ಮೊದಲಾ ಸಲ ನಿನ್ನ ನೋಡಿದ ಕ್ಷಣವು
ನನ್ನ ಕಣ್ಣಿಗೆ ಜೀವ ನೀಡಿತು
ಮೊದಲಾ ಸಲ ನಿನ್ನೊಂದಿಗೆ ಮಾತಾಡಿದ ಕ್ಷಣವು
ನನ್ನ ಮಾತಿಗೆ ಅರ್ಥ ನೀಡಿತು
ಮೊದಲಾ ಸಲ ನಿನ್ನ ಇಷ್ಟ ಪಟ್ಟ ಕ್ಷಣವು
ನನ್ನ ಹೃದಯದಲ್ಲಿ ಪ್ರೀತಿ ಹುಟ್ಟಿಸಿತು
ಈ ಹೃದಯಕೆ ನೀ ಬಂದ ಆ ಒಂದು ಕ್ಷಣವು
ನನ್ನ ಜೀವನಕೆ ಅರ್ಥ ನೀಡಿತು
ನೀನೆ ಮೊದಲು ನೀನೆ ಕೊನೆಯು
ಈ ಹೃದಯಕೆ
ಇಂದಿಗೂ ..........!
ದೇವಸ್ಥಾನ ಗುಡಿ ಗುಂಡಾರಗಳಿಗೆ ಕೋಟ್ಟ್ಯಂತರ ದೇಣಿಗೆ ನೀಡುವವರಿದ್ದಾರೆ ಇಲ್ಲಿ....
ಆದರೆ ಕಡು ಬಡವರಿಗೆ ಹೊಟ್ಟೆ ತುಂಬ ಊಟ ನೀಡುವರು ಇಲ್ಲವಯ್ಯ....
ಜಾತಿ ಮತ ಧರ್ಮಗಳೆಂದು ಹಲವಾರು ವರ್ಷ ಹೋರಾಟ ನಡೆಸುವರು ಇಲ್ಲಿದ್ದಾರೆ....
ಆದರೆ ಮನುಷ್ಯನ ಮೂಲ ಅಗತ್ಯಗಳಿಗೆ ಹೋರಾಡುವವರು ವಿರಳವಯ್ಯ......
ಸಾವಿರಾರು ಹೆಣ್ಣು ದೇವತೆಗಳನ್ನು ಪೂಜಿಸುವವರಿದ್ದಾರೆ ಇಲ್ಲಿ....
ಆದರೆ ಅದೇ ಹೆಣ್ಣನ್ನು ಕೀಳಾಗಿ ಕಾಣುವವರು ಎಲ್ಲೆಡೆಯೂ ಇದ್ದಾರಯ್ಯ.....
ದೇಶದ ಉನ್ನತಿಗೆ ಸಾಕಷ್ಟು ಯುವ ಜನತೆ ಶಕ್ತಿ ಇದೆ ಇಲ್ಲಿ....
ಆದರೆ ಯುವಜನತೆಯೇ ಹಾಳಾಗುತ್ತಿದೆ ಸಾಕಷ್ಟು ಕೆಟ್ಟ ಚಟಗಳಿಗೆ...
ದುಷ್ಟ ಬ್ರಿಟೀಷರ ಗುಲಾಮರಾಗಿದ್ದೇವು ಅಂದು...
ಕುತಂತ್ರಿ ರಾಜಕಾರಣಿಗಳ ಗುಲಾಮರಾಗಿದ್ದೇವೆ ಇಂದು.....
ಸತ್ಯ ,ಧರ್ಮ,ನ್ಯಾಯ, ನೀತಿ ರಾರಾಜಿಸುತಿತ್ತು ಈ ನಾಡಿನಲ್ಲಂದು.....
ಕೊಲೆ ,ಸುಲಿಗೆ,ಭ್ರಷ್ಟಾಚಾರ ,ಅತ್ಯಾಚಾರ ಪರ್ವತ ಶಿಖರವನ್ನೇರಿದೆ ಇಂದು......
ಅಪ್ಪಾ ಅಂದ್ರೆ ಸಾಕು ಮುಖದಲಿ ಮೂಡುವುದು ಏನೋ ಹುರುಪು....
ಮಕ್ಕಳ ಬಾಳಲಿ ಬರುವ ಕಗ್ಗತ್ತಲನ್ನು ಓಡಿಸಿ ಬಾಳನು ಮಾಡುವನು ಬಿಳುಪು....
ಅಪ್ಪನಿಲ್ಲದಿರಬಹುದು ಭಾರೀ ಶ್ರೀಮಂತ....
ಆದರೆ ಅವನು ಪ್ರೀತಿಯಲ್ಲಿ ಅಂಭಾನಿಗಿಂತ ಸಿರಿವಂತ....
ಜೀವನದ ಮೌಲ್ಯಗಳನ್ನು ಕಲಿಸಿದಾತ....
