Kannada Poems
Deprecated : Creation of dynamic property my_pagination::$conn is deprecated in
/home4/airpoiy2/kannadakavana/pagination.php on line
41
ಲೇ ಇವಳೇ...
ನುಗ್ಗೆ ಸೊಪ್ಪು ನುಗ್ಗೆಕಾಯಿ
ತಗೊಂಡು ಬರ್ತೀನಿ,
ಸೊಪ್ಪು ಹಾಕಿ ಮೋಸಪ್ಪು ಮಾಡಿ
ನುಗ್ಗೆಕಾಯಿ ಕಬಾಬು ಮಾಡು..
ರಾತ್ರಿ ಬಾಗಿಲು ಕಿಡಿಕಿ ಭದ್ರಪಡಿಸು
ಹವಮಾನ ವರದಿ ಹೇಳಿದೆ
ಗುಡುಗು ಮಿಂಚಿನ ಮಳೆ
ಬರುತ್ತೆ ಅಂತ...
ಎಮ್.ಎಸ್.ಭೋವಿ...✍️
.
.
.
.
- mani_s_bhovi
10 Jun 2025, 08:44 pm
ಬಾನಿನ ಮರೆಯಲ್ಲಿ ಮೋಡಗಳ ಸಮ್ಮಿಲನ
ಸಂಜೆ ಸೂರ್ಯನ ಹೊಂಬಣ್ಣದ ಬೆಳಕಿನಲಿ ಕಡಲ ಅಲೆಗಳ ಸಂಚಲನ...
ನವ ವಸಂತದ ತಂಗಾಳಿಯಲಿ ಕೋಗಿಲೆಗಳ ಗಾಯನ
ಚಿಗುರಿದ ಮಾಮರದ ಎಲೆಗಳಲಿ ಅರಳಲು ಸಜ್ಜಾಗಿರುವ ಕಾನನ...
ಕಾಮೋ೯ಡದ ಕಗ್ಗತ್ತಲಲಿ ಮಯೂರಗಳ ನತ೯ನ
ಸುರಿವ ವಷ೯ಧಾರೆಯಲಿ ಚಿಗುರುವ ಚೈತ್ರದ ಕವನ...
ಎದೆ ನಡುಗಿಸುವ ಗುಡುಗಿನ ನಡುವಲಿ ಝೇಂಕರಿಸುವ ಸಿಡಿಲಿನ ಗಾನ
ವೃಷ್ಠಿಯ ನಂತರದ ನಿಶ್ಶಬ್ದದಿ ಮೃಗಕಗಗಳ ಕಲರವದ ಗಾನ...
ಸುಡುವ ಕಡಲ ತೀರದಿ ನೀಲಿ ಮುಗಿಲ ತಪ್ಪಲಲಿ ನಡೆವ ದೋಣಿಯ ಯಾನ
ಇದೆಲ್ಲಕ್ಕೂ ಕಾರಣವು ವಸುಂಧರೆಯ ಪರಿಭ್ರಮಣೆಯ ಲಯದ ಚಲನ...
- Kavya Mari
09 Jun 2025, 10:46 pm
ತಲೆಗೆ ಬಟ್ಟೆ ಸುತ್ತಿ
ಸುಡುವ ಬಿಸಿಲಿಗೆ ಮೈಯೊಡ್ಡಿ
ಏಕಾತನತೆಯಲಿ ಕೆಲಸದೊಳಗೆ ಮಗ್ನರಾಗಿ
ನಿತ್ಯ ದುಡಿವರು, ಅನ್ನ ಬೆಳೆವರು
ಅವರೆ ನನ್ನ ಜನರು
ಕೈಬಳೆಯ ಸದ್ದುನಡಿಗಿಸಿ
ಬೆಳ್ಳಿಕಾಲುಂಗುರಗಳು ಮಾಸಿ
ಕೊರಳಲಿ ಕರಿಮಣಿಸರದೊಳಗೆ
ಬೆವರ ಬೆರಿಸಿ
ಕಿವಿಯ ಬೆಂಡೊಲೆಗೆ ತನ್ನೂಸಿರ ಸೇರಿಸಿ
ಲೋಕದ ಹಸಿವ ನೀಗುವರು
ಅವರೆ ನನ್ನ ಜನರು
ಮಂಡಿಯೂರಿ ಕೂತು ಕಳೆ ಕೀಳುವರು
ಸಾಲು ಸಾಲು ಹಿಡಿದು
ಪಸಲು ಬೆಳೆವರು
ಚೆಂದದ ಹೂವುಗಳ ಮಾಲಿಕರು
