Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

"ಯಾರ ಸ್ನೇಹವೊ ಏಕೆ ಚಿಗುರು ಹೊಡೆಯುವುದೋ
ಯಾರ ಹೃದಯವು ಯಾರಲ್ಲಿ ಮಿಡಿಯುವುದೋ
ಯಾರ ಕಥೆ ಎಲ್ಲಿ ಶುರುವಾಗುವುದೋ"

- Yogesh

13 Apr 2025, 05:52 pm

ನಗುವವರಾರು

" ಕಥೆಯ ಬರೆದವರಾರು
ಕರ್ಮವ ಅಳೆದವರಾರು
ನೋಡುವರಾರು
ನೋಡಿ ನಗುವವರಾರು
ಮನಸಲಾರು
ಮನದಲಿಳಿದವರಾರು
ಕನಸ ಕಟ್ಟಿದವರಾರು
ಎಡವಿ ಬಿದ್ದವರಾರು
ಗುರಿಯ ಮುಟ್ಟಿದವರಾರು
ಮೋಹದ ಸುಳಿಯಲಿ ಸುಳಿಯುವ ಜಗದಲ್ಲಿ
ಭಾವನೆಗಳ ಬೇಗುದಿಯಲಿ ಬೇಯುವ ಮನೆಕೆ ಬೆಲೆ ಇಲ್ಲ "

- Yogesh

13 Apr 2025, 05:49 pm

ಕಿರು ಬೆರಳ ಸವಿನೆನಪಲಿ

ಕಥೆಯೊಂದ ಹೇಳಲೇ ನಾನು
ತಾಯಿಯ ಮಮತೆಯ ಮಡಿಲ ಮರೆಯಲಿ
ಕಿರು ಬೆರಳ ಸವಿನೆನಪಲಿ
ಕಥೆಯೊಂದ ಹೇಳಲೇ ನಾನು
ಚಂದಮಾಮನ ಜೊತೆಯಲ್ಲಿ
ಕೈತುತ್ತಿನ ರುಚಿಯಲ್ಲಿ
ನನ್ನೆತ್ತ ದೇವತೆಯ ನೆರಳಲಿ

- Yogesh

13 Apr 2025, 05:41 pm

ಹೆಣ್ಣಿನ ಜೀವನದ ನಿಜವಾದ ಅರ್ಥ

ಕಂಡ ಕನಸ್ಸು ನೆನಪಾಗುತ್ತಿದೆ
ನಾನು ಮಹಾರಾಣಿಯೆಂದು
ಇದು ಕೇವಲ ಕಾಲ್ಪನಿಕ.....
ಇಲ್ಲಿ ವಾಸ್ತವವಾಗಿ ನೋಡಿದರೆ
ನಾನು ಒಂದು ಮನೆಯಿಂದ -
ಮಂತ್ತೊಂದು ಮನೆ ಕಾಯೋ ಅಳೆಂದು
ಇದು ಒಂದು ಹೆಣ್ಣಿನ ಜೀವನದ ನಿಜವಾದ ಅರ್ಥ
. ನಿಜ ಅಲ್ವಾ...

- Reshma

10 Apr 2025, 09:44 pm

ಜನರ ಮುಖವಾಡ

ಬೇರೆಯವರ ಕೊಂಕು ಮಾತು
ಮನಸ್ಸಿಗೆ ನೋವು
ಮನೆಯವರು ಕಾಣುವ ಕೀಳು ಭಾವನೆ
ಬೇರೆಯವರ ಯಾರ ಮುಂದೆಯಾದರೂ ಹೇಳಿಕೊಳ್ಳುವ ಬದಲು
ಜೀವನದಲ್ಲಿ ಕಾಡುವ ಪ್ರಶ್ನೆ ಮೂರು
ಉತ್ತರಿಸುವವರ ಮಾತು ನೂರು
ಅವರವರ ಮಾತು ಅವರವರಿಗೆ ಸೀಮಿತ
ಬೇರೆಯವರ ಮಾತು ಕೇಳಿ ತಮಗೆ ತಾವು ತಂದುಕೊಳ್ಳುತ್ತಾರೆ ಆಪತ್ತು
ಇದು ನುಂಗಲಾಗದ ತುತ್ತು
ನಮ್ಮಿಂದ ಬದಲಾಗಿಸಲಾಗದ್ದು ಈ ಜಗತ್ತು

- Reshma

10 Apr 2025, 09:46 am

"ಈಗ ಒಂಟಿ ನಾ"

"ಈಗ ಒಂಟಿ ನಾ
ಅವಳಿಗೆ ನಾ ಕೊಟ್ಟ
ಪ್ರೀತಿ ಹಿಂದಿರುಗಿಸು
ಎಂದು ಕೇಳಲು ಯಾವುದೇ
ದಾಖಲೆಗಳು ನನ್ನಲ್ಲಿ ಇಲ್ಲ...
ಅದಕ್ಕೆ ಇಂದಿಗೂ ಅವಳ ಪ್ರೀತಿಯ
ವಂಚಿತ ನಾನು"...

- ಎ.ಆರ್.ರಾಹುಲ್.

- ?.?.?????.

09 Apr 2025, 09:59 pm

"ಮನುಷ್ಯ ಜೀವನ"

"ಇದ್ದಾಗ ಬುದ್ಧಿ ಇಲ್ಲದೆ
ಬಿದ್ದಾಗ ನಿದ್ದಿ ಇಲ್ಲದೆ
ಸಧಾ..ವದ್ಯಾಡುವುದೇ
ಮನುಷ್ಯನ..ಜೀವನ"..