ಅಮ್ಮನಿಲ್ಲದ ಸಮಯದಲ್ಲಿ ತಾಯಿಯಂತೆ ಜೋಗುಳ ಹಾಡಿದಾತ....
ನಿಸ್ವಾರ್ಥ ಭಾವದಿಂದ ಮಕ್ಕಳನ್ನು ಸಲಹುವಾತ ....
ಮಕ್ಕಳ ಕಣ್ಣಲಿ ನೀರು ಬರದಂತೆ ನೋಡಿಕೊಳ್ಳುವಾತ.....
ಹಾಸ್ಟೇಲ್ನಿಂದ ಮನೆಗೆ ಬಂದಾಗ ತಬ್ಬಿಕೊಂಡು ಮುದ್ದಾಡುವಾತ...
ಸಿಟ್ಟ ಮಾಡ್ಕೊಂಡ ಊಟ ಇಲ್ದೇ ಮಲ್ಕೊಂಡಾಗ ರಮಿಸಿ ಕೈ ತುತ್ತು ತಿನ್ನಿಸಿದಾತ.....
ಅಮ್ಮ ಇಲ್ಲ ಅನ್ನೋ ಕೊರಗನ್ನ ನೀಗಿಸಿದಾತ.....
ಸೋತಾಗ ಜಗವೇ ಕೀಳಾಗಿ ನೋಡಿದರೂ ನನ್ನ ಎಂದಿಗೂ ಬಿಟ್ಟುಕೊಡದಾತ.....
ನನ್ನ ತೋಳಲ್ಲಿ ನೀನು ನಿನ್ನ ಮಡಿಲಲ್ಲಿ ನಾನು
ನನ್ನ ಹೃದಯದ ಸೈಟಲ್ಲಿ ಜಾಗವೂ ಬೇಕೇನು...?
ಬಾಡಿಗೆಯು ಬೇಕಿಲ್ಲಾ ತೆರಿಗೆ ಕಟ್ಟುವ ಹಾಗಿಲ್ಲಾ
ಬಂದು ಆಕ್ರಮಿಸು ನಿನಗಷ್ಟೇ ಹಕ್ಕು ನೀಡಿರುವೆನಲ್ಲಾ...!
ಈ ಹೃದಯದ ಅರಮನೆಗೆ ರಾಣಿಯು ನೀನು
ಸೈನಿಕನು ಸೇವಕನು ಎಲ್ಲವೂ ನಾನು
ಈ ಬಡಪಾಯಿ ಹೃದಯಕೆ ಕಾಲಿಡುವೆಯಾ ಕಾಲಿಂದಲೇ
ತುಳಿದು ಕೊಲ್ಲವೆಯಾ ನಾನರಿಯೇ...? ಎಲ್ಲವು ನಿನ್ನಿಚ್ಚೇ,
ನನ್ನಿಚ್ಚೆಯಂತೆ ನಡೆದು ಒಪ್ಪಿದರೆ ನಿನ್ನ
ಮುಪ್ಪಿನಲ್ಲೂ ಬಿಡದೆ ಕಾಯುವೆನು ನಿನ್ನಾ
ಉಪ್ಪಿದ್ದರೂ ಇರದಿದ್ದರೂ ತಿಂದು ಬದುಕುವೇ
ಮಾಡಿ ಹಾಕಿದನ್ನಾ....
ನಾನು ನಿನಗಿಷ್ಟವಿದ್ದರೆ ಹೇಳು
ಕಷ್ಟಪಟ್ಟು ಇಷ್ಟಪಡುವುದು ನನಗೆ ಇಷ್ಟವಿಲ್ಲಾ
ಒಪ್ಪದಿದ್ದರೇ ಮರೆತು ಮರೆಯದೆಯೇ ಬದುಕುವೇ
ಇನ್ನುಳಿದ ದಿವಸ ಒಬ್ಬಂಟಿಯಾಗಿ....!..
,,,,prashi yadav,,,,,,
ಆಕಾಶದಲ್ಲಿರೋ ಸಾವಿರಾರು ನಕ್ಷತ್ರಗಳ ನಡುವೆ ಇರೋ ಧ್ರುವತಾರೆ ಇದ್ದಂಗೆ.....
ಹುಣ್ಣಿಮೆಯ ಕಡುರಾತ್ರಿಯಲಿ ಹೊಳೆಯೊ ಚಂದಮಾಮ ಇದ್ದಂಗೆ.....
ವೃತ್ತಿಯಲ್ಲಿ ದೇಶ ಕಾಯೋ ಸೈನಿಕ ಆದ್ರೂ ಸಹ ನನ್ನ ಹೃದಯ ಆಳುವ ಮಹಾರಾಜ ಇದ್ದಂಗೆ....
