಿರುವರು.

- nagamani Kanaka

27 Jun 2023, 10:39 pm