- ಎ.ಆರ್.ರಾಹುಲ್.

- ?.?.?????.

09 Apr 2025, 04:47 pm

ಅವಳ ನೆನಪಲ್ಲಿ...

ಬೇರೆಯವರು ತಿಳಿದಂತೆ
ನಾ ಮೌನಿಯೇ ಇರಬಹುದು,
ಆದರೆ ನನ್ನೊಳಗು ಲೆಕ್ಕವಿಲ್ಲದಷ್ಟು
ಮಾತುಗಳು ತುಂಟತನ ಪೆದ್ದುತನ ನಗು ಎಲ್ಲವೂ, ಆದರೆ ಅದನ್ನಾಲ್ಲಾ
ಅವಳಿಗಾಗಿ ಮಾತ್ರ ಮೀಸಲಿಟ್ಟಿದ್ದೆ,
ಆದರೆ ಅವಳಿಗದು ತಿಳಿಯದೆ ಹೋಯಿತು...
ಕೊನೆಗೂ ನಾ ಮಹಾಮೌನಿಯಾಗೇ
ಉಳಿದು ಬಿಟ್ಟೆ ಅವಳ ನೆನಪಲ್ಲಿ...
ಎಮ್.ಎಸ್.ಭೋವಿ...✍️
.

- mani_s_bhovi

08 Apr 2025, 10:38 pm

...ನನ್ನಪ್ಪ...

"ಶಾಲೆಗೆ ಸೀರಿಸಲು ಬಂದ ನನ್ನಪ್ಪ...
ನನ್ನ ಮಗ ಓದಿ ದೊಡ್ಡ ವ್ಯಕ್ತಿಯಾಗಲಿ ಎಂದ ನನ್ನಪ್ಪ..
ವರ್ಷದಲ್ಲಿ ಒಂದು ಬಾರಿಯು ನನ್ನ ಬಗ್ಗೆ ವಿಚಾರಿಸಲು
ಶಾಲೆಗೆ ಬರಲಿಲ್ಲ ನನ್ನಪ್ಪ...

ನನ್ನ ಮಗ ಓದುವುದರಲ್ಲಿ ಹಿಂಜರಿಯುವುದಿಲ್ಲ ಎಂದು
ನಂಬಿಕೆ ಇಟ್ಟ ನನ್ನಪ್ಪ...
ಓದಿ ನನ್ನ ನೋಡಿಕೋ ಅನ್ನಲಿಲ್ಲ ನನ್ನಪ್ಪ...
ಓದಿ ನಿನ್ನ ಜೀವನ ನೀ ಕಟ್ಟಿಕೊ ಎಂದ ನನ್ನಪ್ಪ...

ಇತರ ಸ್ನೇಹಿತರ ಜೊತೆ ಸುತ್ತಾಡಿದರು ಕೇಳಲಿಲ್ಲ ನನ್ನಪ್ಪ..
ನನ್ನಂತೆ ಕುಡುಕನಾಗಬೇಡ ಎಂದು ಬುದ್ದಿಹೇಳಿದ ನನ್ನಪ್ಪ..
ಕಷ್ಟಪಟ್ಟು ಜಮಿನ್ದಾರ ಮನೆಯಲಿ ಕೆಲಸ ಮಾಡುವಾಗ ನನ್ನಪ್ಪ..
ಜಮಿನ್ದಾರು ಮಗನ ಬಗ್ಗೆ ಕೇಳಿದಾಗ ನನ್ನಪ್ಪ..

ತನ್ನೆಲ್ಲ ಕಷ್ಟಗಳನ್ನು ಒಂದೇ ಕ್ಷಣ ಮರೆತು ತನ್ನ ಮಗನ ಬಗ್ಗೆ
ಹೆಮ್ಮೆಯಿಂದ ಹೇಳಿಕೊಂಡ ನನ್ನಪ್ಪ"...

- ಎ.ಆರ್.ರಾಹುಲ್



- ?.?.?????.

08 Apr 2025, 07:33 am

ಎಲೆ?☘️??

ವಸಂತ ಬಂದಾಗ ಚಿಗುರುವೆ ನೀನು
ಬೇಸಿಗೆ ಬಂದಾಗ ಉದರುವೆ ನೀನು
ಮರಳಿ ವಸಂತ ಬರೋವರೆಗೂ ಕಾಯುವೆ ನೀನು ಮತ್ತೆ ಮತ್ತೆ ಚಿಗುರುವಿ ನೀನು
ಪ್ರಕೃತಿಯ ಸೌಂದರ್ಯವನ್ನು ಹೆಚ್ಚಿಸುವೆ ನೀನು ನೀನು ಉದರುವಾಗ ಏನೋ ಕಳೆದುಕೊಂಡಿರುವ ಬಾವ ನಮಗ
ಮತ್ತೆ ಮತ್ತೆ ಚಿಗುರುತ್ತಿರು ನೀನು ಪ್ರಕೃತಿಯ ಸೌಂದರ್ಯ ಹೆಚ್ಚಿಸುತ್ತಿರು ನೀನು.

@ಎಸ್ ಕೆ 216

- shridhar KARAGANVI

06 Apr 2025, 11:21 am