ಕನ್ನಡಿಯಲ್ಲಿ ನನ್ನ ನೋಡಿಕೊಳ್ಳೋ ಪರಿವೆ ಇಲ್ಲ ಅವನು ನನ್ನ ಪ್ರತಿಬಿಂಬ ಇದ್ದಂಗೆ.....
ನೋವಲ್ಲಿದ್ದಾಗ ನನ್ನ ನಗಿಸೋ joker ಇದ್ದಂಗೆ.....
ಯಾವಾಗಲು ನನ್ನ ಕಾಯೋ unpaid bodyguard ಇದ್ದಂಗೆ.....
ಎಷ್ಟೇ ಕಷ್ಟ ಕೊಟ್ರು ನನ್ನ ಬಿಟ್ಟ ಹೋಗ್ದೇ ಇರೋ ಬೆನ್ನಿಗೆ ಬಿದ್ದ ಬೇತಾಳನಂಗೆ.....
ಹೃದಯಕಂಟಿ ಕೊಂಡಿರೋ ಬಿಡಿಸಲಾಗದ ಜಿಗಣೆ ಹಂಗೆ......
ಸಿಟ್ಟದಾಗ ಹೆಡೆಯೆತ್ತಿ ಬುಸುಗುಟ್ಟೋ ಹಾವಿನಂಗೆ....
ಮಗು ತಪ್ಪು ಮಾಡಿದಾಗ ತಿದ್ದಿ ಹೇಳೋ ತಾಯಿ ಇದ್ದಂಗೆ.....
ಜೀವನ ಪೂರ್ತಿ ಜೊತೆಗೆ ಇರ್ತಿನಿ ಅನ್ನೋ ಒಂದೇ ಒಂದು ಜೀವ ಅವನು,ನನ್ನ ಜೀವ ಇದ್ದಂಗೆ....
ಎಷ್ಟು ಹೊತ್ತು ಓದ್ತೀಯಾ ಅಂತ ಕೇಳ್ಲಿಲ್ಲ ನನ್ನ ಹುಡ್ಗ,
ಮೂರ್ ಹೊತ್ತು ಎಮ್ಮೆ ತರ ತಿನ್ನೋದು ಮಾತ್ರ ಬಿಡಬೇಡ ಎಂದ.....
ಎಷ್ಟ phone use ಮಾಡ್ತೀಯಾ ಅಂತ ಬೈಯ್ಲಿಲ್ಲಾ ನನ್ನ ಹುಡ್ಗ ,
daily extra data pack ಅವ್ನೆ ಹಾಕಿಸ್ತೀನಿ ಎಂದ ....
ಜಾಸ್ತಿ ಹೊತ್ತು ನಿದ್ದೆ ಮಾಡೆಂದ ನನ್ನ ಹುಡ್ಗ ,
ಆರೋಗ್ಯ ಚೆನ್ನಾಗಿರತ್ತಂತಲ್ಲ ನನ್ನ ಕಾಟ ಸ್ವಲ್ಪ ಹೊತ್ತಾದ್ರು ತಪ್ಪುತ್ತೆ ಎಂದ....
ಚೆನ್ನಾಗಿ ಓದಿ ಡಿಗ್ರೀ ಮಾಡು ಅನ್ಲಿಲ್ಲ ನನ್ನ ಹುಡ್ಗ,
ಡಿಗ್ರೀ ಆಗ್ಲಿಲ್ಲ ಅಂದ್ರು ಪರವಾಗಿಲ್ಲ ಕಸಮುಸುರೆ ಮಾಡಕ್ಕಾದ್ರು ಕಲಿಯಂದ ....
valentine's day ಗೆ gift ಏನೂ ಕೊಡಲಿಲ್ಲ ನನ್ನ ಹುಡ್ಗ,
ಯಾಕ್ ಅಂದ್ರೆ costly ಹೃದಯಾನೇ ಕೊಟ್ಟೀನಿ ಎಂದ........
ಮಹಿಳೆಯರಿಗೆ ಉಚಿತ ಪ್ರಯಣ
ಅಂಥದ್ದೇನೋ ಸರ್ಕಾರ ಮಾಡವ್ರೆ...
ನನ್ನವಳಿಗೆ ನನ್ನ ಮನ್ಸು , ಕನ್ಸು
ಬಿಟ್ಟು ಬೇರೆ ಯಾವ್ದೇ ಉಚಿತ
ಪ್ರಯಾಣ ಬೇಡ ಅಂತ ಕಾಣ್ಸುತ್ತೆ...
ಹಳೆ ಪ್ರೇಯಸಿ ಆಣೆಗೂ ಅವಳು
ನೋಡೋ ನೋಟಕ್ಕೆ ನಾ
ಸೋತ್ರು ಪ್ರತಿ ಬಾರಿ ಸ್ವರ್ದಿಸುವ....
ಎಮ್.ಎಸ್.ಭೋವಿ...✍️