ಅಂದದ ಕಪ್ಪೊಡಲಿನ ಬೆಡಗಿಯರು
ಜಗದ ನೋವ ಬಲ್ಲವರು
ಅವರೆ ನನ್ನ ಜನರು
ಕೂಲಿ ನಾಲಿ ಮಾಡುವರು
ಮಕ್ಕಳ ಕನ್ನಡ ಶಾಲೆಗೆ ಕಳುಹಿಸುವರು
ವಿದ್ಯಾವಂತರಲ್ಲದಿದ್ದರೂ
ಬಾಬಾಸಾಹೇಬರ ನೆನೆವರು
ಅವರಂತೆ ನಮ್ಮ ಮಕ್ಕಳು
ಆಗಲಿ ಎಂದು ಕನಸ ಕಾಣುವರು
ಅವರೆ ನನ್ನ ಜನರು
ಬುದ್ಧನ ಚಿಂತನೆಯಲೆ ಬದುಕುವರು
ಧಮ್ಮ ಮಾರ್ಗದಲ್ಲೆ ನಡೆವರು
ಸದ್ಧಮ್ಮದಲ್ಲೆ ಮಡಿವರು
ಸತ್ಯ ನ್ಯಾಯ ಮಾನ ಮಾರ್ಯದೆಗಾಗಿ
ಪ್ರಾಣವನ್ನೆ ಪಣವಾಗಿಡುವರು
ಅವರೆ ನನ್ನ ಜನರು
ಡಾII ನಾಗೇಶ್ ಮೌರ್ಯ
9743907399
- ಡಾ ನಾಗೇಶ ಮೌರ್ಯ
09 Jun 2025, 05:15 pm
ಮರ ಬಿಡುವ ಪ್ರತಿ ಹೂ
ಪಿಂದೆ, ಕಾಯಿ ಆಗುವುದಿಲ್ಲ!
ಪ್ರತಿ ಪಿಂದೆ, ಕಾಯಿ ಹಣ್ಣಾಗುವುದಿಲ್ಲ,
ಪ್ರತಿ ಹಣ್ಣು ತಿನ್ನಲು ಯೋಗ್ಯವಾಗಿರುವುದಿಲ್ಲ.....!
ಡಾII ನಾಗೇಶ್ ಮೌರ್ಯ
- ಡಾ ನಾಗೇಶ ಮೌರ್ಯ
09 Jun 2025, 05:13 pm
ಕಡಲ ದಡದಲ್ಲಿ
ನೀ ಇಟ್ಟ ಪ್ರತಿ ಹೆಜ್ಜೆಯನು
ಅಲೆಯಾಗಿ ಅಳಿಸಿಬಿಡುವೆ
ನೀ ತೊಟ್ಟ ಕೈ ಬಳೆಯ ಸದ್ದಿನಲಿ ಬುದ್ಧನ ತಿಸರಣದ ಝೆಂಕಾರವಿದೆ
ನೀ ಇಟ್ಟ ಕುಂಕುಮದಲಿ
ಮೈತ್ರಿಯ ಭಾವವಿದೆ
ನೀ ಮುಡಿದ ಮಲ್ಲಿಗೆಯ
ಪರಿಮಳದಲ್ಲಿ ಧಮ್ಮದ ಸಾರವಿದೆ
ನೀನು ನೀನಲ್ಲದೆ ನಾನಾಗುವ
ಮರುಗಳಿಗೆ ಅರಹಂತಾನಗುವೆ
ಡಾ ನಾಗೇಶ್ ಮೌರ್ಯ
9743907399
- ಡಾ ನಾಗೇಶ ಮೌರ್ಯ
09 Jun 2025, 09:02 am
ಮೌನಕ್ಕೆ ಅರ್ಥಗಳು ಹಲವು
ಅನಾರ್ಥ ಅಪಾರ್ಥಗಳು ಕೆಲವು
ತನ್ನ ಬಗ್ಗೆ ಅರಿಯದ ಮನವು
ಅನ್ಯರಿಗೆ ಬುದ್ಧಿ ಹೇಳುವ ನೆಪವು
ಇನ್ನೊಬ್ಬರ ಬೆಳವಣಿಗೆ ಸಹಿಸದೆ
ಹಂಗಿಸಿ ಮಾತನಾಡುವ ಗುಣವು
ಸಹಿಸಿ ಮುನ್ನಡೆಯಲು ಗಟ್ಟಿಇರಬೇಕು
ನಮ್ಮ ಆತ್ಮ ಬಲವು
-ಪಾವನಿ
- Paavani
08 Jun 2025, 10:09 am
ಜನರ ಆಕರ್ಷಿಸುವ ಮಹಲ್
ಅದರದೇನೋ ಕಮಾಲ್
ಪ್ರೇಮ ಕುಸುಮಗಳು ಅರಳುವಂತೆ
ಮಾಡುವ ತಾಜ್ ಮಹಲ್.
