Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಹೇಳಿ ಹೋಗು ಕಾರಣ

ನೀನಿಲ್ಲದ ನೋವು ನನ್ನ ಕಾಡಿದೆ..
ಕಾರಣವಾದರೂ ತಿಳಿದರೆ ನನಗೊಂದಷ್ಟು ಸಮಾಧಾನವಾಗುವುದಿದೆ..
ಏನನು ಅಪೇಕ್ಷಿಸಿದೆ ನಿನ್ನ ಬಳಿ ನಾನು..
ಏನೂ ಹೇಳದಿದದ್ದೆ ತಪ್ಪಾಯಿತೇನು..
ಬರಡಾದ ಬದುಕಲ್ಲಿ ಮಳೆಯಂತೆ ಬಂದೆ ನೀನು..
ಕನಸುಗಳ ರಾಶಿ ಹೊತ್ತು ಕಾದಿದ್ದೆ ನಿನಗಾಗಿ ನಾನು..
ಕಾರ್ಮೋಡದ ಕತ್ತಲು ತುಂಬಿದೆ ಮನಸು
ಅಳುವು ಕೂಡ ಬಾರದು, ಅದಕು ನನ ಮೇಲೆ ಮುನಿಸು..
ದೂರಾದ ಪ್ರೀತಿಗೆ ಹೇಳಿ ಹೋಗು ಕಾರಣ..
ಹೇಳಿ ಹೋಗು ಕಾರಣ...

ತನುಮನಸು, ✍️

- Tanuja.K

28 Jan 2024, 05:58 pm

ಮಗನಿಗೆ

ನೀ ಹುಟ್ಟಿದಾಗ ನಾ ಪಟ್ಟೆ ಆನಂದ
ಬೆಳೆಯುತ್ತಾ ಬೆಳೆಯುತ್ತಾ ನಿನ್ನ ಮಾತುಗಳೇ ಚಂದ
ಶಾಲೆಗೆ ಹೋಗುವಾಗ ನಿನ್ನ ನೋಟ ನನಗೆ ಚಂದ
ನೀನು ಚನ್ನಾಗಿ ಓದಿದ್ರೆ ಬಲು ಆನಂದ
ನಿನ್ನ ಆಟಗಳನ್ನು ನೋಡಲು ಮಹದಾನಂದ
ನೀನು ಹೀಗೆ ನಡೆದುಕೊಂಡರೆ ನನ್ನ ಮನಸ್ಸಿಗೆ ತುಂಬಾ ಆನಂದ
ಇಂತಿ ನಿನ್ನ ಅಪ್ಪ

- ಚಂದ್ರಶೇಖರ

24 Jan 2024, 08:27 am

ಕವನ ಶ್ರೀರಾಮ.

ಕಮಲ ನಯನನ ಪ್ರತಿರೂಪವೇ ಅಯೋಧ್ಯೆಗೆ ಬೆಳಕು, 

ಕೌಸಲ್ಯಳ  ಗರ್ಭದಿ ಅರಳಿದ  ಹೂ ಬಲು ಚುರುಕು. 

ಸಂಭ್ರಮ   ತಂದ ಗಿನಿಯೇ ಅರಮನೆಗೆ ಮುದ್ದು, 

ವರ್ಣಿಸಲಾಗದ ಬಾಲ್ಯ ಶ್ರೀ  ರಾಮನದ್ದು. 

ಜ್ಞಾನದ ಗಣಿಯಾಗಿ ವಶಿಷ್ಠರ ಶಿಷ್ಯ, 

ಅಘೋಚರ ವಿಸ್ಮಯಗಳ ವೀಕ್ಷಿಸಿ ಅರಿಯುವ ರಹಸ್ಯ. 

ಅಹಲ್ಯ ಶಾಪಕ್ಕೆ ಮುಕ್ತಿ ನೀಡಿತು ಯುವರಾಜನ ಸ್ಪರ್ಶ, ಪದ್ಮನಾಭನ ದರ್ಶನ ತಂದಿತು ಶಬರಿಗೆ ಹರ್ಷ. 

