Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಜನಮರಳೋ.. ಜಾತ್ರೆ ಮರಳೋ .

ಜನ ಮರಳೋ ಜಾತ್ರೆ ಮರಳೋ*


ಈಗೀಗ ಅವನ ನೋಡಿ

ಇವನು ,ಇವನ ನೋಡಿ

ಅವರು ಮನೆಯಲ್ಲಿ ಶುದ್ದ

ನೀರು, ಎಳನೀರು‌ ಉಚಿತವಾಗಿ

ಸಿಗುತ್ತಿದ್ದರೂ ದುಬಾರಿ ಹಣ ತೆತ್ತು

ಕುಡಿಯಲಾರಂಭಿಸಿದ್ದೇವೆ  ಕೋಕ್

ಪೆಪ್ಸಿ, ಅದೂ.. ಇದು..‌.


ಈಗೀಗ ಮನೆಯಲ್ಲಿ ಸಿರಿಧಾನ್ಯದ 

ಆರೋಗ್ಯಕ್ಕೆ ಪೂರಕವಾದ ಆಹಾರ

ಲಭ್ಯವಿದ್ದರೂ ಹುಡುಕಿಕೊಂಡು

ಹೋಗಿ ತಿನ್ನುತ್ತಿರುವೆವು ಫಿಜಾ, ಬರ್ಗರ್, ಗೋಬಿ ಮಂಚೂರಿ ಅದೂ.. ಇದು....


ಈಗೀಗ ಸಾಂಪ್ರದಾಯಿಕ 

ಉಡುಗೆಗಳನ್ನು ಕಡೆಗಣಿಸಿ

ಪ್ಯಾಶನ್ ಹೆಸರಲ್ಲಿ  ಅರೆಬರೆ

ಬಟ್ಟೆಗಳನ್ನು ತೊಡುತ್ತಿಹೆವು

ಮಿಡಿ ,ಮ್ಯಾಕ್ಸಿ ಅದೂ... ಇದು...


ಮನೆಯಲ್ಲಿ ಬಳಸದೇ ಬಿದ್ದ

ನೂರಾರು ವಸ್ತುಗಳಿದ್ದರೂ

ಕೊಳ್ಳುಬಾಕತನದಿಂದ 

ಖರೀದಿಸಲು ಅಲೆದಾಡುತ್ತಿರುವೆವು

ಎಡತಾಕುತ ,ಮಾಲ್ .ಮಾರ್ಟ್,

ಸೂಪರ್ ಬಜಾರ್ ಅದೂ.. ಇದು...


ಯಾರಿಗೂ ಚಿಂತನ ಮಂಥನ

ಮಾಡಲು ಪುರುಸೊತ್ತಿಲ್ಲ ಈಗೇನಿದ್ದರೂ

ಜನಮರಳೋ.. ಜಾತ್ರೆ ಮರಳೋ .

- Subhas Subhas

17 Dec 2023, 10:46 pm

ನೊಂದ ಮನಸ್ಸು

ಆಸೆಗಳ ಸಮಾಧಿ ಕಟ್ಟಿರುವೆನು

- KUMAR BELAKUD

16 Dec 2023, 05:49 pm

ಅಂದು ಇಂದು ಮುಂದೆ

ಅಂದು..ಹಸಿವಿದ್ದರೆ ಊಟ
ಗೆಲುವಿದ್ದರೆ ಓಟ
ಜೀವನದ ಅರಿವಿಗೆಂದೆ ಪಾಠ.

ಇಂದು..ಹಸಿವಿರದಿದ್ದರು ಊಟ
ಗೆಲುವಿಲ್ಲದಿದ್ದರು ಓಟ
ಜೀವನ ಅರಿವಾಗದಂತಹ ಪಾಠ.

ಮುಂದು..ಹಸಿವಾದರೆ ತಾನೆ ಊಟ
ಗೆಲ್ಲುವ ತಂತ್ರದ ಓಟ
ಜೀವವಿಲ್ಲದ ಯಂತ್ರಕೆ ಜೀವನ ‌ಪಾಠ.