ಚಂದ್ರವರ್ಣದ ಈ ಮಹಲ್
ಪ್ರೀತಿ ಸಂದೇಶ ಸಾರುವುದು ಇದರ ಗೋಲ್ಮಾಲ್
ಜಗದೆತ್ತರದ ಪ್ರೇಮ ಸೌಧವಿದು
ಅಲ್ಲವೇ ಅಲ್ಲ ರಾಜಕೀಯ ಸೌಧವಿದು.
ಕಾಲ ಚಕ್ರ ಉರುಳಿದರು
ಪ್ರೇಮಿಗಳ ಕಥೆಗಳು ಅಳಿಸಲಿಲ್ಲ.
ಅವರ ನೆನಪುಗಳೆ ವಿಸ್ಮಯ
ಆ ಸೌಧವೇ ಅವಿಸ್ಮರಣೀಯ.
- ಮೇಘಾ ಬೆಳಧಡಿ
07 Jun 2025, 09:39 pm
ಕನಸಲ್ಲಿ ನಾ ನೆನೆಯುವೆ ನಿನ್ನ ♥️
ಮನದಲ್ಲಿ ನೀ ನಿಂತು ಕಾಡುವೆ ನನ್ನ ?
ಎಂದೆಂದೂ ಜೊತೆಯಾಗಿ ಇರುವಾಸೆ ಚಿನ್ನ ?
ಒಂದೊಮ್ಮೆ ಬಂದುಬಿಡು ಉಸಿರೋಗೋ ಮುನ್ನ ?
- Karthik.N Karthik
07 Jun 2025, 04:52 pm
ನಿನ್ನ ಸಂತೋಷಕ್ಕಾಗಿ ಜೀವನವಿಡೀ ಬದುಕುವ ಆಸೆ ನನ್ನದು
ಕೊಡುವೆಯಾ ಒಂದು ಅವಕಾಶ
ಮುಂದಿನ ಜನ್ಮದ ಕಲ್ಪನೆ ನನಗಿಲ್ಲ ಆದರೆ ಈ ಜನ್ಮವಿಡಿ ನಿನಗಾಗಿ ಬದುಕುವ ಒಂದು ಅವಕಾಶ ಕೊಡು ಸಾಕು ನಿನ್ನ ಹೃದಯದಲ್ಲಿ ಕೊಡು ಸ್ವಲ್ಪ ಜಾಗ
ಹೃದಯದರಸ ನಾಗಿ ಬಾಳುವೆ ನನ್ನ ಉಸಿರಿರುವ ತನಕ
- Karthik.N Karthik
07 Jun 2025, 03:08 pm
ಉರಾಗ ಇತ್ತ ಒಂದು ಸಣ್ಣ ಓಣಿ...
ಆ_ಓನ್ಯಾಗ ಇತ್ತ ನನ್ನ ಮನಸಿನ ಮಹಾರಾಣಿ..
ಮಾಡಿದಾಗ ನನಗ ಕಣ್ಣು ಸೊನ್ನಿ..
ಕೂಗಿ ಕರಿತಿದ್ನಿ ನಾ..ಎ ಚಿನ್ನಿ...
ಮನಸಾರೆ ಪ್ರೀತಿ ಮಾಡಿ ತಿನಿಸಿದ್ನಿ
ಹಾಲಮ್ಯಾಗಿನ ಕೆನಿ...
ಅವಳೆ ನನ್ನ ಪಾಲಿಗೆ ಚಿನ್ನದ ಗಣಿ...
ಚಿನ್ನದ ಗಣಿ...
_ಮಲ್ಲು ಎಸ್ ಬಿರಾದಾರ
- Driving lover { Mallu }
07 Jun 2025, 10:36 am