ಜನಕನಿಗೆ ಭೂಮಿ ಕೊಟ್ಟ ಸೊಬಗೆ ಸೀತಾ, 

ಪರಾಕ್ರಮಿ ಪತಿಗಾಗಿ ಹಿಡಿದಳು ಗೌರಿ ವ್ರತ. 

ಶಿವ ಧನುಷ್ ಎತ್ತಿಲಿಸಿದ ಮಹಾರಾಜಗೆ, 

ಜಾನಕಿಯ ಹಾರ ಸೇರಿತು ಲೋಕವನ್ನಾಳುವ ಸಿರಿಗೆ. 

ತಂದೆಯ ಮಾತನು  ಪಾಲಿಪ ನಾಗಿ, 

ರಾಜ್ಯವ ತೊರೆದ ತಮ್ಮನಿಗಾಗಿ. 

ರಾಮ ನಾಮ ಮಂತ್ರದಲ್ಲಿ ಮೋರೆಯುತಿದೆ ಮಾರುತಿಯ ಮಹಿಮೆ, 

ಮನದ  ಕಣ  ಕಣ ದೊಳ್ ಹರಿಸುತ್ತಿದೆ ಭಕ್ತಿಯ ಚಿಲುಮೆ. 

ಸರ್ವ ತ್ಯಾಗಕ್ಕೂ ಸಿದ್ಧ ಶ್ರೀ ರಾಮ, 

ಭೂಮಂಡಲದ ಹೃದಯಗಳು ಜಪಿಸುತ್ತಿವೆ ಸದಾ ರಾಮ ನಾಮ.

- nagamani Kanaka

23 Jan 2024, 07:47 am

ಒಂದೊಮ್ಮೆ

ಹೊರಗೆ ಕೋಗಿಲೆಯ ಕುಹೂ ಕುಹೂ
ಒಳಗೆ ಮೆಲ್ಲನೆ ತಿರುಗುವ ಫ್ಯಾನೂ
ಎರಡೇ ಕೂದಲನ್ನು ಕುಣಿಸುವ ತಂಗಾಳಿ
ಕೋಣೆಯಲ್ಲಿ ಅಡಗಿದೆ ನೀರವ ಮೌನ
ಆ ಮೌನಕ್ಕೆ ಮೂಡಿದೆ ಮನಸಲ್ಲಿ
ನೂರೆಂಟು ಯೋಚನೆಗಳ ಸಂಚಲನ
ಮೂಡುವ ಯೋಚನೆಗಳಿಗೆ ನೀಡಬೇಕಾಗಿದೆ ವಿರಾಮ
ಏನೂ ಅರ್ಥವಾಗದೆ ಎತ್ತಲೋ ಸಾಗುತಿದೆ ನನ್ನ ಜೀವನ
ನನ್ನದಲ್ಲದ ಊರಿನಲ್ಲಿ ಬದುಕತಲಿರುವೆ ಪ್ರತಿ ದಿನ..

-pkay

- Pruthvi

17 Jan 2024, 04:34 pm

ಶಾಲಾ ದಿನ

ನೆನಪಾಗುತ್ತಿದೆ ಆ ಸುಂದರ ಕ್ಷಣಗಳು,
ಶಾಲೆಯಲ್ಲಿ ಕಳೆದ ಸಿಹಿ - ಕಹಿಗಳ ನೆನಪುಗಳು.
ಈಗಲು ನೆನಪಾಗುತ್ತದೆ ಅಂದಿನ ಸುವರ್ಣ ಅವಧಿಗಳು,
ಅಲ್ಲಿ ಗೆಳೆಯ - ಗೆಳತಿಯರೊಂದಿಗೆ ಮಾಡಿದ ಮೋಜು ಮಸ್ತಿಗಳು.
ನನ್ನ ಕಣ್ಣ ಮುಂದೆ ಬರುತ್ತದೆ ಅಲ್ಲಿ ಕಳೆದ ನೆನಪಿನ ಚಿತ್ರದ ಪುಟಗಳು.
ಬೇಕೆಂದರೂ ಬಾರದು ಶಾಲೆಯ ಸುಂದರ ನೆನಪುಗಳು!!!
ನನ್ನ ಹೃದಯದಲ್ಲಿ ಇಂದಿಗೂ ಅಮರ ನನಗೆ ತಿದ್ದಿ ಬುದ್ಧಿ ಹೇಳಿದ ಗುರುಗಳು,
ನನಗೆ ಈಗಲೂ ನೆನಪಿದೆ ಅವರು ಹೇಳಿದ ಆ ಹಿತನುಡಿಗಳು.
ಮಧುರ ಮಧುರಗಳು ಆ ದಿನಗಳು!!!
ಮಧುರ ಮಧುರಗಳು ಆ ದಿನಗಳು!!!
- ಇತ ✍️