- Subhas Subhas

15 Dec 2023, 10:13 pm

ಬಣ್ಣದ ಲೋಕ

ನಂಬಿ ಬಂದವರಾರೋ
ನಟಿಸಿ ನಿಂತವರಾರೋ
ಬಣ್ಣ ಹಚ್ಚಿದವರಾರೋ
ಬವಣೆ ನೀಡಿದವರಾರೋ
ಮನಸ ಮೆಚ್ಚಿದವರಾರೋ
ಮನಸೇ ಇಲ್ಲದವರಾರೋ
ಪ್ರೀತಿ ನೀಡಿದವರಾರೋ
ಪ್ರೀತಿಸಿದಂತೆ ನಟಿಸಿದವರಾರೋ
ಇಲ್ಲಿ ಯೋಗ್ಯರಾರೋ
ಇಲ್ಲಿ ಅಯೋಗ್ಯರಾರೋ
ಬಣ್ಣದ ಲೋಕದಲ್ಲಿ,
ಬಣ್ಣದ ಲೋಕದಲ್ಲಿ,
ಬಣ್ಣದ ಮಾತುಗಳನಾಡಲರಿಯದೇ
ಭಾವುಕರಾಗಿ ಕಣ್ಣೀರ ಹರಿಸಿದವರಾರೋ
ನಿಷ್ಕಲ್ಮಶ ನಿಷ್ಠೆಯಿಂದ ವಂಚಿತರಾದವರಾರೋ

- Pareeni

15 Dec 2023, 01:23 pm

- Nuage Laboratoire

15 Dec 2023, 12:28 pm

ದೇವರು...

ದೇವರನ್ನು ಸೇರಲು ಹಲವಾರು ದಾರಿಗಳಿವೆ. ನೀವು ನಿಮಗೆ ಸರಿಯೆನಿಸಿದ ದಾರಿಯನ್ನು ಆಯ್ಕೆ ಮಾಡಿಕೊಳ್ಳಬಹುದು.
ಕರ್ಮಯೋಗ,
ಜ್ಞಾನಯೋಗ,
ರಾಜಯೋಗ,
ಭಕ್ತಿಯೋಗಗಳೆಲ್ಲವು ನಿಶ್ಚಿತವಾಗಿ ದೈವವನ್ನು ಸೇರುತ್ತವೆ. ನಿಮಗೆ ಸೂಕ್ತವಾದ ದಾರಿಯನ್ನು ನೀವು ಆಯ್ಕೆ ಮಾಡಿಕೊಳ್ಳಿರಿ...

ದೇವರನ್ನು ಸೇರಲು ಹಲವಾರು ದಾರಿಗಳಿವೆ. ನೀವು ನಿಮಗೆ ಸರಿಯೆನಿಸಿದ ದಾರಿಯನ್ನು ಆಯ್ಕೆ ಮಾಡಿಕೊಳ್ಳಬಹುದು. ಕರ್ಮಯೋಗ, ಜ್ಞಾನಯೋಗ, ರಾಜಯೋಗ, ಭಕ್ತಿಯೋಗಗಳೆಲ್ಲವು ನಿಶ್ಚಿತವಾಗಿ ದೈವವನ್ನು ಸೇರುತ್ತವೆ. ನಿಮಗೆ ಸೂಕ್ತವಾದ ದಾರಿಯನ್ನು ನೀವು ಆಯ್ಕೆ ಮಾಡಿಕೊಳ್ಳಿ.

- Guru M G

13 Dec 2023, 11:42 pm

- Neetha Jain

10 Dec 2023, 03:26 pm

- sandy

08 Dec 2023, 12:50 pm

ಅವಳು

ನನ್ನ ನಿಷ್ಕಲ್ಮಶ ಪ್ರೀತಿ ಯನ್ನು ತಿರಸ್ಕರಿಸಿದವಳು
ಆದರೆ,
ಅವನ ಮೋಸದ ಪ್ರೀತಿಯಲ್ಲಿ ಸಿಲುಕಿ ಕಣ್ಣೀರಲ್ಲಿ ಕೈ ತೊಳೆಯುತ್ತಿರವಳು ................................................................................................................................ (ಅB..)

- ಅB..