- itha

13 Jan 2024, 12:45 pm

ಕ್ಷಮೆ

ಕ್ಷಮೆ ಎಂಬುವುದು
ದಾರಿ ತಪ್ಪಿದವರಿಗೆ ಒಂದು ಅಸ್ತ್ರವಾದರೆ ಕ್ಷಮಾದಾನ ಎಂಬುವುದು
ದಾರಿ ತಪ್ಪಿದವರಿಗೆ ನೀಡುವ
ಒಂದು ದೊಡ್ಡ ಜೀವ ದಾನ.....

ಕ್ಷಮೆಗೆ ಇಲ್ಲ ನಕ್ಷೆ
ಕ್ಷಮಾದಾನಕ್ಕೆ ಇರುವುದು ಕಕ್ಷೆ
ಯಾಲ್ಲೇ ಮೀರಿದರೆ
ಬಯಸದೆ ಬಂದ ಭಾಗ್ಯ ಶಿಕ್ಷೆ.....

ಕ್ಷಮೆಯ ಅಂತರಂಗದ ಮಾತಾಗಿರಲಿ
ಕ್ಷಮಾಧಾನವು ಮನದ ಮೌನವಾಗಿರಲಿ

- ರಾಜು ಹಾಸನ

13 Jan 2024, 01:28 am

ಹಿರಿಯರ ಮುಂದೆ ಬಗ್ಗಿ ನಡಿ, ಕಿರಿಯರ ಮುಂದೆ ಹಿಗ್ಗಿ ನಡಿ, ಸಂಬಂಧದ ಬೆರತು ನಡಿ, ಮನೆಯಲ್ಲಿ ಪ್ರೀತಿಯಿಂದ ನಡಿ, ದೇವರಲ್ಲಿ ಭಕ್ತಿಯಿಂದ ನಡಿ, ಮನಸು ಚುಚ್ಚುವ ಮಾತುಗಳಿಗೆ ಕಿವಿ ಕೊಡದೆ ನಡಿ, ಶತ್ರುಗಳ ಮುಂದೆ ನುಗ್ಗಿ ನಡಿ,ಪ್ರೀತಿನ ಪ್ರೀತಿಯಿಂದ ಪ್ರೀತಿಸಿ ಬದುಕು ನಡಿ. ಸುಮ್ಮನೆ ಕೂರದೆ ನಡೆಯುತ್ತಲೇ ಇರು.......!! ಜಯ ನಿನ್ನದೇ.

- Umashankar C B

12 Jan 2024, 05:24 pm

ಕವನ ಶಾಲೆ...

ಮಕ್ಕಳ ಜ್ಞಾನ ಮಂದಿರ ಶಾಲೆ, 

ಅಲ್ಲಿ ಮಕ್ಕಳೇ ಅರಳುವ ಹೂ ಮಾಲೆ.

ಸಹಪಾಠಿಗಳೊಂದಿಗೆ ಕೂಡಿ ಆಡುವರು ಅಂಗಳದಲ್ಲೆ.

ಸಹ ಭೋಜನ ಸವಿಯುವರು ಸಂಭ್ರಮದಲ್ಲೇ.

ಗುರುಗಳು ಹೇಳುವರು ಪಾಠ, 

ಮಕ್ಕಳು ಕಲಿಯುವರು ಆಡುತ್ತಾ ಮೋಜಿನಾಟ. 

ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸುವುದು ಕಿನ್ನರ ಕೂಟ, 

ನಾ ಮುಂದೆ, ತಾ ಮುಂದೆಂದು ಸೆಣಸಾಡಿ ಮುಗಿಸುವರು ಜಗಳದ ಜೂಟಾಟ. 

ಶಾಲೆಯಲ್ಲಿ ಶನಿವಾರ ಮಾಡುವೆವು ಯೋಗ, 

ಧ್ಯಾನ, ಮಕ್ಕಳಿಗೆ ಕಲಿಸುವುದು ಸನ್ಮಾರ್ಗ. 

ಮಕ್ಕಳ ಸ್ನೇಹ ಯುದ್ಧ ಬದುಕಿಗೆ ಶಾಲೆಯೇ ವೈಭೋಗ, 

ಭವಿತಾ ರಾಷ್ಟ್ರಕ್ಕೆ ಶಿಲ್ಪಿಗಳಾಗುವ ಪ್ರಜೆಗಳದ್ದೇ ಶುಭ ಯೋಗ.

- nagamani Kanaka

12 Jan 2024, 04:00 pm

ಜಂಗಮ ವಾಣಿ

ದೂರವಾಣಿಯ ಕಾಲದಲ್ಲಿ ಸ್ನೇಹಿತ-ಬಂದುಗಳ ಹೆಸರಿನ ಜೊತೆ ಅವರ ದೂರವಾಣಿಯ ಸಂಖ್ಯೆಯೂ ನೆನಪಿರುತ್ತಿತ್ತು..
ಕಾಲ ಬದಲಾಗಿದೆ, ದೂರವಾಣಿಯ ಬದಲು ಜಂಗಮವಾಣಿಯಾಗಿ.
ಸ್ನೇಹಿತರ ಹೆಸರು ನೆನಪಿದೆ, ಆದರೆ ದೂರವಾಣಿಯ ಸಂಖ್ಯೆ ನೆನಪಿನಲ್ಲಿ ಉಳಿದಿಲ್ಲ.
ಬದಲಾವಣೆ ಜಗದ ನಿಯಮ,ಅದ ನಿಜ ಮಾಡಲು
ಸ್ನೇಹಿತರೂ ಮರೆಯಾಗುತ್ತಿದ್ದಾರೆ, ಕಾರಣ ಅಹಂಮ್ಮಿನ
ತಾತ್ಸಾರಕ್ಕೆ ಸಮಾಜಿಕ ಮಾಧ್ಯಮಗಳು!!

ಲೈಕ್ ಡಿಸ್ಲೈಕಿನ ನಡುವೆ ಬದುಕು
ಸ್ಹೇಹಿತರೆಲ್ಲರು ಸಾಮಾಜಿಕ ಮಾಧ್ಯಮದಲ್ಲಿ ಬಿಸಿಯಾಗಿದ್ದೇವೆ, ಮಾತಾಡಲು ಸಮಯವಿಲ್ಲ..
ದೂರವಾಣಿಯೂ ದೂರ, ಸ್ನೇಹವೂ ದೂರ..

- Dr. Ramesh HN

11 Jan 2024, 06:41 pm

ತಾಯಿಯ- ವಿಷ ವರ್ತುಲ

ಇಂದಿಗೆ ಹೊಸ ಕಾರಣವಾಯಿತು
ಕಂದನ ಕೊಂದು ಸೂಟ್ಕೇಸಲಿ ಮರೆಸಲು
ಕಾಯುವ ತಾಯಿ ಮನಸ್ಸಿನ ಹೊಟೆಲ್
ಸಿಬ್ಬಂದಿಯ ಸಮಯ ಪ್ರಜ್ಞೆಯ ಮುಂದೆ
ತಾಯಿಯ ವಿಷ ವರ್ತುಲ ಬಕ್ಕ ಬರಿದಾಯಿತು

ಆಕೆಯೋ ಪದವೀಧರೆ, ಅಕ್ಷರಕ್ಕೋ ಅಥವಾ ಕಾಗದಕ್ಕೋ
ಜೀವನ ಪಾಠ ಕಲಿಯದ ಪತಿತೆಯಾದಳು ತಾಯಿ..

- Dr. Ramesh HN

09 Jan 2024, 11:29 pm