07 Dec 2023, 08:04 pm

ಮುಕ್ತರಾಗೋಣ ಬನ್ನಿರಿ

ಮುಕ್ತರಾಗೋಣ ಬನ್ನಿರಿ
ಸದಾ ಶಾಂತರಾಗೋಣ ಬನ್ನಿರಿ
ಭಕ್ತಿ ಮಾರ್ಗದ ಮೂಲಕ || ಪ ||

ಸಮಾಧಾನಿಯಾಗಲು ಅತ್ತಿಂದಿತ್ತ
ಹರಿಯುವ ಮನವನು ನಿಲ್ಲಿಸಿ
ಸದಾ ನಮ್ಮೊಳಗೆ ಇರಿಸಬೇಕು || ೧ ||

ಕಾಮ ಕ್ರೋಧ, ಮದ, ಮತ್ಸರ,ಮೋಹ, ಲೋಭವನ್ನು
ಕಡಿಮೆ ಮಾಡುತ್ತ ಸಾಗಬೇಕು, ಇದನ್ನು ಸಾಧಿಸಲು
ನಿರಂತರ ಛಲ ಮತ್ತು ಆಸಕ್ತಿ ಬೇಕು || ೨ ||

ನಂತರ ದಯೆ, ಪ್ರೀತಿ, ಕರುಣೆ, ವಾತ್ಸಲ್ಯವೆಂಬ
ಪೈರು ಬೆಳೆಯಬೇಕು
ಬೆಳೆದರಷ್ಟೆ ಸಾಲದು ಪೋಷಿಸಬೇಕು || ೩ ||

ನಮ್ಮಲ್ಲಿರುವ ಕೀಳರಿಮೆ ಕಿತ್ತೊಗೆದು
ನಾವು ಪರಮಾತ್ಮನ ಎಳೆಯೆಂದು ತಿಳಿಯುವ
ಜ್ಞಾನ ಈ ಮನಕೆ ಬರಬೇಕು || ೪ ||

ಬಸವಾದಿ ಶರಣರ ವಚನಗಳು ಮತ್ತು
ವಿಜಯಪುರದ ಸಿದ್ಧೇಶ್ವರ ಸ್ವಾಮೀಜಿ‌ಯವರ
ನುಡಿಗಳು ಮುಕ್ತಿ ಮಾರ್ಗದ ಪಠ್ಯಕ್ರಮಗಳು || ೫ ||

ನಮ್ಮ ಜ್ಞಾನ ಗುರುವಿಗೆ ನಮಿಸಿ
ಶುದ್ಧಗೊಳಿಸಿದ ಮನದಲಿ
ಅವರ ನುಡಿಗಳನ್ನು ಇಳಿಸಬೇಕು || ೬ ||

ಬೆಳಕಿನಂತೆ ವಿಶಾಲವಾಗಬೇಕು ಈ ಮನ
ಬೆಳಕಿನಂತೆ ಸ್ವಚ್ಛವಾಗಬೇಕು, ಬೆಳಕಿನಂತೆ
ಏನನ್ನು ಅಂಟಿಸಿಕೊಳ್ಳದೆ , ನಾನು ನಾನಾಗಿರಬೇಕು || ೭||

ಸಾಧನೆಯಲ್ಲಿ ಆಕಸ್ಮಿಕ ಕ್ಲೇಶಗಳು ಮನಕೆ ತಾಗಿದರೆ
ಗಾಳಿಗೆ ಮರ ಅಲ್ಲಾಡಿ, ಮತ್ತೆ ಸ್ಥಿರವಾದಂತೆ
ಮತ್ತೆ ಮನ ಸುಧಾರಿಸಿ, ಸ್ಥಿರವಾಗಿಸಗಬೇಕು || ೮ ||

ಸಾಧಿಸಿದೆನೆಂದು ತಿಳಿದು ನಿಂತು ನೀರಾಗಬಾರದು
ಸಾಧನೆಯು ಹರಿಯುವ ನೀರಿನ ಹಾಗೆ
ಪರಮಾತ್ಮನಲ್ಲಿ ಲೀನವಾಗುವರೆಗೂ ನಿರಂತರವಾಗಿರಬೇಕು || ೯ ||

ಆಯುಷ್ಯವೆಂಬ ತೈಲ ತೀರುವ ಮುನ್ನ
ಭಕ್ತಿ ಪಥದಲ್ಲಿ ಸಾಗಿ
ಆತ್ಮಜ್ಞಾನ ಮಾಡಿಕೊಳ್ಳಬೇಕು || ೧೦ ||

ದಿನ, ತಿಂಗಳು, ವರ್ಷಗಳು ಕಳೆದಂತೆ
ಮನ ಶಾಂತಿ ಸಮಾಧಾನವಾದ ನಂತರವೂ
ಜಾಗೃತಿಯಿಂದ ಪೋಷಿಸಬೇಕು. || ೧೧ ||

- Hema Morab

06 Dec 2023, 06:55 pm